📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚಿತ್ರನಟ ವಿಜಯ್ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತ. ದುರ್ದೈವ ಅಂದರೆ, ವಿಜಯಗೆ ಪೂರ್ಣ ಬಹುಮತ ದೊರಕದೇ ಇರುವುದು. ಸರ್ಕಾರ ನಡೆಸಲು ಇನ್ನೂ 10 ಶಾಸಕರ ಬೆಂಬಲದ ಅಗತ್ಯತೆ ಇದೆ.

       ರಾಜಕೀಯ ಒಂದು ರೀತಿಯ ಚದುರಂಗದಾಟ ಅಂತಲೇ ಅನ್ನಿಸಿಕೊಳ್ಳುತ್ತದೆ. ಯಾವಾಗ, ಯಾರನ್ನು ,ಯಾರು ಹೊಡೆದು ಹಾಕುತ್ತಾರೋ?, ಯಾವಾಗ ಚೆಕ್ ನೀಡಲಾಗುತ್ತದೆಯೋ ಹೇಳಲಾಗದು. ಸ್ವಲ್ಪವೇ ಎಡವಟ್ಟು ಮಾಡಿಕೊಂಡರು ಚೆಕ್ ಮೀಟ್ ಆಗುವುದು ಖಚಿತ. ಆದರೂ ಅದೊಂದು ಪವರ್ ಫುಲ್ ಕ್ಷೇತ್ರ. ಆ ಪವರಿಗೋಸ್ಕರನೇ ರಾಜಕಾರಣದ ಹೆಬ್ಬಾಗಿಲಿನಲ್ಲಿ ಕಾಣಿಸಿಕೊಳ್ಳುತ್ತಾರೆ ಆಕಾಂಕ್ಷಿಗಳು. ಇದೇ ಮೊದಲ ಬಾರಿಗೆ, ತಮಿಳು ಸಿನಿಮಾ ಕ್ಷೇತ್ರದ ಜನಪ್ರಿಯ ನಟ ವಿಜಯ್, ಇದೀಗ ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುವ ಮೂಲಕ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ.

ಮಾಧ್ಯಮ ಲೋಕ, ಸಿನಿ ಲೋಕ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಿಂದಲೂ ವಿಜಯ್ ಅವರ ಸಾಧನೆಗೆ ಬಹುಪರಾಕ್ ಹೇಳಲಾಗುತ್ತಿದೆ. ಸಕ್ಸಸ್ ಅನ್ನುವುದು ಹಾಗೆಯೇ ಬಿಡ. ಗೆಲುವಿನ ಜೊತೆಗೆ ಹೆಜ್ಜೆ ಹಾಕಲು, ಗೆಲುವಿನ ಜೊತೆಗೆ ಕಾಣಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ. ವಿಜಯ್ ಇಲ್ಲಿ  ಸಾಕಷ್ಟು ಜಾಗೃತೆಯಿಂದ ಇರಬೇಕಾಗುತ್ತದೆ. ಸಿನಿಮಾ ಕ್ಷೇತ್ರದಂತೆ ರಾಜಕೀಯ ಕ್ಷೇತ್ರವಲ್ಲ. ಅನವಶ್ಯಕವಾಗಿ, ಅರಿವೇ ಇಲ್ಲದಂತೆಯೇ, ಜೊತೆಗಿದ್ದುಕೊಂಡು ಕಾಲೆಳೆದು ಮಲಗಿಸಿ ಬಿಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಕುರ್ಚಿಯ ಸಹಿತ ಬೀಳಬೇಕಾಗುತ್ತದೆ.

