📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!

    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಲ್ಲಿ ತೆರೆದಿದೆ ಮಕ್ಕಳದೇ ನ್ಯೂಸ್‌ರೂಮ್!

    ಮಂಗಳೂರು: “ಸರ್ಕಾರಿ ಶಾಲೆ ಎಂದರೆ ಕೇವಲ ಪಠ್ಯಪುಸ್ತಕ, ಬ್ಲ್ಯಾಕ್‌ಬೋರ್ಡ್ ಮತ್ತು ಪರೀಕ್ಷೆ” ಎಂಬ ಹಳೆಯ ಕಲ್ಪನೆಗೆ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳ ಮಕ್ಕಳು ಹೊಸ ಉತ್ತರ ನೀಡುತ್ತಿದ್ದಾರೆ. ಬಡಗ ಎಕ್ಕಾರು ಶಾಲೆಯಲ್ಲಿ ವಿದ್ಯಾರ್ಥಿಗಳು ಕೇವಲ ಸುದ್ದಿಯನ್ನು ಓದುತ್ತಿಲ್ಲ… ಸುದ್ದಿಯನ್ನು ಹುಡುಕುತ್ತಿದ್ದಾರೆ, ಪರಿಶೀಲಿಸುತ್ತಿದ್ದಾರೆ, ಬರೆಯುತ್ತಿದ್ದಾರೆ ಮತ್ತು ಕ್ಯಾಮೆರಾ ಮುಂದೆ ಪ್ರಸ್ತುತಪಡಿಸುತ್ತಿದ್ದಾರೆ! 

    ಒಬ್ಬ ವಿದ್ಯಾರ್ಥಿ ವರದಿಗಾರ… ಮತ್ತೊಬ್ಬ ಸ್ಟುಡಿಯೋ ಆಂಕರ್!

    ಸಾಮಾನ್ಯವಾಗಿ ಶಾಲೆ ಎಂದರೆ ಪಾಠ, ಪುಸ್ತಕ, ಪರೀಕ್ಷೆ… ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಡಗ ಯೆಕ್ಕಾರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ವಾತಾವರಣವೇ ಒಂದು ಚಿಕ್ಕ ನ್ಯೂಸ್ ರೂಂ ಆಗಿ ಬದಲಾಗಿದೆ!

    ಇಲ್ಲಿ ವಿದ್ಯಾರ್ಥಿಗಳೇ ವರದಿಗಾರರು, ಆಂಕರ್‌ಗಳು, ಸ್ಕ್ರಿಪ್ಟ್ ರೈಟರ್‌ಗಳು ಮತ್ತು ಪ್ರೆಸೆಂಟರ್‌ಗಳು. ಯಾವುದೇ ದೊಡ್ಡ ಬಜೆಟ್ ಇಲ್ಲದೆ, ದುಬಾರಿ ಸ್ಟುಡಿಯೋ ಇಲ್ಲದೆ, ಉಚಿತ ತಂತ್ರಜ್ಞಾನ ಬಳಸಿಕೊಂಡು ಮಕ್ಕಳು ತಮ್ಮದೇ ಆದ ‘ನಮ್ಮ ಶಾಲಾ ವಾರ್ತೆ’ ಎಂಬ ನ್ಯೂಸ್ ಬುಲೆಟಿನ್ ನಡೆಸುತ್ತಿದ್ದಾರೆ.ಕಳೆದ ವರ್ಷ ಆರಂಭವಾದ ಈ ವಿಶಿಷ್ಟ ಪ್ರಯತ್ನದಲ್ಲಿ ಈಗಾಗಲೇ 11 ಸಂಚಿಕೆಗಳು ಮೂಡಿಬಂದಿವೆ. ಪ್ರತಿಯೊಂದು 8ರಿಂದ 10 ನಿಮಿಷಗಳ ಬುಲೆಟಿನ್‌ನಲ್ಲಿ ಸುಮಾರು 14 ಸುದ್ದಿಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ, ಸಿದ್ಧಪಡಿಸಿ, ನಿರೂಪಿಸುತ್ತಾರೆ. ವಿಶೇಷವೆಂದರೆ ಈ ಸುದ್ದಿಗಳು ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ತುಳು, ಕೊಂಕಣಿ ಮತ್ತು ಹಿಂದಿ ಭಾಷೆಗಳಲ್ಲಿಯೂ ಮೂಡಿಬರುತ್ತಿವೆ.

