📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…

ಪಶ್ಚಿಮ ಬಂಗಾಳ ಚುನಾವಣೆ ಮುಗಿದು, ಬಿಜೆಪಿಯು ದಿಗ್ವಿಜಯ ಸಾಧಿಸಿದ್ದು ಮುಗಿದು ಹೋದ ಅಧ್ಯಾಯ. ಇನ್ನೇನು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಆದರಿಲ್ಲಿ ಆಗ್ತಿರೋದೇನು? ಬಿಜೆಪಿ ಜಯಗಳಿಸುತ್ತಿದ್ದಂತೆಯೇ ಆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ನೇತೃತ್ವದಲ್ಲಿ ಯಥೇಚ್ಛವಾಗಿ ಗುಂಡಾಗಿರಿ ಪ್ರಾರಂಭಿಸಿದ್ದಾರೆ. ಬಿಹಾರದ ಜಂಗಲ್ ರಾಜ್, ಟಿ ಎಂ ಸಿಯ  ಗುಂಡಾಗಿರಿ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದ ಬಿಜೆಪಿಯು ಮಾಡುತ್ತಿರುವುದೇನು? ತ್ರುಣಮೂಲ ಮೂಲ ಕಾಂಗ್ರೆಸ್ ನ ಕಚೇರಿಯನ್ನೇ ದ್ವಂಸ ಗೊಳಿಸಿರುವ ಬಿಜೆಪಿಯ ನಡೆ, ಆ ಪಕ್ಷಕ್ಕೆ ಶೋಭೆ ತರುವಂತದ್ದೆ. ವ್ಯತ್ಯಾಸ ಏನು ಉಳಿಯಿತು ಎಂಬ ಪ್ರಶ್ನೆಯು ಈಗ ಗೆಲ್ಲಿಸಿದ ಮತದಾರರಲ್ಲಿ ಏಳಲು ಪ್ರಾರಂಭಿಸಿದೆ. ಸಂಸ್ಕಾರ, ರಾಷ್ಟ್ರಪ್ರೇಮ, ಧರ್ಮದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಾ ಬಂದಿದ್ದ ಬಿಜೆಪಿಯು ತನ್ನ ಗೆಲುವಿನ ಸಂಭ್ರಮವನ್ನು ಈ ರೀತಿಯಲ್ಲಿ ಹಿಂಸಾಚಾರಕ್ಕೆ ಬದಲಾಯಿಸಿದ್ದು ಅಕ್ಷಮ್ಯವಲ್ಲದೆ ಬೇರೇನೂ ಅಲ್ಲ.

ಕೇಂದ್ರ ಸಚಿವ ಮಜೂಮ್ದಾರ್

ಈ ವಿಚಾರಕ್ಕೆ ತತಕ್ಷಣವೇ ಬಿಜೆಪಿಯ ಕೇಂದ್ರ ನಾಯಕರು ಎಚ್ಚರಿಕೆಯ ಸಂದೇಶವನ್ನು ನೀಡುತ್ತಾರೆ ಎಂದು ಭಾವಿಸಿದ್ದರೆ, ಯಾರೊಬ್ಬರೂ ಮಾತನಾಡಲಿಲ್ಲ. ಆದರೆ ಕೇಂದ್ರ ಸಚಿವ ಮಜುನ್ದಾರ್, ಬಿಜೆಪಿ ಕಾರ್ಯಕರ್ತರಿಗೆ ಮನವಿಯ ರೂಪದ ಸಂದೇಶ ನೀಡಿದ್ದು ಉತ್ತಮ ಬೆಳವಣಿಗೆಯಾಗಿದೆ. ನಾವು ರಾವಣನ ಅನುಯಾಯಿ ಅಲ್ಲ, ರಾಮಭಕ್ತರು ನಾವು. ನಮ್ಮಿಂದ ಈ ರೀತಿಯ ಹಿಂಸಾಚಾರ ಸಲ್ಲದು. ಟಿಎಂಸಿಯವರು ಮಾಡಿದ ಕೆಲಸವನ್ನು ನಾವು ಮಾಡಿದರೆ ನಮಗೂ ಅವರಿಗೂ ವ್ಯತ್ಯಾಸವೇನು? ರಾಜ್ಯಕ್ಕೆ ಉತ್ತಮ ಆಡಳಿತ ಕೊಡುವ ಹಾಗೂ ರಾಜ್ಯದ ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡುವ ಕೆಲಸ ಮಾಡೋಣ ಎಂಬ ಸಂದೇಶವನ್ನು ನೀಡಿರುವಂತದ್ದನ್ನು ಶ್ಲಾಘಿಸಲೇಬೇಕು.

