📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ

ಉಡುಪಿಯ ಈಗಿನ ಜಿಲ್ಲಾಡಳಿತವು, ನೇರಾ ನೇರವಾಗಿ ಜನದ್ರೋಹಿ ಆಡಳಿತಕ್ಕೆ ಮುನ್ನುಡಿ ಬರೆದು ಬಿಟ್ಟಿದೆ ಎಂಬ ಗುರುತರ ವಾದಂತಹ ಆರೋಪವನ್ನು ನೊಂದ ಜನರ ಕಡೆಯಿಂದ ಹೊತ್ತು ಕೊಳ್ಳುತ್ತಿದೆ.

         ಕೆಲವೇ ಕೆಲವು ದಿನಗಳ ಹಿಂದೆ,. ಕೊರಗ ಸಮುದಾಯವು ಇದೇ ಜಿಲ್ಲಾಡಳಿತದ ವಿರುದ್ಧ ಹಲವು ದಿನಗಳ ಕಾಲ ಸಮುದಾಯದ ಹೆಂಗಸರು ಮಕ್ಕಳನ್ನು ಕಟ್ಟಿಕೊಂಡು ತಮ್ಮ ಬೇಡಿಕೆಗಾಗಿ ಜಿಲ್ಲಾಡಳಿತದ ಮುಂದೆಯೇ ಮುಷ್ಕರಕ್ಕೆ ಕುಳಿತುಕೊಂಡಿತ್ತು. ಆ ಒಂದು ಮುಷ್ಕರವನ್ನೂ ಸಹ ಜಿಲ್ಲಾಧಿಕಾರಿಗಳ ಸಹಿತ ಜಿಲ್ಲಾಮಟ್ಟದ ಅಧಿಕಾರಿಗಳು ನಿರ್ಲಕ್ಷಿಸಿದ್ದರ ಬಗ್ಗೆ ಆರೋಪಗಳಿದ್ದವು. ಈಗ ಅದಕ್ಕೂ ಗಂಭೀರವಾದಂತಹ ಆರೋಪವು ಜಿಲ್ಲಾಧಿಕಾರಿಗಳ ವಿರುದ್ಧವೇ ಬರುತ್ತಿದೆ ನೋಡಿ.

ಜಿಲ್ಲಾಡಳಿತವೇ ಆರೋಪವನ್ನು ಹೊತ್ತುಕೊಳ್ಳುತ್ತಿದ್ದರೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಮಾಜಸೇವಕರು ಅನ್ನಿಸಿಕೊಂಡಂತಹ ನಾಯಕರುಗಳು ಏನು ಮಾಡುತ್ತಿದ್ದಾರೆ? ಅವರು ಯಾರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ? ಆ ಬೆಂಬಲದಿಂದ ಅವರು ಮಾಡಿಕೊಳ್ಳುತ್ತಿರುವ ಲಾಭವಾದರೂ ಏನು ಎಂಬ ಪ್ರಶ್ನೆಯು ಈ ಸಂದರ್ಭದಲ್ಲಿ ಎದ್ದೇಳುತ್ತಿದೆ.

ಎಸ್, ವಿಷಯಕ್ಕೆ ಬರುವ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಹಾಳ ಗ್ರಾಮದ ನಾಗರಮಠ ಎಂಬ ಪುಟ್ಟ ಊರಿನ ಕಣ್ಣೀರ ಕಥೆ ಇದು. ಇಡೀ ಊರಿನ ಮತದಾರರ ಸಂಖ್ಯೆಯು 650ರ ಆಸುಪಾಸು ಇದೆಯಷ್ಟೇ. ಒಟ್ಟೂ k ಜನಸಂಖ್ಯೆ ಹತ್ತಿರ ಹತ್ತಿರ ಸಾವಿರದಷ್ಟು ಇರಬಹುದು. ಈ ನಾಗರಮಠ ವ್ಯಾಪ್ತಿಯಲ್ಲಿ ಸೀತಾನದಿಯ ಕವಲು ನದಿಯೊಂದು ಹರಿದು ಹೋಗುತ್ತದೆ. ಆ ನದಿಯು ಇಲ್ಲಿಯವರೆಗೆ ಊರಿನ ಜೀವನದಿಯಾಗಿತ್ತು, ಆದರಿಗ ಅದೇ ನದಿ ಊರಿನ ಜೀವವನ್ನು ಹಿಂಡುತ್ತಿದೆ. ಊರಿನ ಮೇಲೆ ಇಲ್ಲಿಗಲ್ ವ್ಯವಹಾರಸ್ಥರ ಕಣ್ಣು ಬೀಳುವಂತೆ ಮಾಡಿದೆ.