ನಟ ವಿಜಯ್, ಬಹುಮತಕ್ಕೆ ಬೇಕಾಗುವ ಶಾಸಕರ ಬೆಂಬಲವನ್ನು ಪಡೆಯುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಸರ್ಕಾರವನ್ನು ನಡೆಸುತ್ತಾರೆ. ಆದರೆ, ರಾಜಕೀಯ ರಂಗಕ್ಕೆ ಹೊಸಬರಾಗಿರುವ ವಿಜಯ್ ಅವರನ್ನು ಹಾಗೂ ಅವರ ಪಕ್ಷವನ್ನು ರಾಜಕೀಯ ರಂಗದಲ್ಲಿ ಸಾಕಷ್ಟು ಪಟ್ಟುಗಳನ್ನು ಕಲಿತಿರುವಂತಹ ಸೀನಿಯರ್ ಲೀಡರ್ಸ್ಗಳು ಸುಮ್ಮನೆ ಬಿಡುತ್ತಾರೆಯೇ?  ಹಲವು ದಶಕಗಳಿಂದ ತಮಿಳುನಾಡನ್ನು ಡಿಎಂಕೆ ಹಾಗೂ ಎಐಡಿಎಂಕೆ ಸರದಿಯಂತೆ ಆಳುತ್ತಾ ಬಂದಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ, ಬೇರೆಯವರಿಗೆ ಆಸ್ಪದವೇ ಸಿಕ್ಕಿರಲಿಲ್ಲ. ಸಿನಿ ಕ್ಷೇತ್ರದ ಸಾಕಷ್ಟು ನಟರು ತಮ್ಮ ರಾಜಕೀಯ ಭವಿಷ್ಯವನ್ನು ಪರೀಕ್ಷೆಗೆ ಒಡ್ಡಿದ್ದರು. ಸಕ್ಸೆಸ್ ಮಾತ್ರ ಕಂಡಿರಲಿಲ್ಲ. ಎಂಜಿಆರ್ ನಂತರ ಜಯಲಲಿತಾ, ಈಗ ವಿಜಯ್. ಈ ಮೂವರು ಸಿನಿ ಕ್ಷೇತ್ರದಿಂದ ಬಂದು ರಾಜಕೀಯ ಅಖಾಡದಲ್ಲಿ ಸಕ್ಸಸ್ ಕಂಡಿದ್ದಾರೆ. ವಿಜಯ್ ವಿಚಾರದಲ್ಲಿ, ಸಕ್ಸಸ್ ಆಗುವ ಅಥವಾ ಅನ್ ಸಕ್ಸಸ್ ಬಗ್ಗೆ ಈಗಲೇ ಮಾತನಾಡುವ ಹಾಗಿಲ್ಲ, ಅವರ ಓಪನಿಂಗ್ ಎಂಟ್ರಿ ಸಖತ್ತಾಗಿಯೇ ಆಗಿದೆ. ಇನ್ನು ಹೇಗೆ ಆಟವಾಡುತ್ತಾರೆ ನೋಡಬೇಕು. ಎಂಜಿಆರ್ ಹಾಗೂ ಜೈಲಲಿತ ಇಬ್ಬರು ಸಾಕಷ್ಟು ವರ್ಷಗಳ ಕಾಲ ರಾಜಕೀಯದಲ್ಲೂ ಸಕ್ಸಸ್ ಆಟವನ್ನೇ ಆಡಿದ್ದಾರೆ. ಅದೇ ರೀತಿಯ ಸಕ್ಸಸ್ ಆಟ ವಿಜಯ್ ಅವರಿಂದಲೂ ಕಾಣುತ್ತದಾ ನೋಡಬೇಕಿದೆ.

ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಹಣವಂತರು ಮಧ್ಯಮ ವರ್ಗದವರು ಬಡವರು ಹಾಗೂ ದ್ವನಿ ಇಲ್ಲದ ಸಮುದಾಯದವರು ಸಹ ಗೆದ್ದು ಬಂದಿರುವಂತದ್ದು, ರಾಜಕೀಯ ಲೋಕದಲ್ಲಿ ಆಶಾಭಾವನೆ ಮೂಡಿಸುತ್ತಿದೆ. ಇವತ್ತಿನ ದಿನವೂ,ಜನರು ಜಾತಿ ಮತ ನೋಡದೆಯೇ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಟಿವಿಕೆ ಪಕ್ಷವು ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ.

ಆಟೋ ಓಡಿಸುತ್ತಿದ್ದ ವ್ಯಕ್ತಿ ಶಾಸಕರಾಗಿದ್ದಾರೆ, ಸಾಮಾನ್ಯ ಕ್ಷೇತ್ರದಲ್ಲಿ ಎಸ್ ಸಿ ಸಮುದಾಯದ ಅಭ್ಯರ್ಥಿ ಜಯಗಳಿಸಿದ್ದಾರೆ. ಇದೆಲ್ಲವೂ ಇವತ್ತಿನ ದಿನವೂ ಸಾಧ್ಯ ಅನ್ನುವುದನ್ನು ವಿಜಯ ನೇತೃತ್ವ ಟಿ ವಿ ಕೆ ಪಕ್ಷ ಸಾಬೀತು ಮಾಡಿ ತೋರಿಸಿದೆ. ಹಾಗಾಗಿ ವಿಜಯ್ ಅವರ ಈ ಒಂದು ದಿಗ್ವಿಜಯ ಇಡೀ ದೇಶಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದೆ.

ನಿಜ, ಈ ಹಿಂದೆ ಅಮ್ಆದ್ಮಿ ಪಕ್ಷವು ತನ್ನ ಮೊದಲ ಯತ್ನದಲ್ಲೇ ಸಕ್ಸಸ್ ಕಂಡಿತ್ತು. ದೆಹಲಿಯ ಗದ್ದುಗೆಯನ್ನು ಆ ಪಕ್ಷವು ಏರಿತ್ತು. ಆ ಪಕ್ಷದಲ್ಲಿ ಬಹುತೇಕವಾಗಿ ಸುಶಿಕ್ಷಿತರಿದ್ದರು, ಆ ಪಕ್ಷದಲ್ಲಿ ಬಹುತೇಕವಾಗಿ ಪರವಾಗಿಲ್ಲ ಅನ್ನುವಷ್ಟು ಹಣವಂತರೂ ಇದ್ದರು. ಬಹುತೇಕವಾಗಿ ಮಧ್ಯಮ ವರ್ಗದವರನ್ನು ಅಮ್ ಆದ್ಮಿ ಪಕ್ಷವು ತನ್ನತ್ತ ಸೆಳೆದಿತ್ತು. ಆದರೆ ಬಡವರ ಮನದೊಳಕ್ಕೆ ಹೋಗಲು ಅವರಿಗೆ ಆಗಿರಲಿಲ್ಲ. ಬಡವರನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಧೈರ್ಯವನ್ನು ಅಮ್ ಆದ್ಮಿ ತೋರಿಸಿರಲಿಲ್ಲ. ಆ ಪಕ್ಷದಲ್ಲಿ ಬಹುತೇಕವಾಗಿ ಒಂದಿಷ್ಟು ಸ್ಟ್ಯಾಂಡರ್ಡ್ ಜನರು ಇದ್ದರು. ಅವರ ಯೋಚನೆಯು ಸ್ಟ್ಯಾಂಡರ್ಡ್ ಆಗಿಯೇ ಇತ್ತು. ಕರಪ್ಶನ್ ವಿರುದ್ಧ ಎತ್ತಿದ ಧ್ವನಿಯು ಅವರನ್ನು ಸಕ್ಸಸ್ ಕಡೆಗೆ ಕೊಂಡೊಯ್ದಿತ್ತು. ಆದರೆ ಆ ಪಕ್ಷಕ್ಕೆ, ಬಡವರು ಹಾಗೂ ಶ್ರೀಮಂತರ ಜೊತೆಗೆ ಬೆರೆಯಲು ಆಗಲಿಲ್ಲ. ಅವರ ವಿಶ್ವಾಸ ಗಳಿಸುವಲ್ಲಿ ಸೋತಿತು. ಮಧ್ಯಮ ವರ್ಗದವರಲ್ಲೂ ಸಹ ಎಲ್ಲರನ್ನೂ ತಲುಪಲಾಗಲಿಲ್ಲ.  ನಿಧಾನವಾಗಿ ಆ ಪಕ್ಷವು, ಹೋರಾಟವನ್ನಷ್ಟೇ ಮಾಡುತ್ತಿದೆಯೇನೋ ಎಂಬಂತೆ ಭಾಸವಾಗಲು ಪ್ರಾರಂಭವಾಯಿತು. ಆಡಳಿತ ಪಕ್ಷಕ್ಕೆ ಬಂದು ಕೂತ ಮೇಲೆ ಹೋರಾಟದ ವಿಚಾರವನ್ನು ಪಕ್ಕಕ್ಕಿಟ್ಟು ಜನರಿಗೆ ಬೇಕಾಗುವಂತಹ ಕೆಲಸದ ಕಡೆಗೆ, ರಾಜ್ಯದ ಅಭಿವೃದ್ಧಿಯ ಕಡೆಗೆ ದಾಪುಗಾಲಿಡಬೇಕಿತ್ತು. ಆ ಕಡೆ ದಾಪುಗಾಲು ಇಟ್ಟಿದ್ದು ನಿಜವೇ ಆದರೂ, ಕೇಂದ್ರ ಹಾಗೂ ಅಲ್ಲಿನ ಗೌರ್ನರ್ ಜೊತೆಗೆ ಬಹಿರಂಗವಾಗಿ ಕಿತ್ತಾಡಿದ್ದು, ಅದನ್ನು ಹೋರಾಟವಾಗಿ ಪರಿವರ್ತಿಸಿದ್ದನ್ನು ಜನರು ಒಪ್ಪಲಿಲ್ಲ. ಬುದ್ಧಿವಂತಿಕೆಯನ್ನು ಉಪಯೋಗಿಸುವುದರ ಬದಲು, ದಂಡವನ್ನು ಉಪಯೋಗಿಸಲು ಹೋಗಿ ಈಗ ಪೆಟ್ಟು ತಿಂದಿದ್ದಾರೆ. ಹಾಗಾಗಿ ಇದೀಗ ಅಮ್ಆದ್ಮಿ ಪಕ್ಷವೂ ವಿನಾಶದತ್ತ ಸಾಗುತ್ತಿದೆ

