📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ

ಪಶ್ಚಿಮ ಬಂಗಾಳ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. 294 ಕ್ಷೇತ್ರಗಳನ್ನು ಒಳಗೊಂಡ ದೊಡ್ಡ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆಯುತ್ತಿರುವ ಈ ರಾಜ್ಯದಲ್ಲಿ, ಎಡಪಕ್ಷಗಳು ಬಹುತೇಕವಾಗಿ ನಶಿಸಿಹೋಗಿವೆ. ಕಾಂಗ್ರೆಸ್ ಬೆರಳೆಣಿಕೆಯ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಹೋರಾಟದಲ್ಲಿದೆ.

ಕಳೆದ 15 ವರ್ಷದಿಂದ ಆಡಳಿತ ನಡೆಸಿಕೊಂಡು ಬರುತ್ತಿರುವ ಮಮತಾದಿದಿ, ಈಗಲೂ ಇಲ್ಲಿನ ಜನರಿಗೆ  ಫೇವರೆಟ್ ನಾಯಕಿಯಾಗಿದ್ದಾರೆ. ಆಡಳಿತ ವಿರೋಧಿಯ ಅಲೆ, ಇಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಆದರೆ ಆಡಳಿತ ವಿರೋಧಿ ಅಲೆ, ಎಬ್ಬಿಸುವ ಪ್ರಯತ್ನವನ್ನು ನಡೆದಿದೆ. ಆ ಪ್ರಯತ್ನದಲ್ಲಿ ಸಣ್ಣನೆಯ ಯಶಸ್ಸು ಕೂಡ ಪ್ರಯತ್ನ ಪಟ್ಟವರಿಗೆ ಲಭಿಸಿದೆ ಅನ್ನಬಹುದು. ಇಷ್ಟಾದರೂ ಇಲ್ಲಿ ಮಮತಾ ನೇತ್ರತ್ವದ ಟಿಎಂಸಿ ಮಗದೊಮ್ಮೆ ಅಧಿಕಾರದ ಗದ್ದುಗೆ ಏರುವತ್ತ ಸಾಗುತ್ತಿದೆ ಎನ್ನುವುದು ಬಂಗಾಲಿಗರ ದೃಢವಾದ ಮಾತು.

ಭಾರತೀಯ ಜನತಾ ಪಕ್ಷವು ಬಂಗಾಲದಲ್ಲಿ ಟಿಎಂಸಿ ಅಧಿಕಾರಕ್ಕೆ ಮತ್ತೊಮ್ಮೆ ಬಂದರೆ, ಬಂಗಾಳ ಬಾಂಗ್ಲಾದೇಶವಾಗುತ್ತದೆ ಎಂಬ ಸ್ಲೋಗನನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಕೆಲಸ ಮಾಡಿದರು. ಇದಕ್ಕೆ ಕೌಂಟರ್ ಆಗಿ, ಟಿಎಂಸಿಯೂ ಸಹ ಬಲವಾಗಿಯೇ ಲಾತಾ ಕೊಟ್ಟಿದೆ. ಅವರು ಬಂಗಾಳದ ಅಸ್ಮಿತೆಯನ್ನು ಎದುರು ಬಿಟ್ಟಿದ್ದಾರೆ. ಬಂಗಾಳದ  ಮೇಲೆ ಹೊರಗಿನವರ ಆಕ್ರಮಣದ ಬಗ್ಗೆ ಮಾತನಾಡುತ್ತಾ, ಸೈಲೆಂಟಾಗಿ ಭಾವನಾತ್ಮಕ ಟಚ್ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮೂರುವರೆ ಕೋಟಿಯಷ್ಟು ಮಹಿಳಾ ಮತದಾರರು ಮಮತಾ ಬ್ಯಾನರ್ಜಿಯ ವಿಚಾರದಲ್ಲಿ ಜೈ ಅನ್ನುತ್ತಿರುವುದು ಬಿಜೆಪಿಯ ಹಲವು ಸ್ಲೋಗನ್ಗಳು ಸರಿಯಾಗಿ ಕೆಲಸ ಮಾಡಿಲ್ಲ ಅನ್ನುವುದರ ಸೂಚನೆಯಾಗಿದೆ.

ಬಂಗಾಳದ ಮುಸ್ಲಿಂ ಮತದಾರರ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದ ಟಿಎಂಸಿ, ಈ ಬಾರಿ ಎರಡರಿಂದ ಮೂರು ಪರ್ಸೆಂಟ್ ಮುಸ್ಲಿಮರ ಮತವನ್ನು ಕಳೆದುಕೊಳ್ಳುವ ಸಂಭವವಿದೆ. ಅಸಾಉದ್ದಿನ ಓವೈಸಿ ನೇತೃತ್ವದ ಪಕ್ಷವನ್ನು ಬಿಜೆಪಿಯು ಇಲ್ಲಿ ಮತ ಒಡೆಯಲು ಬಿಟ್ಟಿದೆ ಎಂಬ ಪ್ರಚಾರವನ್ನು ಟಿಎಂಸಿಯ ಕೆಳಹಂತದ ನಾಯಕರು ಮನೆಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ, ದೊಡ್ಡ ಮಟ್ಟದ ನಷ್ಟವನ್ನು ಕಂಟ್ರೋಲ್ ಮಾಡಿದಂತಾಗಿದೆ ಎನ್ನಲಾಗುತ್ತಿದೆ. 

2016ರಲ್ಲಿ ಟಿಎಂಸಿ, ಇಲ್ಲಿ 211 ಸ್ಥಾನವನ್ನು ಪಡೆದುಕೊಂಡಿದ್ದರೆ 2021 ರಲ್ಲಿ 215 ಸ್ಥಾನವನ್ನು ಪಡೆದುಕೊಂಡಿತ್ತು. ಬಿಜೆಪಿಯು 2021 ರಲ್ಲಿ ಭರ್ಜರಿ ಪ್ರದರ್ಶನ ನೀಡಿ 77 ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಬಿಜೆಪಿಯು ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಮತಗಳ ಮೇಲೆ ಪ್ರಭಾವ ಬೀರಿತ್ತು ಅನ್ನುವುದನ್ನು ಆ ರಿಸಲ್ಟ್ ಎತ್ತಿ ತೋರಿಸಿತು. 2021ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೊನ್ನೆ ಸುತ್ತಿದ್ದವು. 

ಈ ಬಾರಿಯೂ ಸಹ ಎಡ ಪಕ್ಷಗಳು ಚೇತರಿಸಿಕೊಳ್ಳುವ ಯಾವ ಕ್ಷಣವನ್ನು ತೋರಿಸುತ್ತಿಲ್ಲ. ಕಾಂಗ್ರೆಸ್ ಕೂಡ ಗೆಲ್ಲುವ ಹೋರಾಟದಲ್ಲಿ ಬಹಳ ಹಿಂದಿದೆ. ಸಿಂಗಲ್ ಡಿಜಿಟ್ ಕೌಂಟಿನಲ್ಲಿ ಪ್ರಯತ್ನ ನಡೆಸಿದೆಯೇ ಹೊರತು ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಪುರ ಬೆಹರಾಂಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಇರುವುವಿಕೆಯನ್ನು ತೋರ್ಪಡಿಸಿಕೊಳ್ಳುತ್ತಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಎಂಸಿ ನಡುವೆ ನೇರ ಫೈಟ್ ಇದೆ. ನಡುವೆ ಕಾಂಗ್ರೆಸ್ ಕೂಡ ಸಿಂಗಲ್ ಡಿಜಿಟ್ ಗೆಲುವಿಗಾಗಿ ಪ್ರಯತ್ನ ನಡೆಸುತ್ತಿರುವುದು ಈ ಕ್ಷೇತ್ರದಲ್ಲಿ ಕಾಣಿಸುತ್ತಿದೆ.