ಈ ನದಿಯ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮರಳು ಮಾಫಿಯಾದವರ ಕಣ್ಣು ಬಿದ್ದಿದೆ. ಹಾಗೆ ಅವರ ಕಣ್ಣು ಬೀಳುತ್ತಿದ್ದಂತೆಯೇ ಇಲ್ಲಿ ಗಣಿಗಾರಿಕೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಇದು ಇಂದು ನಿನ್ನಯ ಕಥೆಯಲ್ಲ. 2022 ರಿಂದ ನಡೆಯುತ್ತಿರುವಂತಹ ನಿರಂತರ ಪ್ರಯತ್ನ. ಊರಿನ ಜನರು ಆವತ್ತಿನಿಂದಲೂ ಇದನ್ನು ವಿರೋಧಿಸಿಕೊಂಡು ಬಂದಿದ್ದಾರೆ, ಹೋರಾಟ ಮಾಡಿಕೊಂಡು ಬಂದಿದ್ದಾರೆ. ಜನರು ಸುಮ್ಮನೆ ಕೂತಿಲ್ಲ, ವೈಜ್ಞಾನಿಕವಾಗಿ ಆದರ ಸಾಧಕ ಬಾದಕದ ಬಗ್ಗೆ  ರಿಪೋರ್ಟನ್ನು ರೆಡಿ ಮಾಡಿಸಿ ಜಿಲ್ಲಾಡಳಿತದ ಮುಂದೆ ಇಟ್ಟಿದ್ದಾರೆ. ಯಾವುದನ್ನೂ ಕಣ್ಣೆತ್ತಿಯೂ ನೋಡದ ಜಿಲ್ಲಾಡಳಿತ, ಕೇವಲ ತೋರುಗಾಣಿಕೆಯ ನಿಯಮಗಳನ್ನು ಕಾಗದ ಮೇಲಷ್ಟೇ   ನಮೂದಿಸಿ ಇಲ್ಲಿಗಲ್ ವ್ಯವಹಾರಕ್ಕೆ ಪೋಲಿಸ್ ರಕ್ಷಣೆಯ ಮೂಲಕ  ಅಸ್ತು ನೀಡಿದೆ.

ಎರಡು ಮೂರು ಬಸ್, ರಿಸರ್ವ್ ಪೊಲೀಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ರಕ್ಷಣೆಯೊಂದಿಗೆ,  ಈ ಕವಲು ನದಿಯಿಂದ ಅನಾರೋಗ್ಯಕರವಾಗಿ ಮರಳನ್ನು ಬಲವಂತವಾಗಿ ತೆಗೆಯುತ್ತಿದ್ದಾರೆ. ಅದರ ಪರಿಣಾಮ ಊರಿನ ಸಿಹಿ ನೀರಿನ ಬಾವಿಗಳಲ್ಲಿ ಉಪ್ಪು ನೀರು ಬರಲಾರಂಬಿಸಿದೆ. ಈ ಭಾಗದ ಕೃಷಿ ಭೂಮಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದ್ಯಾವುದರ ಬಗ್ಗೆಯೂ ಕಿಂಚಿತ್ತೂ  ಯೋಚಿಸದ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬಕಾಸುರರ ಜೊತೆ ಕುಳಿತು ಇಲ್ಲಿನ ಸಂಪತ್ತನ್ನು  ಅನಾರೋಗ್ಯಕರವಾಗಿ ಲೂಟಿ ಹೊಡೆಯಲು ಪಕ್ಕಾ ಪ್ಲಾನ್ ಮಾಡಿಕೊಂಡೆ ಬಂದಿವೆ ಎನ್ನುವುದು ಊರಿನವರ ಆರೋಪ ಹಾಗೂ ನೋವಿನ ನುಡಿ.

