📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….

ಉಡುಪಿ ನಗರದಲ್ಲಿ ಆನ್‌ಲೈನ್ ಹೂಡಿಕೆ ವಂಚನೆ ಪ್ರಕರಣ – ಜನರಿಗೆ ಎಚ್ಚರಿಕೆ ಸಂದೇಶ
ಉಡುಪಿ ನಗರದಲ್ಲಿ ಶಿವಶಂಕರ ಎಂಬವುವರು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಆಕರ್ಷಕ ಹೂಡಿಕೆ ಜಾಹೀರಾತಿಗೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ ತಿಂಗಳಲ್ಲಿ ಅವರು ಫೇಸ್‌ಬುಕ್‌ನಲ್ಲಿ ಸ್ಕ್ರೋಲ್ ಮಾಡುತ್ತಿದ್ದಾಗ “IIFL Capital Services and Investments” ಎಂಬ ಹೆಸರಿನಲ್ಲಿ ಬಂದ ಜಾಹೀರಾತು ಗಮನ ಸೆಳೆದಿದೆ. ಹೆಚ್ಚಿನ ಲಾಭದ ಭರವಸೆ ನೀಡಿದ ಕಾರಣ, ಅವರು ಆ ಜಾಹೀರಾತಿನ “Join” ಲಿಂಕ್ ಕ್ಲಿಕ್ ಮಾಡಿದ್ದಾರೆ.


ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಅವರು “HO2 – IIFL Capital Services Ltd Service Manager” ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಲ್ಪಟ್ಟಿದ್ದಾರೆ. ಅಲ್ಲಿ ಟ್ರೇಡಿಂಗ್ ಮತ್ತು ಹೂಡಿಕೆ ಕುರಿತು ನಂಬಿಕೆ ಹುಟ್ಟಿಸುವ ರೀತಿಯಲ್ಲಿ ಮಾಹಿತಿ ನೀಡಲಾಗಿದ್ದು, ಅಧಿಕ ಲಾಭದ ಭರವಸೆ ಮೂಲಕ ಪಿರ್ಯಾದಿದಾರರನ್ನು ಹೂಡಿಕೆಗೆ ಪ್ರೇರೇಪಿಸಲಾಗಿದೆ.


ನಂತರ, ಅಪರಿಚಿತ ವ್ಯಕ್ತಿಗಳು “DMAPLUS” ಎಂಬ ತೃತೀಯ ಪಾರ್ಟಿ ಮೊಬೈಲ್ ಅಪ್ಲಿಕೇಶನ್ ಅನ್ನು ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ಲಾಭ ಪಡೆಯುವ ಆಸೆಯಿಂದ ಪಿರ್ಯಾದಿದಾರರು ಆ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿ ಟ್ರೇಡಿಂಗ್ ಆರಂಭಿಸಿದ್ದಾರೆ. ದಿನಾಂಕ 03/04/2026 ರಿಂದ 30/04/2026 ರ ನಡುವಿನ ಅವಧಿಯಲ್ಲಿ ಅವರು ತಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ಒಟ್ಟು ₹1,85,000 ಹಣವನ್ನು ಹೂಡಿಕೆ ಮಾಡಿದ್ದಾರೆ.


