📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ

    ಬಹಳ ಹಿಂದೆ ಸಂವಿಧಾನ ಕಾನೂನು ಸುವ್ಯವಸ್ಥೆಯ ಅಂದಾಜಿಲ್ಲದ ಸಮಯದಲ್ಲಿ ಉಳ್ಳವರು ಸಾಮಾಜಿಕ ಬಹಿಷ್ಕಾರದಂತಹ ದೌರ್ಜನ್ಯಗಳನ್ನು ಬಡವರ ಮೇಲೆ ಹೇರುತ್ತದೆ ಬಂದಿದ್ದರು. ಅದಕ್ಕೆಲ್ಲ ಇವತ್ತು ಜಾಗವಿಲ್ಲ ಅಂತ ಅಂದುಕೊಂಡಿದ್ದು ತಪ್ಪು ಅಂತ ಪ್ರೂ ಮಾಡುತ್ತಿದೆ ಈ ಎರಡು ಘಟನೆ.

    ಒಂದು ಅನಿಷ್ಟ ಪ್ರಕರಣವು  ಇತ್ತ ಚಾಮರಾಜನಗರದ ಜಂಗಲ್ ಪ್ರದೇಶದಲ್ಲಿ ನಡೆದರೆ, ಮತ್ತೊಂದು ಪ್ರಕರಣವು  ಯಾದಗಿರಿ ಜಿಲ್ಲೆಯಂತಹ ಬಿಸಿಲ ನಾಡಿನಲ್ಲಿ ನಡೆದಿದೆ. ಇದರ ಪೈಕಿ  ಒಂದು ಪ್ರಕರಣದಲ್ಲಿ ಜೀವ ಹಾನಿಯೂ ಆಗಿದೆ.

    ಅದು ಚಾಮರಾಜನಗರ ಜಿಲ್ಲೆ ಹುನೂರು ತಾಲೂಕಿನ ಹೊಂಗ್ಯಾ ಗ್ರಾಮ. ಈ ಗ್ರಾಮದ ಕೆಂಚಮ್ಮ ಎಂಬ ಹೆಂಗಸುಹಾಗೂ ಅವಳ ಈಡಿ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾಳೆ. ಅಷ್ಟಕ್ಕೂ ಈ ಬಹಿಷ್ಕಾರ ಯಾಕೆ? ಅಂತಹ ತಪ್ಪನ್ನು ಅವಳು ಏನು ಮಾಡಿದಳು? ಊರಿನವರು, ಕುಟುಂಬದವರು, ಸಮಾಜದವರು ತಲೆತಗ್ಗಿಸುವಂತಹ ತಪ್ಪನ್ನು ಆಕೆ ಏನು ಮಾಡಿದಳೇ? ಕೇಳಿದರೆ ನಕ್ಕು ಬಿಡುತ್ತೀರಾ. ಕೇವಲ ತನ್ನ ತಾಯಿಯು ಅನಾರೋಗ್ಯದಿಂದ ನರಳುತ್ತಿದ್ದಾಳೆ ಎನ್ನುವ ಕಾರಣಕ್ಕೆ, ಆರೈಕೆ ಮಾಡಲು ತವರು ಮನೆಗೆ ಹೋಗಿದ್ದಕ್ಕೆ ಈ ಸಾಮಾಜಿಕ ಬಹಿಷ್ಕಾರ. ಊರಿನ ಮುಖಂಡನ ಈ ದೌರ್ಜನ್ಯದ ವಿರುದ್ಧ ಕೆಂಚಮ್ಮ ಈಗ ಸೆಟೆದು ನಿಂತಿದ್ದಾಳೆ. ಈ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾಳೆ.

