📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್

    2026– 27ರ ಬಜೆಟ್ಟಿನಲ್ಲಿ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಹಣಕಾಸು ಸಚಿವರು ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಯಾವಾಗ ಇಂತಹದೊಂದು ಘೋಷಣೆ ಹೊರಬರುತ್ತದೆ ತಕ್ಷಣವೇ ಈ ಒಂದು ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಅನ್ನು ಪಡೆದುಕೊಳ್ಳಲು ಹಾಗೂ ಆ ಅಕಾಡೆಮಿಯ ಮೊದಲ ಅಧ್ಯಕ್ಷ ಸ್ಥಾನಕ್ಕೆ ಇರಲು ಪೈಪೋಟಿ ಶುರುವಾಗಿದೆ.

    ಹೌದು, ಹವ್ಯಕ ಭಾಷೆಯಲ್ಲಿ ಸಾಕಷ್ಟು ಭಿನ್ನತೆ ಇದೆ ಹಾಗೂ ಹಲವು ಮಜಲುಗಳಿವೆ ಹಾಗೆಯೇ ಈ ಭಾಷಾ ಶ್ರೀಮಂತಿಕೆ ಅನನ್ಯ.

    ಈ ಅಕಾಡೆಮಿಯಿಂದ ಹವ್ಯಕ ಭಾಷೆಯ ಬೆಳವಣಿಗೆ, ಉನ್ನತಿ ಎಷ್ಟರಮಟ್ಟಿಗೆ ಆಗುತ್ತದೋ ಗೊತ್ತಿಲ್ಲ. ಆದರೆ ಈ ಒಂದು ಅಕಾಡೆಮಿಯಿಂದ ರಾಜ್ಯದ ಸಣ್ಣದೊಂದು ಹವ್ಯಕ ಬ್ರಾಹ್ಮಣ ಸಮಾಜದ ಕಡೆಗೂ ಸರ್ಕಾರ ಪ್ರೀತಿಯಿಂದ ನೋಡುತ್ತದೆ ಅನ್ನುವುದನ್ನು ಈ ಒಂದು ಅಕಾಡೆಮಿ ಸ್ಥಾಪನೆಯಿಂದ ಸಾಬಿ ತಾಗುತ್ತಿದೆ ಎನ್ನಬಹುದಷ್ಟೇ.

    ಅದಿರಲಿ, ಈಗ ಈ ಅಕಾಡೆಮಿ ಸ್ಥಾಪನೆಯ ವಿಚಾರವಾಗಿ ಕ್ರೆಡಿಟ್ ವಾರ್ ಶುರುವಾಗುತ್ತಿದೆ ಅನ್ನುವುದೇ ಹೊಸ ಬ್ರೇಕಿಂಗ್ ನ್ಯೂಸ್ ಆಗಿದೆ. ಒಂದು ಕಡೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ಹಲವು ಹಿರಿಯ ರಾಜಕಾರಣಿಗಳ ಜೊತೆಗೆ ನಂಟನ್ನು ಹೊಂದಿರುವಂತಹ ವಿಶ್ವೇಶ್ವರ ಭಟ್ಟರು ಈ ಕ್ರೆಡಿಟ್ ಪಡೆಯುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದ್ದಾರೆ. ಮತ್ತೊಂದು ಕಡೆ ಪುತ್ತೂರಿನ ಮಾಜಿ ಸಂಘ ಪರಿವಾರದ ನಾಯಕ ಲಕ್ಷ್ಮೀಶ್ ದಬಲಡ್ಕ ಈ ಒಂದು ಕ್ರೆಡಿಟ್ ಪಡೆಯುವ ನಿಟ್ಟಿನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಇನ್ನ್ಯಾರು ತೂರಿಕೊಂಡು ಬರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ  ಈ ವಾರ್ ಇವರಿಬ್ಬರ ಮಧ್ಯೆ ನಡೆಯುತ್ತಿದೆ ಅನ್ನುವುದಂತೂ ದಿಟ.