    ಶಾಲೆಯಲ್ಲೇ ಒಂದು ಸಣ್ಣ ‘ನ್ಯೂಸ್‌ರೂಮ್’ ವಾತಾವರಣ ಸೃಷ್ಟಿಸಿ, ಮಕ್ಕಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಕೆಲವರು ವರದಿಗಾರರು, ಕೆಲವರು ಆಂಕರ್‌ಗಳು, ಇನ್ನು ಕೆಲವರು ಸ್ಕ್ರಿಪ್ಟ್ ರೈಟರ್‌ಗಳುನ್ಯೂಸ್ ಪ್ರೆಸೆಂಟರ್‌ಗಳು ಹಾಗೂ ಕಾರ್ಯಕ್ರಮದ ಇತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಹೀಗೆ ತರಗತಿಯ ಕಲಿಕೆ ಇದೀಗ ಪುಸ್ತಕದ ಪುಟಗಳಿಂದ ಹೊರಬಂದು ನೈಜ ಜೀವನದ ಅನುಭವವಾಗಿ ಬದಲಾಗುತ್ತಿದೆ.

    ಒಂದು ಸುದ್ದಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಮಕ್ಕಳು ವಿಷಯವನ್ನು ಅರ್ಥಮಾಡಿಕೊಳ್ಳುವುದು, ಮಾಹಿತಿಯನ್ನು ಸಂಗ್ರಹಿಸುವುದು, ಮುಖ್ಯ ಅಂಶಗಳನ್ನು ಆಯ್ಕೆ ಮಾಡುವುದು, ಸ್ಕ್ರಿಪ್ಟ್ ಬರೆಯುವುದು ಮತ್ತು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಬಳಿಕ ಅದನ್ನು ಸುದ್ದಿ ಬುಲೆಟಿನ್ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ಸಂವಹನ ಕೌಶಲ್ಯ, ಸಾರ್ವಜನಿಕ ಭಾಷಣ, ಆತ್ಮವಿಶ್ವಾಸ ಮತ್ತು ತಂಡದ ಕೆಲಸ ಬೆಳೆಸಿಕೊಳ್ಳುತ್ತಿದ್ದಾರೆ.

    ಶಾಲೆಯ ಇಂಗ್ಲಿಷ್ ಶಿಕ್ಷಕ ಅನಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಯೋಜನೆಯ ಉದ್ದೇಶ ಕೇವಲ ಶಾಲೆಯ ಸುದ್ದಿಗಳನ್ನು ಹಂಚಿಕೊಳ್ಳುವುದಲ್ಲ. ಮಕ್ಕಳಲ್ಲಿ ಭಾಷಾ ಕೌಶಲ್ಯ, ಸ್ಪಷ್ಟ ಉಚ್ಚಾರಣೆ, ಆತ್ಮವಿಶ್ವಾಸ, ತಂಡದ ಕೆಲಸ ಮತ್ತು ಸಾರ್ವಜನಿಕವಾಗಿ ಮಾತನಾಡುವ ಸಾಮರ್ಥ್ಯ ಬೆಳೆಸುವುದು ಇದರ ಪ್ರಮುಖ ಗುರಿಯಾಗಿದೆ.

