📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?

    ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚಿತ್ರನಟ ವಿಜಯ್ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತ. ದುರ್ದೈವ ಅಂದರೆ, ವಿಜಯಗೆ ಪೂರ್ಣ ಬಹುಮತ ದೊರಕದೇ ಇರುವುದು. ಸರ್ಕಾರ ನಡೆಸಲು ಇನ್ನೂ 10 ಶಾಸಕರ ಬೆಂಬಲದ ಅಗತ್ಯತೆ ಇದೆ.

           ರಾಜಕೀಯ ಒಂದು ರೀತಿಯ ಚದುರಂಗದಾಟ ಅಂತಲೇ ಅನ್ನಿಸಿಕೊಳ್ಳುತ್ತದೆ. ಯಾವಾಗ, ಯಾರನ್ನು ,ಯಾರು ಹೊಡೆದು ಹಾಕುತ್ತಾರೋ?, ಯಾವಾಗ ಚೆಕ್ ನೀಡಲಾಗುತ್ತದೆಯೋ ಹೇಳಲಾಗದು. ಸ್ವಲ್ಪವೇ ಎಡವಟ್ಟು ಮಾಡಿಕೊಂಡರು ಚೆಕ್ ಮೀಟ್ ಆಗುವುದು ಖಚಿತ. ಆದರೂ ಅದೊಂದು ಪವರ್ ಫುಲ್ ಕ್ಷೇತ್ರ. ಆ ಪವರಿಗೋಸ್ಕರನೇ ರಾಜಕಾರಣದ ಹೆಬ್ಬಾಗಿಲಿನಲ್ಲಿ ಕಾಣಿಸಿಕೊಳ್ಳುತ್ತಾರೆ ಆಕಾಂಕ್ಷಿಗಳು. ಇದೇ ಮೊದಲ ಬಾರಿಗೆ, ತಮಿಳು ಸಿನಿಮಾ ಕ್ಷೇತ್ರದ ಜನಪ್ರಿಯ ನಟ ವಿಜಯ್, ಇದೀಗ ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುವ ಮೂಲಕ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ.

    ಮಾಧ್ಯಮ ಲೋಕ, ಸಿನಿ ಲೋಕ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಿಂದಲೂ ವಿಜಯ್ ಅವರ ಸಾಧನೆಗೆ ಬಹುಪರಾಕ್ ಹೇಳಲಾಗುತ್ತಿದೆ. ಸಕ್ಸಸ್ ಅನ್ನುವುದು ಹಾಗೆಯೇ ಬಿಡ. ಗೆಲುವಿನ ಜೊತೆಗೆ ಹೆಜ್ಜೆ ಹಾಕಲು, ಗೆಲುವಿನ ಜೊತೆಗೆ ಕಾಣಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ. ವಿಜಯ್ ಇಲ್ಲಿ  ಸಾಕಷ್ಟು ಜಾಗೃತೆಯಿಂದ ಇರಬೇಕಾಗುತ್ತದೆ. ಸಿನಿಮಾ ಕ್ಷೇತ್ರದಂತೆ ರಾಜಕೀಯ ಕ್ಷೇತ್ರವಲ್ಲ. ಅನವಶ್ಯಕವಾಗಿ, ಅರಿವೇ ಇಲ್ಲದಂತೆಯೇ, ಜೊತೆಗಿದ್ದುಕೊಂಡು ಕಾಲೆಳೆದು ಮಲಗಿಸಿ ಬಿಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಕುರ್ಚಿಯ ಸಹಿತ ಬೀಳಬೇಕಾಗುತ್ತದೆ.