    ಹೌದು , ಈ ಕೆಂಚಮ್ಮ ಜಿಲ್ಲೆಯ ಕರಂಬಾರಿ  ಮೂಲದವಳು ರಾಮು ಎಂಬ ವ್ಯಕ್ತಿಯನ್ನು ಮದುವೆಯಾದ ನಂತರ ಹೊಂಗೆ ಗ್ರಾಮಕ್ಕೆ ಬರುತ್ತಾಳೆ. ಕಳೆದ ಕೆಲವು ಸಮಯದಿಂದ ಹೆತ್ತ ತಾಯಿ ಅನಾರೋಗ್ಯಕ್ಕೆ ಈಡಾಗುತ್ತಾಳೆ. ಅವಳನ್ನು ಆರೈಕೆ ಮಾಡಲು ಕರಂಬಾರಿಯ ತವರಿಗೆ  ಹೋಗಿದ್ದಾಳೆ. ಹಾಗೆ ಹೋದವಳು ಸರಿ ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ತಾಯಿಯ ಹಾರೈಕೆಯಲ್ಲಿ ಕಳೆಯುತ್ತಾಳೆ. ಇದು ಊರಿನ ಮುಖಂಡನ ಪಿತ್ತವನ್ನು ನೆತ್ತಿಗೇರಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಆ ಊರಿನ ಮುಖಂಡ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದಾನೆ. ಕೇವಲ ಕೆಂಚಮ್ಮನಿಗಷ್ಟೇ ಅಲ್ಲ, ಅವಳ ಇಡೀ ಕುಟುಂಬಕ್ಕೆ ಈ ಬಹಿಷ್ಕಾರದ ಬಿಸಿ ತಟ್ಟಿದೆ. ಅಷ್ಟೇ ಅಲ್ಲ, ಈ ಬಹಿಷ್ಕಾರವನ್ನು ವಾಪಸ್ ಪಡೆಯಬೇಕು ಎಂದರೆ ಲಕ್ಷಾಂತರ ರೂ ಹಣದ ಬೇಡಿಕೆಯನ್ನು ಇಟ್ಟಿದ್ದಾನೆ ಸಮಾಜದ ಮುಖಂಡ.

    ಇದರಿಂದ ರೊಚ್ಚಿಗೆದ್ದಿರುವ ಕೆಂಚಮ್ಮ, ರಾಮಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ. ಹಾಗೆಯೇ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾಳೆ.

    ಇತ್ತ ಇನ್ನೊಂದು ಪ್ರಕರಣ ಯಾದಗಿರಿ ಜಿಲ್ಲೆಯ ಗಿರಿಯಾರ ಎಂಬಲ್ಲಿ ನಡೆದಿದೆ. ಇಲ್ಲಿನ ಕಮಲಮ್ಮ ಎಂಬ ಕುಟುಂಬದ ಮೇಲೆಯೇ ಸಾಮಾಜಿಕ ಬಹಿಷ್ಕಾರದ ಹೊರೆಯನ್ನು ಹೊರಿಸಲಾಗಿದೆ. ಸಿಳ್ಳೆಖ್ಯಾತ ಸಮುದಾಯಕ್ಕೆ ಸೇರಿರುವ ಕಮಲಮ್ಮ  ಹಾಗೂ ಅವರ ಇಡೀ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಒಳಪಡಿಸಿರುವುದು ಇವತ್ತಿನ ಸುಶಿಕ್ಷಿತ ಜನರು ತಲೆತಗ್ಗಿಸುವಂತಹ ವಿಚಾರವಾಗಿದೆ. ಈ ಒಂದು ಸಾಮಾಜಿಕ ಬಹಿಷ್ಕಾರದಿಂದ ತೀವ್ರ ಅವಮಾನಕ್ಕೆ ಒಳಗಾದ ಕಮಲಮ್ಮ, ಕೃಷ್ಣಾ ನದಿಯ ಸೇತುವೆಯೊಂದರ ಮೇಲೆ ನಿಂತು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಹೊರಗೆ ತೆಗೆದಿದ ನಂತರವೇ ಗ್ರಾಮದಲ್ಲಿ ನಡೆದ ಈ ಪ್ರಕರಣವು ಹೊರಕ್ಕೆ ಬಂದಿದೆ.