ಇನ್ನು ಮಮತಾ ಬ್ಯಾನರ್ಜಿ, ಈ ಸೋಲನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಆದರೆ ಬೇರೆ ದಾರಿಯೂ ಅವರಿಗಿಲ್ಲ. ಆದ್ರೂ ಸಹ, ಇಡೀ ದೇಶಕ್ಕೆ ದೊಡ್ಡ ಮೆಸೇಜ್ ಪಾಸ್ ಮಾಡುವ ಉದ್ದೇಶದಿಂದಲೇ ಮಮತಾ ಬ್ಯಾನರ್ಜಿ ಹೊಸ ವರಸೆಯನ್ನು ಶುರುವಿಟ್ಟು ಕೊಂಡಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಈ ಚುನಾವಣೆಯು ಪಾರದರ್ಶಕವಾಗಿ ನಡೆದಿಲ್ಲ. ಬಿಜೆಪಿ ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರು ಸೇರಿಕೊಂಡು ಅವರಿಗೆ ಬೇಕಾದ ಹಾಗೆ ಮಾಡಿದಂತಹ ಚುನಾವಣೆ ಇದು ಅಷ್ಟೇ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಾನು ರಾಜೀನಾಮೆ ಕೊಡುವುದಿಲ್ಲ ಅಂತ ಹೊಸವರ ಸೆ ಶುರು ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೂ ಸಹ, ಅವರನ್ನು ರಾಜ್ಯಪಾಲರ ಮೂಲಕ ವಜಾ ಗೊಳಿಸಿ ಹೊಸ ಸರ್ಕಾರದ ಆಡಳಿತಕ್ಕೆ ಅವಕಾಶ ಮಾಡಿಕೊಡುವುದು ಖಚಿತ. ಇದು ಸ್ವತಹ ಮಮತಾ ಬ್ಯಾನರ್ಜಿ ಅವರಿಗೂ ಗೊತ್ತು. ಆದ್ರವರು, ಚುನಾವಣಾ ಆಯೋಗ ನಡೆದುಕೊಂಡ ರೀತಿ, ಬಿಜೆಪಿಯು ಆಯೋಗವನ್ನು ಬಳಸಿಕೊಂಡ ರೀತಿ ಎರಡನ್ನೂ ದೇಶದ ಜನರ ಬಳಿಗೆ ತಲುಪಿಸುವ ಕಾರಣಕ್ಕಾಗಿಯೇ ಈ ವರಸೆ ಶುರು ಹಚ್ಚಿಕೊಂಡಿದ್ದಾರೆ. ಇದು ತಪ್ಪಾ ಅಂದರೆ ತಪ್ಪಲ್ಲ. ಇದು ಸರಿಯಾ ಅಂದರೆ ಸರಿಯೂ ಅಲ್ಲ. ಹಾಗಿದ್ರೆ ಮುಂದೇನು?