    ವಾಸ್ತವಕ್ಕೆ ಬರುವ. ಲಕ್ಷ್ಮೀಶ್ ದಬಲಡ್ಕ ಸಂಘ ಪರಿವಾರದಲ್ಲಿ ಗುರುತಿಸಿಕೊಂಡವರು. ತೀರಾ ಇತ್ತೀಚೆಗೆ ಕಾಂಗ್ರೆಸ್ ಕೋಟೆಯೊಳಕ್ಕೆ ಎಂಟ್ರಿ ಕೊಟ್ಟವರಾಗಿದ್ದಾರೆ. ಲಕ್ಷ್ಮೀಶ್ ದಬಲಡ್ಕ ದೊಡ್ಡ ಪ್ರಮಾಣದ,  ನಾಯಕರಲ್ಲದಿದ್ದರೂ ವಾಗ್ಮಿ ಅಂತೂ ಹೌದು. ಒಂದು ಸರ್ಕಾರವು ದಬಲಡ್ಕರವರ ಪ್ರಯತ್ನಕ್ಕೆ ಒ ಗುಟ್ಟು ಈ ಒಂದು ಅಕಾಡೆಮಿ ನಿರ್ಮಿಸುವ ನಿರ್ಧಾರ ಕೈಗೊಳ್ಳುತ್ತದಾ ಎಂಬ ಪ್ರಶ್ನೆಯು ಇಲ್ಲಿ ಮುಖ್ಯ ವೆನಿಸಿಕೊಳ್ಳುತ್ತದೆ. ಆದ್ರೂ ದಬಲಡ್ಕ್ ಹಠವಾದಿ,  ಹಿಡಿದ ಕೆಲಸವನ್ನು ಮಾಡುವವರೆಗೆ ನಿಲ್ಲುವವರಲ್ಲ. ಆದ್ರೂ ಸರ್ಕಾರ ಅವರೊಬ್ಬರ ಮಾತಿಗೆ ಓಕೆ ಅಂದಿತಾ?

    ಹಾಗಂತ ದಬಲಡ್ಕರ ಪ್ರಯತ್ನ ಇಲ್ವೇ ಇಲ್ಲ ಅಂತ ಅನ್ನಲು ಸಾಧ್ಯವೂ ಇಲ್ಲ. ಇಲ್ಲಿ ಈಗಾಗಲೇ ಹಲವರು ಲಕ್ಷ್ಮೀಶ್ ದಬಲಡ್ಕ   ಅವರಿಗೆ ಶುಭಾಶಯಗಳನ್ನೂ ಹೇಳಿದ್ದಾರೆ ಹಾಗೂ ಈ ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಅಂತ ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ ಕೂಡ.

    ಒಂದು ಕಡೆ ಹೀಗಾಗುತ್ತಿದ್ದಂತೆಯೇ ಇನ್ನೊಂದು ಕಡೆಯಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ರವರ ಫೋಟೋ ದೊಂದಿಗೆ ಅವರ ಪ್ರಯತ್ನದಿಂದಾಗಿ ಈ ಒಂದು ಅಕಾಡೆಮಿ ಸ್ಥಾಪನೆಯಾಗಿದೆ ಎಂಬ ಒಕ್ಕಣೆಯೊಂದಿಗೆ ಅಭಿನಂದನೆಗಳು ಎಂಬ ಪೋಸ್ಟರ್ ಅನ್ನು  ಬಿತ್ತರಿಸಲಾಗುತ್ತಿದೆ. ಪತ್ರಿಕೆಗಳಲ್ಲಿ ಲೇಖನವು ಬರುತ್ತದೆ. ಬಿಜೆಪಿ ವಕ್ತಾರರಾದ ಹರಿಪ್ರಸಾದ್ ಕೋಣೆಮನೆ ಅವರಿಂದಲೂ ಲೇಖನ ಬರುತ್ತದೆ.  ಇಲ್ಲಿ  ಪೋಸ್ಟರ್ ನ್ನು ಗಿರಿಧರ ಕಜೆ ಹಾಕಿರುವುದು ಗಮನಾರ್ಹ. 

    ವಿಶ್ವೇಶ್ವರ ಭಟ್ ಬಲಪಂಥೀಯ ಪತ್ರಕರ್ತರು ಎಂಬ ಲೇಬಲ್ ಈಗಾಗಲೇ ಅಂಟಿಸಿಕೊಂಡವರಾಗಿದ್ದಾರೆ. ಬಿಜೆಪಿಯಪರ ಎಂಬ ಹಣೆಪಟ್ಟಿಯು ಅವರಿಗಿದೆ. ಆದರೆ ನಿಜ ಸಂಗತಿ ಭಿನ್ನವಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆ ಬಹಳ ಆತ್ಮೀಯವಾದಂತಹ ಒಡನಾಟ ವಿಶ್ವೇಶ್ವರ ಭಟ್ಟರಗಿದೆ. ಎಂತಹುದೇ ಸಂದರ್ಭದಲ್ಲಿ ಕಾಂಗ್ರೆಸ್ನ ನಾಯಕರಿಗಿಂತಲೂ ಮುಖ್ಯವಾಗಿ ಮುಖ್ಯಮಂತ್ರಿಗಳು ವಿಶ್ವೇಶ್ವರ ಭಟ್ಟರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ಎನ್ನುವುದು ಹಲವು ಕಡೆ ಋಜುವತಾಗಿದೆ.

