📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…

    ಪಶ್ಚಿಮ ಬಂಗಾಳ ಚುನಾವಣೆ ಮುಗಿದು, ಬಿಜೆಪಿಯು ದಿಗ್ವಿಜಯ ಸಾಧಿಸಿದ್ದು ಮುಗಿದು ಹೋದ ಅಧ್ಯಾಯ. ಇನ್ನೇನು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಆದರಿಲ್ಲಿ ಆಗ್ತಿರೋದೇನು? ಬಿಜೆಪಿ ಜಯಗಳಿಸುತ್ತಿದ್ದಂತೆಯೇ ಆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ನೇತೃತ್ವದಲ್ಲಿ ಯಥೇಚ್ಛವಾಗಿ ಗುಂಡಾಗಿರಿ ಪ್ರಾರಂಭಿಸಿದ್ದಾರೆ. ಬಿಹಾರದ ಜಂಗಲ್ ರಾಜ್, ಟಿ ಎಂ ಸಿಯ  ಗುಂಡಾಗಿರಿ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದ ಬಿಜೆಪಿಯು ಮಾಡುತ್ತಿರುವುದೇನು? ತ್ರುಣಮೂಲ ಮೂಲ ಕಾಂಗ್ರೆಸ್ ನ ಕಚೇರಿಯನ್ನೇ ದ್ವಂಸ ಗೊಳಿಸಿರುವ ಬಿಜೆಪಿಯ ನಡೆ, ಆ ಪಕ್ಷಕ್ಕೆ ಶೋಭೆ ತರುವಂತದ್ದೆ. ವ್ಯತ್ಯಾಸ ಏನು ಉಳಿಯಿತು ಎಂಬ ಪ್ರಶ್ನೆಯು ಈಗ ಗೆಲ್ಲಿಸಿದ ಮತದಾರರಲ್ಲಿ ಏಳಲು ಪ್ರಾರಂಭಿಸಿದೆ. ಸಂಸ್ಕಾರ, ರಾಷ್ಟ್ರಪ್ರೇಮ, ಧರ್ಮದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಾ ಬಂದಿದ್ದ ಬಿಜೆಪಿಯು ತನ್ನ ಗೆಲುವಿನ ಸಂಭ್ರಮವನ್ನು ಈ ರೀತಿಯಲ್ಲಿ ಹಿಂಸಾಚಾರಕ್ಕೆ ಬದಲಾಯಿಸಿದ್ದು ಅಕ್ಷಮ್ಯವಲ್ಲದೆ ಬೇರೇನೂ ಅಲ್ಲ.

    ಕೇಂದ್ರ ಸಚಿವ ಮಜೂಮ್ದಾರ್

    ಈ ವಿಚಾರಕ್ಕೆ ತತಕ್ಷಣವೇ ಬಿಜೆಪಿಯ ಕೇಂದ್ರ ನಾಯಕರು ಎಚ್ಚರಿಕೆಯ ಸಂದೇಶವನ್ನು ನೀಡುತ್ತಾರೆ ಎಂದು ಭಾವಿಸಿದ್ದರೆ, ಯಾರೊಬ್ಬರೂ ಮಾತನಾಡಲಿಲ್ಲ. ಆದರೆ ಕೇಂದ್ರ ಸಚಿವ ಮಜುನ್ದಾರ್, ಬಿಜೆಪಿ ಕಾರ್ಯಕರ್ತರಿಗೆ ಮನವಿಯ ರೂಪದ ಸಂದೇಶ ನೀಡಿದ್ದು ಉತ್ತಮ ಬೆಳವಣಿಗೆಯಾಗಿದೆ. ನಾವು ರಾವಣನ ಅನುಯಾಯಿ ಅಲ್ಲ, ರಾಮಭಕ್ತರು ನಾವು. ನಮ್ಮಿಂದ ಈ ರೀತಿಯ ಹಿಂಸಾಚಾರ ಸಲ್ಲದು. ಟಿಎಂಸಿಯವರು ಮಾಡಿದ ಕೆಲಸವನ್ನು ನಾವು ಮಾಡಿದರೆ ನಮಗೂ ಅವರಿಗೂ ವ್ಯತ್ಯಾಸವೇನು? ರಾಜ್ಯಕ್ಕೆ ಉತ್ತಮ ಆಡಳಿತ ಕೊಡುವ ಹಾಗೂ ರಾಜ್ಯದ ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡುವ ಕೆಲಸ ಮಾಡೋಣ ಎಂಬ ಸಂದೇಶವನ್ನು ನೀಡಿರುವಂತದ್ದನ್ನು ಶ್ಲಾಘಿಸಲೇಬೇಕು.

