📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ

ಬಹಳ ಹಿಂದೆ ಸಂವಿಧಾನ ಕಾನೂನು ಸುವ್ಯವಸ್ಥೆಯ ಅಂದಾಜಿಲ್ಲದ ಸಮಯದಲ್ಲಿ ಉಳ್ಳವರು ಸಾಮಾಜಿಕ ಬಹಿಷ್ಕಾರದಂತಹ ದೌರ್ಜನ್ಯಗಳನ್ನು ಬಡವರ ಮೇಲೆ ಹೇರುತ್ತದೆ ಬಂದಿದ್ದರು. ಅದಕ್ಕೆಲ್ಲ ಇವತ್ತು ಜಾಗವಿಲ್ಲ ಅಂತ ಅಂದುಕೊಂಡಿದ್ದು ತಪ್ಪು ಅಂತ ಪ್ರೂ ಮಾಡುತ್ತಿದೆ ಈ ಎರಡು ಘಟನೆ.

ಒಂದು ಅನಿಷ್ಟ ಪ್ರಕರಣವು  ಇತ್ತ ಚಾಮರಾಜನಗರದ ಜಂಗಲ್ ಪ್ರದೇಶದಲ್ಲಿ ನಡೆದರೆ, ಮತ್ತೊಂದು ಪ್ರಕರಣವು  ಯಾದಗಿರಿ ಜಿಲ್ಲೆಯಂತಹ ಬಿಸಿಲ ನಾಡಿನಲ್ಲಿ ನಡೆದಿದೆ. ಇದರ ಪೈಕಿ  ಒಂದು ಪ್ರಕರಣದಲ್ಲಿ ಜೀವ ಹಾನಿಯೂ ಆಗಿದೆ.

ಅದು ಚಾಮರಾಜನಗರ ಜಿಲ್ಲೆ ಹುನೂರು ತಾಲೂಕಿನ ಹೊಂಗ್ಯಾ ಗ್ರಾಮ. ಈ ಗ್ರಾಮದ ಕೆಂಚಮ್ಮ ಎಂಬ ಹೆಂಗಸುಹಾಗೂ ಅವಳ ಈಡಿ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾಳೆ. ಅಷ್ಟಕ್ಕೂ ಈ ಬಹಿಷ್ಕಾರ ಯಾಕೆ? ಅಂತಹ ತಪ್ಪನ್ನು ಅವಳು ಏನು ಮಾಡಿದಳು? ಊರಿನವರು, ಕುಟುಂಬದವರು, ಸಮಾಜದವರು ತಲೆತಗ್ಗಿಸುವಂತಹ ತಪ್ಪನ್ನು ಆಕೆ ಏನು ಮಾಡಿದಳೇ? ಕೇಳಿದರೆ ನಕ್ಕು ಬಿಡುತ್ತೀರಾ. ಕೇವಲ ತನ್ನ ತಾಯಿಯು ಅನಾರೋಗ್ಯದಿಂದ ನರಳುತ್ತಿದ್ದಾಳೆ ಎನ್ನುವ ಕಾರಣಕ್ಕೆ, ಆರೈಕೆ ಮಾಡಲು ತವರು ಮನೆಗೆ ಹೋಗಿದ್ದಕ್ಕೆ ಈ ಸಾಮಾಜಿಕ ಬಹಿಷ್ಕಾರ. ಊರಿನ ಮುಖಂಡನ ಈ ದೌರ್ಜನ್ಯದ ವಿರುದ್ಧ ಕೆಂಚಮ್ಮ ಈಗ ಸೆಟೆದು ನಿಂತಿದ್ದಾಳೆ. ಈ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾಳೆ.

ಹೌದು , ಈ ಕೆಂಚಮ್ಮ ಜಿಲ್ಲೆಯ ಕರಂಬಾರಿ  ಮೂಲದವಳು ರಾಮು ಎಂಬ ವ್ಯಕ್ತಿಯನ್ನು ಮದುವೆಯಾದ ನಂತರ ಹೊಂಗೆ ಗ್ರಾಮಕ್ಕೆ ಬರುತ್ತಾಳೆ. ಕಳೆದ ಕೆಲವು ಸಮಯದಿಂದ ಹೆತ್ತ ತಾಯಿ ಅನಾರೋಗ್ಯಕ್ಕೆ ಈಡಾಗುತ್ತಾಳೆ. ಅವಳನ್ನು ಆರೈಕೆ ಮಾಡಲು ಕರಂಬಾರಿಯ ತವರಿಗೆ  ಹೋಗಿದ್ದಾಳೆ. ಹಾಗೆ ಹೋದವಳು ಸರಿ ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ತಾಯಿಯ ಹಾರೈಕೆಯಲ್ಲಿ ಕಳೆಯುತ್ತಾಳೆ. ಇದು ಊರಿನ ಮುಖಂಡನ ಪಿತ್ತವನ್ನು ನೆತ್ತಿಗೇರಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಆ ಊರಿನ ಮುಖಂಡ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದಾನೆ. ಕೇವಲ ಕೆಂಚಮ್ಮನಿಗಷ್ಟೇ ಅಲ್ಲ, ಅವಳ ಇಡೀ ಕುಟುಂಬಕ್ಕೆ ಈ ಬಹಿಷ್ಕಾರದ ಬಿಸಿ ತಟ್ಟಿದೆ. ಅಷ್ಟೇ ಅಲ್ಲ, ಈ ಬಹಿಷ್ಕಾರವನ್ನು ವಾಪಸ್ ಪಡೆಯಬೇಕು ಎಂದರೆ ಲಕ್ಷಾಂತರ ರೂ ಹಣದ ಬೇಡಿಕೆಯನ್ನು ಇಟ್ಟಿದ್ದಾನೆ ಸಮಾಜದ ಮುಖಂಡ.

