📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio

    13 ವರ್ಷಗಳ ನಿರೀಕ್ಷೆಯ ಬಳಿಕ… ಮಗನ ನೋವನ್ನು ಮುಗಿಸಲು ತಾಯಿಯ ಪ್ರಾರ್ಥನೆ: ದೇವರಲ್ಲಿ ನಮ್ಮೆಲ್ಲರ ಎಲ್ಲರ ಪ್ರಾರ್ಥನೆಯೂ ಒಂದೇ  —ಈ ನೋವಿನ ಬದುಕಿನಿಂದ ಹರೀಶ್ ಅವರಿಗೆ ಶಾಂತಿ ದೊರಕಲಿ…ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೊರಕಲಿ. 

    ಕೆಲವು ಘಟನೆಗಳು ಸುದ್ದಿ ಮಾತ್ರವಾಗುವುದಿಲ್ಲ… ಅವು ಮಾನವ ಹೃದಯವನ್ನು ನಡುಗಿಸುವ ನಿಜ ಜೀವನದ ಪ್ರಶ್ನೆಗಳಾಗುತ್ತವೆ. ಮುಂದೆ ಓದಿ….

    ಮಗನ ಭವಿಷ್ಯಕ್ಕಾಗಿ ಕನಸು ಕಂಡ ಒಂದು ಕುಟುಂಬದ ಜೀವನದಲ್ಲಿ ನಡೆದ ಘಟನೆ ಇಂದು ದೇಶದ ಮನಸ್ಸನ್ನು ತಟ್ಟುತ್ತಿದೆ.

    ಹೆತ್ತವರೊಂದಿಗೆ ಕೊನೆ ಕ್ಷಣಗಳು

    ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್ ಆಗುವ ಕನಸು ಹೊತ್ತಿದ್ದ ಹರೀಶ್ ರಾಣಾ. ಕುಟುಂಬದ ಹೆಮ್ಮೆ, ತಾಯ್ತಂದೆಯ ಆಶೆ, ಸಹೋದರಿಯ ಆತ್ಮೀಯತೆ — ಎಲ್ಲವೂ ಅವನಲ್ಲೇ ನೆಲೆಸಿದ್ದವು. ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ಜೀವನವು 2013ರ ಆಗಸ್ಟ್ ತಿಂಗಳಲ್ಲಿ, ರಕ್ಷಾಬಂಧನ್ ದಿನದಂದು ಒಂದು ಕ್ಷಣದಲ್ಲಿ ಸಂಪೂರ್ಣವಾಗಿ ಬದಲಾಗಿತು.

    ಆ ದಿನ ಅವನು ತನ್ನ ಸಹೋದರಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಅಕ್ಕನ ಜೊತೆಗಿನ ಆ ಪ್ರೀತಿಯ ಮಾತುಕತೆ ಅವನ ಜೀವನದ ಕೊನೆಯ ಜಾಗೃತ ಕ್ಷಣವಾಗಿಬಿಡುತ್ತದೆ ಎಂದು ಯಾರಿಗೂ ಊಹಿಸಲೂ ಸಾಧ್ಯವಾಗಿರಲಿಲ್ಲ. ಮಾತುಕತೆ ನಡೆಯುತ್ತಿದ್ದಾಗಲೇ ಅವನು ಪಿಜಿ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದನು.

    ಆ ಕ್ಷಣದಿಂದ ಹರೀಶ್ ಮತ್ತೆ ಎದ್ದೇ ಇಲ್ಲ.

    ಅವನ ದೇಹ ಬದುಕಿತ್ತು… ಆದರೆ ಅವನ ಜಗತ್ತು ನಿಶ್ಚಲವಾಗಿತ್ತು. ವೈದ್ಯಕೀಯ ಪೋಷಣೆಯ ನೆರವಿನಿಂದ ಜೀವ ಸಾಗುತ್ತಿತ್ತು. ಆದರೆ ವೈದ್ಯರು ನೀಡಿದ ಆಶೆಯ ಬೆಳಕು ವರ್ಷಗಳಿಂದ ಕಾಣಿಸಲೇ ಇಲ್ಲ. ದಿನಗಳು ತಿಂಗಳುಗಳಾದವು, ತಿಂಗಳುಗಳು ವರ್ಷಗಳಾದವು… ಹೀಗೆ 13 ವರ್ಷಗಳು ಕಳೆಯಿತು.