    ತೀರಾ ಇತ್ತೀಚೆಗೆ ಸಿದ್ದರಾಮಯ್ಯನವರು ಮಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಸಮೀಪ ಇರುವ ತಾಜ್ ಮಂಜುರಾಮ್ ಹೋಟೆಲ್ನಲ್ಲಿ ಅವರು ವಾಸ್ತವ್ಯ ಇರುತ್ತಾರೆ. ಅದೇ ಹೋಟೆಲಿನಲ್ಲಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ಟರು ಉಳಿದಿರುತ್ತಾರೆ ಹಾಗೂ ಮುಖ್ಯಮಂತ್ರಿಗಳ ಜೊತೆ ಆತ್ಮೀಯ ಬೇಟಿಯೂ ಆಗಿರುತ್ತದೆ . ಒಟ್ಟಿಗೆ ಊಟ ತಿಂಡಿ ಸಹ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸಣ್ಣ ನಾಯಕರನ್ನು ಬಿಡಿ ಅನೇಕ ಹಿರಿಯ ನಾಯಕರುಗಳು ಸಹ ಮಂಜುರಾಮ್ ಹೋಟೆಲ್ ಲಾಂಚ್ ನಲ್ಲಿಯೇ ಕಾಯುತ್ತಿದ್ದನ್ನು ಕಾಣಬಹುದಿತ್ತು. ಇಲ್ಲಿ ಹೇಳಲು ಹೊರಟಿದ್ದು ಬೇರೆ ಏನು ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿರಿಯ ಪತ್ರಕರ್ತರ ಜೊತೆಗೆ ಒಳ್ಳೆಯ ಆತ್ಮೀಯ ಸಂಬಂಧವನ್ನು ಹೊಂದಿದ್ದರು ಅನ್ನುವುದನ್ನು  ಹೇಳುತ್ತಿರುವುದು ಅಷ್ಟೇ.  ಇನ್ನು ಹವ್ಯಕ ಬ್ರಾಹ್ಮಣ ಸಮಾಜವು ಬಹುತೇಕವಾಗಿ ಬಿಜೆಪಿಯ ಜೊತೆಗೆ ಗುರುತಿಸಿಕೊಂಡಿದೆ ಅನ್ನುವುದು ಸುಸ್ಪಷ್ಟ. ಎಲ್ಲೋ ಅಲ್ಪಸ್ವಲ್ಪ ಮತದಾರರು ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಹಾಕಬಹುದು. ಇದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗಿರುವಾಗ ಸಿದ್ದರಾಮಯ್ಯನವರು ಈ ಒಂದು ಅಕಾಡೆಮಿಯನ್ನು ರಾಜಕೀಯ ಕಾರಣಕ್ಕಾಗಿ ಸ್ಥಾಪಿಸಿದ್ದಾರೆ ಎನ್ನಲು ಸಾಧ್ಯವಿಲ್ಲ. ಈ ಅಕಾಡೆಮಿ ಸ್ಥಾಪಿಸಿದ್ದರಿಂದ ಹವ್ಯಕ ಸಮಾಜ ಸಿದ್ದರಾಮಯ್ಯನವರಿಗಾಗಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಆಗಲಿ ಸೆಲ್ಯೂಟ್ ಹೊಡೆಯುವ ಯಾವ ಲಕ್ಷಣವೂ ಇಲ್ಲ. ಆದರೆ ಕೆಲವರು ತಮ್ಮ ವೈಯಕ್ತಿಕ ಲಾಭದ ಕಾರಣಕ್ಕೆ ಮುಖ್ಯಮಂತ್ರಿಗಳಿಗೆ ಸೆಲ್ಯೂಟ್ ಹೊಡೀತಾರೆ ಅನ್ನೋದು ಬೇರೆ ಮಾತು. ಸಿದ್ದರಾಮಯ್ಯನವರು ಈ ಒಂದು ಅಕಾಡೆಮಿಯನ್ನು ಸ್ಥಾಪಿಸಲು ಮುಂದಾಗಿದ್ದು  ರಾಜಕಾರಣದ ಲಾಭಕ್ಕೋಸ್ಕರ ಅಲ್ಲ ಅನ್ನುವುದಂತೂ ಸುಸ್ಪಷ್ಟವಾಗುತ್ತದೆ. ತುಂಬಾ ಆತ್ಮೀಯರ ಒತ್ತಡದ ಕಾರಣಕ್ಕೇ ಹೆಚ್ಚಿನ ಪ್ರಚಾರವಾಗಲಿ, ಹೋರಾಟವೇ ಆಗಲಿ, ಇಲ್ಲದಿದ್ದರೂ ಈ ಒಂದು ಅಕಾಡೆಮಿ ಸ್ಥಾಪನೆಯ ಘೋಷಣೆಯಾಗಿರುವುದು ಆಶ್ಚರ್ಯ ಅಲ್ಲದೆ ಮತ್ತೇನು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂತಹದೊಂದು ಸ್ಥಾನವನ್ನು ಈ ಸಮಾಜಕ್ಕೆ ಕೊಡುತ್ತಾರೆಂಬ ನಿರೀಕ್ಷೆಯು ಆ ಸಮಾಜದ ಯಾರಲ್ಲೂ ಇರಲಿಲ್ಲ.

