📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚಿತ್ರನಟ ವಿಜಯ್ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತ. ದುರ್ದೈವ ಅಂದರೆ, ವಿಜಯಗೆ ಪೂರ್ಣ ಬಹುಮತ ದೊರಕದೇ ಇರುವುದು. ಸರ್ಕಾರ ನಡೆಸಲು ಇನ್ನೂ 10 ಶಾಸಕರ ಬೆಂಬಲದ ಅಗತ್ಯತೆ ಇದೆ.

       ರಾಜಕೀಯ ಒಂದು ರೀತಿಯ ಚದುರಂಗದಾಟ ಅಂತಲೇ ಅನ್ನಿಸಿಕೊಳ್ಳುತ್ತದೆ. ಯಾವಾಗ, ಯಾರನ್ನು ,ಯಾರು ಹೊಡೆದು ಹಾಕುತ್ತಾರೋ?, ಯಾವಾಗ ಚೆಕ್ ನೀಡಲಾಗುತ್ತದೆಯೋ ಹೇಳಲಾಗದು. ಸ್ವಲ್ಪವೇ ಎಡವಟ್ಟು ಮಾಡಿಕೊಂಡರು ಚೆಕ್ ಮೀಟ್ ಆಗುವುದು ಖಚಿತ. ಆದರೂ ಅದೊಂದು ಪವರ್ ಫುಲ್ ಕ್ಷೇತ್ರ. ಆ ಪವರಿಗೋಸ್ಕರನೇ ರಾಜಕಾರಣದ ಹೆಬ್ಬಾಗಿಲಿನಲ್ಲಿ ಕಾಣಿಸಿಕೊಳ್ಳುತ್ತಾರೆ ಆಕಾಂಕ್ಷಿಗಳು. ಇದೇ ಮೊದಲ ಬಾರಿಗೆ, ತಮಿಳು ಸಿನಿಮಾ ಕ್ಷೇತ್ರದ ಜನಪ್ರಿಯ ನಟ ವಿಜಯ್, ಇದೀಗ ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುವ ಮೂಲಕ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ.

ಮಾಧ್ಯಮ ಲೋಕ, ಸಿನಿ ಲೋಕ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಿಂದಲೂ ವಿಜಯ್ ಅವರ ಸಾಧನೆಗೆ ಬಹುಪರಾಕ್ ಹೇಳಲಾಗುತ್ತಿದೆ. ಸಕ್ಸಸ್ ಅನ್ನುವುದು ಹಾಗೆಯೇ ಬಿಡ. ಗೆಲುವಿನ ಜೊತೆಗೆ ಹೆಜ್ಜೆ ಹಾಕಲು, ಗೆಲುವಿನ ಜೊತೆಗೆ ಕಾಣಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ. ವಿಜಯ್ ಇಲ್ಲಿ  ಸಾಕಷ್ಟು ಜಾಗೃತೆಯಿಂದ ಇರಬೇಕಾಗುತ್ತದೆ. ಸಿನಿಮಾ ಕ್ಷೇತ್ರದಂತೆ ರಾಜಕೀಯ ಕ್ಷೇತ್ರವಲ್ಲ. ಅನವಶ್ಯಕವಾಗಿ, ಅರಿವೇ ಇಲ್ಲದಂತೆಯೇ, ಜೊತೆಗಿದ್ದುಕೊಂಡು ಕಾಲೆಳೆದು ಮಲಗಿಸಿ ಬಿಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಕುರ್ಚಿಯ ಸಹಿತ ಬೀಳಬೇಕಾಗುತ್ತದೆ.