    9ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಶಾಲೆಯ ‘ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವೆ’ಯಾಗಿ ಸುದ್ದಿಗಳ ಸಂಗ್ರಹ ಮತ್ತು ಸಂಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ತಂಡವೇ ಸುದ್ದಿಗಳನ್ನು ಆಯ್ಕೆ ಮಾಡುತ್ತದೆ. ಶಿಕ್ಷಕರು ಸ್ಕ್ರಿಪ್ಟ್ ತಿದ್ದುಪಡಿ ಮಾಡಿ, ನಿರೂಪಣೆ ಮತ್ತು ಭಾಷಾ ಪ್ರಸ್ತುತಿಗೆ ಮಾರ್ಗದರ್ಶನ ನೀಡುತ್ತಾರೆ.

    ಒಂದು ಸಂಚಿಕೆ ಸಿದ್ಧಪಡಿಸಲು ಸುಮಾರು 13.5 ಗಂಟೆಗಳಷ್ಟು ಚಿತ್ರೀಕರಣ ಮತ್ತು ಎಡಿಟಿಂಗ್ ಕೆಲಸ ನಡೆಯುತ್ತದೆ. ವಿಶೇಷವಾಗಿ ಇಂಗ್ಲಿಷ್ ಬುಲೆಟಿನ್‌ಗಳಿಗೆ ಉಚ್ಚಾರಣೆ ಮತ್ತು ಪ್ರಸ್ತುತಿಯಲ್ಲಿ ಹೆಚ್ಚಿನ ಅಭ್ಯಾಸ ಬೇಕಾಗುತ್ತದೆ. ಆದರೂ ಮಕ್ಕಳು ಹಿಂದೆ ಸರಿಯುವುದಿಲ್ಲ—ಪ್ರತಿ ಸಂಚಿಕೆಯೊಂದಿಗೆ ಹೊಸ ಕೌಶಲ್ಯ ಕಲಿಯುತ್ತಿದ್ದಾರೆ.

    ಇದು ಕೇವಲ “ಮಕ್ಕಳು ನ್ಯೂಸ್ ಓದಿದರು” ಎಂಬ ಕಾರ್ಯಕ್ರಮವಲ್ಲ. ಸುದ್ದಿ ಹೇಗೆ ರೂಪುಗೊಳ್ಳುತ್ತದೆ? ಮಾಹಿತಿಯನ್ನು ಹೇಗೆ ಪರಿಶೀಲಿಸಬೇಕು? ಯಾವುದು ಸತ್ಯ, ಯಾವುದು ವದಂತಿ? ಒಂದು ವಿಷಯವನ್ನು ಜನರಿಗೆ ಹೇಗೆ ಸ್ಪಷ್ಟವಾಗಿ ತಲುಪಿಸಬೇಕು?ಎಂಬ ಮಾಧ್ಯಮ ಸಾಕ್ಷರತೆಯ ಮೂಲಭೂತ ಪಾಠಗಳನ್ನೂ ಈ ಪ್ರಯೋಗ ಮಕ್ಕಳಿಗೆ ಕಲಿಸುತ್ತಿದೆ.

    ಪಾಠದ ಜೊತೆ ಜೀವನ ಕೌಶಲ್ಯಗಳೂ!

    ಇಂದಿನ ಮಕ್ಕಳಿಗೆ ಕೇವಲ ಅಂಕಗಳು ಸಾಕಾಗುವುದಿಲ್ಲ. ಸ್ಪಷ್ಟವಾಗಿ ಮಾತನಾಡುವುದು, ಪ್ರಶ್ನೆ ಕೇಳುವುದು, ಮಾಹಿತಿ ಹುಡುಕುವುದು, ತಂಡದೊಂದಿಗೆ ಕೆಲಸ ಮಾಡುವುದು ಮತ್ತು ಪ್ರೇಕ್ಷಕರ ಮುಂದೆ ಆತ್ಮವಿಶ್ವಾಸದಿಂದ ನಿಲ್ಲುವುದು—ಇವೆಲ್ಲವೂ ಭವಿಷ್ಯದ ಪ್ರಮುಖ ಕೌಶಲ್ಯಗಳಾಗಿವೆ.

    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳ ಈ ಪ್ರಯೋಗವು ಮಕ್ಕಳಲ್ಲಿ ಇದೇ ಕೌಶಲ್ಯಗಳನ್ನು ಬೆಳೆಸುವತ್ತ ಗಮನ ಹರಿಸುತ್ತಿದೆ. ಇಂದು ಮೈಕ್ ಹಿಡಿದು ಶಾಲೆಯ ಸುದ್ದಿಯನ್ನು ಹೇಳುತ್ತಿರುವ ಮಗು, ನಾಳೆ ಪತ್ರಕರ್ತನಾಗಬಹುದು; ಇಂದು ಕ್ಯಾಮೆರಾ ಮುಂದೆ ನಿಂತಿರುವ ವಿದ್ಯಾರ್ಥಿ, ನಾಳೆ ಆಂಕರ್, ಸಂಶೋಧಕ, ಶಿಕ್ಷಕ ಅಥವಾ ಯಾವುದೇ ಕ್ಷೇತ್ರದ ಉತ್ತಮ ಸಂವಹನಕಾರನಾಗಬಹುದು….!

    “ಶಾಲೆಯ ಸುದ್ದಿ ಪೋಷಕರಿಗೆ ತಲುಪಬೇಕು… ಜೊತೆಗೆ ಮಕ್ಕಳು ಸುದ್ದಿ ಹೇಗೆ ಸಂಗ್ರಹಿಸಬೇಕು, ಬರೆಯಬೇಕು ಮತ್ತು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಬೇಕು ಎಂಬುದನ್ನೂ ಕಲಿಯಬೇಕು” ಎಂಬ ಉದ್ದೇಶದೊಂದಿಗೆ ಆರಂಭವಾದ ಈ ಪ್ರಯತ್ನ ಇದೀಗ ಶಾಲೆಯ ಹೆಮ್ಮೆಯಾಗಿ ಬೆಳೆದಿದೆ.

    ಈ ವಿನೂತನ ಪ್ರಯೋಗಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಶಾಲೆಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯ ಪರಿಣಾಮವಾಗಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.

    ಬಜೆಟ್ ಇಲ್ಲ… ದೊಡ್ಡ ಸ್ಟುಡಿಯೋ ಇಲ್ಲ… ಆದರೆ ಕನಸು ದೊಡ್ಡದು!
    ಬಡಗ ಯೆಕ್ಕಾರು ಸರ್ಕಾರಿ ಶಾಲೆಯ ಮಕ್ಕಳು ತೋರಿಸಿಕೊಟ್ಟಿರುವುದು ಒಂದೇ—ಸೌಲಭ್ಯಗಳ ಕೊರತೆ ಪ್ರತಿಭೆಗೆ ಅಡ್ಡಿಯಾಗುವುದಿಲ್ಲ; ಅವಕಾಶ ಸಿಕ್ಕರೆ ಸರ್ಕಾರಿ ಶಾಲೆಯ ಮಕ್ಕಳೂ ಮಾಧ್ಯಮ ಲೋಕದ ಭವಿಷ್ಯದ ತಾರೆಗಳಾಗಬಹುದು!

    ಸರ್ಕಾರಿ ಶಾಲೆಗಳಿಗೆ ಹೊಸ ಗುರುತು!ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು ಶಿಕ್ಷಣದಲ್ಲಿ ಹೊಸ ಪ್ರಯೋಗಗಳು ಮತ್ತು ಉತ್ತಮ ಫಲಿತಾಂಶಗಳ ಮೂಲಕ ಗಮನ ಸೆಳೆಯುತ್ತಿವೆ. ಈ ವರ್ಷದ SSLC ಫಲಿತಾಂಶದಲ್ಲಿಯೂ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು ಗಮನಾರ್ಹ ಸಾಧನೆ ಮಾಡಿದ್ದು, 191 ಸರ್ಕಾರಿ ಪ್ರೌಢಶಾಲೆಗಳಲ್ಲಿ 110 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ.

