📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ

ಭಾರತೀಯ ಜನತಾ ಪಕ್ಷ ಕಳೆದ ಹತ್ತು ವರ್ಷದಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿಯೇ, ತರಹೆವಾರಿಯ ಪ್ಲಾನ್ ರೂಪಿಸಿಕೊಂಡು ಬಹುತೇಕವಾಗಿ ರಾಷ್ಟ್ರದಲ್ಲಿ  ನಡೆದ ಹಲವು ಚುನಾವಣೆಯಲ್ಲಿ, ದಿಗ್ವಿಜಯ ಸಾಧಿಸಿರುವ ಭಾರತೀಯ ಜನತಾ ಪಕ್ಷವಿವತ್ತು, ಪಶ್ಚಿಮ ಬಂಗಾಳವನ್ನೂ ಸಹ ಗೆದ್ದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶದ ಅಕ್ರಮ ನುಸುಳುಕೋರರ ಪರವಾಗಿರುವ ಸರ್ಕಾರ ಟಿಎಂಸಿ ಇದೆ ಎಂದು ಬಿಂಬಿಸಿಯೇ ಜನರ ಬೆಂಬಲ ಪಡೆದು ಆಯ್ಕೆಯಾಗಿರುವ ಬಿಜೆಪಿ,  ಈಗ ತತಕ್ಷಣವೇ ಆ ಎಲ್ಲಾ ಬಾಂಗ್ಲಾ ಅಕ್ರಮ ವಾಸಿಗಳನ್ನು ಅಂದರೆ ನುಸುಳುಕೋರರನ್ನು ಹೊರಗೆ ಅಟ್ಟಬೇಕು. ಆ ಕೆಲಸವು ಬಹುತೇಕವಾಗಿ, ತಿಂಗಳೊಳಗೆ ಆಗುತ್ತದೆ ಎನ್ನುವ ನಂಬಿಕೆ ದೇಶವಾಸಿಗಳದ್ದು.

           ದೆಲ್ಲವೂ ಇರಲಿ, ಅನೇಕ ಕಾರಣಗಳಿಂದ, ಸರ್ಕಾರದ ಗೊಂದಲಕಾರಿ ನೀತಿಗಳಿಂದಾಗಿ ಇಡೀ ದೇಶದ ಜನರು, ಅದರಲ್ಲೂ ಮಧ್ಯಮವರ್ಗ ಸಂಕಷ್ಟದಲ್ಲಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ವಿಪರೀತ ಸಂಕಷ್ಟದಿಂದ ಬಳಲುತ್ತಿದ್ದಾರೆ. ಅದಕ್ಕೆ ಕಾರಣ ಆರ್ಥಿಕ ದುಸ್ತಿತಿ. ಇವತ್ತು ಯಾರನ್ನು ಬೇಕಾದರೂ ಕೇಳಿ ಹಣ ಯಾರಹತ್ತಿರ ಇದೆ ಅಂದು, ಸರ್ಕಾರಿ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ A ಗ್ರೇಡ್ ರಾಜಕಾರಣಿಗಳ ಬಳಿ ಮಾತ್ರವೇ ಹಣವಿದೆ ಎಂದು, ಸಾಮಾನ್ಯ ಜನರೂ ಕೂಡ  ಹೇಳಿಕೊಳ್ಳುತ್ತಿದ್ದಾರೆ ಎಂದರೆ, ಪರಿಸ್ಥಿತಿ ಎಲ್ಲಿಗೆ ಬಂದಿದೆ ಅನ್ನುವುದನ್ನು ಊಹಿಸಿ ನೋಡಿ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ಸಾಮಾನ್ಯ ಜನರ ಕಷ್ಟದ ಬಗ್ಗೆ ಚಿಂತಿಸಬೇಕಿದೆ. ಆರೋಗ್ಯ ಭದ್ರತೆ, ಶಿಕ್ಷಣ ಭದ್ರತೆ ಹಾಗೂ ಉದ್ಯೋಗ ಭದ್ರತೆ ಕಡೆಗೆ ಚಿಂತನೆ ಯಾಗಬೇಕಿದೆ. ಈ ಮೂರೂ ಭದ್ರತೆಗಳು ಇಲ್ಲವೇ ಇಲ್ಲ. ಕೆಲವು ಬಾರಿ ಈ ವಿಚಾರಗಳು ಪ್ರಸ್ತಾಪವಾಗುತ್ತವೆ ನಿಜ. ಆದರೆ, ಅದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಭಾಷಣಕ್ಕೆ ಮಾತ್ರ ಸೀಮಿತವಾಗಿದೆ, ಸ್ಟೇಟ್ಮೆಂಟಿಗೆ ಮಾತ್ರ ಸೀಮಿತವಾಗಿದೆ. ಜನಸಾಮಾನ್ಯರಿಗೆ ಅದರ ಫಲವು ಲಭ್ಯವಾಗುತ್ತಿಲ್ಲ. ಬಡವರ ಬಿಪಿಎಲ್ ಕಾರ್ಡ್ ಅಥವಾ ಇನ್ನೇನೋ ಕಾರ್ಡಿನ ಅವಶ್ಯಕತೆ ಇದೆ ಎನ್ನಬಾರದು. ರಾಷ್ಟ್ರದ ಪ್ರತಿಯೊಬ್ಬ ಜನರಿಗೂ, ಉಚಿತವಾದಂತಹ ಆರೋಗ್ಯ ಭದ್ರತೆಯನ್ನ ಸರ್ಕಾರವು ಒದಗಿಸಬೇಕು, ಇಲ್ಲಿ ಯಾವುದೇ ಇನ್ಶೂರೆನ್ಸ್ ಕಂಪನಿಯನ್ನು ಅಡ್ಡ ತರುವ ಅವಶ್ಯಕತೆ ಇಲ್ಲ. ಕುದ್ದು ಸರ್ಕಾರವೇ ಅದರ ಹೊಣೆಯನ್ನು ಹೊರಬೇಕು. ಅದೇ ರೀತಿ ಶಿಕ್ಷಣ ವ್ಯವಸ್ಥೆ

ಇವತ್ತು ಜನಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯಕೋಸ್ಕರ ಉತ್ತಮ ಶಿಕ್ಷಣಕ್ಕಾಗಿ ಅನಿವಾರ್ಯ ಅಥವಾ ಹಾಗೆ  ಬಿಂಬಿತವಾಗಿರುವ ಟ್ರೆಂಡಿನ ಕಾರಣದಿಂದಾಗಿ ಉತ್ತಮ ಶಿಕ್ಷಣದ ಕನಸುಗಳನ್ನು ಹೊತ್ತು ಆರ್ಥಿಕ ಹೊರೆಯನ್ನು ಹೊರುತ್ತಿದ್ದಾರೆ. ಆ ಹೊರೆಯನ್ನು ಇಳಿಸುವ ಕೆಲಸ ಖುದ್ದು ಸರ್ಕಾರವೇ ಮಾಡಬೇಕಿದೆ. ಇಲ್ಲಿಯೂ ಸಹ, ಯಾವುದೇ ರೀತಿಯ ಬಡವ ಶ್ರೀಮಂತ ಜಾತಿ ಧರ್ಮ ಇದ್ಯಾವುದೂ ಇಲ್ಲದೆ, ರಾಷ್ಟ್ರದ ಪ್ರತಿ ಮಕ್ಕಳಿಗೂ ಉಚಿತ ಶಿಕ್ಷಣವನ್ನು ಸರ್ಕಾರ ನೀಡಲೇಬೇಕು. ಹಾಗೆಯೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿಚಾರವಾಗಿ, ಕಠಿಣ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಕರೆಕ್ಟ್ ಸಮಯ.