    ಕರ್ನಾಟಕದಲ್ಲಿ ನಡೆದಂತಹ ಈ ಎರಡು ಪ್ರಕರಣಗಳು ಯಾವತ್ತೋ ನಡೆದಿದ್ದಲ್ಲ. ಜಸ್ಟ್ ಇವಾಗಷ್ಟೇ ನಡೆದ ಪ್ರಕರಣ. ಆಧುನಿಕವಾಗಿ ಸಮಾಜವು ಎಷ್ಟೇ ಬೆಳೆದರು, ಸುಶಿಕ್ಷಿತ ನಾಡಾಗುತ್ತಿದ್ದರೂ ಅನಿಷ್ಠ ಪದ್ಧತಿ, ದೌರ್ಜನ್ಯ ಹಾಗೂ ಆಚರಣೆ ಇನ್ನೂ ಅಲ್ಲಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ ಅನ್ನೋದಕ್ಕೆ ಇವೆರಡು ಪ್ರಕರಣಗಳೇ ಸಾಕ್ಷಿ. ರಾಜಕೀಯ ಲಾಭ ನಷ್ಟ ಇವೆಲ್ಲವನ್ನೂ ಬಿಟ್ಟು, ಇಂತಹ ಅನಿಷ್ಟ ಪ್ರಕರಣಕ್ಕೆ ಕಾರಣರಾದವರ ಮೇಲೆ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸ್ಪಷ್ಟವಾದಂತ ಮೆಸೇಜನ್ನು ನೀಡುವ ಕೆಲಸ ಆಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಅಜಿತ್ ಅಗರ್ಕರ್ ಗೆ ಜಾಕ್ಪಾಟ್
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    AI ವಿಶ್ವವಿದ್ಯಾಲಯಕ್ಕೂ ಮೊದಲು AI ಪರಿಣಾಮಗಳ ಅಧ್ಯಯನ ಅಗತ್ಯವೇ?
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
    ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
    ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
    ಅರೆಬೈಲ್ ಘಾಟ್ ನ ಕಾರು ಅಫಘಾತ ವ್ಯವಸ್ಥಿತ ಕೊಲೆ…!
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ಜುಲೈ 1ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿ…ಪಾಸ್‌ಪೋರ್ಟ್, ರೈಲ್ವೆ, ಕ್ರೆಡಿಟ್ ಕಾರ್ಡ್, ಬ್ಯಾಂಕ್… ಒಂದೇ ದಿನದಲ್ಲಿ ಹಲವು ದೊಡ್ಡ ಬದಲಾವಣೆಗಳು
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    ಗ್ರಾಮೀಣ ಅಭಿವೃದ್ಧಿಯಲ್ಲಿ ಉಡುಪಿ ನಂ.1: ಐದು ಪಂಚಾಯಿತಿಗಳಿಗೆ ರಾಷ್ಟ್ರ ಗೌರವ-ಉಡುಪಿ ಬರೆದ ಸುವರ್ಣ ಇತಿಹಾಸ!
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
    ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?
    ಡಿಕೆ ಶಿವಕುಮಾರ್ ಪ್ರತಿಷ್ಠೆ ಪಣಕ್ಕಿಟ್ಟ ಪರಿಷತ್ ಚುನಾವಣೆ!
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
    ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    ಜಪಾನ್ ಟೆಕ್ನಾಲಜಿ ಬಳ್ಳಾರಿಗೆ ಎಂಟ್ರಿ!ನಿರ್ಮಲಾ ಸೀತಾರಾಮನ್ ಹಸಿರು ಕ್ರಾಂತಿಗೆ ಚಾಲನೆ… ಇದು ಸಾಮಾನ್ಯ ಯೋಜನೆ ಅಲ್ಲ.1 ಲಕ್ಷ ಸಸಿಗಳು, 300 ಎಕರೆ ಭೂಮಿ ..