📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”

ಒಮ್ಮೆ ಊಹಿಸಿ…
12ನೇ ತರಗತಿಯಲ್ಲಿ 90% ಮಾರ್ಕ್ ಗಳಿಸಿದ ಸ್ಪುರದ್ರೂಪಿ ಮುಗ್ಧ ಮುಖದ ಮುದ್ದು ಹುಡುಗ. ಎಲ್ಲರೂ “ಇವನು ಮುಂದೆ ದೊಡ್ಡ ಎಂಜಿನಿಯರ್, ಡಾಕ್ಟರ್ ಆಗ್ತಾನೆ” ಅಂತ ಕನಸು ಕಂಡಿದ್ದರು. ಆದರೆ ಬದುಕು ತೆಗೆದುಕೊಂಡ ತಿರುವು? ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ…!

ಜಸ್ಟ್ 19ನೇ ವಯಸ್ಸಿನಲ್ಲಿ, ದೆಹಲಿಯ ಅಮರ್ ಕಾಲೋನಿಯಲ್ಲಿ ಐಆರ್‌ಎಸ್ ಅಧಿಕಾರಿಯ ಮಗಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಈಗ ಆರೋಪಿಯಾಗಿರುವ ರಾಹುಲ್ ಮೀನಾ  ಒಮ್ಮೆ “ಬೆಸ್ಟ್ ಸ್ಟೂಡೆಂಟ್” ಅನ್ನಿಸಿಕೊಂಡವನು, ಆನ್‌ಲೈನ್ ಜೂಜಾಟದ ವ್ಯಸನಕ್ಕೆ ಬಿದ್ದು, ತನ್ನ ಮಾರ್ಕ್ಸ್ ಕಾರ್ಡ್, ಮೊಬೈಲ್ ಫೋನ್, ಬೈಕ್ ಮತ್ತು ಗೃಹೋಪಯೋಗಿ ವಸ್ತುಗಳಂತಹ ವೈಯಕ್ತಿಕ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದ್ದ ಎಂದು ಅವರ ಕುಟುಂಬ ಹೇಳಿದ್ದಾರೆ.

ಮೀನಾ ಹಲವರ ಬಳಿ ಹಣವನ್ನು ಸಾಲ ಪಡೆದು . ಸಾಲವನ್ನು ಎಂದಿಗೂ ಮರುಪಾವತಿಸದ ಬಗ್ಗೆ ದೂರುಗಳು ಬಂದ ನಂತರ ಅಧಿಕಾರಿಯ ಕುಟುಂಬದಿಂದ ಒಂದು ತಿಂಗಳ ಹಿಂದೆ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಸಾಲ-ಒತ್ತಡಗಳಲ್ಲಿ ಮುಳುಗಿ, ಕೊನೆಗೆ ಭೀಕರ ಅಪರಾಧದ ದಾರಿಯಲ್ಲಿ ನಡೆದುಬಿಟ್ಟ.

ಆ ದಿನ…
ತನ್ನ ಭವಿಷ್ಯದ ಕನಸುಗಳ ಜೊತೆ ಓದುತ್ತಿದ್ದ ಆ ಯುವತಿ, ಮನೆಯೊಳಗೆ ಸುರಕ್ಷಿತಳೇ ಅನ್ನಿಸಿಕೊಂಡಿದ್ದಳು. ಆದರೆ ನಂಬಿಕೆಯನ್ನು ಆಯುಧವಾಗಿಸಿಕೊಂಡ ಆತ, “ಅಮ್ಮ ಕರೆಸಿಕೊಂಡಿದ್ದಾರೆ” ಎಂಬ ಮಾತಿನಿಂದ ಒಳನುಗ್ಗಿದ. ಅದರ ನಂತರ ನಡೆದದ್ದು ಮನುಷ್ಯತ್ವವೇ ಮಣ್ಣಾದ ಕ್ಷಣ.

