📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ

ಬಹಳ ಹಿಂದೆ ಸಂವಿಧಾನ ಕಾನೂನು ಸುವ್ಯವಸ್ಥೆಯ ಅಂದಾಜಿಲ್ಲದ ಸಮಯದಲ್ಲಿ ಉಳ್ಳವರು ಸಾಮಾಜಿಕ ಬಹಿಷ್ಕಾರದಂತಹ ದೌರ್ಜನ್ಯಗಳನ್ನು ಬಡವರ ಮೇಲೆ ಹೇರುತ್ತದೆ ಬಂದಿದ್ದರು. ಅದಕ್ಕೆಲ್ಲ ಇವತ್ತು ಜಾಗವಿಲ್ಲ ಅಂತ ಅಂದುಕೊಂಡಿದ್ದು ತಪ್ಪು ಅಂತ ಪ್ರೂ ಮಾಡುತ್ತಿದೆ ಈ ಎರಡು ಘಟನೆ.

ಒಂದು ಅನಿಷ್ಟ ಪ್ರಕರಣವು  ಇತ್ತ ಚಾಮರಾಜನಗರದ ಜಂಗಲ್ ಪ್ರದೇಶದಲ್ಲಿ ನಡೆದರೆ, ಮತ್ತೊಂದು ಪ್ರಕರಣವು  ಯಾದಗಿರಿ ಜಿಲ್ಲೆಯಂತಹ ಬಿಸಿಲ ನಾಡಿನಲ್ಲಿ ನಡೆದಿದೆ. ಇದರ ಪೈಕಿ  ಒಂದು ಪ್ರಕರಣದಲ್ಲಿ ಜೀವ ಹಾನಿಯೂ ಆಗಿದೆ.

ಅದು ಚಾಮರಾಜನಗರ ಜಿಲ್ಲೆ ಹುನೂರು ತಾಲೂಕಿನ ಹೊಂಗ್ಯಾ ಗ್ರಾಮ. ಈ ಗ್ರಾಮದ ಕೆಂಚಮ್ಮ ಎಂಬ ಹೆಂಗಸುಹಾಗೂ ಅವಳ ಈಡಿ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾಳೆ. ಅಷ್ಟಕ್ಕೂ ಈ ಬಹಿಷ್ಕಾರ ಯಾಕೆ? ಅಂತಹ ತಪ್ಪನ್ನು ಅವಳು ಏನು ಮಾಡಿದಳು? ಊರಿನವರು, ಕುಟುಂಬದವರು, ಸಮಾಜದವರು ತಲೆತಗ್ಗಿಸುವಂತಹ ತಪ್ಪನ್ನು ಆಕೆ ಏನು ಮಾಡಿದಳೇ? ಕೇಳಿದರೆ ನಕ್ಕು ಬಿಡುತ್ತೀರಾ. ಕೇವಲ ತನ್ನ ತಾಯಿಯು ಅನಾರೋಗ್ಯದಿಂದ ನರಳುತ್ತಿದ್ದಾಳೆ ಎನ್ನುವ ಕಾರಣಕ್ಕೆ, ಆರೈಕೆ ಮಾಡಲು ತವರು ಮನೆಗೆ ಹೋಗಿದ್ದಕ್ಕೆ ಈ ಸಾಮಾಜಿಕ ಬಹಿಷ್ಕಾರ. ಊರಿನ ಮುಖಂಡನ ಈ ದೌರ್ಜನ್ಯದ ವಿರುದ್ಧ ಕೆಂಚಮ್ಮ ಈಗ ಸೆಟೆದು ನಿಂತಿದ್ದಾಳೆ. ಈ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾಳೆ.

ಹೌದು , ಈ ಕೆಂಚಮ್ಮ ಜಿಲ್ಲೆಯ ಕರಂಬಾರಿ  ಮೂಲದವಳು ರಾಮು ಎಂಬ ವ್ಯಕ್ತಿಯನ್ನು ಮದುವೆಯಾದ ನಂತರ ಹೊಂಗೆ ಗ್ರಾಮಕ್ಕೆ ಬರುತ್ತಾಳೆ. ಕಳೆದ ಕೆಲವು ಸಮಯದಿಂದ ಹೆತ್ತ ತಾಯಿ ಅನಾರೋಗ್ಯಕ್ಕೆ ಈಡಾಗುತ್ತಾಳೆ. ಅವಳನ್ನು ಆರೈಕೆ ಮಾಡಲು ಕರಂಬಾರಿಯ ತವರಿಗೆ  ಹೋಗಿದ್ದಾಳೆ. ಹಾಗೆ ಹೋದವಳು ಸರಿ ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ತಾಯಿಯ ಹಾರೈಕೆಯಲ್ಲಿ ಕಳೆಯುತ್ತಾಳೆ. ಇದು ಊರಿನ ಮುಖಂಡನ ಪಿತ್ತವನ್ನು ನೆತ್ತಿಗೇರಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಆ ಊರಿನ ಮುಖಂಡ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದಾನೆ. ಕೇವಲ ಕೆಂಚಮ್ಮನಿಗಷ್ಟೇ ಅಲ್ಲ, ಅವಳ ಇಡೀ ಕುಟುಂಬಕ್ಕೆ ಈ ಬಹಿಷ್ಕಾರದ ಬಿಸಿ ತಟ್ಟಿದೆ. ಅಷ್ಟೇ ಅಲ್ಲ, ಈ ಬಹಿಷ್ಕಾರವನ್ನು ವಾಪಸ್ ಪಡೆಯಬೇಕು ಎಂದರೆ ಲಕ್ಷಾಂತರ ರೂ ಹಣದ ಬೇಡಿಕೆಯನ್ನು ಇಟ್ಟಿದ್ದಾನೆ ಸಮಾಜದ ಮುಖಂಡ.