ನಟ ವಿಜಯ್, ಬಹುಮತಕ್ಕೆ ಬೇಕಾಗುವ ಶಾಸಕರ ಬೆಂಬಲವನ್ನು ಪಡೆಯುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಸರ್ಕಾರವನ್ನು ನಡೆಸುತ್ತಾರೆ. ಆದರೆ, ರಾಜಕೀಯ ರಂಗಕ್ಕೆ ಹೊಸಬರಾಗಿರುವ ವಿಜಯ್ ಅವರನ್ನು ಹಾಗೂ ಅವರ ಪಕ್ಷವನ್ನು ರಾಜಕೀಯ ರಂಗದಲ್ಲಿ ಸಾಕಷ್ಟು ಪಟ್ಟುಗಳನ್ನು ಕಲಿತಿರುವಂತಹ ಸೀನಿಯರ್ ಲೀಡರ್ಸ್ಗಳು ಸುಮ್ಮನೆ ಬಿಡುತ್ತಾರೆಯೇ?  ಹಲವು ದಶಕಗಳಿಂದ ತಮಿಳುನಾಡನ್ನು ಡಿಎಂಕೆ ಹಾಗೂ ಎಐಡಿಎಂಕೆ ಸರದಿಯಂತೆ ಆಳುತ್ತಾ ಬಂದಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ, ಬೇರೆಯವರಿಗೆ ಆಸ್ಪದವೇ ಸಿಕ್ಕಿರಲಿಲ್ಲ. ಸಿನಿ ಕ್ಷೇತ್ರದ ಸಾಕಷ್ಟು ನಟರು ತಮ್ಮ ರಾಜಕೀಯ ಭವಿಷ್ಯವನ್ನು ಪರೀಕ್ಷೆಗೆ ಒಡ್ಡಿದ್ದರು. ಸಕ್ಸೆಸ್ ಮಾತ್ರ ಕಂಡಿರಲಿಲ್ಲ. ಎಂಜಿಆರ್ ನಂತರ ಜಯಲಲಿತಾ, ಈಗ ವಿಜಯ್. ಈ ಮೂವರು ಸಿನಿ ಕ್ಷೇತ್ರದಿಂದ ಬಂದು ರಾಜಕೀಯ ಅಖಾಡದಲ್ಲಿ ಸಕ್ಸಸ್ ಕಂಡಿದ್ದಾರೆ. ವಿಜಯ್ ವಿಚಾರದಲ್ಲಿ, ಸಕ್ಸಸ್ ಆಗುವ ಅಥವಾ ಅನ್ ಸಕ್ಸಸ್ ಬಗ್ಗೆ ಈಗಲೇ ಮಾತನಾಡುವ ಹಾಗಿಲ್ಲ, ಅವರ ಓಪನಿಂಗ್ ಎಂಟ್ರಿ ಸಖತ್ತಾಗಿಯೇ ಆಗಿದೆ. ಇನ್ನು ಹೇಗೆ ಆಟವಾಡುತ್ತಾರೆ ನೋಡಬೇಕು. ಎಂಜಿಆರ್ ಹಾಗೂ ಜೈಲಲಿತ ಇಬ್ಬರು ಸಾಕಷ್ಟು ವರ್ಷಗಳ ಕಾಲ ರಾಜಕೀಯದಲ್ಲೂ ಸಕ್ಸಸ್ ಆಟವನ್ನೇ ಆಡಿದ್ದಾರೆ. ಅದೇ ರೀತಿಯ ಸಕ್ಸಸ್ ಆಟ ವಿಜಯ್ ಅವರಿಂದಲೂ ಕಾಣುತ್ತದಾ ನೋಡಬೇಕಿದೆ.

ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಹಣವಂತರು ಮಧ್ಯಮ ವರ್ಗದವರು ಬಡವರು ಹಾಗೂ ದ್ವನಿ ಇಲ್ಲದ ಸಮುದಾಯದವರು ಸಹ ಗೆದ್ದು ಬಂದಿರುವಂತದ್ದು, ರಾಜಕೀಯ ಲೋಕದಲ್ಲಿ ಆಶಾಭಾವನೆ ಮೂಡಿಸುತ್ತಿದೆ. ಇವತ್ತಿನ ದಿನವೂ,ಜನರು ಜಾತಿ ಮತ ನೋಡದೆಯೇ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಟಿವಿಕೆ ಪಕ್ಷವು ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ.