    ಇನ್ನು ಮಮತಾ ಬ್ಯಾನರ್ಜಿ, ಈ ಸೋಲನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಆದರೆ ಬೇರೆ ದಾರಿಯೂ ಅವರಿಗಿಲ್ಲ. ಆದ್ರೂ ಸಹ, ಇಡೀ ದೇಶಕ್ಕೆ ದೊಡ್ಡ ಮೆಸೇಜ್ ಪಾಸ್ ಮಾಡುವ ಉದ್ದೇಶದಿಂದಲೇ ಮಮತಾ ಬ್ಯಾನರ್ಜಿ ಹೊಸ ವರಸೆಯನ್ನು ಶುರುವಿಟ್ಟು ಕೊಂಡಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಈ ಚುನಾವಣೆಯು ಪಾರದರ್ಶಕವಾಗಿ ನಡೆದಿಲ್ಲ. ಬಿಜೆಪಿ ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರು ಸೇರಿಕೊಂಡು ಅವರಿಗೆ ಬೇಕಾದ ಹಾಗೆ ಮಾಡಿದಂತಹ ಚುನಾವಣೆ ಇದು ಅಷ್ಟೇ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಾನು ರಾಜೀನಾಮೆ ಕೊಡುವುದಿಲ್ಲ ಅಂತ ಹೊಸವರ ಸೆ ಶುರು ಮಾಡಿದ್ದಾರೆ.

    ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೂ ಸಹ, ಅವರನ್ನು ರಾಜ್ಯಪಾಲರ ಮೂಲಕ ವಜಾ ಗೊಳಿಸಿ ಹೊಸ ಸರ್ಕಾರದ ಆಡಳಿತಕ್ಕೆ ಅವಕಾಶ ಮಾಡಿಕೊಡುವುದು ಖಚಿತ. ಇದು ಸ್ವತಹ ಮಮತಾ ಬ್ಯಾನರ್ಜಿ ಅವರಿಗೂ ಗೊತ್ತು. ಆದ್ರವರು, ಚುನಾವಣಾ ಆಯೋಗ ನಡೆದುಕೊಂಡ ರೀತಿ, ಬಿಜೆಪಿಯು ಆಯೋಗವನ್ನು ಬಳಸಿಕೊಂಡ ರೀತಿ ಎರಡನ್ನೂ ದೇಶದ ಜನರ ಬಳಿಗೆ ತಲುಪಿಸುವ ಕಾರಣಕ್ಕಾಗಿಯೇ ಈ ವರಸೆ ಶುರು ಹಚ್ಚಿಕೊಂಡಿದ್ದಾರೆ. ಇದು ತಪ್ಪಾ ಅಂದರೆ ತಪ್ಪಲ್ಲ. ಇದು ಸರಿಯಾ ಅಂದರೆ ಸರಿಯೂ ಅಲ್ಲ. ಹಾಗಿದ್ರೆ ಮುಂದೇನು?

    ಹಿರಿಯ ವಕೀಲರಾದ ಜಟ್ಮಲಾನಿಯವರು ಇದ್ದಕ್ಕಿದ್ದಂತೆಯೇ ಮಾತು ಶುರು ಮಾಡಿದ್ದಾರೆ. ಆ ಮಾತಿನ ಹಿಂದೆ, ಮುಂದೆನಾಗುತ್ತೆ ಅನ್ನೋದರ ಮುನ್ಸೂಚನೆ ಇದೆ. ಜೆಟ್ಮಲಾನಿ ಅವರು, ಮಮತಾ ಬ್ಯಾನರ್ಜಿ ರಾಜಿನಾಮೆಯನ್ನು ಕೊಡದಿದ್ದರೆ ಅವಳನ್ನು ಒದ್ದೋಡಿಸಬೇಕು ಅಂತ ಕರೆ ನೀಡಿದ್ದಾರೆ. ಇಷ್ಟು ದಿನ ಈ ವಕೀಲರು ಎಲ್ಲಿದ್ದರೋ ಗೊತ್ತಿಲ್ಲ, ಆದರೆ ಈಗವರ ಈ ಒಂದು ಸ್ಟೇಟ್ಮೆಂಟ್ ಇಡೀ ದೇಶಕ್ಕೆ ಅವರ ಪರಿಚಯವನ್ನು ಮಾಡುತ್ತಿದೆ. ಏನೇ ಇರಲಿ, ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಚುನಾವಣಾ ಆಯೋಗ ಹಾಗೂ ಬಿಜೆಪಿಯ ವಿರುದ್ಧ ಹೋರಾಟ ಮಾಡಿಕೊಳ್ಳಬಹುದು. ಅದು ಬಿಟ್ಟು ರಾಜೀನಾಮೆ ಕೊಡುವುದಿಲ್ಲ ಎಂದು ಪಟ್ಟು ಹಿಡಿಯುವಂತದ್ದು, ಬಲವಂತವಾಗಿ ಅವರನ್ನು ವಜಾಗೊಳಿಸುವಂಥದ್ದು ಇತಿಹಾಸದ ಕಪ್ಪುಪುಟದಲ್ಲಿ ಅವರನ್ನು ಉಳಿಯುವಂತೆ ಮಾಡುತ್ತದೆ. ಇದು ಮರ್ಯಾದೆಯ ರಾಜಕಾರಣವೂ ಆಗುವುದಿಲ್ಲ. ನಿಜ, ಇವತ್ತಿನ ರಾಜಕಾರಣದಲ್ಲಿ ಮರ್ಯಾದೆ ಹಾಗೂ ನೈತಿಕತೆಗೆ ಬೆಲೆಯೇ ಇಲ್ಲ. ಆದ್ರೂ ಅಲ್ಪ ಸ್ವಲ್ಪವಾದರೂ ಉಳಿಸಿಕೊಳ್ಳಬೇಕು ಎಂದರೆ, ಮಮತಾ ಬ್ಯಾನರ್ಜಿ ಮೊದಲಿಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕು. ಆನಂತರ ಹೋರಾಟ ಮಾಡಿಕೊಳ್ಳಬಹುದು.

    ಹೋಗ್ಲಿ, ಭಾರತೀಯ ಜನತಾ ಪಕ್ಷವು ತನ್ನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಹೇಗೆ ವ್ಯವಸ್ಥಿತವಾಗಿ ಮಾಡುತ್ತದೆಯೋ, ಆ ರೀತಿಯಲ್ಲಿ ಮಮತಾ ಬ್ಯಾನರ್ಜಿಗಾಗಲಿ ಅಥವಾ ಪ್ರತಿಪಕ್ಷದ ಯಾವುದೇ ನಾಯಕರಿಗೆ ಸಾಧ್ಯವೇ? ಈ ಕ್ಷಣಕ್ಕೆ ಅದು ಸಾಧ್ಯವಿಲ್ಲ, ಬಿಜೆಪಿಯ ಮಾಧ್ಯಮ ಪ್ರಪಂಚ ಬಹಳ ಬಲಿಷ್ಠವಾಗಿದೆ ಹಾಗೂ ಅದನ್ನು ತನ್ನ ಹಿಡಿತದಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದೆ. ಮಮತಾ ಬ್ಯಾನರ್ಜಿಯ ನ್ಯಾಯಯುತ ಹೋರಾಟವನ್ನೂ ಬಿಜೆಪಿಯ ಮಾಧ್ಯಮ ಘಟಕಗಳು, ಜನಸಾಮಾನ್ಯರಿಗೆ ಕೆಟ್ಟ ರೂಪದಲ್ಲಿ ತಲುಪಿಸುವಂತೆ ಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ಸಹ ಮಮತಾ ಬ್ಯಾನರ್ಜಿಗೆನೇ ಬಿಜೆಪಿ ವಿರೋಧಿಯ ಹೋರಾಟಗಾರರು ನೀಡಿದ್ದಾರೆ. ಯಾವುದೇ ಹೋರಾಟ ಮಾಡುವುದಿದ್ದರೂ, ಪಕ್ಷಗಳಲ್ಲಿ ಏಕತೆ ಇರಬೇಕು, ಹಾಗೆಯೇ ತಮ್ಮದೇ ಆದ ಮಾಧ್ಯಮ ಪ್ರಪಂಚವನ್ನು ಸೃಷ್ಟಿಸಿಕೊಳ್ಳಬೇಕು. ಅದು ಬಿಜೆಪಿ ಮಾಧ್ಯಮವನ್ನು ಸಹ ಹಿಂದಿಕ್ಕಿ ಹೋಗುವ ದಾರ್ಶ್ಯತೆ ಹೊಂದಿರಬೇಕು. ಅದೆಲ್ಲವನ್ನು ಮಾಡಿಕೊಂಡು ಮಮತಾ ಬ್ಯಾನರ್ಜಿ ಹೋರಾಟಕ್ಕಿಳಿಯಬೇಕು. ಅದಿಲ್ಲದಿದ್ದರೆ ಹೋರಾಟ ನಿಷ್ಪ್ರಯೋಜಕವಾಗುತ್ತದೆ. ಸ್ವತಹ ಮಮತಾ ಬ್ಯಾನರ್ಜಿಯವರೆ ವಿಲನ್ ಆಗುತ್ತಾಳೆ. ಸೇಮ್ ಟು ಸೇಮ್ ಕೇಜ್ರಿವಾಲ್. ಕೇಜ್ರಿವಾಲ್ ಉತ್ತಮ ಸರ್ಕಾರ ನೀಡಿಯೂ ಸಹ, ಇವತ್ತು ಅದಪತನದತ್ತ ಹೋಗುತ್ತಿದ್ದಾರೆ. ಅದಕ್ಕೆ ಕಾರಣ, ಅವರ ವಿರುದ್ಧ ಸೃಷ್ಟಿಯಾದಂತಹ ಭಯಾನಕವಾದಂತಹ ಮಾಧ್ಯಮ ಜಗತ್ತು ಅಂತ, ಅದೇ ಹೋರಾಟಗಾರರು ಹೇಳಿ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

    ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂಬ ಹೇಳಿಕೆ ಪ್ರಸ್ತುತ ಹೋರಾಟದ ಕಾರಣಕ್ಕೆ ಅತ್ಯವಶ್ಯಕ. ಆದರೆ ಆ ಹೋರಾಟ, ಮಮತಾ ಬ್ಯಾನರ್ಜಿ ಯನ್ನು ನುಂಗಿ ಹಾಕುವ ಸಾಧ್ಯತೆ ಹೆಚ್ಚಿದೆ. ಹೋರಾಟಕ್ಕೂ ಮೊದಲು, ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹಲವು ವಿಂಗಗಳ ಮೂಲಕ ಆ ತಯಾರಿ ಇರಬೇಕಾಗುತ್ತದೆ. ಅದ್ಯಾವುದೂ ಇಲ್ಲದೆ ಏಕಾಏಕಿಯಾಗಿ ಶುರು ಮಾಡಿರುವ ಈ ಹೋರಾಟ ವಾಪಸ್ ಅವರ ಮುಖಕ್ಕೆ ಮಸಿಯಾಗಿ ಬಳಿಯುತ್ತದಯೇ ಹೊರತು ಬೇರೆ ಯಾವುದೇ ಪ್ರಯೋಜನಕ್ಕೆ ಬರುವ ಕೆಲಸ ಮಾಡುವುದಿಲ್ಲ. ಆದರೆ, ಕಾಂಗ್ರೆಸ್ನ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿಯ ಸೋಲನ್ನು ಪಕ್ಷದ ಯಾವುದೇ ಕಾರ್ಯಕರ್ತರು ಸಂಭ್ರಮಿಸಬಾರದು ಅಂತ ಸಂದೇಶ ನೀಡಿರುವಂತದ್ದು ಒಳ್ಳೆಯ ಬೆಳವಣಿಗೆ. ಆದರೆ, ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಮೈತ್ರಿ ಗೆ ಮುಳ್ಳಾಗುವಂತೆ ವರ್ತಿಸುತ್ತಿರುವುದು ಪಕ್ಷದ ವಿಶ್ವಾಸಾರ್ಹತೆಗೆ ಚ್ಯುತಿಯನ್ನುಂಟು ಮಾಡುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಕೂಡ ಈ ವಿಚಾರದಲ್ಲಿ ಒಂದೇ ಮಾದರಿಯಂತೆ ಕಾಣುತ್ತಿದೆ ಎಂಬ ಮಾತುಗಳು ತಮಿಳುನಾಡಿನಾದ್ಯಂತ ಕೇಳಿ ಬರಲು ಪ್ರಾರಂಭಿಸಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ನೂತನ ಪಕ್ಷ ಟೀವಿಕೆ ಅಧಿಕಾರದ ಹತ್ತಿರಕ್ಕೆ ಬಂದು ನಿಂತಿದೆ. ಆದರೆ ಅಧಿಕಾರ ಪಡೆಯಲು 10 ಶಾಸಕರ ಅಗತ್ಯತೆ ಇದೆ. ಕಾಂಗ್ರೆಸ್ ಇದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿ ನೂತನ ಸರ್ಕಾರದ ಸಹಭಾಗಿಯಾಗಲು ಯೋಚನೆ ಮಾಡಿದೆ. ಆದರೆ ಚುನಾವಣೆಯಲ್ಲಿ , DMK ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ಮರೆಯಲಿಕ್ಕೆ ಸಾಧ್ಯವಾ? ಆ ಪಕ್ಷದ ಸಹಾಯದಿಂದಲೇ ಐದು ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ ಎಂಬುದನ್ನು ಮರೆಯಬಾರದು. ಕಾಂಗ್ರೆಸ್ ಇಂತಹ ಸಮಯದಲ್ಲಿ ಮನೆಯ ಯಜಮಾನನ ಪಾತ್ರವನ್ನು ನಿರ್ವಹಿಸಬೇಕಿತ್ತು.