ಇದರಿಂದ ರೊಚ್ಚಿಗೆದ್ದಿರುವ ಕೆಂಚಮ್ಮ, ರಾಮಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ. ಹಾಗೆಯೇ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾಳೆ.

ಇತ್ತ ಇನ್ನೊಂದು ಪ್ರಕರಣ ಯಾದಗಿರಿ ಜಿಲ್ಲೆಯ ಗಿರಿಯಾರ ಎಂಬಲ್ಲಿ ನಡೆದಿದೆ. ಇಲ್ಲಿನ ಕಮಲಮ್ಮ ಎಂಬ ಕುಟುಂಬದ ಮೇಲೆಯೇ ಸಾಮಾಜಿಕ ಬಹಿಷ್ಕಾರದ ಹೊರೆಯನ್ನು ಹೊರಿಸಲಾಗಿದೆ. ಸಿಳ್ಳೆಖ್ಯಾತ ಸಮುದಾಯಕ್ಕೆ ಸೇರಿರುವ ಕಮಲಮ್ಮ  ಹಾಗೂ ಅವರ ಇಡೀ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಒಳಪಡಿಸಿರುವುದು ಇವತ್ತಿನ ಸುಶಿಕ್ಷಿತ ಜನರು ತಲೆತಗ್ಗಿಸುವಂತಹ ವಿಚಾರವಾಗಿದೆ. ಈ ಒಂದು ಸಾಮಾಜಿಕ ಬಹಿಷ್ಕಾರದಿಂದ ತೀವ್ರ ಅವಮಾನಕ್ಕೆ ಒಳಗಾದ ಕಮಲಮ್ಮ, ಕೃಷ್ಣಾ ನದಿಯ ಸೇತುವೆಯೊಂದರ ಮೇಲೆ ನಿಂತು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಹೊರಗೆ ತೆಗೆದಿದ ನಂತರವೇ ಗ್ರಾಮದಲ್ಲಿ ನಡೆದ ಈ ಪ್ರಕರಣವು ಹೊರಕ್ಕೆ ಬಂದಿದೆ.

ಕರ್ನಾಟಕದಲ್ಲಿ ನಡೆದಂತಹ ಈ ಎರಡು ಪ್ರಕರಣಗಳು ಯಾವತ್ತೋ ನಡೆದಿದ್ದಲ್ಲ. ಜಸ್ಟ್ ಇವಾಗಷ್ಟೇ ನಡೆದ ಪ್ರಕರಣ. ಆಧುನಿಕವಾಗಿ ಸಮಾಜವು ಎಷ್ಟೇ ಬೆಳೆದರು, ಸುಶಿಕ್ಷಿತ ನಾಡಾಗುತ್ತಿದ್ದರೂ ಅನಿಷ್ಠ ಪದ್ಧತಿ, ದೌರ್ಜನ್ಯ ಹಾಗೂ ಆಚರಣೆ ಇನ್ನೂ ಅಲ್ಲಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ ಅನ್ನೋದಕ್ಕೆ ಇವೆರಡು ಪ್ರಕರಣಗಳೇ ಸಾಕ್ಷಿ. ರಾಜಕೀಯ ಲಾಭ ನಷ್ಟ ಇವೆಲ್ಲವನ್ನೂ ಬಿಟ್ಟು, ಇಂತಹ ಅನಿಷ್ಟ ಪ್ರಕರಣಕ್ಕೆ ಕಾರಣರಾದವರ ಮೇಲೆ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸ್ಪಷ್ಟವಾದಂತ ಮೆಸೇಜನ್ನು ನೀಡುವ ಕೆಲಸ ಆಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಆಸ್ಪತ್ರೆಯಲ್ಲೇ ಮೂರನೇ ಮಹಡಿಯಿಂದ ಬಿದ್ದು ಸಾವುನಿರ್ಲಕ್ಷ್ಯವೇ? ಸುರಕ್ಷತೆ ಪ್ರಶ್ನೆಗೊಳಗಾಗಿದೆ!
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಭೀಕರ ಅಪಘಾತ ಮಹಿಳೆ ಬಲಿ