ಆಟೋ ಓಡಿಸುತ್ತಿದ್ದ ವ್ಯಕ್ತಿ ಶಾಸಕರಾಗಿದ್ದಾರೆ, ಸಾಮಾನ್ಯ ಕ್ಷೇತ್ರದಲ್ಲಿ ಎಸ್ ಸಿ ಸಮುದಾಯದ ಅಭ್ಯರ್ಥಿ ಜಯಗಳಿಸಿದ್ದಾರೆ. ಇದೆಲ್ಲವೂ ಇವತ್ತಿನ ದಿನವೂ ಸಾಧ್ಯ ಅನ್ನುವುದನ್ನು ವಿಜಯ ನೇತೃತ್ವ ಟಿ ವಿ ಕೆ ಪಕ್ಷ ಸಾಬೀತು ಮಾಡಿ ತೋರಿಸಿದೆ. ಹಾಗಾಗಿ ವಿಜಯ್ ಅವರ ಈ ಒಂದು ದಿಗ್ವಿಜಯ ಇಡೀ ದೇಶಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದೆ.

ನಿಜ, ಈ ಹಿಂದೆ ಅಮ್ಆದ್ಮಿ ಪಕ್ಷವು ತನ್ನ ಮೊದಲ ಯತ್ನದಲ್ಲೇ ಸಕ್ಸಸ್ ಕಂಡಿತ್ತು. ದೆಹಲಿಯ ಗದ್ದುಗೆಯನ್ನು ಆ ಪಕ್ಷವು ಏರಿತ್ತು. ಆ ಪಕ್ಷದಲ್ಲಿ ಬಹುತೇಕವಾಗಿ ಸುಶಿಕ್ಷಿತರಿದ್ದರು, ಆ ಪಕ್ಷದಲ್ಲಿ ಬಹುತೇಕವಾಗಿ ಪರವಾಗಿಲ್ಲ ಅನ್ನುವಷ್ಟು ಹಣವಂತರೂ ಇದ್ದರು. ಬಹುತೇಕವಾಗಿ ಮಧ್ಯಮ ವರ್ಗದವರನ್ನು ಅಮ್ ಆದ್ಮಿ ಪಕ್ಷವು ತನ್ನತ್ತ ಸೆಳೆದಿತ್ತು. ಆದರೆ ಬಡವರ ಮನದೊಳಕ್ಕೆ ಹೋಗಲು ಅವರಿಗೆ ಆಗಿರಲಿಲ್ಲ. ಬಡವರನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಧೈರ್ಯವನ್ನು ಅಮ್ ಆದ್ಮಿ ತೋರಿಸಿರಲಿಲ್ಲ. ಆ ಪಕ್ಷದಲ್ಲಿ ಬಹುತೇಕವಾಗಿ ಒಂದಿಷ್ಟು ಸ್ಟ್ಯಾಂಡರ್ಡ್ ಜನರು ಇದ್ದರು. ಅವರ ಯೋಚನೆಯು ಸ್ಟ್ಯಾಂಡರ್ಡ್ ಆಗಿಯೇ ಇತ್ತು. ಕರಪ್ಶನ್ ವಿರುದ್ಧ ಎತ್ತಿದ ಧ್ವನಿಯು ಅವರನ್ನು ಸಕ್ಸಸ್ ಕಡೆಗೆ ಕೊಂಡೊಯ್ದಿತ್ತು. ಆದರೆ ಆ ಪಕ್ಷಕ್ಕೆ, ಬಡವರು ಹಾಗೂ ಶ್ರೀಮಂತರ ಜೊತೆಗೆ ಬೆರೆಯಲು ಆಗಲಿಲ್ಲ. ಅವರ ವಿಶ್ವಾಸ ಗಳಿಸುವಲ್ಲಿ ಸೋತಿತು. ಮಧ್ಯಮ ವರ್ಗದವರಲ್ಲೂ ಸಹ ಎಲ್ಲರನ್ನೂ ತಲುಪಲಾಗಲಿಲ್ಲ.  ನಿಧಾನವಾಗಿ ಆ ಪಕ್ಷವು, ಹೋರಾಟವನ್ನಷ್ಟೇ ಮಾಡುತ್ತಿದೆಯೇನೋ ಎಂಬಂತೆ ಭಾಸವಾಗಲು ಪ್ರಾರಂಭವಾಯಿತು. ಆಡಳಿತ ಪಕ್ಷಕ್ಕೆ ಬಂದು ಕೂತ ಮೇಲೆ ಹೋರಾಟದ ವಿಚಾರವನ್ನು ಪಕ್ಕಕ್ಕಿಟ್ಟು ಜನರಿಗೆ ಬೇಕಾಗುವಂತಹ ಕೆಲಸದ ಕಡೆಗೆ, ರಾಜ್ಯದ ಅಭಿವೃದ್ಧಿಯ ಕಡೆಗೆ ದಾಪುಗಾಲಿಡಬೇಕಿತ್ತು. ಆ ಕಡೆ ದಾಪುಗಾಲು ಇಟ್ಟಿದ್ದು ನಿಜವೇ ಆದರೂ, ಕೇಂದ್ರ ಹಾಗೂ ಅಲ್ಲಿನ ಗೌರ್ನರ್ ಜೊತೆಗೆ ಬಹಿರಂಗವಾಗಿ ಕಿತ್ತಾಡಿದ್ದು, ಅದನ್ನು ಹೋರಾಟವಾಗಿ ಪರಿವರ್ತಿಸಿದ್ದನ್ನು ಜನರು ಒಪ್ಪಲಿಲ್ಲ. ಬುದ್ಧಿವಂತಿಕೆಯನ್ನು ಉಪಯೋಗಿಸುವುದರ ಬದಲು, ದಂಡವನ್ನು ಉಪಯೋಗಿಸಲು ಹೋಗಿ ಈಗ ಪೆಟ್ಟು ತಿಂದಿದ್ದಾರೆ. ಹಾಗಾಗಿ ಇದೀಗ ಅಮ್ಆದ್ಮಿ ಪಕ್ಷವೂ ವಿನಾಶದತ್ತ ಸಾಗುತ್ತಿದೆ

ಟೀವಿಕೆಯ ನಾಯಕ ವಿಜಯ್ ಇದನ್ನು ಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕಿದೆ. ನೂರಕ್ಕೆ ನೂರರಷ್ಟು, ಮುಂದಿನ ದಿನದಲ್ಲಿ ಅಭಿವೃದ್ಧಿಗೆ ಹಾಗೂ ಆಡಳಿತಕ್ಕೆ ಸಾಕಷ್ಟು ಅಡೆತಡೆಗಳನ್ನು ಎದುರಿಸ ಬೇಕಾಗುತ್ತದೆ. ಅದನ್ನು ಜಾಣಮೆಯಿಂದ ಎದುರಿಸಿ, ಮುಂದೆ ಸಾಗುವುದರ ಕಡೆ ಗಮನಹರಿಸಬೇಕೆ ಹೊರತು ಜಿದ್ದಿಗೆ ಬಿದ್ದು ಗುದ್ದಾಟಕ್ಕೆ ನಿಂತರೆ ಸಮಸ್ಯೆ ಆಗುವುದು ಟೀವೀಕೆಗೆನೆ. ಅದರ ಎಫೆಕ್ಟ್ ವಿಜಯ ಅನುಭವಿಸಬೇಕಾಗುತ್ತದೆ. ರಾಜಕಾರಣ ಎಂದರೆ ಹಣ, ಹಣ ಇಲ್ಲದಿದ್ದರೆ ರಾಜಕಾರಣ ಇಲ್ಲ, ಮಸಲ್ ಪವರ್ ಇರದಿದ್ದರೆ ರಾಜಕಾರಣದಲ್ಲಿ ಸಕ್ಸಸ್ ಕಾಣಲಾಗದು ಎಂಬಂತಹ ಹಲವು ನಂಬಿಕೆಗಳು ಇರುವಂತಹ ಸಂದರ್ಭದಲ್ಲಿ, ಅದೆಲ್ಲವನ್ನು ಸುಳ್ಳು ಅಂತ ಸಾಬೀತು ಪಡಿಸಿದ ಹೆಗ್ಗಳಿಕೆ ಟಿವಿಗೆ ಸಲ್ಲುತ್ತದೆ. ಜನರ ಅಭಿಮಾನ ಹಾಗೂ ಬೆಂಬಲವನ್ನು ಪಡೆದು, ಈ ಮಟ್ಟಕ್ಕೆ ಬೆಳೆದಿರುವ ವಿಜಯ್, ಆ ಬೆಂಬಲ ಮತ್ತು ಅಭಿಮಾನವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅನವಶ್ಯಕವಾದಂತಹ ಕಿತ್ತಾಟ ಬಡಿದಾಟಕ್ಕಿಂತ ಜಾಣ್ಮೆಯಿಂದ ಕೆಲಸ ಮಾಡಿಸಿಕೊಳ್ಳುವುದರ ಕಡೆ ಯೋಚಿಸಿದರೆ ಸಾಕು, ವಿಜಯ್ ನೇತೃತ್ವದ  ಟಿವಿಕೆ, ಎಂ ಜಿ ಆರ್ ಹಾಗೂ ಜಯಲಲಿತಾರಂತೆ ಸಕ್ಸಸ್ ರಾಜಕಾರಣಿ ಆಗುವುದರಲ್ಲಿ ಯಾವ ಅನುಮಾನವೂ ಇರೋದಿಲ್ಲ. ವಿಜಯ್ ರಾಜಕೀಯ ರಂಗದಲ್ಲಿ ಲಾಂಗ್ ಟೈಮ್ ಉಳಿದುಕೊಳ್ಳುತ್ತಾರೆ ಅಂತರ್ಥ.

ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ಯುದ್ಧದ ಹೊಡೆತ: ಹಣ ಕೊಟ್ಟರೂ ಗ್ಯಾಸ್ ಇಲ್ಲ! ಕಾರವಾರ ಬಂದರು ಸ್ತಬ್ಧ — ಜನಜೀವನ ಅಸ್ತವ್ಯಸ್ತ 🔥
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ದೆಹಲಿಯಲ್ಲಿ ಬಸ್‌ನಲ್ಲಿ ನಿರ್ಭಯಾ ನೆನಪಿಸುವ ಘಟನೆ -30 ವರ್ಷದ ಮಹಿಳೆ ಗ್ಯಾಂಗ್‌ರೇಪ್ ಶಾಕ್
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
ಅನಾಥ ಪುಟ್ಟ ಬಾಲಕಿಯರ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ:ರಾಕ್ಷಸ ಮನಸ್ಸುಗಳಿಗೆ ಅಂತ್ಯ ಯಾವಾಗ?
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
“ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ಮಂಡ್ಯದಲ್ಲಿ ವೈರಲ್ ವಿಡಿಯೋ!ಜಿಂಕೆ ಸಂಪೂರ್ಣ ಮಾಯ!ಈ ದೃಶ್ಯ ನೋಡಿದ್ರೆ ಗಾಬರಿಯಾಗ್ತೀರಾ!ಜೀವಂತ ಪ್ರಕೃತಿ ಡಾಕ್ಯುಮೆಂಟರಿ…
ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…