    ನಟ ವಿಜಯ್, ಬಹುಮತಕ್ಕೆ ಬೇಕಾಗುವ ಶಾಸಕರ ಬೆಂಬಲವನ್ನು ಪಡೆಯುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಸರ್ಕಾರವನ್ನು ನಡೆಸುತ್ತಾರೆ. ಆದರೆ, ರಾಜಕೀಯ ರಂಗಕ್ಕೆ ಹೊಸಬರಾಗಿರುವ ವಿಜಯ್ ಅವರನ್ನು ಹಾಗೂ ಅವರ ಪಕ್ಷವನ್ನು ರಾಜಕೀಯ ರಂಗದಲ್ಲಿ ಸಾಕಷ್ಟು ಪಟ್ಟುಗಳನ್ನು ಕಲಿತಿರುವಂತಹ ಸೀನಿಯರ್ ಲೀಡರ್ಸ್ಗಳು ಸುಮ್ಮನೆ ಬಿಡುತ್ತಾರೆಯೇ?  ಹಲವು ದಶಕಗಳಿಂದ ತಮಿಳುನಾಡನ್ನು ಡಿಎಂಕೆ ಹಾಗೂ ಎಐಡಿಎಂಕೆ ಸರದಿಯಂತೆ ಆಳುತ್ತಾ ಬಂದಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ, ಬೇರೆಯವರಿಗೆ ಆಸ್ಪದವೇ ಸಿಕ್ಕಿರಲಿಲ್ಲ. ಸಿನಿ ಕ್ಷೇತ್ರದ ಸಾಕಷ್ಟು ನಟರು ತಮ್ಮ ರಾಜಕೀಯ ಭವಿಷ್ಯವನ್ನು ಪರೀಕ್ಷೆಗೆ ಒಡ್ಡಿದ್ದರು. ಸಕ್ಸೆಸ್ ಮಾತ್ರ ಕಂಡಿರಲಿಲ್ಲ. ಎಂಜಿಆರ್ ನಂತರ ಜಯಲಲಿತಾ, ಈಗ ವಿಜಯ್. ಈ ಮೂವರು ಸಿನಿ ಕ್ಷೇತ್ರದಿಂದ ಬಂದು ರಾಜಕೀಯ ಅಖಾಡದಲ್ಲಿ ಸಕ್ಸಸ್ ಕಂಡಿದ್ದಾರೆ. ವಿಜಯ್ ವಿಚಾರದಲ್ಲಿ, ಸಕ್ಸಸ್ ಆಗುವ ಅಥವಾ ಅನ್ ಸಕ್ಸಸ್ ಬಗ್ಗೆ ಈಗಲೇ ಮಾತನಾಡುವ ಹಾಗಿಲ್ಲ, ಅವರ ಓಪನಿಂಗ್ ಎಂಟ್ರಿ ಸಖತ್ತಾಗಿಯೇ ಆಗಿದೆ. ಇನ್ನು ಹೇಗೆ ಆಟವಾಡುತ್ತಾರೆ ನೋಡಬೇಕು. ಎಂಜಿಆರ್ ಹಾಗೂ ಜೈಲಲಿತ ಇಬ್ಬರು ಸಾಕಷ್ಟು ವರ್ಷಗಳ ಕಾಲ ರಾಜಕೀಯದಲ್ಲೂ ಸಕ್ಸಸ್ ಆಟವನ್ನೇ ಆಡಿದ್ದಾರೆ. ಅದೇ ರೀತಿಯ ಸಕ್ಸಸ್ ಆಟ ವಿಜಯ್ ಅವರಿಂದಲೂ ಕಾಣುತ್ತದಾ ನೋಡಬೇಕಿದೆ.

    ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಹಣವಂತರು ಮಧ್ಯಮ ವರ್ಗದವರು ಬಡವರು ಹಾಗೂ ದ್ವನಿ ಇಲ್ಲದ ಸಮುದಾಯದವರು ಸಹ ಗೆದ್ದು ಬಂದಿರುವಂತದ್ದು, ರಾಜಕೀಯ ಲೋಕದಲ್ಲಿ ಆಶಾಭಾವನೆ ಮೂಡಿಸುತ್ತಿದೆ. ಇವತ್ತಿನ ದಿನವೂ,ಜನರು ಜಾತಿ ಮತ ನೋಡದೆಯೇ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಟಿವಿಕೆ ಪಕ್ಷವು ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ.

    ಆಟೋ ಓಡಿಸುತ್ತಿದ್ದ ವ್ಯಕ್ತಿ ಶಾಸಕರಾಗಿದ್ದಾರೆ, ಸಾಮಾನ್ಯ ಕ್ಷೇತ್ರದಲ್ಲಿ ಎಸ್ ಸಿ ಸಮುದಾಯದ ಅಭ್ಯರ್ಥಿ ಜಯಗಳಿಸಿದ್ದಾರೆ. ಇದೆಲ್ಲವೂ ಇವತ್ತಿನ ದಿನವೂ ಸಾಧ್ಯ ಅನ್ನುವುದನ್ನು ವಿಜಯ ನೇತೃತ್ವ ಟಿ ವಿ ಕೆ ಪಕ್ಷ ಸಾಬೀತು ಮಾಡಿ ತೋರಿಸಿದೆ. ಹಾಗಾಗಿ ವಿಜಯ್ ಅವರ ಈ ಒಂದು ದಿಗ್ವಿಜಯ ಇಡೀ ದೇಶಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದೆ.