ಈ ಹಿಂದೆ ಸ್ಥಳೀಯ ಶಾಸಕರು ಹಾಗೂ ಸಂಸದರು ಊರಿನ ನಾಗರಿಕರ ಪರವಾಗಿ ಮಾತನಾಡುತ್ತಿದ್ದವರು, ಈಗ ಏಕಾಏಕಿಯಾಗಿ ಜಿಲ್ಲಾಡಳಿತದ ಪರವಾಗಿ ಮಾತನಾಡುತ್ತಾ, ಈ ಹಿಂದೆ ತಾವೇ ಖುದ್ದಾಗಿ ಆಗಮಿಸಿ ಸ್ಥಳವನ್ನು ಪರಿಶೀಲಿಸಿ ಕೊಟ್ಟ ಹೇಳಿಕೆಗೆ ವಿರುದ್ಧವಾಗಿ ನಿಂತಿದ್ದಾರೆ ಅಂದರೆ ಅವರು ಸಂತುಷ್ಟರಾಗಿದ್ದಾರೆ ಅಂತ ತಾನೇ ಅರ್ಥ?

ನಮಗೆ ಈ ಭೂಮಿ ಬಿಟ್ಟು ಬೇರೆ ಗತಿ ಇಲ್ಲ, ಇಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ನಮ್ಮ ಊರಿನಲ್ಲಿ ಮರಳು ತೆಗೆಯಬೇಕೆಂದರೆ ಅದಕ್ಕೆ ಹೊರಗಿನವರು ಯಾಕೆ ಬೇಕು? ಆರೋಗ್ಯಕರವಾದ ರೀತಿಯಲ್ಲಿ, ಕೃಷಿ ಭೂಮಿಗೆ ತೊಂದರೆಯಾಗದ ರೀತಿಯಲ್ಲಿ, ನದಿ ಪಾತ್ರದ ಬೌಂಡರಿಗಳು ಬದಲಾಗದ ರೀತಿಯಲ್ಲಿ, ನಿಯಮಗಳನ್ನು ಮೀರದೆ ಮರಳನ್ನು ತೆಗೆಯಲು ಅವಕಾಶ ನಮ್ಮವರಿಗೇ ಕೊಡಬಹುದಿತ್ತು. ಆದರೆ ಊರಿನವರಿಗೆ ಅವಕಾಶ ಕೊಡದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುಳ್ಳು ವರದಿಗಳನ್ನು ನೀಡಿ ಮೂವರಿಗೆ ಇಲ್ಲಿ ಮರಳು ತೆಗೆಯಲು ಅಧಿಕೃತವಾಗಿ ಪರ್ಮಿಷನ್ ನೀಡಿದೆ. ಕುಶಾಲ್ ಕುಮಾರ್ ಎಂಬ ವ್ಯಕ್ತಿಗೆ, ಅರ್ಜುನ್ ನಾಯ್ರಿ ಹಾಗೂ ನಿತಿನ್ ರೈ ಎಂಬವರಿಗೂ ಮತ್ತೊಬ್ಬರ ಹೆಸರು ಇನ್ನಷ್ಟೇ ಗೊತ್ತಾಗಬೇಕು. ಒಟ್ಟಿನಲ್ಲಿ ಮೂರು ಟೀಮಿಗೆ ಇಲ್ಲಿ ಮರಳು ತೆಗೆಯಲು ಪರ್ಮಿಷನ್ ನೀಡಿದೆ. ಎರಡು ತಂಡವು ಈಗ ಇಲ್ಲಿ ಪೊಲೀಸ್ ರಚನೆಯೊಂದಿಗೆ ಮರಳು ತೆಗೆಯುವ ಕೆಲಸವನ್ನು ಪ್ರಾರಂಭಿಸಿದೆ.  ಇಲ್ಲಿನ

ಈ ನದಿಯ ಅಳತೆ 1400 ಮೀಟರ್ ಇದೆ. ಹಾಗೆಯೇ ಇಲ್ಲಿ ವೆಂಟೆಡ್ ಡ್ಯಾಮ್ ಕೂಡ ಇದೆ. ಡ್ಯಾಮಿನಿಂದ 250 m ಬಿಟ್ಟು ಮರಳು ತೆಗೆಯಬೇಕು ಎಂಬ ನಿಯಮವಿದೆ. ಅಂದರೆ 1150 ಮೀಟರ್ ಆಯಿತು. ಈ ಸಾವಿರದ 1150 ಮೀಟರ್ ನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು, ಬರೋಬ್ಬರಿ ಒಂದುವರೆ ಲಕ್ಷ ಟನ್ ಮರಳು ತೆಗೆಯಲು ಪರ್ಮಿಷನ್ ನೀಡುತ್ತದೆ, ಇಷ್ಟು ಮರಳು ಅಲ್ಲಿ ತೆಗೆಯಲು ಸಾಧ್ಯವಾ? ಅಷ್ಟು ಮರಳು ತೆಗೆಯಬೇಕು ಎಂದರೆ ನದಿಯ ಆಳ ಎಷ್ಟು ಹೆಚ್ಚಾಗಬಹುದು ಎಂದು ನೀವೇ ಊಹಿಸಿ.