ಆಕೆ ಎದುರಿಸಿದ ನೋವು, ಭಯ, ಅಸಹಾಯಕತೆ — ಕಲ್ಪನೆಗೂ ಅತೀತ. ಯಾವುದೇ ಕರುಣೆ ಇಲ್ಲದೆ, ಯಾವುದೇ ಮಾನವೀಯತೆ ಇಲ್ಲದೆ ನಡೆದ ಕ್ರೂರ ಕೃತ್ಯ… ಒಂದು ಜೀವವನ್ನಷ್ಟೇ ಅಲ್ಲ, ಒಂದು ಕುಟುಂಬದ ಕನಸುಗಳನ್ನೇ ನಾಶಮಾಡಿತು.

ಈ ಕಥೆ ಒಂದು ವಿಷಯ ನೆನಪಿಸುತ್ತದೆ:
“ಹೊರಗೆ ಕಾಣುವುದೇ ನಿಜವಲ್ಲ.”
ಅಂದರೆ, “ಪುಸ್ತಕದ ಮುಖಪುಟ ನೋಡಿ ಕಥೆ ತೀರ್ಮಾನಿಸಬೇಡ.”

ಮತ್ತೊಂದು ಕಹಿ ಸತ್ಯ:
“ಯಾರನ್ನೂ ಕಣ್ಣುಮುಚ್ಚಿ ನಂಬಬಾರದು.”

ಮುಖದಲ್ಲಿ ಒಳ್ಳೆಯತನ ಕಂಡರೂ… ಒಳಗಿನ ಮನಸ್ಸು ಹೇಗಿದೆ ಅನ್ನೋದು ಯಾವಾಗಲೂ ಗೋಚರಿಸುವುದಿಲ್ಲ.

ಪೋಷಕರ ಪ್ರಮುಖ ಜವಾಬ್ದಾರಿ. 

ಅದೇ ಸಮಯದಲ್ಲಿ ಒಬ್ಬ ಪೋಷಕರಾಗಿ, ಮಕ್ಕಳ ವರ್ತನೆಯಲ್ಲಿ ಬರುವ ಸಣ್ಣ ಬದಲಾವಣೆಗಳನ್ನೂ ಗಮನಿಸಬೇಕು—ಹಠಾತ್ ಕೋಪ, ಒಂಟಿತನ, ಅತಿಯಾದ ಫೋನ್/ಆನ್‌ಲೈನ್ ವ್ಯಸನ, ಹಣದ ಅವಶ್ಯಕತೆ ಹೆಚ್ಚಾಗುವುದು, ಸುಳ್ಳು ಹೇಳುವ ಪ್ರವೃತ್ತಿ ಇತ್ಯಾದಿ ಸಂಕೇತಗಳಾಗಬಹುದು. ಇಂತಹ ಸಂದರ್ಭಗಳಲ್ಲಿ ಗದರಿಸುವುದಕ್ಕಿಂತ, ಶಾಂತವಾಗಿ ಮಾತನಾಡಿ ಅವರ ಮನಸ್ಥಿತಿ ಅರ್ಥಮಾಡಿಕೊಳ್ಳುವುದು ಮುಖ್ಯ. ಸ್ನೇಹಪೂರ್ಣ ಸಂಭಾಷಣೆ, ಸರಿಯಾದ ಮಾರ್ಗದರ್ಶನ ಮತ್ತು ಅಗತ್ಯವಿದ್ದರೆ ಕೌನ್ಸೆಲಿಂಗ್ ಸಹಾಯ ಪಡೆಯುವುದು ಅತ್ಯಂತ ಉಪಯುಕ್ತ. ಮುಖ್ಯವಾಗಿ, “ನಂಬಿಕೆ” ಮತ್ತು “ಪರಿವೀಕ್ಷಣೆ” ಎರಡನ್ನೂ ಸಮತೋಲನದಲ್ಲಿ ಇಟ್ಟು, ಮಕ್ಕಳಿಗೆ ಸರಿಯಾದ ಮೌಲ್ಯಗಳನ್ನು ಕಲಿಸುವುದು ಪೋಷಕರ ಪ್ರಮುಖ ಜವಾಬ್ದಾರಿ.

##BreakingNews #CrimeNews #IndiaNews #TrueCrime #LatestUpdate#Delhi news

COMMENTS

Login with Gmail to comment

ಇನ್ನಷ್ಟು ಸುದ್ದಿ

ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
“ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
“ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ಅಜಿತ್ ಅಗರ್ಕರ್ ಗೆ ಜಾಕ್ಪಾಟ್
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?
ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು!