📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ

ಡೆಂಟಲ್ ಇಂಪ್ಲಾಂಟ್ ಮೂಲಕ ಸ್ಥಳ ಪತ್ತೆ?!!

ಖಮೇನಿ ಹತ್ಯೆ ಯೋಜನೆಗೆ ಹಲವು ವರ್ಷಗಳ ಸಂಚು, ಹಾಗೇ ವರ್ಷಗಳ ಸಿಸಿಟಿವಿ ನಿಗಾವಳಿ ,ಕುತೂಹಲ ಕೆರಳಿಸಿದ ತನಿಖೆ!

ಇರಾನ್‌ನ ಪರಮೋನ್ನತ ನಾಯಕ Ali Khamenei ಅವರನ್ನು ಗುರಿಯಾಗಿಸಿಕೊಂಡು ಹಲವು ವರ್ಷಗಳಿಂದ ಸಂಚು ರೂಪಿಸಲಾಗುತ್ತಿತ್ತು ಎಂಬ ಅಚ್ಚರಿ ಮೂಡಿಸುವ ಮಾಹಿತಿ ಬಹಿರಂಗವಾಗಿದೆ ಎಂದು ವರದಿಯಾಗಿದೆ. ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಹತ್ಯೆಗೆ ಸಂಬಂಧಿಸಿದಂತೆ ರೂಪರೇಖೆ (ಸ್ಕೆಚ್), ತಂತ್ರಜ್ಞಾನ ಉಪಕರಣಗಳು ಹಾಗೂ ಚಲನವಲನಗಳ ಮೇಲ್ವಿಚಾರಣೆ ನಡೆದಿರುವ ಸುಳಿವುಗಳು ದೊರೆತಿವೆ.

ಇದರ ಮಧ್ಯೆ ಮತ್ತೊಂದು ಸಂಚಲನಕಾರಿ ಅಂಶ ಬೆಳಕಿಗೆ ಬಂದಿದೆ. ಡೆಂಟಲ್ ಇಂಪ್ಲಾಂಟ್‌ನಲ್ಲಿ ಅಳವಡಿಸಿದ್ದ ಮೈಕ್ರೋ-ಚಿಪ್ ಅಥವಾ ಸೀರಿಯಲ್ ಟ್ರ್ಯಾಕಿಂಗ್ ಕೋಡ್ ಮೂಲಕ ವ್ಯಕ್ತಿಯ locationtrace.,ಚಲನೆಯ ಸುಳಿವುಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆದಿರುವ ಮಾಹಿತಿ ತನಿಖೆಯನ್ನು ಮತ್ತಷ್ಟು ಕುತೂಹಲಕರಗೊಳಿಸಿದೆ. ಈ ತಂತ್ರದ ಮೂಲಕ ಇರಾನ್ ನಲ್ಲಿ ವೈದ್ಯರ ಮಾರುವೇಷ ದಲ್ಲಿದ್ದ ಮೊಸಾದ್ ಅಂಡರ್ ಕವರ್ ಏಜೆಂಟ್ ಗಳು ಇರಾನಿಯನ್ ಸೇನಾಧಿಕಾರಿಗಳಿಗೆ ಅದರಲ್ಲೂ ಖಮೇನಿ ಆಪ್ತವಲಯದ ಅಧಿಕಾರಿಗಳಿಗೆ ಹಲ್ಲಿನ ಚಿಕಿತ್ಸೆ ನೀಡುವ ನೆಪದಲ್ಲಿ ನಿಖರ ಲೊಕೇಶನ್ ಪತ್ತೆ ಹಚ್ಚುವ ಮೈಕ್ರೊಚಿಪ್ ಇರುವ ಡೆಂಟಲ್ಇಂಪ್ಲಾಂಟ್ ಮಾಡಿದ್ದರು ಅನ್ನುವ ತಂತ್ರಗಾರಿಕೆ ಹತ್ಯೆಗೆ ಸಹಾಯ ಮಾಡಿದೆ ಅನ್ನುವ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ.

ತಂತ್ರಜ್ಞಾನ ಮತ್ತು ವೈದ್ಯಕೀಯ ಸಾಧನಗಳನ್ನು ಸಂಯೋಜಿಸಿ ನಡೆಸಿದ ಈ ಶೋಧ ಕಾರ್ಯ ತನಿಖಾಧಿಕಾರಿಗಳಿಗೆ ಮಹತ್ವದ ಕೊಂಡಿಯಾಗಿದೆಯೆಂದು ಹೇಳಲಾಗಿದೆ.

ಗುಪ್ತ ಸಭೆಗಳು, ಆರ್ಥಿಕ ನೆರವು ಮತ್ತು ವಿದೇಶಿ ಸಂಪರ್ಕಗಳ ಮೂಲಕ ಈ ಸಂಚು ಹಂತ ಹಂತವಾಗಿ ರೂಪುಗೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಭದ್ರತಾ ವಲಯಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ.

ಅಚ್ಚರಿಗೊಳಿಸಿದ ಈ ಪ್ರಕರಣದಲ್ಲಿ, ಹಲವು ವರ್ಷಗಳಿಂದ ಸಂಶಯಾಸ್ಪದ ಚಲನವಲನಗಳ ಮೇಲೆ ಸಿಸಿಟಿವಿ ಕ್ಯಾಮೆರಾಗಳ ನಿಗಾವಳಿ ನಡೆದಿದ್ದುದಾಗಿ ತನಿಖಾ ಮೂಲಗಳು ತಿಳಿಸಿವೆ. ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಿಶ್ಲೇಷಿಸಿದಾಗ, ನಿರ್ದಿಷ್ಟ ವ್ಯಕ್ತಿಗಳ ಚಟುವಟಿಕೆಗಳು ಒಂದೇ ಮಾದರಿಯಲ್ಲಿ ಪುನರಾವರ್ತಿತವಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ಭದ್ರತಾ ತಜ್ಞರ ಪ್ರಕಾರ, ಸಿಸಿಟಿವಿ ದೃಶ್ಯಗಳು ಮತ್ತು ಡಿಜಿಟಲ್ ಸುಳಿವುಗಳ ಸಮನ್ವಯದಿಂದ ಪ್ರಕರಣದ ಜಾಲವನ್ನು ಬಿಚ್ಚಿಡಲು ಸಾಧ್ಯವಾಗುತ್ತಿದೆ. ಹಲವು ವರ್ಷಗಳ ಹಿನ್ನಲೆಯಲ್ಲಿ ನಡೆದಿರುವ ಈ ನಿಗಾವಳಿ ಮತ್ತು ತಂತ್ರಜ್ಞಾನದ ಬಳಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಸರ್ಕಾರ ಸಾರ್ವಜನಿಕರಲ್ಲಿ ಎಚ್ಚರಿಕೆ ಹಾಗೂ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಘಟನೆಯ ಹಿನ್ನೆಲೆ ಮತ್ತು ಹತ್ಯೆಯ ಸಂಚಿನ ವ್ಯಾಪ್ತಿ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
“ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
ಬೀದಿ ನಾಯಿಗಳ ಹಾವಳಿ ಮಾನವ ಜೀವ ರಕ್ಷಣೆಗೆ ಮೊದಲ ಆದ್ಯತೆ — ಸುಪ್ರೀಂ ಕೋರ್ಟ್‌ನ ಕಠಿಣ ನಿಲುವು
AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
“ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…