ಎಂಐಟಿಯ ಪ್ರೊಫೆಸರ್ ಉದಯ ನಾಯಕ್ ಈ ವಿಚಾರದಲ್ಲಿ ತಜ್ಞರಾಗಿದ್ದಾರೆ. ಅವರನ್ನು ಹೊರ ರಾಜ್ಯದವರು ಕರೆಸಿ ಅವರಿಂದ ರಿಪೋರ್ಟ್ ಪಡೆದುಕೊಳ್ಳುತ್ತಾರೆ. ಅಂತಹ ಉದಯ್ ನಾಯಕ್ ಅವರನ್ನು ಸ್ವತಹ ಊರಿನವರು ಕರೆಯಿಸಿ ಇಲ್ಲಿ ಮರಳು ತೆಗೆದರೆ ಏನು ಸಮಸ್ಯೆ ಹಾಗೂ ಎಷ್ಟು ಮರಳನ್ನು ತೆಗೆಯಬಹುದು ಅನ್ನೋದನ್ನ ವೈಜ್ಞಾನಿಕವಾಗಿಯೇ ರಿಪೋರ್ಟ್ ಮಾಡಿಸಿದ್ದಾರೆ. ಅವರು ಕೊಟ್ಟ ರಿಪೋರ್ಟ್ ಹೇಳುತ್ತದೆ, ಇಲ್ಲಿ ಏನೇ ತಿಪ್ಪರ್ಲಾಗ ಹಾಕಿದರು 10000 ಮೆಟ್ರಿಕ್ ಟನ್ ಗಿಂತಲೂ ಜಾಸ್ತಿ , ಮರಳನ್ನು ತೆಗೆಯುವಂತಿಲ್ಲ. ಅದು ಪರಿಸರಕ್ಕೆ ಮಾರಕವಾಗುತ್ತದೆ ಎಂಬ ಸ್ಪಷ್ಟ ರಿಪೋರ್ಟನ್ನು ಉದಯ್ ಕುಮಾರ್ ನಾಯಕ್ ನೀಡಿದ್ದರು. ಆ ರಿಪೋರ್ಟನ್ನು ಜಿಲ್ಲಾಡಳಿತದ ಗಮನಕ್ಕೆ ತಂದರೆ, ಸ್ವತಹ ಜಿಲ್ಲಾಧಿಕಾರಿಯವರೇ ಅದನ್ನು ನಿರ್ಲಕ್ಷಿಸಿದ್ದಾರೆಂಬ ಆರೋಪವಿದೆ. ಆ ರಿಪೋರ್ಟ್ ಮಾಡಿದ ಪ್ರೊಫೆಸರ್ ನಿವೃತ್ತರು, ಅವರ ರಿಪೋರ್ಟಗೆ ಬೆಲೆ ಇಲ್ಲ ನಮ್ಮ ಇಲಾಖೆಯು ಅಧಿಕೃತ ರಿಪೋರ್ಟ್ ತರಿಸಿಕೊಂಡೆ ಇಲ್ಲಿ ನಿಯಮಾನುಸಾರ ಮರಳು ತೆಗೆಯಲು ಪರ್ಮಿಷನ್ ನೀಡಿದೆ ಅಂತ ಹೇಳುವ ಮೂಲಕ ಊರಿನ ಜನರ ವಿರುದ್ಧವಾಗಿ ಜಿಲ್ಲಾಧಿಕಾರಿ ನಿಲ್ಲುತ್ತಾರೆ. ಇದು ಅಕ್ಷಮ್ಯ ಎಂಬ ಮಾತನ್ನು ಹೋರಾಟಗಾರರು ಆಕ್ರೋಶದಿಂದ ನುಡಿಯುತ್ತಿದ್ದಾರೆ.