ಹಿರಿಯ ವಕೀಲರಾದ ಜಟ್ಮಲಾನಿಯವರು ಇದ್ದಕ್ಕಿದ್ದಂತೆಯೇ ಮಾತು ಶುರು ಮಾಡಿದ್ದಾರೆ. ಆ ಮಾತಿನ ಹಿಂದೆ, ಮುಂದೆನಾಗುತ್ತೆ ಅನ್ನೋದರ ಮುನ್ಸೂಚನೆ ಇದೆ. ಜೆಟ್ಮಲಾನಿ ಅವರು, ಮಮತಾ ಬ್ಯಾನರ್ಜಿ ರಾಜಿನಾಮೆಯನ್ನು ಕೊಡದಿದ್ದರೆ ಅವಳನ್ನು ಒದ್ದೋಡಿಸಬೇಕು ಅಂತ ಕರೆ ನೀಡಿದ್ದಾರೆ. ಇಷ್ಟು ದಿನ ಈ ವಕೀಲರು ಎಲ್ಲಿದ್ದರೋ ಗೊತ್ತಿಲ್ಲ, ಆದರೆ ಈಗವರ ಈ ಒಂದು ಸ್ಟೇಟ್ಮೆಂಟ್ ಇಡೀ ದೇಶಕ್ಕೆ ಅವರ ಪರಿಚಯವನ್ನು ಮಾಡುತ್ತಿದೆ. ಏನೇ ಇರಲಿ, ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಚುನಾವಣಾ ಆಯೋಗ ಹಾಗೂ ಬಿಜೆಪಿಯ ವಿರುದ್ಧ ಹೋರಾಟ ಮಾಡಿಕೊಳ್ಳಬಹುದು. ಅದು ಬಿಟ್ಟು ರಾಜೀನಾಮೆ ಕೊಡುವುದಿಲ್ಲ ಎಂದು ಪಟ್ಟು ಹಿಡಿಯುವಂತದ್ದು, ಬಲವಂತವಾಗಿ ಅವರನ್ನು ವಜಾಗೊಳಿಸುವಂಥದ್ದು ಇತಿಹಾಸದ ಕಪ್ಪುಪುಟದಲ್ಲಿ ಅವರನ್ನು ಉಳಿಯುವಂತೆ ಮಾಡುತ್ತದೆ. ಇದು ಮರ್ಯಾದೆಯ ರಾಜಕಾರಣವೂ ಆಗುವುದಿಲ್ಲ. ನಿಜ, ಇವತ್ತಿನ ರಾಜಕಾರಣದಲ್ಲಿ ಮರ್ಯಾದೆ ಹಾಗೂ ನೈತಿಕತೆಗೆ ಬೆಲೆಯೇ ಇಲ್ಲ. ಆದ್ರೂ ಅಲ್ಪ ಸ್ವಲ್ಪವಾದರೂ ಉಳಿಸಿಕೊಳ್ಳಬೇಕು ಎಂದರೆ, ಮಮತಾ ಬ್ಯಾನರ್ಜಿ ಮೊದಲಿಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕು. ಆನಂತರ ಹೋರಾಟ ಮಾಡಿಕೊಳ್ಳಬಹುದು.