ಆದರೆ ನಿರೀಕ್ಷಿಸಿದಂತೆ ಯಾವುದೇ ಲಾಭವೂ ದೊರೆಯಲಿಲ್ಲ. ಅಷ್ಟೇ ಅಲ್ಲದೆ, ಹೂಡಿಕೆ ಮಾಡಿದ ಮೂಲ ಮೊತ್ತವನ್ನೂ ಹಿಂತಿರುಗಿಸಲಾಗಿಲ್ಲ. ನಿಧಾನವಾಗಿ ಇದು ವಂಚನೆಯ ಜಾಲವೆಂಬುದು ಶಿವಶಂಕರಗೆ ತಿಳಿದುಬಂದಿದ್ದು, ತಕ್ಷಣವೇ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪರಾಧ ಕ್ರಮಾಂಕ 65/2026, ಕಲಂ 318(4) BNS ಹಾಗೂ 66(D) ಐಟಿ ಕಾಯ್ದೆಯಡಿ ತನಿಖೆ ನಡೆಯುತ್ತಿದೆ.
ಈ ಘಟನೆ ಸಾರ್ವಜನಿಕರಿಗೆ ಒಂದು ಗಂಭೀರ ಎಚ್ಚರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ “ಹೆಚ್ಚು ಲಾಭ, ಕಡಿಮೆ ಹೂಡಿಕೆ” ಎಂಬ ಜಾಹೀರಾತುಗಳು ಬಹುಪಾಲು ವಂಚನೆಗಳಾಗಿರಬಹುದು. ಅಪರಿಚಿತ ಲಿಂಕ್‌ಗಳು, ಅಜ್ಞಾತ ವಾಟ್ಸಪ್ ಗ್ರೂಪ್‌ಗಳು ಮತ್ತು ತೃತೀಯ ಪಾರ್ಟಿ ಆಪ್‌ಗಳನ್ನು ನಂಬಿ ಹಣ ಹೂಡಿಕೆ ಮಾಡುವುದು ಅಪಾಯಕಾರಿಯಾಗಿದೆ. ಯಾವುದೇ ಹೂಡಿಕೆ ಮಾಡುವ ಮುನ್ನ ಅದರ ಅಧಿಕೃತತೆ ಪರಿಶೀಲಿಸುವುದು ಮತ್ತು ಬ್ಯಾಂಕ್ ಅಥವಾ ಮಾನ್ಯ ಹಣಕಾಸು ಸಂಸ್ಥೆಗಳ ಮೂಲಕ ಮಾತ್ರ ವ್ಯವಹರಿಸುವುದು ಅತ್ಯಂತ ಅಗತ್ಯ.

##ಆನ್ಲೈನ್‌ವಂಚನೆ #ಸೈಬರ್‌ಕ್ರೈಮ್ #ಉಡುಪಿ #ಹೂಡಿಕೆಎಚ್ಚರಿಕೆ #ಫೇಸ್‌ಬುಕ್‌ವಂಚನೆ #ವಾಟ್ಸಪ್‌ಸ್ಕ್ಯಾಮ್ #ಸೈಬರ್‌ಸುರಕ್ಷತೆ

COMMENTS

Login with Gmail to comment

ಇನ್ನಷ್ಟು ಸುದ್ದಿ

ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ದಾವಣಗೆರೆ ಬೆಚ್ಚಿಬಿದ್ದಿದೆ! 41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..
ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
“ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
ಭೀಕರ ಅಪಘಾತ ಮಹಿಳೆ ಬಲಿ
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?
ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
50 ವರ್ಷಗಳ ನಂತರ NCERT 9ನೇ ತರಗತಿಗೆ ‘ತುರ್ತು ಪರಿಸ್ಥಿತಿ’ಯ ವಾಸ್ತವ ಪಾಠ!
ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
ಅರೆ ವಾ..! ಕರ್ನಾಟಕದ ಜನರಿಗೆ ಫ್ಯಾನ್ಸಿ ನಂಬರ್‌ಗಳೇ ಫೇವರಿಟ್…RTOಗೆ ₹118 ಕೋಟಿ ಆದಾಯ!
ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
PTCL ಕಾಯ್ದೆ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ – ಕಂದಾಯ ಸಚಿವರಿಗೆ ದಲಿತ ನಾಯಕರ ಮನವಿ
ವಿಟ್ಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಫೇಸ್‌ಬುಕ್ ‘ಸುಂದರಿ’ಅವಳಲ್ಲ ಅವನು!ಲವ್ ಮಾಡಿ ಹೆಂಡತಿ ಅಂದುಕೊಂಡವನು ಗಂಡಸು ಅಂತ ಗೊತ್ತಾದಾಗ ನಡೆದಿದ್ದೇ ಬೇರೆ!
ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR