📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ

    ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿ ಜಾಹೀರಾತು ನಂಬಿ ಆನ್‌ಲೈನ್ ಮೂಲಕ ಹಂತಹಂತವಾಗಿ 1,85,636 ರೂ. ಕಳೆದುಕೊಂಡು ಮೋಸಹೋದ ಘಟನೆ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ವಂಚಕರು “ತೆರಿಗೆ”, “ಪ್ರೋಸೆಸಿಂಗ್ ಫೀ” ಎಂದು ವಿವಿಧ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಿದ್ದಾರೆ.

    ವಂಚನೆಗಳಿಗಾದವರು ದಿನಾಂಕ 29-05-2026 ರಂದು ಬೆಳಿಗ್ಗೆ ಮನೆಯಲ್ಲಿ ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದಾಗ ಕೇರಳ ಲಾಟರಿ ಜಾಹೀರಾತು ಕಾಣಿಸಿದೆ. “50 ರೂ ಟಿಕೆಟ್, ಸಂಜೆ ಡ್ರಾ” ಎಂದು ಜಾಹೀರಾತಿನಲ್ಲಿದ್ದ ಲಿಂಕ್‌ನ ನಂಬರ್‌ಗೆ ಕರೆ ಮಾಡಿದ್ದಾರೆ.

    ಕರೆ ಸ್ವೀಕರಿಸಿದ “ನವೀನ್” ಹೆಸರಿನ ಅಪರಿಚಿತ ವ್ಯಕ್ತಿ, ಲಾಟರಿ ನಂಬರ್ ಕಳುಹಿಸಿ, 2 ನಂಬರ್ ಆಯ್ಕೆ ಮಾಡಿಸಿಕೊಂಡಿದ್ದಾನೆ. ನಂತರ ಸ್ಕ್ಯಾನರ್ ಕಳುಹಿಸಿ ಬೆಳಿಗ್ಗೆ 10:00 ಗಂಟೆಗೆ 100 ರೂ. GPay ಮಾಡಿಸಿಕೊಂಡಿದ್ದಾನೆ.

    ಸಂಜೆ 4:00 ಗಂಟೆಗೆ “1 ನಂಬರ್‌ಗೆ 12 ಲಕ್ಷ ಬಹುಮಾನ ಬಂದಿದೆ” ಎಂದು ನಂಬಿಸಿದ್ದಾನೆ. UIDAI ಕಾರ್ಡ್, ಬ್ಯಾಂಕ್ ಖಾತೆ, IFSC ಕೋಡ್ ಪಡೆದುಕೊಂಡಿದ್ದಾನೆ. “12 ಲಕ್ಷಕ್ಕೆ 1% ಫೀ 12,000 ರೂ” ಎಂದು “ದೀಪಕ್” ಹೆಸರಿನ GPay ನಂ 9729838069 ಗೆ ಪಾವತಿಸಿಕೊಂಡಿದ್ದಾನೆ.

    ದಿನಾಂಕ 30-05-2026 ರಂದು ಬೆಳಿಗ್ಗೆ 11:33 ಗಂಟೆಗೆ “24,981 ರೂ ತೆರಿಗೆ” ಎಂದು ಅದೇ ನಂಬರ್‌ಗೆ ಮತ್ತೆ GPay ಮಾಡಿಸಿಕೊಂಡಿದ್ದಾನೆ. ನಂತರ “58,760 ರೂ ತೆರಿಗೆ ಬಾಂಡ್” ಎಂದು “ರಾಜ್ ಕುಮಾರ್” ಹೆಸರಿನ GPay ನಂ 9523765412 ಗೆ ಹಣ ಹಾಕಿಸಿಕೊಂಡಿದ್ದಾನೆ.

    ಕೊನೆಗೆ “89,895 ರೂ ಕೊನೆಯ ತೆರಿಗೆ” ಎಂದು “ಚಿಯಸ್ ಬಯಿದಿ” ಹೆಸರಿನ Indian Overseas Bank ಖಾತೆ ನಂ 272201000005603 ಗೆ NEFT ಮಾಡಿಸಿಕೊಂಡಿದ್ದಾನೆ.

    ಒಟ್ಟು 1,85,636 ರೂ. ಕಳೆದುಕೊಂಡ ನಂತರ ಅನುಮಾನ ಬಂದ ಪಿರ್ಯಾದಿದಾರರು ಕೇರಳದ ತ್ರಿವೇಂಡ್ರಮ್‌ಗೆ ತೆರಳಿ “ಲಾಟರಿ ಆಫೀಸ್” ವಿಚಾರಿಸಿದ್ದಾರೆ. ಅದು ಫೇಕ್ ಆಫೀಸ್ ಎಂದು ಗೊತ್ತಾಗಿ ಮೋಸವಾಗಿದೆ ಎಂದು ಇದೀಗ ದೂರು ನೀಡಿದ್ದಾರೆ.

