📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ

ಭಾರತೀಯ ಜನತಾ ಪಕ್ಷ ಕಳೆದ ಹತ್ತು ವರ್ಷದಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿಯೇ, ತರಹೆವಾರಿಯ ಪ್ಲಾನ್ ರೂಪಿಸಿಕೊಂಡು ಬಹುತೇಕವಾಗಿ ರಾಷ್ಟ್ರದಲ್ಲಿ  ನಡೆದ ಹಲವು ಚುನಾವಣೆಯಲ್ಲಿ, ದಿಗ್ವಿಜಯ ಸಾಧಿಸಿರುವ ಭಾರತೀಯ ಜನತಾ ಪಕ್ಷವಿವತ್ತು, ಪಶ್ಚಿಮ ಬಂಗಾಳವನ್ನೂ ಸಹ ಗೆದ್ದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶದ ಅಕ್ರಮ ನುಸುಳುಕೋರರ ಪರವಾಗಿರುವ ಸರ್ಕಾರ ಟಿಎಂಸಿ ಇದೆ ಎಂದು ಬಿಂಬಿಸಿಯೇ ಜನರ ಬೆಂಬಲ ಪಡೆದು ಆಯ್ಕೆಯಾಗಿರುವ ಬಿಜೆಪಿ,  ಈಗ ತತಕ್ಷಣವೇ ಆ ಎಲ್ಲಾ ಬಾಂಗ್ಲಾ ಅಕ್ರಮ ವಾಸಿಗಳನ್ನು ಅಂದರೆ ನುಸುಳುಕೋರರನ್ನು ಹೊರಗೆ ಅಟ್ಟಬೇಕು. ಆ ಕೆಲಸವು ಬಹುತೇಕವಾಗಿ, ತಿಂಗಳೊಳಗೆ ಆಗುತ್ತದೆ ಎನ್ನುವ ನಂಬಿಕೆ ದೇಶವಾಸಿಗಳದ್ದು.