ಗಣಿ ಮತ್ತು ಭೂವಿಜ್ಞಾನಿ ಇಲಾಖೆಯು ಇಲ್ಲಿ ಪ್ರಥಮ ಬಾರಿಗೆ ಪರ್ಮಿಷನ್ ಇಡುವಾಗ ದಾಖಲಿಸಿದ ಸರ್ವೇ ನಂಬರ್ ಬೇರೆ. ಆ ಸರ್ವೇ ನಂಬರ್ ವಿಚಾರವಾಗಿ ಮತ್ತು ಅದನ್ನೇ ಇಟ್ಟುಕೊಂಡು ನ್ಯಾಯಾಂಗತ ಹೋರಾಟಕ್ಕೆ ಇಳಿದಾಗ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯು ಆ ಸರ್ವೇ ನಂಬರ್ ಅನ್ನು ಬದಲಾಯಿಸುತ್ತದೆ ಮೊದಲಿಗೆ ಸರ್ವೆ ನಂಬರ್ 90 ಎಂದು ನಮೂದಿಸಿತ್ತು ಆನಂತರ ಆ ಸರ್ವೇ ನಂಬರ್ 111 -140ಆಗಿ ಬದಲಾಗುತ್ತದೆ. ಇಲ್ಲಿಯೇ ತಿಳಿಯುತ್ತದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಷ್ಟು ಚಂದದಲ್ಲೇ ಕೆಲಸ ಮಾಡಿದೆ ಅನ್ನೋದು. ಆದರೂ ಜಿಲ್ಲಾಡಳಿತ ಅಂದರೆ ಜಿಲ್ಲಾಧಿಕಾರಿಗಳು ಜನರ ವಿರುದ್ಧವೇ ನಿಲ್ಲುತ್ತಾರೆ.

ಇಲ್ಲಿನ ಯುವಕರು, ಯುವತಿಯರು, ಮಹಿಳೆಯರು ಪುರುಷರು ಹಾಗೂ ಸೀನಿಯರ್ ಸಿಟಿಜನ್ಗಳು ಸಹಿತ ಇಡೀ ಊರಿಗೆ ಊರು ಒಂದಾಗಿ ಹೋರಾಟವನ್ನು ಜಿಲ್ಲಾ ಕೇಂದ್ರವಾದ ಉಡುಪಿ ನಗರಕ್ಕೆ ಶಿಫ್ಟ್ ಮಾಡಿದ್ದಾರೆ ಈಗ.

ಇಷ್ಟಾದರೂ, ಸ್ಥಳೀಯ ಶಾಸಕರು ಆರಾಮವಾಗಿ ಮಾಫಿಯಾದ ಜೊತೆ ಕೈಜೋಡಿಸಿದವರಂತೆ ಊರಿನವರ ಹೋರಾಟದ ಬಗ್ಗೆ ಏನೂ ತಿಳಿಯದವರಂತೆ ತಟಸ್ಥರಾಗಿ ಕುಳಿತಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಬಡ ಜನರ ಪರವಾಗಿ ನಿಲ್ಲುತ್ತಾರೆಂದುಕೊಂಡರೆ ಅವರೂ ಸಹ ಇಲ್ಲಿಗಲ್ ವ್ಯವಹಾರದ ಜೊತೆಗೆ ಕೈಜೋಡಿಸಿದವರಂತೆ, ಊರಿನವರ ಹೋರಾಟ ದಿಂದ ದೂರ ಉಳಿದಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಈ ಹೋರಾಟದ ಜೊತೆಗೆ ಇದ್ದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಮರಕಲ  ಸಹ ಬದಲಾಗಿದ್ದಾರೆ ಈಗ.  ಮರಳು ಮಾಫಿಯಾ ತನ್ನ ಪರವಾಗಿ ನಿಲ್ಲುವ ಹಾಗೆ ಬದಲಾಯಿಸಿಕೊಂಡಿದೆ. ಇದ್ಯಾವುದಕ್ಕೂ ಜಗ್ಗದ ಊರಿನ ಜನರು ಮಾತ್ರ ಹೋರಾಟವನ್ನು ಮುಂದುವರೆಸಿದ್ದಾರೆ. ಈ ಹೋರಾಟವನ್ನು ನ್ಯಾಯಾಲಯ ಹಾಗೂ ರಾಜಧಾನಿ ಬೆಂಗಳೂರಿನವರೆಗೂ ಕೊಂಡೊಯ್ಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಒಂದು ಕಡೆಯಿಂದ ಗಣಿ ಮತ್ತು ಭೂವಿಜ್ಞಾನಿ ಇಲಾಖೆಯ ಅಧಿಕಾರಿಗಳ ಮೇಲೆ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಎಷ್ಟು ಸಾಧ್ಯವೊ ಅಷ್ಟು ಕಠಿಣವಾಗಿ ದೂರು ದಾಖಲಿಸುವುದರ ಬಗ್ಗೆಯೂ ಹೋರಾಟಗಾರರು ಚಿಂತನೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ.

