📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ

    ಪಶ್ಚಿಮ ಬಂಗಾಳ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. 294 ಕ್ಷೇತ್ರಗಳನ್ನು ಒಳಗೊಂಡ ದೊಡ್ಡ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆಯುತ್ತಿರುವ ಈ ರಾಜ್ಯದಲ್ಲಿ, ಎಡಪಕ್ಷಗಳು ಬಹುತೇಕವಾಗಿ ನಶಿಸಿಹೋಗಿವೆ. ಕಾಂಗ್ರೆಸ್ ಬೆರಳೆಣಿಕೆಯ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಹೋರಾಟದಲ್ಲಿದೆ.

    ಕಳೆದ 15 ವರ್ಷದಿಂದ ಆಡಳಿತ ನಡೆಸಿಕೊಂಡು ಬರುತ್ತಿರುವ ಮಮತಾದಿದಿ, ಈಗಲೂ ಇಲ್ಲಿನ ಜನರಿಗೆ  ಫೇವರೆಟ್ ನಾಯಕಿಯಾಗಿದ್ದಾರೆ. ಆಡಳಿತ ವಿರೋಧಿಯ ಅಲೆ, ಇಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಆದರೆ ಆಡಳಿತ ವಿರೋಧಿ ಅಲೆ, ಎಬ್ಬಿಸುವ ಪ್ರಯತ್ನವನ್ನು ನಡೆದಿದೆ. ಆ ಪ್ರಯತ್ನದಲ್ಲಿ ಸಣ್ಣನೆಯ ಯಶಸ್ಸು ಕೂಡ ಪ್ರಯತ್ನ ಪಟ್ಟವರಿಗೆ ಲಭಿಸಿದೆ ಅನ್ನಬಹುದು. ಇಷ್ಟಾದರೂ ಇಲ್ಲಿ ಮಮತಾ ನೇತ್ರತ್ವದ ಟಿಎಂಸಿ ಮಗದೊಮ್ಮೆ ಅಧಿಕಾರದ ಗದ್ದುಗೆ ಏರುವತ್ತ ಸಾಗುತ್ತಿದೆ ಎನ್ನುವುದು ಬಂಗಾಲಿಗರ ದೃಢವಾದ ಮಾತು.

    ಭಾರತೀಯ ಜನತಾ ಪಕ್ಷವು ಬಂಗಾಲದಲ್ಲಿ ಟಿಎಂಸಿ ಅಧಿಕಾರಕ್ಕೆ ಮತ್ತೊಮ್ಮೆ ಬಂದರೆ, ಬಂಗಾಳ ಬಾಂಗ್ಲಾದೇಶವಾಗುತ್ತದೆ ಎಂಬ ಸ್ಲೋಗನನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಕೆಲಸ ಮಾಡಿದರು. ಇದಕ್ಕೆ ಕೌಂಟರ್ ಆಗಿ, ಟಿಎಂಸಿಯೂ ಸಹ ಬಲವಾಗಿಯೇ ಲಾತಾ ಕೊಟ್ಟಿದೆ. ಅವರು ಬಂಗಾಳದ ಅಸ್ಮಿತೆಯನ್ನು ಎದುರು ಬಿಟ್ಟಿದ್ದಾರೆ. ಬಂಗಾಳದ  ಮೇಲೆ ಹೊರಗಿನವರ ಆಕ್ರಮಣದ ಬಗ್ಗೆ ಮಾತನಾಡುತ್ತಾ, ಸೈಲೆಂಟಾಗಿ ಭಾವನಾತ್ಮಕ ಟಚ್ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮೂರುವರೆ ಕೋಟಿಯಷ್ಟು ಮಹಿಳಾ ಮತದಾರರು ಮಮತಾ ಬ್ಯಾನರ್ಜಿಯ ವಿಚಾರದಲ್ಲಿ ಜೈ ಅನ್ನುತ್ತಿರುವುದು ಬಿಜೆಪಿಯ ಹಲವು ಸ್ಲೋಗನ್ಗಳು ಸರಿಯಾಗಿ ಕೆಲಸ ಮಾಡಿಲ್ಲ ಅನ್ನುವುದರ ಸೂಚನೆಯಾಗಿದೆ.

    ಬಂಗಾಳದ ಮುಸ್ಲಿಂ ಮತದಾರರ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದ ಟಿಎಂಸಿ, ಈ ಬಾರಿ ಎರಡರಿಂದ ಮೂರು ಪರ್ಸೆಂಟ್ ಮುಸ್ಲಿಮರ ಮತವನ್ನು ಕಳೆದುಕೊಳ್ಳುವ ಸಂಭವವಿದೆ. ಅಸಾಉದ್ದಿನ ಓವೈಸಿ ನೇತೃತ್ವದ ಪಕ್ಷವನ್ನು ಬಿಜೆಪಿಯು ಇಲ್ಲಿ ಮತ ಒಡೆಯಲು ಬಿಟ್ಟಿದೆ ಎಂಬ ಪ್ರಚಾರವನ್ನು ಟಿಎಂಸಿಯ ಕೆಳಹಂತದ ನಾಯಕರು ಮನೆಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ, ದೊಡ್ಡ ಮಟ್ಟದ ನಷ್ಟವನ್ನು ಕಂಟ್ರೋಲ್ ಮಾಡಿದಂತಾಗಿದೆ ಎನ್ನಲಾಗುತ್ತಿದೆ. 

    2016ರಲ್ಲಿ ಟಿಎಂಸಿ, ಇಲ್ಲಿ 211 ಸ್ಥಾನವನ್ನು ಪಡೆದುಕೊಂಡಿದ್ದರೆ 2021 ರಲ್ಲಿ 215 ಸ್ಥಾನವನ್ನು ಪಡೆದುಕೊಂಡಿತ್ತು. ಬಿಜೆಪಿಯು 2021 ರಲ್ಲಿ ಭರ್ಜರಿ ಪ್ರದರ್ಶನ ನೀಡಿ 77 ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

    ಬಿಜೆಪಿಯು ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಮತಗಳ ಮೇಲೆ ಪ್ರಭಾವ ಬೀರಿತ್ತು ಅನ್ನುವುದನ್ನು ಆ ರಿಸಲ್ಟ್ ಎತ್ತಿ ತೋರಿಸಿತು. 2021ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೊನ್ನೆ ಸುತ್ತಿದ್ದವು. 

    ಈ ಬಾರಿಯೂ ಸಹ ಎಡ ಪಕ್ಷಗಳು ಚೇತರಿಸಿಕೊಳ್ಳುವ ಯಾವ ಕ್ಷಣವನ್ನು ತೋರಿಸುತ್ತಿಲ್ಲ. ಕಾಂಗ್ರೆಸ್ ಕೂಡ ಗೆಲ್ಲುವ ಹೋರಾಟದಲ್ಲಿ ಬಹಳ ಹಿಂದಿದೆ. ಸಿಂಗಲ್ ಡಿಜಿಟ್ ಕೌಂಟಿನಲ್ಲಿ ಪ್ರಯತ್ನ ನಡೆಸಿದೆಯೇ ಹೊರತು ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಪುರ ಬೆಹರಾಂಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಇರುವುವಿಕೆಯನ್ನು ತೋರ್ಪಡಿಸಿಕೊಳ್ಳುತ್ತಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಎಂಸಿ ನಡುವೆ ನೇರ ಫೈಟ್ ಇದೆ. ನಡುವೆ ಕಾಂಗ್ರೆಸ್ ಕೂಡ ಸಿಂಗಲ್ ಡಿಜಿಟ್ ಗೆಲುವಿಗಾಗಿ ಪ್ರಯತ್ನ ನಡೆಸುತ್ತಿರುವುದು ಈ ಕ್ಷೇತ್ರದಲ್ಲಿ ಕಾಣಿಸುತ್ತಿದೆ.