    ಈ ಅವಧಿಯಲ್ಲಿ ತಾಯ್ತಂದೆಗಳು ಮಗನನ್ನು ಒಮ್ಮೆಯಾದರೂ ಕಣ್ಣು ತೆರೆದು ನೋಡಬಹುದು ಎಂಬ ಆಶೆಯನ್ನು ಬಿಟ್ಟಿರಲಿಲ್ಲ. ಮಗನ ಕೈ ಹಿಡಿದು ಕಾದು ಕುಳಿತರು. ಪ್ರತಿದಿನವೂ ದೇವರ ಬಳಿ ಒಂದೇ ಪ್ರಾರ್ಥನೆ — “ನಮ್ಮ ಮಗ ಮತ್ತೆ ಎದ್ದುಕೊಳ್ಳಲಿ”.

    ಆದರೆ ಕಾಲ ಕಠಿಣವಾಗಿತ್ತು.

    ಒಂದು ದಿನ ಆ ಪ್ರಾರ್ಥನೆ ಬದಲಾಗಿತು.

    “ಓ ದೇವರೆ… ನನ್ನ ಮಗನಿಗೆ ದೀರ್ಘಾಯುಷ್ಯ ಬೇಡ… ಈ ನೋವಿನ ಬದುಕಿನಿಂದ ಅವನನ್ನು ಮುಕ್ತಗೊಳಿಸು.”

    ತಾಯಿಯ ಬಾಯಿಂದ ಹೊರಬಂದ ಈ ಮಾತುಗಳು ಎಷ್ಟು ನೋವಿನಿಂದ ಹುಟ್ಟಿದವು ಎಂಬುದನ್ನು ಊಹಿಸುವುದೇ ಕಷ್ಟ. ತನ್ನ ಹೃದಯದ ತುಂಡಿಗಾಗಿ ಮರಣವನ್ನು ಕೇಳುವುದು — ಅದು ಯಾವುದೇ ತಾಯಿಗೆ ಅತಿ ದೊಡ್ಡ ಪರೀಕ್ಷೆ.

    ಹರೀಶ್ ಈಗ 32 ವರ್ಷ. 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ ಅವನ ಜೀವನದ ಬಗ್ಗೆ ಕೊನೆಗೂ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ತಾಯ್ತಂದೆಯ ಮನವಿ ಆಧರಿಸಿ, ನ್ಯಾಯಾಲಯವು ಪ್ಯಾಸಿವ್ ಯೂಥನೇಷಿಯಾ (Passive Euthanasia) ಗೆ ಅನುಮತಿ ನೀಡಿತು.

    ಈ ತೀರ್ಪು ಕೇವಲ ಕಾನೂನು ನಿರ್ಧಾರವಲ್ಲ… ಅದು ಒಂದು ಕುಟುಂಬದ ನೋವಿನ ಗುರುತಿಸುವಿಕೆ.

    ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತು — ಹರೀಶ್‌ನ ತಾಯ್ತಂದೆಗಳು ತಮ್ಮ ಮಗನನ್ನು ಎಂದಿಗೂ ಬಿಟ್ಟುಹೋಗಲಿಲ್ಲ. ಪ್ರೀತಿಯ ಅರ್ಥ ಸುಖದ ಸಮಯದಲ್ಲಿ ಮಾತ್ರ ಅಲ್ಲ, ಅತ್ಯಂತ ಕಠಿಣ ಕ್ಷಣಗಳಲ್ಲಿ ಸಹ ಆರೈಕೆ ಮಾಡುವುದು.

    13 ವರ್ಷಗಳ ಕಾಲ ಅವರು ಮಗನ ಬಳಿಯೇ ನಿಂತಿದ್ದರು.

    ತಾಯ್ತಂದೆಗಳು ಕಣ್ಣೀರಿನಿಂದ ಕೇಳಿದರು — “ಯಾವ ತಾಯ್ತಂದೆ ತಮ್ಮ ಮಗನಿಗಾಗಿ ಇದನ್ನು ಬಯಸುತ್ತಾರೆ?”

    ಆದರೆ ಪ್ರತಿದಿನ ಮಗನ ನೋವನ್ನು ನೋಡುವುದು ಅವರಿಗೆ ಇನ್ನೂ ಕಠಿಣವಾಗಿತ್ತು.