ಇದರಿಂದ ರೊಚ್ಚಿಗೆದ್ದಿರುವ ಕೆಂಚಮ್ಮ, ರಾಮಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ. ಹಾಗೆಯೇ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾಳೆ.

ಇತ್ತ ಇನ್ನೊಂದು ಪ್ರಕರಣ ಯಾದಗಿರಿ ಜಿಲ್ಲೆಯ ಗಿರಿಯಾರ ಎಂಬಲ್ಲಿ ನಡೆದಿದೆ. ಇಲ್ಲಿನ ಕಮಲಮ್ಮ ಎಂಬ ಕುಟುಂಬದ ಮೇಲೆಯೇ ಸಾಮಾಜಿಕ ಬಹಿಷ್ಕಾರದ ಹೊರೆಯನ್ನು ಹೊರಿಸಲಾಗಿದೆ. ಸಿಳ್ಳೆಖ್ಯಾತ ಸಮುದಾಯಕ್ಕೆ ಸೇರಿರುವ ಕಮಲಮ್ಮ  ಹಾಗೂ ಅವರ ಇಡೀ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಒಳಪಡಿಸಿರುವುದು ಇವತ್ತಿನ ಸುಶಿಕ್ಷಿತ ಜನರು ತಲೆತಗ್ಗಿಸುವಂತಹ ವಿಚಾರವಾಗಿದೆ. ಈ ಒಂದು ಸಾಮಾಜಿಕ ಬಹಿಷ್ಕಾರದಿಂದ ತೀವ್ರ ಅವಮಾನಕ್ಕೆ ಒಳಗಾದ ಕಮಲಮ್ಮ, ಕೃಷ್ಣಾ ನದಿಯ ಸೇತುವೆಯೊಂದರ ಮೇಲೆ ನಿಂತು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಹೊರಗೆ ತೆಗೆದಿದ ನಂತರವೇ ಗ್ರಾಮದಲ್ಲಿ ನಡೆದ ಈ ಪ್ರಕರಣವು ಹೊರಕ್ಕೆ ಬಂದಿದೆ.

ಕರ್ನಾಟಕದಲ್ಲಿ ನಡೆದಂತಹ ಈ ಎರಡು ಪ್ರಕರಣಗಳು ಯಾವತ್ತೋ ನಡೆದಿದ್ದಲ್ಲ. ಜಸ್ಟ್ ಇವಾಗಷ್ಟೇ ನಡೆದ ಪ್ರಕರಣ. ಆಧುನಿಕವಾಗಿ ಸಮಾಜವು ಎಷ್ಟೇ ಬೆಳೆದರು, ಸುಶಿಕ್ಷಿತ ನಾಡಾಗುತ್ತಿದ್ದರೂ ಅನಿಷ್ಠ ಪದ್ಧತಿ, ದೌರ್ಜನ್ಯ ಹಾಗೂ ಆಚರಣೆ ಇನ್ನೂ ಅಲ್ಲಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ ಅನ್ನೋದಕ್ಕೆ ಇವೆರಡು ಪ್ರಕರಣಗಳೇ ಸಾಕ್ಷಿ. ರಾಜಕೀಯ ಲಾಭ ನಷ್ಟ ಇವೆಲ್ಲವನ್ನೂ ಬಿಟ್ಟು, ಇಂತಹ ಅನಿಷ್ಟ ಪ್ರಕರಣಕ್ಕೆ ಕಾರಣರಾದವರ ಮೇಲೆ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸ್ಪಷ್ಟವಾದಂತ ಮೆಸೇಜನ್ನು ನೀಡುವ ಕೆಲಸ ಆಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
ಯುದ್ಧದ ಹೊಡೆತ: ಹಣ ಕೊಟ್ಟರೂ ಗ್ಯಾಸ್ ಇಲ್ಲ! ಕಾರವಾರ ಬಂದರು ಸ್ತಬ್ಧ — ಜನಜೀವನ ಅಸ್ತವ್ಯಸ್ತ 🔥
Forex ಟ್ರೇಡಿಂಗ್ ಹೆಸರಲ್ಲಿ 3.5 ಲಕ್ಷ ವಂಚನೆ – ಆರೋಪಿ ವಿರುದ್ಧ ಪ್ರಕರಣ ದಾಖಲು
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ಇರಾನ್ ಸಚಿವ ಅಬ್ಬಾಸ್ ಅರಾಘ್ಚಿ ಭಾರತಕ್ಕೆ… ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ BRICS ಸಭೆ ಮೇಲೆ ವಿಶ್ವದ ಗಮನ!ಜಾಗತಿಕ ಉದ್ವಿಗ್ನತೆಯ ನಡುವೆ ದೆಹಲಿ ರಾಜತಾಂತ್ರಿಕ ಕೇಂದ್ರಬಿಂದು!…
19 ವರ್ಷದ ಆಯಾನ್ ಅಹ್ಮದ್ ತನ್ವೀರ್ ಅಹ್ಮದ್ ವಿರುದ್ಧ ಗಂಭೀರ ಸೈಬರ್ ಲೈಂಗಿಕ ಶೋಷಣೆ ..!ಅಮರಾವತಿ ಭೀಕರ ಪ್ರಕರಣ-
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
“ಅಪ್ಪಾ” ಎಂದು ಕರೆದವನ ಕೈಯಿಂದಲೇ 18 ತಿಂಗಳ ಕಂದಮ್ಮನ ದೇಹದ ಮೇಲೆ 91 ಗಾಯದ ಗುರುತು – ಅಮಾನುಷ ಹತ್ಯೆ!..