    ಇನ್ನುಳಿದಂತೆ, ಟಿಎಂಸಿ ಹಾಗೂ ಬಿಜೆಪಿ ಎರಡೂ ಪಕ್ಷಗಳು, ಮತದಾರರಿಗೆ ಬರಪೂರ ಗ್ಯಾರಂಟಿಗಳನ್ನು ಹಂಚುತ್ತಿವೆ. ಟಿಎಂಸಿಯ ಲಕ್ಷ್ಮಿ ಬಂಡಾರ ಯೋಜನೆ , ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ. 1500 ರಿಂದ 1700 ನೂರು ರೂಗೆ ಕೊಡುಗೆಯ ಮೊತ್ತ ಏರಿಸುವರುವುದು ಮಹಿಳೆಯರಲ್ಲಿ ಸಂತಸ ಮೂಡಿಸಿದೆ. ಬಿಜೆಪಿಯ ಮೂರು ಸಾವಿರದ ಗ್ಯಾರಂಟಿ, ವಿಶ್ವಾಸ ಗಳಿಸಲು ಸಾಧ್ಯವಾಗಿಲ್ಲ. ಇದರ ಅರ್ಥ ಇಷ್ಟೇ , ಟಿಎಂಸಿ ಈಗಲೂ ಬಂಗಾಳದಲ್ಲಿ ವಿಶ್ವಾಸವನ್ನು ಉಳಿಸಿಕೊಂಡ ಪಕ್ಷ. ಅದರಲ್ಲೂ ಮಹಿಳಾ ಮತದಾರರನ್ನು ತನ್ನೆಡೆ ಸೆಳೆದುಕೊಳ್ಳುವಲ್ಲಿ ಟಿಎಂಸಿ ಯಶಸ್ವಿಯಾಗಿದೆ. ಹಾಗೆಯೇ ಅದನ್ನು ಉಳಿಸಿಕೊಂಡಿದೆ ಕೂಡ.

    ಭವಾನಿಪುರ 

    ಪಶ್ಚಿಮ ಬಂಗಾಳದ ಭವಾನಿಪುರ ಈ ಬಾರಿ ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತಿರುವ ಕ್ಷೇತ್ರವಾಗಿದೆ. ಕಾರಣ ಈ ಕ್ಷೇತ್ರದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ತನ್ನ ಪ್ರಭಾವವನ್ನು ಹೊಂದಿರುವುದು. ಆ ಪ್ರಭಾವವನ್ನು ಹೊಡೆದು ಹಾಕಲು, ಬಿಜೆಪಿಯ ಸುಮೆಂದು ಅಧಿಕಾರಿ ಈ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಈ ಹಿಂದೆ ನಂದಿ ಗ್ರಾಮದಲ್ಲಿ ಸೋಲಿಸಿದ ಹೆಗ್ಗಳಿಕೆಯನ್ನು ಹೊಂದಿರುವಂತಹ ಸುಮೆಂದು ಅಧಿಕಾರಿ ಅದೇ ಧೈರ್ಯದಲ್ಲಿ ಭವಾನಿಪುರದಲ್ಲೂ ಸಹ ಮಮತಾ ಎದುರು ಸ್ಪರ್ಧೆ ಮಾಡುತ್ತಿದ್ದಾರೆ.