ಈಗ ನೊಂದ ಗ್ರಾಮಸ್ಥರು ಹಾಗೂ ತಿಂದು ಕೊಬ್ಬಿರುವ ಜಿಲ್ಲಾಡಳಿತ ಇವೆರಡರ ಮಧ್ಯೆ ಗೆಲ್ಲುವವರು ಯಾರು ಎಂಬ ವಿಚಾರದ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.ಅನವಶ್ಯಕವಾದಂತಹ ಚರ್ಚೆಯಿದು. ಇಂತಹ ಚರ್ಚೆಯ ಬದಲು, ಹೋರಾಟಗಾರರ ಜೊತೆಗೆ ಕೈಜೋಡಿಸುವುದು ಅಥವಾ ಅವರರಿಗೆ  ನೈತಿಕ ಬೆಂಬಲವನ್ನು ಕೊಡುವುದು ಬಿಟ್ಟು ದೂರನಿಂತು, ಈ ರೀತಿಯ ಚರ್ಚೆಯ ಮೂಲಕ ಸಮಯ ವ್ಯರ್ಥ ಮಾಡುತ್ತಿರುವುದು ಕಂಡು ಬರುತ್ತಿದೆ. ಅದೇನೇ ಇರಲಿ, ಇಲ್ಲಿನ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಲವು ಸಮಯಗಳಿಂದ ಇಲ್ಲಿಗಲ್ ವ್ಯವಹಾರಕ್ಕೆ ಕಣ್ಣು ಮುಚ್ಚಿಕೊಂಡು ಕೂತು ಸಪೋರ್ಟ್ ಮಾಡುತ್ತಿದ್ದಾರೆ ಎಂಬ ಆರೋಪವು ಇದ್ದೇ ಇದೆ. ಜಿಲ್ಲೆಯ ತುಂಬ, ಅಕ್ರಮ ಕಲ್ಲು ಕುಾರೆ, ಮರಳುಗಾರಿಕೆ ಹಾಗೂ ಮಣ್ಣು ಸಾಗಾಟ ಯಥೇಚ್ಛವಾಗಿ ನಡೆಯುತ್ತಿದೆ ಎಂಬ ಆರೋಪವಿದ್ದರೂ ಇಲಾಖೆಯ ಅಧಿಕಾರಿಗಳು ಕೇವಲ ವಸೂಲಿಗೆ ಸೀಮಿತಗೊಂಡಿದ್ದಾರೆ ಎಂಬ ಆರೋಪವಿದೆ. ಒಂದೊಮ್ಮೆ ಅದು ಸುಳ್ಳು ಅಂತಾದರೆ, ಇಲ್ಲಿಯವರೆಗೆ ಅಕ್ರಮ ಗಣಿಗಾರಿಕೆಯ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಎಷ್ಟು ರೈಡ್ ಮಾಡಿದ್ದಾರೆ? ಎಷ್ಟು ಪ್ರಕರಣ ದಾಖಲಿಸಿದ್ದಾರೆ? ಆ ಪ್ರಕರಣವು ಯಾವ ಹಂತದಲ್ಲಿದೆ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಿ ಎಂಬ ಚಾಲೆಂಜ್ ನ್ನು ಸ್ಥಳೀಯ ಸಾಮಾಜಿಕ ಹೋರಾಟಗಾರರೊಬ್ಬರು ಮಾಡುತ್ತಿದ್ದಾರೆ. ಅದರ ಅರ್ಥ, ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಜಿಲ್ಲೆಯ ಪರಿಸರಕ್ಕೆ ಮಾರಕವಾಗುತ್ತಿದೆ ಅಂತರ್ಥ ತಾನೇ?

COMMENTS

Login with Gmail to comment

ಇನ್ನಷ್ಟು ಸುದ್ದಿ

“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ಬ್ರೇಕಿಂಗ್ ನ್ಯೂಸ್
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
“ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
“ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
ಅಜಿತ್ ಅಗರ್ಕರ್ ಗೆ ಜಾಕ್ಪಾಟ್
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಡಾನ್ -3 ಸಿನಿಮಾ ಕಥೆ ಗೋವಿಂದ….!
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