ಹೋಗ್ಲಿ, ಭಾರತೀಯ ಜನತಾ ಪಕ್ಷವು ತನ್ನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಹೇಗೆ ವ್ಯವಸ್ಥಿತವಾಗಿ ಮಾಡುತ್ತದೆಯೋ, ಆ ರೀತಿಯಲ್ಲಿ ಮಮತಾ ಬ್ಯಾನರ್ಜಿಗಾಗಲಿ ಅಥವಾ ಪ್ರತಿಪಕ್ಷದ ಯಾವುದೇ ನಾಯಕರಿಗೆ ಸಾಧ್ಯವೇ? ಈ ಕ್ಷಣಕ್ಕೆ ಅದು ಸಾಧ್ಯವಿಲ್ಲ, ಬಿಜೆಪಿಯ ಮಾಧ್ಯಮ ಪ್ರಪಂಚ ಬಹಳ ಬಲಿಷ್ಠವಾಗಿದೆ ಹಾಗೂ ಅದನ್ನು ತನ್ನ ಹಿಡಿತದಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದೆ. ಮಮತಾ ಬ್ಯಾನರ್ಜಿಯ ನ್ಯಾಯಯುತ ಹೋರಾಟವನ್ನೂ ಬಿಜೆಪಿಯ ಮಾಧ್ಯಮ ಘಟಕಗಳು, ಜನಸಾಮಾನ್ಯರಿಗೆ ಕೆಟ್ಟ ರೂಪದಲ್ಲಿ ತಲುಪಿಸುವಂತೆ ಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ಸಹ ಮಮತಾ ಬ್ಯಾನರ್ಜಿಗೆನೇ ಬಿಜೆಪಿ ವಿರೋಧಿಯ ಹೋರಾಟಗಾರರು ನೀಡಿದ್ದಾರೆ. ಯಾವುದೇ ಹೋರಾಟ ಮಾಡುವುದಿದ್ದರೂ, ಪಕ್ಷಗಳಲ್ಲಿ ಏಕತೆ ಇರಬೇಕು, ಹಾಗೆಯೇ ತಮ್ಮದೇ ಆದ ಮಾಧ್ಯಮ ಪ್ರಪಂಚವನ್ನು ಸೃಷ್ಟಿಸಿಕೊಳ್ಳಬೇಕು. ಅದು ಬಿಜೆಪಿ ಮಾಧ್ಯಮವನ್ನು ಸಹ ಹಿಂದಿಕ್ಕಿ ಹೋಗುವ ದಾರ್ಶ್ಯತೆ ಹೊಂದಿರಬೇಕು. ಅದೆಲ್ಲವನ್ನು ಮಾಡಿಕೊಂಡು ಮಮತಾ ಬ್ಯಾನರ್ಜಿ ಹೋರಾಟಕ್ಕಿಳಿಯಬೇಕು. ಅದಿಲ್ಲದಿದ್ದರೆ ಹೋರಾಟ ನಿಷ್ಪ್ರಯೋಜಕವಾಗುತ್ತದೆ. ಸ್ವತಹ ಮಮತಾ ಬ್ಯಾನರ್ಜಿಯವರೆ ವಿಲನ್ ಆಗುತ್ತಾಳೆ. ಸೇಮ್ ಟು ಸೇಮ್ ಕೇಜ್ರಿವಾಲ್. ಕೇಜ್ರಿವಾಲ್ ಉತ್ತಮ ಸರ್ಕಾರ ನೀಡಿಯೂ ಸಹ, ಇವತ್ತು ಅದಪತನದತ್ತ ಹೋಗುತ್ತಿದ್ದಾರೆ. ಅದಕ್ಕೆ ಕಾರಣ, ಅವರ ವಿರುದ್ಧ ಸೃಷ್ಟಿಯಾದಂತಹ ಭಯಾನಕವಾದಂತಹ ಮಾಧ್ಯಮ ಜಗತ್ತು ಅಂತ, ಅದೇ ಹೋರಾಟಗಾರರು ಹೇಳಿ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂಬ ಹೇಳಿಕೆ ಪ್ರಸ್ತುತ ಹೋರಾಟದ ಕಾರಣಕ್ಕೆ ಅತ್ಯವಶ್ಯಕ. ಆದರೆ ಆ ಹೋರಾಟ, ಮಮತಾ ಬ್ಯಾನರ್ಜಿ ಯನ್ನು ನುಂಗಿ ಹಾಕುವ ಸಾಧ್ಯತೆ ಹೆಚ್ಚಿದೆ. ಹೋರಾಟಕ್ಕೂ ಮೊದಲು, ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹಲವು ವಿಂಗಗಳ ಮೂಲಕ ಆ ತಯಾರಿ ಇರಬೇಕಾಗುತ್ತದೆ. ಅದ್ಯಾವುದೂ ಇಲ್ಲದೆ ಏಕಾಏಕಿಯಾಗಿ ಶುರು ಮಾಡಿರುವ ಈ ಹೋರಾಟ ವಾಪಸ್ ಅವರ ಮುಖಕ್ಕೆ ಮಸಿಯಾಗಿ ಬಳಿಯುತ್ತದಯೇ ಹೊರತು ಬೇರೆ ಯಾವುದೇ ಪ್ರಯೋಜನಕ್ಕೆ ಬರುವ ಕೆಲಸ ಮಾಡುವುದಿಲ್ಲ. ಆದರೆ, ಕಾಂಗ್ರೆಸ್ನ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿಯ ಸೋಲನ್ನು ಪಕ್ಷದ ಯಾವುದೇ ಕಾರ್ಯಕರ್ತರು ಸಂಭ್ರಮಿಸಬಾರದು ಅಂತ ಸಂದೇಶ ನೀಡಿರುವಂತದ್ದು ಒಳ್ಳೆಯ ಬೆಳವಣಿಗೆ. ಆದರೆ, ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಮೈತ್ರಿ ಗೆ ಮುಳ್ಳಾಗುವಂತೆ ವರ್ತಿಸುತ್ತಿರುವುದು ಪಕ್ಷದ ವಿಶ್ವಾಸಾರ್ಹತೆಗೆ ಚ್ಯುತಿಯನ್ನುಂಟು ಮಾಡುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಕೂಡ ಈ ವಿಚಾರದಲ್ಲಿ ಒಂದೇ ಮಾದರಿಯಂತೆ ಕಾಣುತ್ತಿದೆ ಎಂಬ ಮಾತುಗಳು ತಮಿಳುನಾಡಿನಾದ್ಯಂತ ಕೇಳಿ ಬರಲು ಪ್ರಾರಂಭಿಸಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ನೂತನ ಪಕ್ಷ ಟೀವಿಕೆ ಅಧಿಕಾರದ ಹತ್ತಿರಕ್ಕೆ ಬಂದು ನಿಂತಿದೆ. ಆದರೆ ಅಧಿಕಾರ ಪಡೆಯಲು 10 ಶಾಸಕರ ಅಗತ್ಯತೆ ಇದೆ. ಕಾಂಗ್ರೆಸ್ ಇದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿ ನೂತನ ಸರ್ಕಾರದ ಸಹಭಾಗಿಯಾಗಲು ಯೋಚನೆ ಮಾಡಿದೆ. ಆದರೆ ಚುನಾವಣೆಯಲ್ಲಿ , DMK ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ಮರೆಯಲಿಕ್ಕೆ ಸಾಧ್ಯವಾ? ಆ ಪಕ್ಷದ ಸಹಾಯದಿಂದಲೇ ಐದು ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ ಎಂಬುದನ್ನು ಮರೆಯಬಾರದು. ಕಾಂಗ್ರೆಸ್ ಇಂತಹ ಸಮಯದಲ್ಲಿ ಮನೆಯ ಯಜಮಾನನ ಪಾತ್ರವನ್ನು ನಿರ್ವಹಿಸಬೇಕಿತ್ತು.

   –ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

ವೈರಲ್ ಆದ ಒಂದೇ ಒಂದು ಪಂಚ್ … ಐಸಿಯು ಕೋಮಾವರೆಗೆ ! ಬೆಚ್ಚಿಬೀಳಿಸಿದ ಜಿಮ್ ಪಂಚ್ ವೀಡಿಯೋ.ದೇಹ ಗಟ್ಟಿಯಾಗಿತ್ತು… ಮನಸ್ಸು ದುರ್ಬಲವಾಗಿತ್ತು!
ಭೀಕರ ಅಪಘಾತ ಮಹಿಳೆ ಬಲಿ
ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ಹೊಸ ತಿರುವು ಕೊಟ್ಟ ದೆಹಲಿ ಹೈಕೋರ್ಟ್!
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಸಾರ್ವಜನಿಕರಲ್ಲಿ ವಿನಂತಿ …!
ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು! 
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!