📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL

    ಸೋಶಿಯಲ್ ಮೀಡಿಯಾದಲ್ಲಿ “ದೇಶದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಉಂಟಾಗಿದೆ” ಎಂಬ ಸಂದೇಶಗಳು ವೈರಲ್ ಆಗುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಮೂಡಿದೆ. ಆದರೆ ಸರ್ಕಾರಿ ತೈಲ ಕಂಪನಿಗಳು ಈ ಸುದ್ದಿಯನ್ನು ಸ್ಪಷ್ಟವಾಗಿ ತಪ್ಪು ಮತ್ತು ದಾರಿ ತಪ್ಪಿಸುವ ಮಾಹಿತಿ ಎಂದು ಹೇಳಿವೆ.

    ಭಾರತದ ಪ್ರಮುಖ ತೈಲ ಕಂಪನಿಗಳಾದ HPCL, IndianOil ಮತ್ತು BPCL ಸ್ಪಷ್ಟಪಡಿಸಿರುವುದೇನೆಂದರೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು LPG ಇಂಧನದ ಸಮರ್ಪಕ ಸಂಗ್ರಹ ಇದೆ ಮತ್ತು ಸರಬರಾಜು ಸಾಮಾನ್ಯವಾಗಿ ನಡೆಯುತ್ತಿದೆ. ಆದ್ದರಿಂದ ಜನರು ಆತಂಕಪಟ್ಟು ಪೆಟ್ರೋಲ್ ಬಂಕ್‌ಗಳಿಗೆ ದೌಡಾಯಿಸುವ ಅಗತ್ಯವಿಲ್ಲ ಎಂದು ಕಂಪನಿಗಳು ಮನವಿ ಮಾಡಿವೆ.

    HPCL ಅಧಿಕೃತವಾಗಿ ತನ್ನ ಪ್ರಕಟಣೆಯಲ್ಲಿ ,

    “ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಬಗ್ಗೆ ಹರಡುತ್ತಿರುವ ಸಂದೇಶಗಳು ತಪ್ಪು ಮತ್ತು ಆಧಾರರಹಿತ. ದೇಶದಾದ್ಯಂತ ಇಂಧನ ಸರಬರಾಜು ಸಾಮಾನ್ಯವಾಗಿದೆ ಮತ್ತು ಸಾಕಷ್ಟು ಸಂಗ್ರಹ ಲಭ್ಯವಿದೆ. “ ಎಂದು ಹೇಳಿದೆ.

    ಈಗಾಗಲೇ ಅಧಿಕೃತವಾಗಿ ಎಲ್ಪಿಜಿ ದರ ಹೆಚ್ಚಾಗಿದೆ ಅದನ್ನು ಯಾವ ತೈಲ ಕಂಪನಿಗಳು ಒಪ್ಪಿಕೊಂಡಿಲ್ಲ ಅದರ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ. ಜೊತೆಗೆ ಈಗಾಗಲೇ ಬೆಂಗಳೂರು ಸೇರಿದಂತೆ ಅನೇಕ ಕಡೆ , ಹೋಟೆಲ್ ಮಾಲೀಕರು ಅಡುಗೆ ಅನಿಲ ಕೊರತೆಯ ಕಾರಣದಿಂದ ವ್ಯವಹಾರ ಸ್ಥಗಿತಗೊಳಿಸುವುದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಸುಳ್ಳಲ್ಲ. ಆದರೂ ಆ ಯಾವ ವಿಚಾರವನ್ನು ಈ ತೈಲ ಕಂಪನಿಗಳು ಗಮನಿಸದೆ ಕೇವಲ ತಿಪ್ಪೆ ಸಾರಿಸುವ ರೀತಿಯಲ್ಲಿ ಪಕ್ಕನೆ ನೀಡಿ ಮೌನವಹಿಸಿವೆ. ಇದು ಆ ಕಂಪನಿಗಳ ಅಧಿಕೃತ ಹೇಳಿಕೆ ಆಗಿದ್ದರೆ ಮಧ್ಯದಲ್ಲಿ ಯಾರು ಧರ ಹೆಚ್ಚಳ ಮಾಡಿದ್ದಾರೆ ಅನ್ನುವುದನ್ನು ಸರ್ಕಾರ ತನಿಖೆ ನಡೆಸಬೇಕು ಹಾಗೂ ಅನಿಲ ಪುರೋಹಿಕೆಗೆ ಆಗುತ್ತಿರುವ ವ್ಯಕ್ತಿಯದ ಬಗ್ಗೆಯೂ ತನಿಖೆಯಾಗಬೇಕಾಗುತ್ತದೆ.