ಉದ್ಯೋಗ ಭದ್ರತೆ

ಹಾಗೆಯೇ, ಉದ್ಯೋಗ ಭದ್ರತೆಯ ಅವಶ್ಯಕತೆ ಇದೆ. ರಾಷ್ಟ್ರದ ಪ್ರತಿಯೊಬ್ಬನಿಗೂ ಉದ್ಯೋಗ ಕೊಡುವುದು ಸುಲಭವಲ್ಲ, ಅದು ಅಸಂಭವ ಅನ್ನುವುದು ಗೊತ್ತಿದೆ. ಆದರೆ, ಶಿಕ್ಷಣ ಪೂರೈಸಿದ ವ್ಯಕ್ತಿಯ ಟ್ಯಾಲೆಂಟಿಗೆ ಅನುಗುಣವಾಗಿ ಹಾಗೂ ಅರ್ಹತೆಗೆ ಅನುಗುಣವಾಗಿ ಆತನನ್ನು ಸಮಾಜ ಕಟ್ಟುವ, ರಾಷ್ಟ್ರ ಕಟ್ಟುವ ವಿಚಾರದಲ್ಲಿ ಬಳಸಿಕೊಳ್ಳಬೇಕು. ಸರ್ಕಾರದ ಕೆಲಸ. ಸರ್ಕಾರವು ತನ್ನ ಆ ಕೆಲಸದ ಕಡೆಗೆ ಇಲ್ಲಿವರೆಗೂ ನೋಡಿಲ್ಲ ಇನ್ನು ಮುಂದಾದರೂ ನೋಡಬೇಕು. ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ನೆಮ್ಮದಿಯಿಂದ ಬದುಕಲು, ನೆಮ್ಮದಿಯಿಂದ ನಿದ್ದೆ ಮಾಡಲು, ನೆಮ್ಮದಿಯಿಂದ ಊಟ ಮಾಡಲು ಅವಕಾಶ ಸಕ್ಕಲ್ಪಿಸಿದರೆ ರಾಷ್ಟ್ರದ 90% ಸಮಸ್ಯೆ ನಿವಾರಣೆ ಯಾಗುತ್ತದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮುಂದಡಿ ಇಡಬೇಕಿದೆ. ಕೇವಲ ಚುನಾವಣೆಯನ್ನು ಗೆಲ್ಲುವುದು ಮಾತ್ರ ಅದರ ಉದ್ದೇಶವಾಗಬಾರದು. ಚುನಾವಣೆಯಲ್ಲಿ ಗೆದ್ದ ನಂತರ, ಜನಸಾಮಾನ್ಯರಿಗೆ ನಿಯತ್ತಾಗಿ, ಹಾಗೂ ನೈಜವಾಗಿ ಸಂಪೂರ್ಣ ಬೆಂಬಲದೊಂದಿಗೆ ಅವರ ಏಳಿಗೆಯನ್ನು ಬಯಸಬೇಕು. ಇಲ್ಲಿಯವರೆಗೆ ಆಗಿಲ್ಲ ಅನ್ನುವುದು ಎಷ್ಟು ಸತ್ಯವೋ, ಮುಂದೆ ಆಗುತ್ತದೆಯೇ ಎಂಬ ಪ್ರಶ್ನೆ ಇರುವುದು ಕೂಡ ಅಷ್ಟೇ ಸತ್ಯ.