    ಪೊಲೀಸರ ಸೂಚನೆ

    ಯಾವುದೇ ಲಾಟರಿ ಬಹುಮಾನಕ್ಕೆ “ಪ್ರೋಸೆಸಿಂಗ್ ಫೀ, ತೆರಿಗೆ, ರಿಜಿಸ್ಟ್ರೇಷನ್ ಫೀ” ಎಂದು ಮುಂಗಡ ಹಣ ಕೇಳಿದರೆ ಅದು 100% ವಂಚನೆ ಎಂದೆ ತಿಳಿಯಬೇಕು

    ಫೋನ್/ವಾಟ್ಸಾಪ್‌ನಲ್ಲಿ UIDAI, ಬ್ಯಾಂಕ್ ಡಿಟೇಲ್ಸ್ ಯಾರಿಗೂ ಕಳುಹಿಸಬೇಡಿ. ಫೇಸ್‌ಬುಕ್/ಯೂಟ್ಯೂಬ್ ಜಾಹೀರಾತು ಲಿಂಕ್ ಕ್ಲಿಕ್ ಮಾಡಿ ಲಾಟರಿ ಆಡಬೇಡಿ. ಅನುಮಾನ ಬಂದ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.

    ಈ ಮೇಲಿನ ದೂರಿನ ಬಗ್ಗೆ  ಪ್ರಕರಣ ದಾಖಲಾಗಿದ್ದು, ಪೊಲೀಸರು ಮೊಬೈಲ್ ನಂ 9032823911, GPay ನಂ 9729838069, 9523765412 ಹಾಗೂ ಬ್ಯಾಂಕ್ ಖಾತೆ ವಿವರದ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

    ಲಾಟರಿ ಬಹುಮಾನ ಬಂದರೆ ಸರ್ಕಾರವೇ ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡುತ್ತದೆ. ಮುಂಗಡ ಹಣ ಕೇಳುವ ಯಾವುದೇ ಕರೆ, ಮೆಸೇಜ್ ನಂಬಬೇಡಿ ಎಂದು ಪೊಲೀಸರೇ ತಿಳಿಸಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    AIಗೆ ಒಂದು ಪ್ರಶ್ನೆ ಕೇಳಿದ್ರೆ…ಲಕ್ಷಾಂತರ ಲೀಟರ್ ನೀರು ಆವಿಯಾಗುತ್ತೆ…..!ಅದೇಗೆ.??AIಜಗತ್ತನ್ನು ಬದಲಾಯಿಸುತ್ತಿದೆ… ಆದರೆ ಶುದ್ಧ ನೀರಿನ ಜಲಮೂಲಗಳನ್ನು ಖಾಲಿ ಮಾಡುತ್ತಿದೆ.
    ಹುಡುಗಾಟಿಕೆ ಆಡುತ್ತಿರುವ ರಾಮಲಿಂಗಾರೆಡ್ಡಿ-ಕ್ಷೇತ್ರದ ಜನರಲ್ಲಿ ಅಸಮಾಧಾನ
    ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
    ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
    ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
    ಭಾರೀ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆಗಳಿಗೆ ರಜೆ!
    ಮುಂಬಯಿಯಲ್ಲಿ ಪಹಲ್ಗಾಮ್ ಮಾದರಿ ದಾಳಿ ಯತ್ನ: ಉಗ್ರ ಚಟುವಟಿಕೆ ಯತ್ನ ವಿಫಲ…!
    79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ,15 ವಿದ್ಯಾರ್ಥಿಗಳು ಸಜೀವ ದಹನ ಹೃದಯವಿದ್ರಾವಕ ದುರಂತ
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಪಶ್ಚಿಮ ಬಂಗಾಳದಲ್ಲಿ ಗುಂಡಾಗಿರಿ ಮುಂದುವರಿಕೆ
    ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
    ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ
    ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ? ದೆಹಲಿ–ಬೆಂಗಳೂರು ರಾಜಕೀಯ ಚಟುವಟಿಕೆ ಜೋರು, ಹೈಕಮಾಂಡ್ ನಿರ್ಧಾರದತ್ತ ರಾಜ್ಯದ ಚಿತ್ತ
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
    ಕಾಂಗ್ರೆಸ್–ಮುಸ್ಲಿಂ ಸಮುದಾಯ ಸಂಬಂಧದಲ್ಲಿ ದೊಡ್ಡ ಬಿರುಕು?