ಟೀವಿಕೆಯ ನಾಯಕ ವಿಜಯ್ ಇದನ್ನು ಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕಿದೆ. ನೂರಕ್ಕೆ ನೂರರಷ್ಟು, ಮುಂದಿನ ದಿನದಲ್ಲಿ ಅಭಿವೃದ್ಧಿಗೆ ಹಾಗೂ ಆಡಳಿತಕ್ಕೆ ಸಾಕಷ್ಟು ಅಡೆತಡೆಗಳನ್ನು ಎದುರಿಸ ಬೇಕಾಗುತ್ತದೆ. ಅದನ್ನು ಜಾಣಮೆಯಿಂದ ಎದುರಿಸಿ, ಮುಂದೆ ಸಾಗುವುದರ ಕಡೆ ಗಮನಹರಿಸಬೇಕೆ ಹೊರತು ಜಿದ್ದಿಗೆ ಬಿದ್ದು ಗುದ್ದಾಟಕ್ಕೆ ನಿಂತರೆ ಸಮಸ್ಯೆ ಆಗುವುದು ಟೀವೀಕೆಗೆನೆ. ಅದರ ಎಫೆಕ್ಟ್ ವಿಜಯ ಅನುಭವಿಸಬೇಕಾಗುತ್ತದೆ. ರಾಜಕಾರಣ ಎಂದರೆ ಹಣ, ಹಣ ಇಲ್ಲದಿದ್ದರೆ ರಾಜಕಾರಣ ಇಲ್ಲ, ಮಸಲ್ ಪವರ್ ಇರದಿದ್ದರೆ ರಾಜಕಾರಣದಲ್ಲಿ ಸಕ್ಸಸ್ ಕಾಣಲಾಗದು ಎಂಬಂತಹ ಹಲವು ನಂಬಿಕೆಗಳು ಇರುವಂತಹ ಸಂದರ್ಭದಲ್ಲಿ, ಅದೆಲ್ಲವನ್ನು ಸುಳ್ಳು ಅಂತ ಸಾಬೀತು ಪಡಿಸಿದ ಹೆಗ್ಗಳಿಕೆ ಟಿವಿಗೆ ಸಲ್ಲುತ್ತದೆ. ಜನರ ಅಭಿಮಾನ ಹಾಗೂ ಬೆಂಬಲವನ್ನು ಪಡೆದು, ಈ ಮಟ್ಟಕ್ಕೆ ಬೆಳೆದಿರುವ ವಿಜಯ್, ಆ ಬೆಂಬಲ ಮತ್ತು ಅಭಿಮಾನವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅನವಶ್ಯಕವಾದಂತಹ ಕಿತ್ತಾಟ ಬಡಿದಾಟಕ್ಕಿಂತ ಜಾಣ್ಮೆಯಿಂದ ಕೆಲಸ ಮಾಡಿಸಿಕೊಳ್ಳುವುದರ ಕಡೆ ಯೋಚಿಸಿದರೆ ಸಾಕು, ವಿಜಯ್ ನೇತೃತ್ವದ  ಟಿವಿಕೆ, ಎಂ ಜಿ ಆರ್ ಹಾಗೂ ಜಯಲಲಿತಾರಂತೆ ಸಕ್ಸಸ್ ರಾಜಕಾರಣಿ ಆಗುವುದರಲ್ಲಿ ಯಾವ ಅನುಮಾನವೂ ಇರೋದಿಲ್ಲ. ವಿಜಯ್ ರಾಜಕೀಯ ರಂಗದಲ್ಲಿ ಲಾಂಗ್ ಟೈಮ್ ಉಳಿದುಕೊಳ್ಳುತ್ತಾರೆ ಅಂತರ್ಥ.

ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

“ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ದೆಹಲಿಯಲ್ಲಿ ಬಸ್‌ನಲ್ಲಿ ನಿರ್ಭಯಾ ನೆನಪಿಸುವ ಘಟನೆ -30 ವರ್ಷದ ಮಹಿಳೆ ಗ್ಯಾಂಗ್‌ರೇಪ್ ಶಾಕ್
ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
ಉಡುಪಿಯ ಪ್ರತಿಷ್ಠಿತರನ್ನೇ ಟಾರ್ಗೆಟ್ ಮಾಡಿದ ಜೀನತ್ ವಿರುದ್ಧ ಮತ್ತೊಂದು ದೂರು? ₹15 ಲಕ್ಷ ಮೋಸದ ಹೊಸ ಆರೋಪ!?
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
ಗೃಹಿಣಿ ಅಲ್ಲ, ರಾಷ್ಟ್ರ ನಿರ್ಮಾಣಕಾರಿ”ಮನೆಯ ಕೆಲಸ ಕೆಲಸವೇ ಅಲ್ಲ ಎನ್ನುವವರೇ… ಈ ಸುದ್ದಿ ಒಮ್ಮೆ ಓದಿ!ಆಕೆಯ ಶ್ರಮಕ್ಕೆ-₹30,000 ಮೌಲ್ಯ!– ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ
“ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
Trump ಮಾತಿಗೆ Iran ಸಂಸತ್ ಸ್ಪೀಕರ್‌ನ ಕಠಿಣ ಸಂದೇಶ ವಿಶ್ವದ ಗಮನ ಸೆಳೆದಿದೆ!