    ನಿಜ, ಈ ಹಿಂದೆ ಅಮ್ಆದ್ಮಿ ಪಕ್ಷವು ತನ್ನ ಮೊದಲ ಯತ್ನದಲ್ಲೇ ಸಕ್ಸಸ್ ಕಂಡಿತ್ತು. ದೆಹಲಿಯ ಗದ್ದುಗೆಯನ್ನು ಆ ಪಕ್ಷವು ಏರಿತ್ತು. ಆ ಪಕ್ಷದಲ್ಲಿ ಬಹುತೇಕವಾಗಿ ಸುಶಿಕ್ಷಿತರಿದ್ದರು, ಆ ಪಕ್ಷದಲ್ಲಿ ಬಹುತೇಕವಾಗಿ ಪರವಾಗಿಲ್ಲ ಅನ್ನುವಷ್ಟು ಹಣವಂತರೂ ಇದ್ದರು. ಬಹುತೇಕವಾಗಿ ಮಧ್ಯಮ ವರ್ಗದವರನ್ನು ಅಮ್ ಆದ್ಮಿ ಪಕ್ಷವು ತನ್ನತ್ತ ಸೆಳೆದಿತ್ತು. ಆದರೆ ಬಡವರ ಮನದೊಳಕ್ಕೆ ಹೋಗಲು ಅವರಿಗೆ ಆಗಿರಲಿಲ್ಲ. ಬಡವರನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಧೈರ್ಯವನ್ನು ಅಮ್ ಆದ್ಮಿ ತೋರಿಸಿರಲಿಲ್ಲ. ಆ ಪಕ್ಷದಲ್ಲಿ ಬಹುತೇಕವಾಗಿ ಒಂದಿಷ್ಟು ಸ್ಟ್ಯಾಂಡರ್ಡ್ ಜನರು ಇದ್ದರು. ಅವರ ಯೋಚನೆಯು ಸ್ಟ್ಯಾಂಡರ್ಡ್ ಆಗಿಯೇ ಇತ್ತು. ಕರಪ್ಶನ್ ವಿರುದ್ಧ ಎತ್ತಿದ ಧ್ವನಿಯು ಅವರನ್ನು ಸಕ್ಸಸ್ ಕಡೆಗೆ ಕೊಂಡೊಯ್ದಿತ್ತು. ಆದರೆ ಆ ಪಕ್ಷಕ್ಕೆ, ಬಡವರು ಹಾಗೂ ಶ್ರೀಮಂತರ ಜೊತೆಗೆ ಬೆರೆಯಲು ಆಗಲಿಲ್ಲ. ಅವರ ವಿಶ್ವಾಸ ಗಳಿಸುವಲ್ಲಿ ಸೋತಿತು. ಮಧ್ಯಮ ವರ್ಗದವರಲ್ಲೂ ಸಹ ಎಲ್ಲರನ್ನೂ ತಲುಪಲಾಗಲಿಲ್ಲ.  ನಿಧಾನವಾಗಿ ಆ ಪಕ್ಷವು, ಹೋರಾಟವನ್ನಷ್ಟೇ ಮಾಡುತ್ತಿದೆಯೇನೋ ಎಂಬಂತೆ ಭಾಸವಾಗಲು ಪ್ರಾರಂಭವಾಯಿತು. ಆಡಳಿತ ಪಕ್ಷಕ್ಕೆ ಬಂದು ಕೂತ ಮೇಲೆ ಹೋರಾಟದ ವಿಚಾರವನ್ನು ಪಕ್ಕಕ್ಕಿಟ್ಟು ಜನರಿಗೆ ಬೇಕಾಗುವಂತಹ ಕೆಲಸದ ಕಡೆಗೆ, ರಾಜ್ಯದ ಅಭಿವೃದ್ಧಿಯ ಕಡೆಗೆ ದಾಪುಗಾಲಿಡಬೇಕಿತ್ತು. ಆ ಕಡೆ ದಾಪುಗಾಲು ಇಟ್ಟಿದ್ದು ನಿಜವೇ ಆದರೂ, ಕೇಂದ್ರ ಹಾಗೂ ಅಲ್ಲಿನ ಗೌರ್ನರ್ ಜೊತೆಗೆ ಬಹಿರಂಗವಾಗಿ ಕಿತ್ತಾಡಿದ್ದು, ಅದನ್ನು ಹೋರಾಟವಾಗಿ ಪರಿವರ್ತಿಸಿದ್ದನ್ನು ಜನರು ಒಪ್ಪಲಿಲ್ಲ. ಬುದ್ಧಿವಂತಿಕೆಯನ್ನು ಉಪಯೋಗಿಸುವುದರ ಬದಲು, ದಂಡವನ್ನು ಉಪಯೋಗಿಸಲು ಹೋಗಿ ಈಗ ಪೆಟ್ಟು ತಿಂದಿದ್ದಾರೆ. ಹಾಗಾಗಿ ಇದೀಗ ಅಮ್ಆದ್ಮಿ ಪಕ್ಷವೂ ವಿನಾಶದತ್ತ ಸಾಗುತ್ತಿದೆ