           ದೆಲ್ಲವೂ ಇರಲಿ, ಅನೇಕ ಕಾರಣಗಳಿಂದ, ಸರ್ಕಾರದ ಗೊಂದಲಕಾರಿ ನೀತಿಗಳಿಂದಾಗಿ ಇಡೀ ದೇಶದ ಜನರು, ಅದರಲ್ಲೂ ಮಧ್ಯಮವರ್ಗ ಸಂಕಷ್ಟದಲ್ಲಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ವಿಪರೀತ ಸಂಕಷ್ಟದಿಂದ ಬಳಲುತ್ತಿದ್ದಾರೆ. ಅದಕ್ಕೆ ಕಾರಣ ಆರ್ಥಿಕ ದುಸ್ತಿತಿ. ಇವತ್ತು ಯಾರನ್ನು ಬೇಕಾದರೂ ಕೇಳಿ ಹಣ ಯಾರಹತ್ತಿರ ಇದೆ ಅಂದು, ಸರ್ಕಾರಿ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ A ಗ್ರೇಡ್ ರಾಜಕಾರಣಿಗಳ ಬಳಿ ಮಾತ್ರವೇ ಹಣವಿದೆ ಎಂದು, ಸಾಮಾನ್ಯ ಜನರೂ ಕೂಡ  ಹೇಳಿಕೊಳ್ಳುತ್ತಿದ್ದಾರೆ ಎಂದರೆ, ಪರಿಸ್ಥಿತಿ ಎಲ್ಲಿಗೆ ಬಂದಿದೆ ಅನ್ನುವುದನ್ನು ಊಹಿಸಿ ನೋಡಿ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ಸಾಮಾನ್ಯ ಜನರ ಕಷ್ಟದ ಬಗ್ಗೆ ಚಿಂತಿಸಬೇಕಿದೆ. ಆರೋಗ್ಯ ಭದ್ರತೆ, ಶಿಕ್ಷಣ ಭದ್ರತೆ ಹಾಗೂ ಉದ್ಯೋಗ ಭದ್ರತೆ ಕಡೆಗೆ ಚಿಂತನೆ ಯಾಗಬೇಕಿದೆ. ಈ ಮೂರೂ ಭದ್ರತೆಗಳು ಇಲ್ಲವೇ ಇಲ್ಲ. ಕೆಲವು ಬಾರಿ ಈ ವಿಚಾರಗಳು ಪ್ರಸ್ತಾಪವಾಗುತ್ತವೆ ನಿಜ. ಆದರೆ, ಅದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಭಾಷಣಕ್ಕೆ ಮಾತ್ರ ಸೀಮಿತವಾಗಿದೆ, ಸ್ಟೇಟ್ಮೆಂಟಿಗೆ ಮಾತ್ರ ಸೀಮಿತವಾಗಿದೆ. ಜನಸಾಮಾನ್ಯರಿಗೆ ಅದರ ಫಲವು ಲಭ್ಯವಾಗುತ್ತಿಲ್ಲ. ಬಡವರ ಬಿಪಿಎಲ್ ಕಾರ್ಡ್ ಅಥವಾ ಇನ್ನೇನೋ ಕಾರ್ಡಿನ ಅವಶ್ಯಕತೆ ಇದೆ ಎನ್ನಬಾರದು. ರಾಷ್ಟ್ರದ ಪ್ರತಿಯೊಬ್ಬ ಜನರಿಗೂ, ಉಚಿತವಾದಂತಹ ಆರೋಗ್ಯ ಭದ್ರತೆಯನ್ನ ಸರ್ಕಾರವು ಒದಗಿಸಬೇಕು, ಇಲ್ಲಿ ಯಾವುದೇ ಇನ್ಶೂರೆನ್ಸ್ ಕಂಪನಿಯನ್ನು ಅಡ್ಡ ತರುವ ಅವಶ್ಯಕತೆ ಇಲ್ಲ. ಕುದ್ದು ಸರ್ಕಾರವೇ ಅದರ ಹೊಣೆಯನ್ನು ಹೊರಬೇಕು. ಅದೇ ರೀತಿ ಶಿಕ್ಷಣ ವ್ಯವಸ್ಥೆ

ಇವತ್ತು ಜನಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯಕೋಸ್ಕರ ಉತ್ತಮ ಶಿಕ್ಷಣಕ್ಕಾಗಿ ಅನಿವಾರ್ಯ ಅಥವಾ ಹಾಗೆ  ಬಿಂಬಿತವಾಗಿರುವ ಟ್ರೆಂಡಿನ ಕಾರಣದಿಂದಾಗಿ ಉತ್ತಮ ಶಿಕ್ಷಣದ ಕನಸುಗಳನ್ನು ಹೊತ್ತು ಆರ್ಥಿಕ ಹೊರೆಯನ್ನು ಹೊರುತ್ತಿದ್ದಾರೆ. ಆ ಹೊರೆಯನ್ನು ಇಳಿಸುವ ಕೆಲಸ ಖುದ್ದು ಸರ್ಕಾರವೇ ಮಾಡಬೇಕಿದೆ. ಇಲ್ಲಿಯೂ ಸಹ, ಯಾವುದೇ ರೀತಿಯ ಬಡವ ಶ್ರೀಮಂತ ಜಾತಿ ಧರ್ಮ ಇದ್ಯಾವುದೂ ಇಲ್ಲದೆ, ರಾಷ್ಟ್ರದ ಪ್ರತಿ ಮಕ್ಕಳಿಗೂ ಉಚಿತ ಶಿಕ್ಷಣವನ್ನು ಸರ್ಕಾರ ನೀಡಲೇಬೇಕು. ಹಾಗೆಯೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿಚಾರವಾಗಿ, ಕಠಿಣ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಕರೆಕ್ಟ್ ಸಮಯ.