    ಹಾಗಂತ ಕಾಂಗ್ರೆಸ್ಸಿನಲ್ಲಿ ಹವ್ಯಕ ಸಮಾಜದ ನಾಯಕರು ಇಲ್ಲ ಅಂತಲ್ಲ. ಹಲವು ನಾಯಕರುಗಳು ಕಾಂಗ್ರೆಸ್ ಜೊತೆಗೆ ಇದ್ದಾರೆ. ಇನ್ನು ಕೆಲವರು ಕಾಂಗ್ರೆಸ್ ಜೊತೆಗೂ ಇದ್ದಾರೆ ಬಿಜೆಪಿಯ ಜೊತೆಗೂ ಕಾಣಿಸಿಕೊಳ್ಳುತ್ತಾರೆ. ಅಂತಹ ನಾಯಕರೂ ಇದ್ದಾರೆ.

    ಕಾಂಗ್ರೆಸ್ ನಲ್ಲಿ ಹವ್ಯಕ ಸಮಾಜದಿಂದ ಬಂದ ನಾಯಕರ ಪೈಕಿ ಅತ್ಯಂತ ಕಟ್ಟು ನಿಟ್ಟಾಗಿ ಹಾಗೂ ಖಡಕ್ಕಾಗಿ ಸೈದ್ಧಾಂತಿಕ ನಿಲುವನ್ನು ವ್ಯಕ್ತಪಡಿಸುತ್ತಿರುವುದು ಎಂ ಜಿ ಹೆಗಡೆ ಮಾತ್ರನೇ ಅನ್ನುವುದನ್ನು ಅವರ ಕಾರ್ಯವೇ ಎತ್ತಿ ತೋರಿಸುತ್ತದೆ. ಈ ವಿಚಾರವಾಗಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಅವರು ಪತ್ರಿಕಾಗೋಷ್ಠಿಯನ್ನು ಒಬ್ಬ ಹವ್ಯಕ ಸಮಾದವರಗಿಯಲ್ಲ ಕಾಂಗ್ರೆಸ್ ನಾಯಕರಾಗಿ ಮಾಡಿದ್ದಾರೆ.