    ಟೀವಿಕೆಯ ನಾಯಕ ವಿಜಯ್ ಇದನ್ನು ಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕಿದೆ. ನೂರಕ್ಕೆ ನೂರರಷ್ಟು, ಮುಂದಿನ ದಿನದಲ್ಲಿ ಅಭಿವೃದ್ಧಿಗೆ ಹಾಗೂ ಆಡಳಿತಕ್ಕೆ ಸಾಕಷ್ಟು ಅಡೆತಡೆಗಳನ್ನು ಎದುರಿಸ ಬೇಕಾಗುತ್ತದೆ. ಅದನ್ನು ಜಾಣಮೆಯಿಂದ ಎದುರಿಸಿ, ಮುಂದೆ ಸಾಗುವುದರ ಕಡೆ ಗಮನಹರಿಸಬೇಕೆ ಹೊರತು ಜಿದ್ದಿಗೆ ಬಿದ್ದು ಗುದ್ದಾಟಕ್ಕೆ ನಿಂತರೆ ಸಮಸ್ಯೆ ಆಗುವುದು ಟೀವೀಕೆಗೆನೆ. ಅದರ ಎಫೆಕ್ಟ್ ವಿಜಯ ಅನುಭವಿಸಬೇಕಾಗುತ್ತದೆ. ರಾಜಕಾರಣ ಎಂದರೆ ಹಣ, ಹಣ ಇಲ್ಲದಿದ್ದರೆ ರಾಜಕಾರಣ ಇಲ್ಲ, ಮಸಲ್ ಪವರ್ ಇರದಿದ್ದರೆ ರಾಜಕಾರಣದಲ್ಲಿ ಸಕ್ಸಸ್ ಕಾಣಲಾಗದು ಎಂಬಂತಹ ಹಲವು ನಂಬಿಕೆಗಳು ಇರುವಂತಹ ಸಂದರ್ಭದಲ್ಲಿ, ಅದೆಲ್ಲವನ್ನು ಸುಳ್ಳು ಅಂತ ಸಾಬೀತು ಪಡಿಸಿದ ಹೆಗ್ಗಳಿಕೆ ಟಿವಿಗೆ ಸಲ್ಲುತ್ತದೆ. ಜನರ ಅಭಿಮಾನ ಹಾಗೂ ಬೆಂಬಲವನ್ನು ಪಡೆದು, ಈ ಮಟ್ಟಕ್ಕೆ ಬೆಳೆದಿರುವ ವಿಜಯ್, ಆ ಬೆಂಬಲ ಮತ್ತು ಅಭಿಮಾನವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅನವಶ್ಯಕವಾದಂತಹ ಕಿತ್ತಾಟ ಬಡಿದಾಟಕ್ಕಿಂತ ಜಾಣ್ಮೆಯಿಂದ ಕೆಲಸ ಮಾಡಿಸಿಕೊಳ್ಳುವುದರ ಕಡೆ ಯೋಚಿಸಿದರೆ ಸಾಕು, ವಿಜಯ್ ನೇತೃತ್ವದ  ಟಿವಿಕೆ, ಎಂ ಜಿ ಆರ್ ಹಾಗೂ ಜಯಲಲಿತಾರಂತೆ ಸಕ್ಸಸ್ ರಾಜಕಾರಣಿ ಆಗುವುದರಲ್ಲಿ ಯಾವ ಅನುಮಾನವೂ ಇರೋದಿಲ್ಲ. ವಿಜಯ್ ರಾಜಕೀಯ ರಂಗದಲ್ಲಿ ಲಾಂಗ್ ಟೈಮ್ ಉಳಿದುಕೊಳ್ಳುತ್ತಾರೆ ಅಂತರ್ಥ.

    ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?
    “ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
    AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
    ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಸಾರ್ವಜನಿಕರಲ್ಲಿ ವಿನಂತಿ …!
    ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಸಹಕಾರ ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಡಿಕೆಶಿ ಜೊತೆ ಸಮಾಲೋಚನೆ
    ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ
    ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪುಡಿಗೈದ ಭಾರತದ ವನಿತೆಯರು !ಆರಂಭವೇ ವಿಜಯದ ಘರ್ಜನೆ!
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”
    420 ವಂಚನೆ ಪ್ರಕರಣದಲ್ಲಿ ಮಹಿಳೆಯ ಬಂಧನ – ಪೊಲೀಸ್ ತನಿಖೆ
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ 10 ವರ್ಷ ಜೈಲು, ₹10 ಕೋಟಿ ದಂಡ!
    ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
    ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