ಉದ್ಯೋಗ ಭದ್ರತೆ

ಹಾಗೆಯೇ, ಉದ್ಯೋಗ ಭದ್ರತೆಯ ಅವಶ್ಯಕತೆ ಇದೆ. ರಾಷ್ಟ್ರದ ಪ್ರತಿಯೊಬ್ಬನಿಗೂ ಉದ್ಯೋಗ ಕೊಡುವುದು ಸುಲಭವಲ್ಲ, ಅದು ಅಸಂಭವ ಅನ್ನುವುದು ಗೊತ್ತಿದೆ. ಆದರೆ, ಶಿಕ್ಷಣ ಪೂರೈಸಿದ ವ್ಯಕ್ತಿಯ ಟ್ಯಾಲೆಂಟಿಗೆ ಅನುಗುಣವಾಗಿ ಹಾಗೂ ಅರ್ಹತೆಗೆ ಅನುಗುಣವಾಗಿ ಆತನನ್ನು ಸಮಾಜ ಕಟ್ಟುವ, ರಾಷ್ಟ್ರ ಕಟ್ಟುವ ವಿಚಾರದಲ್ಲಿ ಬಳಸಿಕೊಳ್ಳಬೇಕು. ಸರ್ಕಾರದ ಕೆಲಸ. ಸರ್ಕಾರವು ತನ್ನ ಆ ಕೆಲಸದ ಕಡೆಗೆ ಇಲ್ಲಿವರೆಗೂ ನೋಡಿಲ್ಲ ಇನ್ನು ಮುಂದಾದರೂ ನೋಡಬೇಕು. ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ನೆಮ್ಮದಿಯಿಂದ ಬದುಕಲು, ನೆಮ್ಮದಿಯಿಂದ ನಿದ್ದೆ ಮಾಡಲು, ನೆಮ್ಮದಿಯಿಂದ ಊಟ ಮಾಡಲು ಅವಕಾಶ ಸಕ್ಕಲ್ಪಿಸಿದರೆ ರಾಷ್ಟ್ರದ 90% ಸಮಸ್ಯೆ ನಿವಾರಣೆ ಯಾಗುತ್ತದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮುಂದಡಿ ಇಡಬೇಕಿದೆ. ಕೇವಲ ಚುನಾವಣೆಯನ್ನು ಗೆಲ್ಲುವುದು ಮಾತ್ರ ಅದರ ಉದ್ದೇಶವಾಗಬಾರದು. ಚುನಾವಣೆಯಲ್ಲಿ ಗೆದ್ದ ನಂತರ, ಜನಸಾಮಾನ್ಯರಿಗೆ ನಿಯತ್ತಾಗಿ, ಹಾಗೂ ನೈಜವಾಗಿ ಸಂಪೂರ್ಣ ಬೆಂಬಲದೊಂದಿಗೆ ಅವರ ಏಳಿಗೆಯನ್ನು ಬಯಸಬೇಕು. ಇಲ್ಲಿಯವರೆಗೆ ಆಗಿಲ್ಲ ಅನ್ನುವುದು ಎಷ್ಟು ಸತ್ಯವೋ, ಮುಂದೆ ಆಗುತ್ತದೆಯೇ ಎಂಬ ಪ್ರಶ್ನೆ ಇರುವುದು ಕೂಡ ಅಷ್ಟೇ ಸತ್ಯ.