    ಈ ಕುಟುಂಬವು ಆಧ್ಯಾತ್ಮಿಕ ಸಂಸ್ಥೆ ಬ್ರಹ್ಮಕುಮಾರಿಗಳೊಂದಿಗೆ ಸಂಬಂಧ ಹೊಂದಿದೆ. ಇಂದು ಬ್ರಹ್ಮಕುಮಾರಿ ಶಿಕ್ಷಕಿ ಲವ್ಲಿ ದೀದಿ ಹರೀಶ್ ಅವರ ಮನೆಗೆ ಭೇಟಿ ನೀಡಿ, ಅವರನ್ನು ಏಮ್ಸ್ ಆಸ್ಪತ್ರೆಗೆ ಕಳುಹಿಸುವ ಸಂದರ್ಭದಲ್ಲಿ ಆತ್ಮೀಯವಾಗಿ ಬೀಳ್ಕೊಟ್ಟರು.

    ಆ ಕ್ಷಣ ಮನೆ ತುಂಬಾ ನಿಶ್ಶಬ್ದವಾಗಿತ್ತು.

    ತಾಯಿ ಮಗನ ಕೈ ಹಿಡಿದಿದ್ದಳು. ತಂದೆಯ ಕಣ್ಣುಗಳಲ್ಲಿ ಮಾತಿಲ್ಲದ ನೋವು. ಮನೆಯ ಪ್ರತಿಯೊಂದು ಗೋಡೆಯೂ ಈ ಕುಟುಂಬದ 13 ವರ್ಷಗಳ ಹೋರಾಟಕ್ಕೆ ಸಾಕ್ಷಿಯಾಗಿತ್ತು.

    ಒಂದು ಕುಟುಂಬದ ಕನಸುಗಳು… ಒಂದು ಅಕ್ಕನ ರಕ್ಷಾಬಂಧನ್ ಮಾತುಗಳು… ಒಂದು ತಾಯಿಯ ಪ್ರಾರ್ಥನೆ… ಮತ್ತು 13 ವರ್ಷಗಳ ನಿರೀಕ್ಷೆ.

    ಹರೀಶ್ ರಾಣಾ ಕಥೆ ಕೇವಲ ಒಂದು ಘಟನೆ ಅಲ್ಲ. ಅದು ಪ್ರೀತಿ, ಸಹನೆ, ನೋವು ಮತ್ತು ತಾಯ್ತಂದೆಯ ಅಸಾಧಾರಣ ತ್ಯಾಗದ ಕಥೆ.

    #Godsblessing#Ishwari brahmakumaris#judgement#miracle#peace#soul#supreme court

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಬೈಕಂಪಾಡಿಯಲ್ಲಿ ನಡುರಾತ್ರಿ ನಡೆದ ಸಿನೆಮಾ ಸ್ಟೈಲ್ ದರೋಡೆ: ಕೇರಳ ಉದ್ಯಮಿ ಕುಟುಂಬಕ್ಕೆ ಗನ್ ಪಾಯಿಂಟ್ ಶಾಕ್!
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
    ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
    ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    “ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
    ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ, ಯಂಗ್ ಜಡ್ಜ್ ಆತ್ಮಹತ್ಯೆ
    ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
    ಹೀಟ್ ಸ್ಟ್ರೋಕ್ ಗಂಭೀರ – ನಿರ್ಲಕ್ಷ್ಯ ಬೇಡ …ತಲೆ ಸುತ್ತಿದ್ರೆ ತಕ್ಷಣ ನೆರವು ಪಡೆಯಿರಿ.
    ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಮನೆಗೆ ಡಿ.ಕೆ. ಶಿವಕುಮಾರ್ ಸರ್ಪ್ರೈಸ್ ವಿಸಿಟ್!
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ನಕಲಿ ಔಷಧ ದಂಧೆ: ಜೀವ ಉಳಿಸಬೇಕಾದ ಔಷಧವೇ ಹಣ ಮಾಡುವ ದಂಧೆಯಾಯಿತೇ?
    ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
    ವಂದೇ ಮಾತರಂ ವಿವಾದ ದೇಶಭಕ್ತಿಯ ಸಂಕೇತವೇ, ರಾಜಕೀಯ ಅಸ್ತ್ರವೇ?
    🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    ಬಂಟ್ವಾಳ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ!ಸಂಜೆ ಜನಸಂದಣಿಯಲ್ಲೇ ರಕ್ತದೋಕುಳಿ..ಬಸ್‌ಗಾಗಿ ಕಾಯುತ್ತಿದ್ದ ಯುವತಿ ಮೇಲೆ ಮಾರಕ ದಾಳಿ ಕೊಚ್ಚಿ ಕೊಲೆ..!
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