    ಸುಮೇಂದು ಅಧಿಕಾರಿ ಭವಾನಿಪುರದ ಜೊತೆಗೂ ನಂದಿ ಗ್ರಾಮದಲ್ಲೂ ಸ್ಪರ್ಧೆಯಲ್ಲಿದ್ದಾರೆ. ಎರಡು ಕ್ಷೇತ್ರವನ್ನು ಟಿಎಂಸಿಯು ಈ ಬಾರಿ ತನ್ನದಾಗಿಸಿಕೊಳ್ಳಲು ತಂತ್ರಗಾರಿಕೆಯನ್ನು ಹೆಣೆದಿದೆ. ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಅಜೆಂಡಾ ಹೊಂದಿರುವ ಬಿಜೆಪಿ ನಾಯಕರಿಗೆ ಟಿಎಂಸಿ ಹಲವು ಕಡೆ ಮುಟ್ಟಿ ನೋಡಿಕೊಳ್ಳುವ ಪೆಟ್ಟನ್ನು ನೀಡುತ್ತಿದೆ. ಅದರ ಹೊರತಾಗಿಯೂ ಬಿಜೆಪಿ ಈ ಬಾರಿ 90ಕ್ಕೂ ಹೆಚ್ಚು ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಬಿಜೆಪಿ ಹಾಗೂ ಅದರ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದರೂ, ಗುರುತರ ವಿಚಾರವನ್ನು ಎತ್ತಿ,ಪ್ರಸ್ತಾಪಿಸಿ ಟಿಎಂಸಿಯನ್ನು ಅಡಗತ್ತರಿಯಲ್ಲಿ ಸಿಲುಕಿಸುವ ಕೆಲಸ ಮಾಡುತ್ತಿದ್ದರೂ ಸಹ, ಬಿಜೆಪಿಯು ಇಲ್ಲಿ ದೊಡ್ಡ ಲಾಭವನ್ನು ಈ ಬಾರಿ ಮಾಡಿಕೊಳ್ಳುವುದಿಲ್ಲ ಅನ್ನುವುದು ಆ ವಿಶ್ಲೇಷಕರ ಸ್ಪಷ್ಟವಾದಂತಹ ನುಡಿಯಾಗಿದೆ. ಆದರೆ, ಟಿಎಂಸಿಯು ಕಳೆದ ಬಾರಿಗಿಂತ ಕಡಿಮೆ ಸೀಟು ಗೆಲ್ಲುವುದು ಪಕ್ಕಾ ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.

    ಟಿಎಂಸಿ ತನ್ನ ಸೀಟಿನ ಸಂಖ್ಯೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿಕೊಳ್ಳುತ್ತಿದೆ ಅಂದಮೇಲೆ, ಟಿಎಂಸಿ ಫೇವರೆಟ್ ಹೇಗಾಗುತ್ತದೆ ಎಂಬ ಪ್ರಶ್ನೆ ಎದ್ದೇಳುತ್ತದೆ. ಟಿಎಂಸಿ 15 ವರ್ಷಗಳ ಆಡಳಿತದ ನಂತರವೂ ಜನರ ವಿಶ್ವಾಸವನ್ನು ಯಶಸ್ವಿಯಾಗಿ ಇಟ್ಟುಕೊಂಡಿರುವ ಕಾರಣ, ಫೇವರೆಟ್ ಅಂತ ಕರೆದದ್ದು. ಐದು ವರ್ಷದಿಂದ ಬಂಗಾಳದ ಮೇಲೆ ಕಣ್ಣಿಟ್ಟು ನಡೆಯುತ್ತಿರುವಂತಹ ರಾಜಕೀಯ ಚಟುವಟಿಕೆ ಮತ್ತು ಆರೋಪ ಮತ್ತು ಹಿಂಸಾಚಾರ ಹಾಗೆಯೇ ದಾಳಿ ಇವೆಲ್ಲವನ್ನು ಮೆಟ್ಟಿ ನಿಲ್ಲುವುದು ಸುಲಭದ ಮಾತಲ್ಲ. ಆ ಕೆಲಸವನ್ನು ಮಮತಾದಿದಿ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ಅದರ ಪರಿಣಾಮವೇ ಹೊರಗಿನಿಂದ ಬರುವಂತಹ ಯಾವುದೇ ಆರೋಪ ಮತ್ತು ದಾಳಿಯ ವಿಚಾರದಲ್ಲಿ ಬಂಗಾಳದ ಜನರು ವಿಚಲಿತರಾದಂತೆ ಕಾಣುತ್ತಿಲ್ಲ. ದೀದಿಯ ಕಡೆ ಗಟ್ಟಿಯಾಗಿ ನಿಂತಂತೆ ಕಾಣುತ್ತಿದೆ. ಈ ಕಾರಣದಿಂದಾಗಿಯೇ ಟಿಎಂಸಿ 190 ಕ್ಷೇತ್ರದಲ್ಲಿ ಕಣ್ಣು ಮುಚ್ಚಿಕೊಂಡು ಗೆಲ್ಲುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಹೋರಾಟ ನಡೆಸಿದೆ. ಹೆಚ್ಚು ಕಡಿಮೆ 25 ಕ್ಷೇತ್ರದಲ್ಲಿ ಟಿಎಂಸಿ ಹಿಂದಿನ ಸೀಟನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ.