    ಅದಿರಲಿ ಮದ್ಯಪ್ರಾಚ್ಯದ ಯುದ್ಧದ ಪರಿಣಾಮ ಭಾರತಕ್ಕೆ ಯಾವ ಮಟ್ಟಿಗೆ ಬಿಸಿ ತಟ್ಟುತ್ತದೆ ಅಂತ  ಗಮನಿಸಿದ್ರೆ, ಈಗಾಗಲೇ  lPG ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ಅಡುಗೆ ಅನಿಲದ ಬೆಲೆ ಸಿಲಿಂಡರ್ ಗೆ 60 ರೂಪಾಯಿ ಹೆಚ್ಚಾಗಿದೆ. ಕಮರ್ಷಿಯಲ್ ಸಿಲೆಂಡರ್ ಬೆಲೆ 300 ರಿಂದ 400 ಹೆಚ್ಚಾಗಿದೆ. ಈ ವ್ಯತ್ಯಯವನ್ನ  ಎಲ್ಲಾ  ಬಳಕೆದಾರರು ಅನುಭವಿಸ್ತಾ ಇದ್ದಾರೆ. ಸರಬುರಾಜು ಕೊರತೆಯಿಂದ ಸಿಲಿಂಡರಗಳ ಪೂರೈಕೆ ಸ್ಥಗಿತಗೊಂಡಿದೆ. 50 ದಿನಗಳಿಗೆ ಆಗುವಷ್ಟು ಮಾತ್ರ ದಾಸ್ತಾನು ಇದೆ ಅಂತ ಭಾರತ ಸರ್ಕಾರ ಹೇಳಿದೆ. ಈಗಾಗ್ಲೇ ಬೆಂಗಳೂರಿನ ಕೆಲವು ಹೋಟೆಲ್ ರೆಸ್ಟೋರೆಂಟ್ ಗಳು ಇಂದು ಮಾರ್ಚ್ 10ರಿಂದ ಎಲ್ಪಿಜಿ ಇಲ್ಲದೇ ಹೋಟೆಲ್  ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಸಿಲಿಂಡರ್ ಅಭಾವ ಉಂಟಾಗಬಹುದು ಅನ್ನುವ ಭಯದಿಂದ ಜನರು ಸಿಲಿಂಡರ್ ದಾಸ್ತಾನಿಗೆ ಮುಗಿಬಿದ್ದಿದ್ದಾರೆ.

    ಅಷ್ಟೇ ಅಲ್ಲ ಇದರ ಪರಿಣಾಮ, ಪುಣೆಯ ಸ್ಮಶಾನದ ಮೇಲು ಬಿದ್ದಿದೆ. ಗ್ಯಾಸ್ ಮೂಲಕ ಬರ್ನ್ ಮಾಡಲಾಗುತ್ತಿದ್ದ  ಶವಗಳಿಗೆ ಇನ್ನು ವಿದ್ಯುತ್ ಅಥವಾ ಕಟ್ಟಿಗೆಯ ಮೊರೆ ಅನಿವಾರ್ಯ. ಇವತ್ತಿನಿಂದ ಸಿಲೆಂಡರು ಮೂಲಕ ಬರ್ನ್ ಮಾಡುವುದಕ್ಕೆ ತಡೆ ಒಡ್ಡಲಾಗಿದೆ ಎಂಬ ಮಾಹಿತಿ ಬರುತ್ತಿದೆ.

    ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಈ ಬಗ್ಗೆ ಇನ್ನೂ ಹೆಚ್ಚಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಳ ಸಂತೆಯ ಮೂಲಕ ದರ ಹೆಚ್ಚಳ ಮಾಡಿ ಜನರಿಗೆ ತೊಂದರೆ ಕೊಡುವ ಪರಿಪಾಠವಿದೆ. ಈಗಾಗಲೇ ಅದು ಪ್ರಾರಂಭವೂ ಆಗಿದೆ. ಈ ಬಗ್ಗೆ ಖುದ್ದು ಸರ್ಕಾರವೇ ಯಾವುದೇ ಬೆಲೆಯನ್ನು ಹೆಚ್ಚಳ ಮಾಡದಂತೆ ಖಡಕ್ ಆದೇಶ ನೀಡುವುದಷ್ಟೇ ಅಲ್ಲ ಅದು ಪಾಲನೆ ಯಾಗುತ್ತಿದೆಯಾ ಅನ್ನುವುದರ ಮೇಲೆ ಕಟ್ಟು ನಿಟ್ಟಿನ ನಿಗಾ ಇಡುವುದು ಮುಖ್ಯವಾಗುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಹಾರಿದು ಬರುತ್ತಿದೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    “ರಾಜಕಾರಣಿಗಳ ಮಕ್ಕಳೂ ಸರ್ಕಾರಿ ಶಾಲೆಗೆ! ಇಸ್ರೋ ವಿಜ್ಞಾನಿಗೆ ಶಿಕ್ಷಣದ ಚುಕ್ಕಾಣಿ, ಸಿಎಂ ವಿಜಯ್‌ನ ಹೊಸ ಹೆಜ್ಜೆ ದೇಶದ ಗಮನ ಸೆಳೆದಿದೆ
    ಡಿ.ಕೆ. ಶಿವಕುಮಾರ್ ಪ್ರಮಾಣ ವಚನ  ಜೂನ್ 3ಕ್ಕೆ, ರಾಜ್ಯಪಾಲರಿಂದ ಆಹ್ವಾನ
    ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
    ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!
    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
    ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
    ಭೀಕರ ಅಪಘಾತ ಮಹಿಳೆ ಬಲಿ
    📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.
    ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
    ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
    ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?
    ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
    ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಬಹುದಾ? ಈಗಲೇ ಎಚ್ಚರ!
    ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಕರ್ನಾಟಕದಲ್ಲೇ ಮೊದಲು-ಕಿಚ್ಚ ಸುದೀಪ್ ಕೈಯಿಂದ ಗ್ರಾಂಡ್ ಓಪನಿಂಗ್!₹130 ಕೋಟಿ ವೆಚ್ಚದ ವಿಶ್ವದರ್ಜೆಯ ‘MR-Linac’ ತಂತ್ರಜ್ಞಾನ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ!
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಜೈನ ಮುನಿ… ಇರಾನ್‌ನ ಇಸ್ಲಾಮಿಕ್ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯಲ್ಲಿ?
    Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
    🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
    ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