    ಈಗ “ಮಕ್ಕಳೇ ನ್ಯೂಸ್‌ರೂಮ್ ನಡೆಸುವ ಶಾಲೆಗಳು” ಎಂಬ ಹೊಸ ಪ್ರಯೋಗವೂ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿನ ಸೃಜನಶೀಲ ಬದಲಾವಣೆಯ ಮತ್ತೊಂದು ಉದಾಹರಣೆಯಾಗಿದೆ.

    “ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ವರದಿಗಾರರು, ಆಂಕರ್‌ಗಳು, ಸ್ಕ್ರಿಪ್ಟ್ ರೈಟರ್‌ಗಳು ಮತ್ತು ನ್ಯೂಸ್ ಪ್ರೆಸೆಂಟರ್‌ಗಳಾಗಿ ಕಾರ್ಯನಿರ್ವಹಿಸುವ ‘ಸಿಮ್ಯುಲೇಟೆಡ್ ನ್ಯೂಸ್‌ರೂಮ್’ ಪ್ರಯೋಗ ನಡೆಯುತ್ತಿದೆ.”ಇಲ್ಲಿ ಮಕ್ಕಳು ಪಾಠ ಮಾತ್ರ ಕಲಿಯುವುದಿಲ್ಲ… ಸುದ್ದಿಯನ್ನೂ ‘ತಯಾರಿಸುತ್ತಾರೆ’!ಪತ್ರಕರ್ತರಾಗುವುದು ಗುರಿಯೇ ಆಗಬೇಕೆಂದಿಲ್ಲ… ಆದರೆ ಸತ್ಯವನ್ನು ಹುಡುಕುವ, ಸರಿಯಾಗಿ ಮಾತನಾಡುವ ಮತ್ತು ಆತ್ಮವಿಶ್ವಾಸದಿಂದ ತನ್ನ ಮಾತನ್ನು ಹೇಳುವ ಮಕ್ಕಳನ್ನು ಬೆಳೆಸುವುದು ಖಂಡಿತವಾಗಿಯೂ ಶಿಕ್ಷಣದ ದೊಡ್ಡ ಗೆಲುವು..!

    ##ದಕ್ಷಿಣಕನ್ನಡ #ಸರ್ಕಾರಿಶಾಲೆ #StudentNewsroom #EducationInnovation #StudentJournalists #ಮಕ್ಕಳಶಿಕ್ಷಣ #FutureJournalists

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
    ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಸಮಾಜಸೇವಕನ ಮುಖವಾಡದ ಹಿಂದೆ ಡ್ರಗ್ಸ್ ದಂಧೆ?ಅದು ಆ್ಯಂಬುಲೆನ್ಸ್ ನಲ್ಲಿ ..!ಚಾಲಕ ಜಲೀಲ್ ಬಾಬಾ ಪರಾರಿ!ಆತನಿಗೆ ಆಶ್ರಯ ಅಥವಾ ಪರಾರಿಯಾಗಲು ಸಹಾಯ ಮಾಡಿದವರ ಮೇಲೂ ಕಾನೂನು ಕ್ರಮ
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಚರ್ಚೆ-ಕಾನೂನು ಬರೋ ಮುನ್ನವೇ ಮತ್ತೊಂದು ಲೀಕ್!
    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ದೊಡ್ಡ ಗೆಲುವು: C295 ವಿಮಾನದ ಮೊದಲ ಯಶಸ್ವಿ ಪರೀಕ್ಷಾ ಹಾರಾಟ
    ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪುಡಿಗೈದ ಭಾರತದ ವನಿತೆಯರು !ಆರಂಭವೇ ವಿಜಯದ ಘರ್ಜನೆ!
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
    ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    ಬ್ರೇಕಿಂಗ್ ನ್ಯೂಸ್
    BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
    ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
    ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