       –ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
    ವೃಷಣಗಳಿಗೆ ₹6 ಕೋಟಿ? ನಾ ರೀಲ್ ನಂಬಿ  16ರ ಬಾಲಕ ಹತ್ಯೆ!ಇದು ₹6 ಕೋಟಿ ಆಸೆಗೆ ನಡೆದ ಭೀಕರ ಕೃತ್ಯ…!
    ‼️ ಮುಂಗಾರು ಅಬ್ಬರ ಶುರು: ಕರ್ನಾಟಕ-ಕೇರಳಕ್ಕೆ IMD ರೆಡ್ ಸಿಗ್ನಲ್! ಮುಂದಿನ 7 ದಿನ ಭಾರೀ ಮಳೆ, ಬಿರುಗಾಳಿ ಸಾಧ್ಯತೆ!
    ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
    ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
    ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?
    ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
    ಟೆಕ್ಸಾಸ್‌ನಲ್ಲಿ ತ್ರಿವರ್ಣ ಧ್ವಜ ಹರಿದು ಹಾಕಿದ ವಿಡಿಯೋ ವೈರಲ್ …ಅಮೆರಿಕದಲ್ಲಿ ಹೆಚ್ಚುತ್ತಿದೆಯೇ ಭಾರತ ವಿರೋಧಿ ಮನೋಭಾವ?
    ಪಶ್ಚಿಮ ಬಂಗಾಳದಲ್ಲಿ ಗುಂಡಾಗಿರಿ ಮುಂದುವರಿಕೆ
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
    ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
    ಬೆಳಕು-ನೆರಳಿನ ಕಾವ್ಯ: ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ
    ಒಂದು iPhoneಗಾಗಿ ಆರಂಭವಾದ ಮಗನ ಹಠ… ಕೊನೆಗೆ ಒಂದೇ ಕುಟುಂಬದ ಮೂವರ ಜೀವವೇ ಹೋಯ್ತು!
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಅಪ್ಪ -ಅಮ್ಮ ಮಕ್ಕಳ–ಬಾಂಧವ್ಯಕ್ಕೆ ಎಚ್ಚರಿಕೆಯ ಗಂಟೆ……!ಸುತ್ತಿಗೆಯಿಂದ ಹೊಡೆದು ತಂದೆ-ತಾಯಿಯನ್ನೇ ಕೊಂದ ಮಗ!
    ಸಹೋದರಿಯ ಎಲುಬುಗಳೊಂದಿಗೆ ಬ್ಯಾಂಕ್ ಗೆ ಬಂದ ಅಣ್ಣ…!ದಾಖಲೆ ನಿಯಮಗಳ ನಡುವೆ ಸೋತ ಮಾನವೀಯತೆ”
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”
    ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”