ಇನ್ನುಳಿದಂತೆ, ಟಿಎಂಸಿ ಹಾಗೂ ಬಿಜೆಪಿ ಎರಡೂ ಪಕ್ಷಗಳು, ಮತದಾರರಿಗೆ ಬರಪೂರ ಗ್ಯಾರಂಟಿಗಳನ್ನು ಹಂಚುತ್ತಿವೆ. ಟಿಎಂಸಿಯ ಲಕ್ಷ್ಮಿ ಬಂಡಾರ ಯೋಜನೆ , ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ. 1500 ರಿಂದ 1700 ನೂರು ರೂಗೆ ಕೊಡುಗೆಯ ಮೊತ್ತ ಏರಿಸುವರುವುದು ಮಹಿಳೆಯರಲ್ಲಿ ಸಂತಸ ಮೂಡಿಸಿದೆ. ಬಿಜೆಪಿಯ ಮೂರು ಸಾವಿರದ ಗ್ಯಾರಂಟಿ, ವಿಶ್ವಾಸ ಗಳಿಸಲು ಸಾಧ್ಯವಾಗಿಲ್ಲ. ಇದರ ಅರ್ಥ ಇಷ್ಟೇ , ಟಿಎಂಸಿ ಈಗಲೂ ಬಂಗಾಳದಲ್ಲಿ ವಿಶ್ವಾಸವನ್ನು ಉಳಿಸಿಕೊಂಡ ಪಕ್ಷ. ಅದರಲ್ಲೂ ಮಹಿಳಾ ಮತದಾರರನ್ನು ತನ್ನೆಡೆ ಸೆಳೆದುಕೊಳ್ಳುವಲ್ಲಿ ಟಿಎಂಸಿ ಯಶಸ್ವಿಯಾಗಿದೆ. ಹಾಗೆಯೇ ಅದನ್ನು ಉಳಿಸಿಕೊಂಡಿದೆ ಕೂಡ.

ಭವಾನಿಪುರ 

ಪಶ್ಚಿಮ ಬಂಗಾಳದ ಭವಾನಿಪುರ ಈ ಬಾರಿ ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತಿರುವ ಕ್ಷೇತ್ರವಾಗಿದೆ. ಕಾರಣ ಈ ಕ್ಷೇತ್ರದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ತನ್ನ ಪ್ರಭಾವವನ್ನು ಹೊಂದಿರುವುದು. ಆ ಪ್ರಭಾವವನ್ನು ಹೊಡೆದು ಹಾಕಲು, ಬಿಜೆಪಿಯ ಸುಮೆಂದು ಅಧಿಕಾರಿ ಈ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಈ ಹಿಂದೆ ನಂದಿ ಗ್ರಾಮದಲ್ಲಿ ಸೋಲಿಸಿದ ಹೆಗ್ಗಳಿಕೆಯನ್ನು ಹೊಂದಿರುವಂತಹ ಸುಮೆಂದು ಅಧಿಕಾರಿ ಅದೇ ಧೈರ್ಯದಲ್ಲಿ ಭವಾನಿಪುರದಲ್ಲೂ ಸಹ ಮಮತಾ ಎದುರು ಸ್ಪರ್ಧೆ ಮಾಡುತ್ತಿದ್ದಾರೆ.

ಸುಮೇಂದು ಅಧಿಕಾರಿ ಭವಾನಿಪುರದ ಜೊತೆಗೂ ನಂದಿ ಗ್ರಾಮದಲ್ಲೂ ಸ್ಪರ್ಧೆಯಲ್ಲಿದ್ದಾರೆ. ಎರಡು ಕ್ಷೇತ್ರವನ್ನು ಟಿಎಂಸಿಯು ಈ ಬಾರಿ ತನ್ನದಾಗಿಸಿಕೊಳ್ಳಲು ತಂತ್ರಗಾರಿಕೆಯನ್ನು ಹೆಣೆದಿದೆ. ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಅಜೆಂಡಾ ಹೊಂದಿರುವ ಬಿಜೆಪಿ ನಾಯಕರಿಗೆ ಟಿಎಂಸಿ ಹಲವು ಕಡೆ ಮುಟ್ಟಿ ನೋಡಿಕೊಳ್ಳುವ ಪೆಟ್ಟನ್ನು ನೀಡುತ್ತಿದೆ. ಅದರ ಹೊರತಾಗಿಯೂ ಬಿಜೆಪಿ ಈ ಬಾರಿ 90ಕ್ಕೂ ಹೆಚ್ಚು ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಬಿಜೆಪಿ ಹಾಗೂ ಅದರ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದರೂ, ಗುರುತರ ವಿಚಾರವನ್ನು ಎತ್ತಿ,ಪ್ರಸ್ತಾಪಿಸಿ ಟಿಎಂಸಿಯನ್ನು ಅಡಗತ್ತರಿಯಲ್ಲಿ ಸಿಲುಕಿಸುವ ಕೆಲಸ ಮಾಡುತ್ತಿದ್ದರೂ ಸಹ, ಬಿಜೆಪಿಯು ಇಲ್ಲಿ ದೊಡ್ಡ ಲಾಭವನ್ನು ಈ ಬಾರಿ ಮಾಡಿಕೊಳ್ಳುವುದಿಲ್ಲ ಅನ್ನುವುದು ಆ ವಿಶ್ಲೇಷಕರ ಸ್ಪಷ್ಟವಾದಂತಹ ನುಡಿಯಾಗಿದೆ. ಆದರೆ, ಟಿಎಂಸಿಯು ಕಳೆದ ಬಾರಿಗಿಂತ ಕಡಿಮೆ ಸೀಟು ಗೆಲ್ಲುವುದು ಪಕ್ಕಾ ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.