    ಅದೇನೇ ಇರಲಿ, ಕಾಂಗ್ರೆಸ್ಸಿನ ಒಳಗೆ ಈಗ ಹವ್ಯಕ ಅಕಾಡೆಮಿ ಸ್ಥಾಪನೆಯ ವಿಚಾರವು ಬಹಳಷ್ಟು ಚರ್ಚೆಗೆ ಕಾರಣವಾಗಿದೆ ಅನ್ನುವುದಂತೂ ಸತ್ಯ. ಆದರೆ ಈ ಅಕಾಡೆಮಿಗೆ ಕರ್ತೃ ಯಾರು ಅನ್ನುವುದು ಮಾತ್ರ ಹೊರಗಡೆ ಬರುವ ಲಕ್ಷಣವಿಲ್ಲ. ಪರಿಣಾಮ ಈ ಕ್ರೆಡಿಟ್ ವಾರ್ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ವಾರ್ ನಿಲ್ಲಲು ಅಕಾಡೆಮಿಯು ತನ್ನ ಕಾರ್ಯ ಆರಂಭ ಮಾಡಬೇಕು ಅಷ್ಟೇ. ಅಲ್ಲಿಯವರೆಗೆ ಈ ವಾರ್ ಮುಂದುವರೆಯುತ್ತದೆ. ಭಹುಶಃ ಈ ವಾರ್ನಲ್ಲಿ ವಿಶ್ವೇಶ್ವರ ಭಟ್ಟರು ಒಂದು ಹಂತಕ್ಕೆ ಮಾಧ್ಯಮಗಳ ಸಹಾಯದಿಂದ  ಮೇಲೆ ಇದ್ದಂತೆ ಕಾಣಬಹುದು. ಆದರೆ ಕಾಂಗ್ರೆಸ್ ನ ಪಾಳೆಯಕ್ಕೆ ಅಂದರೆ ಕೋಟೆಯ ಒಳಕ್ಕೆ ಬಂದು ನಿಂತಂತಹ ಲಕ್ಷ್ಮೀಶ್ ದಬಲಡ್ಕ ಪರವಾಗಿ ಕಾಂಗ್ರೆಸ್ಸಿನ ಇತರ ನಾಯಕರು ಬೆನ್ನೆಲುಬಾಗಿ ಹೇಗೆ ನಿಲ್ಲುತ್ತಾರೆ ಅನ್ನುವುದರ ಮೇಲೆ ಉಳಿದದ್ದು  ನಿಂತಿರುತ್ತದೆ ಅನ್ನಬಹುದೇ?

    ಒಂದು ಮೂಲದ ಪ್ರಕಾರ, ಸುಮಾರು ಎರಡು ವರ್ಷದ ಹಿಂದೆ ಲಕ್ಷ್ಮೀ ಶ್ ದಬಲಡ್ಕ್ ಚಿಕ್ಕಮಂಗಳೂರಿಗೆ ಹೋಗಿರುತ್ತಾರೆ, ಅಲ್ಲಿ ಸುಧೀರ್ ಮರೊಳಿ ಒಟ್ಟಿಗೆ ಮಾತನಾಡುತ್ತಿರುವಾಗ ರಾಜ್ಯದಲ್ಲಿ ಇರುವ ಸಣ್ಣ ಸಮಾಜವಾದ ಹವ್ಯಕ ಭಾಷೆಯ ಅಭಿವೃದ್ಧಿಗೂ ಒಂದು ಅಕಾಡೆಮಿ ರಚಿಸಬೇಕು. ಯಾಕೆ ರಚಿಸಬಾರದು ಎಂಬ ಪ್ರಶ್ನೆಯನ್ನು ಮರೋಳಿಯವರ ಮುಂದೆ ಇಡುತ್ತಾರೆ. ಆಗ ಮರೋಳಿಯವರು ಖಂಡಿತವಾಗಿಯೂ ಪ್ರಯತ್ನಿಸಿ, ನಾವೆಲ್ಲರೂ ಸಹಕರಿಸುತ್ತೇವೆ ಎಂಬ ಉತ್ತರವನ್ನು ನೀಡುತ್ತಾರೆ. ಅಲ್ಲಿಂದ ದಬಲಡ್ಕ ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ನಡೆಸುತ್ತಾರಂತೆ. ಆ ಪ್ರಯತ್ನದಲ್ಲಿ ಸಾಗಿರುವಾಗಲೇ ಒಮ್ಮೆ ಬೆಂಗಳೂರಿನಲ್ಲಿ ಅಚಾನಕ್ಕಾಗಿ ವಿಶ್ವೇಶ್ವರ ಭಟ್ಟರು ಸಿಕ್ಕುತ್ತಾರೆ. ಆಗ ಸ್ವತಃ ದಬಲಡ್ಕ, ವಿಶ್ವೇಶ್ವರ ಭಟ್ಟರಿಗೆ ವಿಚಾರವನ್ನು ತಿಳಿಸುತ್ತಾರೆ ಅದಕ್ಕೆ ಭಟ್ಟರಿಂದ ಶಭಾಷ್ ಗಿರಿಯು  ಸಿಗುತ್ತದೆಯಂತೆ. ಲಕ್ಷ್ಮೀಶ್ ದಬಲಡ್ಕ ರವರ ಆತ್ಮೀಯರ ಪ್ರಕಾರ ಈ ಒಂದು ಕಾರ್ಯದಲ್ಲಿ ಹಲವರ ಸಹಕಾರ ಪಡೆದ ಪರಿಣಾಮ ಇವತ್ತು ಈ ಅಕಾಡೆಮಿ  ರಚನೆಯಾಗಿದೆ. ಆದರೆ ಈಗ, ಯಾರ್ಯಾರೋ ಕ್ರೆಡಿಟ್  ಪಡೆಯಲು ಶ್ರಮಿಸುತ್ತಿದ್ದಾರೆ ಅನ್ನುತ್ತಾರೆ. ಇರಲಿ ಈ ಅಕಾಡೆಮಿಯು ಆದಷ್ಟು ಬೇಗ ಕಾರ್ಯರೂಪಕ್ಕೆ ಬಂದರೆ ಈ ಒಂದು ಅಕಾಡೆಮಿಯ ಸ್ಥಾಪನೆಯ ಕ್ರೆಡಿಟ್ ಬಹುಶಃ ಮುಖ್ಯಮಂತ್ರಿಗಳ ಕಿರೀಟಕ್ಕೆ ಹೋಗಬಹುದು.

    ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
    “ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
    ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಶಸ್ತ್ರಚಿಕಿತ್ಸೆಯ ಪಿತಾಮಹ ಮಹಾನ್ ವೈದ್ಯ….ಸುಶ್ರುತನನ್ನ ಜಗತ್ತು ಗೌರವಿಸಿದ ಕ್ಷಣ…ಆಧುನಿಕ ವೈದ್ಯಕೀಯದ ಬೇರುಗಳು ಭಾರತದಲ್ಲೇ…
    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಮಚ್ಚು ದಾಳಿ: ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಹಲ್ಲೆ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
    ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
    ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
    ಅಣ್ಣಾಮಲೈ ಸಿಡಿಸಿದ ಬಾಂಬ್: ವಿಜಯ್ ಸರ್ಕಾರದ ಸಚಿವರ ವಿರುದ್ಧ 2–4% ಕಿಕ್‌ಬ್ಯಾಕ್ ಆರೋಪ!
    ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
    🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
    ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
    ಕೆತ್ತಿಕಲ್‌ನಿಂದ ಚಾರ್ಮಾಡಿವರೆಗೆ ಅಪಾಯದ ಗಂಟೆ! ಭೂಕುಸಿತ ಭೀತಿಯಲ್ಲಿ ಕರಾವಳಿ ರಸ್ತೆಗಳು !ಮಳೆ ಬಂದ ಮೇಲೆ ಸಭೆ, ಪರಿಶೀಲನೆ… ಆದರೆ ಮುನ್ನೆಚ್ಚರಿಕೆ ಎಲ್ಲಿದೆ?
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ
    ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
    ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    19 ವರ್ಷದ ಆಯಾನ್ ಅಹ್ಮದ್ ತನ್ವೀರ್ ಅಹ್ಮದ್ ವಿರುದ್ಧ ಗಂಭೀರ ಸೈಬರ್ ಲೈಂಗಿಕ ಶೋಷಣೆ ..!ಅಮರಾವತಿ ಭೀಕರ ಪ್ರಕರಣ-
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!
    ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿ…
    ವಂದೇ ಮಾತರಂ ವಿವಾದ ದೇಶಭಕ್ತಿಯ ಸಂಕೇತವೇ, ರಾಜಕೀಯ ಅಸ್ತ್ರವೇ?
    ಲಾಲ್‌ಬಾಗ್ ಸಿಗ್ನಲ್ ಬಳಿ ಚಾಕು ಇರಿತದ ಘಟನೆ…!
    ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!
    ಲೈಂಗಿಕ ಕಿರುಕುಳ ನೀಡಿದ ಬಾಸ್‌ಗೆ ಪೊಲೀಸರ ಮುಂದೆಯೇ ಮುಖಕ್ಕೆ ಮಸಿ ಬಳಿದು ಕೆನ್ನೆಗೆ ಬಾರಿಸಿದ ಮಹಿಳೆ!
    ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