ರಾಷ್ಟ್ರದ ಜನರು, ಕೇಂದ್ರ ಸರ್ಕಾರದ ವಿಚಾರವಾಗಿ ಚುನಾವಣೆಯ ಗೆಲುವಿನ ವಿಚಾರವನ್ನು ಬದಿಗಿಟ್ಟು ದೇಶದ ಜನಸಾಮಾನ್ಯರ ಸ್ಥಿತಿ-ಗತಿಯ ಕಡೆ ಗಮನಹರಿಸಿ ಎಂಬ ಮೆಸೇಜನ್ನು ನೀಡುತ್ತಿದ್ದಾರೆ ಸಾಮಾನ್ಯ ಜನರು. ಅವರ ಪ್ರಕಾರ, ರಾಷ್ಟ್ರದ ಮಧ್ಯಮ ವರ್ಗವು ವಿಪರೀತ ಅನ್ನುವಷ್ಟು ಕಷ್ಟದಲ್ಲಿದೆ. ಅವರ ಬೆಂಬಲಕ್ಕೆ ಸರ್ಕಾರವು ಬರಬೇಕಿದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಏನೆಂದರೆ, ಈ ವಿಚಾರದಲ್ಲೂ ಬಿಪಿಎಲ್ ಕಾರ್ಡ್ ಅಥವಾ ಜಾತೀಯ ಟ್ರಂಪ್ ಕಾರ್ಡ್ ಬಳಸಬೇಡಿ ಅನ್ನುವುದಾಗಿದೆ. ಮಧ್ಯಮ ವರ್ಗದ ಎಲ್ಲಾ ಧರ್ಮ ಹಾಗೂ ಸಮುದಾಯದ ಜನರಿಗೂ, ಸರ್ಕಾರದ ನೀತಿಗಳಿಂದಾಗಿ ಸಾಕಷ್ಟು ತೊಂದರೆಗಳು ದೊಡ್ಡ ಪ್ರಮಾಣದಲ್ಲಿಯೂ ಆಗಿದೆ. ಮಾಧ್ಯಮ ವರ್ಗದವರ ಧ್ವನಿ ಬಲವಾಗಿಲ್ಲದ ಕಾರಣದಿಂದಾಗಿ ಅದು ಆಡಳಿತ ನಡೆಸುವವರ ಕಿವಿಗೆ ತಲುಪುವುದೇ ಇಲ್ಲ. ಆಡಳಿತ ನಡೆಸುವವರ ಕಿವಿಗೆ ತಲುಪಿಸುವ ಕೆಲಸವನ್ನು ಈ ಮಾಧ್ಯಮ ಸಂಸ್ಥೆಯು ಮಾಡುತ್ತಿದೆ. ಈಗಾದರೂ ಎಚ್ಚೆತ್ತುಕೊಳ್ಳಬೇಕಿದೆ ಕೇಂದ್ರ ಸರ್ಕಾರ. ಜನರ ಹಿತದೃಷ್ಟಿಯಿಂದ ಸಂಕಷ್ಟದಲ್ಲಿರುವವರ ಕೈಹಿಡಿಯುವ ಕೆಲಸ ಆಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

AIಗೆ ಒಂದು ಪ್ರಶ್ನೆ ಕೇಳಿದ್ರೆ…ಲಕ್ಷಾಂತರ ಲೀಟರ್ ನೀರು ಆವಿಯಾಗುತ್ತೆ…..!ಅದೇಗೆ.??AIಜಗತ್ತನ್ನು ಬದಲಾಯಿಸುತ್ತಿದೆ… ಆದರೆ ಶುದ್ಧ ನೀರಿನ ಜಲಮೂಲಗಳನ್ನು ಖಾಲಿ ಮಾಡುತ್ತಿದೆ.
ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿಕೆ: ಜುಲೈ 2ಕ್ಕೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
ಉಡುಪಿ ಮಹಿಳೆಗೆ ಮುಂಬೈನಲ್ಲಿ ಕಂಬಿ! ₹3.10 ಕೋಟಿ ವಂಚನೆ ಉಡುಪಿ ಮೂಲದ ಮಹಿಳೆ ಅರೆಸ್ಟ್!
ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ದಲಿತ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಆರೋಪಿಗಳು ಬಂಧನ
HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
717 ಮದ್ಯದಂಗಡಿಗಳಿಗೆ ವಿಜಯ್ ಬ್ರೇಕ್‌! ತಮಿಳುನಾಡು ಖಜಾನೆಗೆ ಸಾವಿರಾರು ಕೋಟಿ ಶಾಕ್!
ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
ಇನ್‌ಸ್ಟಾಗ್ರಾಮ್ ಬ್ಲಾಕ್ ಆದ ಕ್ಷಣದಿಂದ ಹೊರಬಂತು ರಹಸ್ಯ!
“ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪುಡಿಗೈದ ಭಾರತದ ವನಿತೆಯರು !ಆರಂಭವೇ ವಿಜಯದ ಘರ್ಜನೆ!
“ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.