ಟಿಎಂಸಿ ತನ್ನ ಸೀಟಿನ ಸಂಖ್ಯೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿಕೊಳ್ಳುತ್ತಿದೆ ಅಂದಮೇಲೆ, ಟಿಎಂಸಿ ಫೇವರೆಟ್ ಹೇಗಾಗುತ್ತದೆ ಎಂಬ ಪ್ರಶ್ನೆ ಎದ್ದೇಳುತ್ತದೆ. ಟಿಎಂಸಿ 15 ವರ್ಷಗಳ ಆಡಳಿತದ ನಂತರವೂ ಜನರ ವಿಶ್ವಾಸವನ್ನು ಯಶಸ್ವಿಯಾಗಿ ಇಟ್ಟುಕೊಂಡಿರುವ ಕಾರಣ, ಫೇವರೆಟ್ ಅಂತ ಕರೆದದ್ದು. ಐದು ವರ್ಷದಿಂದ ಬಂಗಾಳದ ಮೇಲೆ ಕಣ್ಣಿಟ್ಟು ನಡೆಯುತ್ತಿರುವಂತಹ ರಾಜಕೀಯ ಚಟುವಟಿಕೆ ಮತ್ತು ಆರೋಪ ಮತ್ತು ಹಿಂಸಾಚಾರ ಹಾಗೆಯೇ ದಾಳಿ ಇವೆಲ್ಲವನ್ನು ಮೆಟ್ಟಿ ನಿಲ್ಲುವುದು ಸುಲಭದ ಮಾತಲ್ಲ. ಆ ಕೆಲಸವನ್ನು ಮಮತಾದಿದಿ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ಅದರ ಪರಿಣಾಮವೇ ಹೊರಗಿನಿಂದ ಬರುವಂತಹ ಯಾವುದೇ ಆರೋಪ ಮತ್ತು ದಾಳಿಯ ವಿಚಾರದಲ್ಲಿ ಬಂಗಾಳದ ಜನರು ವಿಚಲಿತರಾದಂತೆ ಕಾಣುತ್ತಿಲ್ಲ. ದೀದಿಯ ಕಡೆ ಗಟ್ಟಿಯಾಗಿ ನಿಂತಂತೆ ಕಾಣುತ್ತಿದೆ. ಈ ಕಾರಣದಿಂದಾಗಿಯೇ ಟಿಎಂಸಿ 190 ಕ್ಷೇತ್ರದಲ್ಲಿ ಕಣ್ಣು ಮುಚ್ಚಿಕೊಂಡು ಗೆಲ್ಲುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಹೋರಾಟ ನಡೆಸಿದೆ. ಹೆಚ್ಚು ಕಡಿಮೆ 25 ಕ್ಷೇತ್ರದಲ್ಲಿ ಟಿಎಂಸಿ ಹಿಂದಿನ ಸೀಟನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ.

ಐದು ವರ್ಷದಿಂದ ಮಾಡಿಕೊಂಡು ಬರುತ್ತಿರುವ ಪ್ರಯತ್ನ ಈ ಬಾರಿಯೂ ಸಕ್ಸಸ್ ಕೊಡುವ ದಿಕ್ಕಿನಲ್ಲಿ ಹೋಗುತ್ತಿಲ್ಲ. ಇನ್ನೂ ಒಂದು ಟರ್ಮ್, ಕಾಯ ಬೇಕಾಗಬಹುದು. ತನ್ನ ಬಲವನ್ನು 10 ರಿಂದ 15 ಕ್ಷೇತ್ರದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ ಅನ್ನೋದು ಮಾತ್ರ ಸತ್ಯ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಭರ್ಜರಿ ಬಿಜೆಪಿ ವಿಜಯೋತ್ಸವ ಬೆಂಗಳೂರಲ್ಲಿ ..!ಪ್ರಧಾನಿ ಮೋದಿ ಬರ್ತಿದ್ದಾರೆ.
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
“ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….