    ಐದು ವರ್ಷದಿಂದ ಮಾಡಿಕೊಂಡು ಬರುತ್ತಿರುವ ಪ್ರಯತ್ನ ಈ ಬಾರಿಯೂ ಸಕ್ಸಸ್ ಕೊಡುವ ದಿಕ್ಕಿನಲ್ಲಿ ಹೋಗುತ್ತಿಲ್ಲ. ಇನ್ನೂ ಒಂದು ಟರ್ಮ್, ಕಾಯ ಬೇಕಾಗಬಹುದು. ತನ್ನ ಬಲವನ್ನು 10 ರಿಂದ 15 ಕ್ಷೇತ್ರದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ ಅನ್ನೋದು ಮಾತ್ರ ಸತ್ಯ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಅವಹೇಳನ ಜಾತಿ ನಿಂದನೆ  ಆರೋಪದಲ್ಲಿ ಕಾರ್ಕಳ ವ್ಯಕ್ತಿಯ ಬಂಧನ !
    ಸೈಡ್ ಕೊಡಲಿಲ್ಲ ಎಂಬ ಸಣ್ಣ ವಿಚಾರ… ದೊಡ್ಡ ಜಗಳದ ವೈರಲ್ ವಿಡಿಯೋ… ಪೊಲೀಸ್ ಕೇಸ್… ಕೊನೆಗೆ ಬಂಧನ!
    ಮಂಗಳೂರಲ್ಲಿ ಮಳೆಯ ಅಬ್ಬರ… ಗುಡುಗು-ಮಿಂಚಿನ ಆಟ ದಕ್ಷಿಣ ಕನ್ನಡದಲ್ಲಿ ಮತ್ತೆ pre-ಮಾನ್ಸೂನ್ ಮ್ಯಾಜಿಕ್!?
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ FIR ..!ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ರಾಜಕೀಯ ಕಾವು ಏರಿಕೆ!
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
    ಜಾತಿ ನಿಂದನೆಗೆ ಕೋರ್ಟ್ ಹಾಕಿದ ಕಾನೂನು ಸ್ಪಷ್ಟತೆ!?
    ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದ  ಪಾಪಿ ತಾಯಿ
    “ಅಂಕಗಳು ಭವಿಷ್ಯ ನಿರ್ಧರಿಸುವುದಿಲ್ಲ” B.Tech ನಲ್ಲಿ 24 ವಿಷಯ ಫೇಲ್ ಆದರೂ IPS ಆದ ಸಮೀರ್ ಶರ್ಮಾ
    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
    ಡೆಲಿವರಿ ಬಾಯ್ ಗೆ “₹500 ಟಿಪ್… !” video viral ಅಸಲಿ ಕಥೆ ಏನು..!?
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    “Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    ಮೋದಿ ಸಂಪುಟದ ಒಂದು ವಿಕೆಟ್ ಪತನವಾಗುತ್ತಾ?
    ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!