ರಾಷ್ಟ್ರದ ಜನರು, ಕೇಂದ್ರ ಸರ್ಕಾರದ ವಿಚಾರವಾಗಿ ಚುನಾವಣೆಯ ಗೆಲುವಿನ ವಿಚಾರವನ್ನು ಬದಿಗಿಟ್ಟು ದೇಶದ ಜನಸಾಮಾನ್ಯರ ಸ್ಥಿತಿ-ಗತಿಯ ಕಡೆ ಗಮನಹರಿಸಿ ಎಂಬ ಮೆಸೇಜನ್ನು ನೀಡುತ್ತಿದ್ದಾರೆ ಸಾಮಾನ್ಯ ಜನರು. ಅವರ ಪ್ರಕಾರ, ರಾಷ್ಟ್ರದ ಮಧ್ಯಮ ವರ್ಗವು ವಿಪರೀತ ಅನ್ನುವಷ್ಟು ಕಷ್ಟದಲ್ಲಿದೆ. ಅವರ ಬೆಂಬಲಕ್ಕೆ ಸರ್ಕಾರವು ಬರಬೇಕಿದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಏನೆಂದರೆ, ಈ ವಿಚಾರದಲ್ಲೂ ಬಿಪಿಎಲ್ ಕಾರ್ಡ್ ಅಥವಾ ಜಾತೀಯ ಟ್ರಂಪ್ ಕಾರ್ಡ್ ಬಳಸಬೇಡಿ ಅನ್ನುವುದಾಗಿದೆ. ಮಧ್ಯಮ ವರ್ಗದ ಎಲ್ಲಾ ಧರ್ಮ ಹಾಗೂ ಸಮುದಾಯದ ಜನರಿಗೂ, ಸರ್ಕಾರದ ನೀತಿಗಳಿಂದಾಗಿ ಸಾಕಷ್ಟು ತೊಂದರೆಗಳು ದೊಡ್ಡ ಪ್ರಮಾಣದಲ್ಲಿಯೂ ಆಗಿದೆ. ಮಾಧ್ಯಮ ವರ್ಗದವರ ಧ್ವನಿ ಬಲವಾಗಿಲ್ಲದ ಕಾರಣದಿಂದಾಗಿ ಅದು ಆಡಳಿತ ನಡೆಸುವವರ ಕಿವಿಗೆ ತಲುಪುವುದೇ ಇಲ್ಲ. ಆಡಳಿತ ನಡೆಸುವವರ ಕಿವಿಗೆ ತಲುಪಿಸುವ ಕೆಲಸವನ್ನು ಈ ಮಾಧ್ಯಮ ಸಂಸ್ಥೆಯು ಮಾಡುತ್ತಿದೆ. ಈಗಾದರೂ ಎಚ್ಚೆತ್ತುಕೊಳ್ಳಬೇಕಿದೆ ಕೇಂದ್ರ ಸರ್ಕಾರ. ಜನರ ಹಿತದೃಷ್ಟಿಯಿಂದ ಸಂಕಷ್ಟದಲ್ಲಿರುವವರ ಕೈಹಿಡಿಯುವ ಕೆಲಸ ಆಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಂಸತ್ ವಿಶೇಷ ಅಧಿವೇಶನ: ಮಹಿಳಾ ಮೀಸಲಾತಿಗೆ ಒಗ್ಗಟ್ಟು, ಡಿಲಿಮಿಟೇಶನ್ ಮೇಲೆ ಭಾರಿ ವಿವಾದ – ಕರ್ನಾಟಕಕ್ಕೂ ಪರಿಣಾಮದ ಚರ್ಚೆ 🔥
ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
ಒಂದು ದಿನ ಕೈದಿ ಆಗ್ಬೇಕಾ? ಜೈಲು ಜೀವನ ಹೇಗಿರುತ್ತೆ ಅನ್ನೋ ಕುತೂಹಲಕ್ಕೀಗ ಚಂಚಲ್‌ಗುಡ ಜೈಲು ಬಾಗಿಲು ಈಗ ಸಾರ್ವಜನಿಕರಿಗೆ ಓಪನ್!
ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
“ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
19 ವರ್ಷದ ಆಯಾನ್ ಅಹ್ಮದ್ ತನ್ವೀರ್ ಅಹ್ಮದ್ ವಿರುದ್ಧ ಗಂಭೀರ ಸೈಬರ್ ಲೈಂಗಿಕ ಶೋಷಣೆ ..!ಅಮರಾವತಿ ಭೀಕರ ಪ್ರಕರಣ-
ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?
ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
ಅಜಿತ್ ಅಗರ್ಕರ್ ಗೆ ಜಾಕ್ಪಾಟ್
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”