📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ

    ಗುಜರಾತ್ ನೆಲದಲ್ಲಿಯೇ ಗುಜರಾತನ್ನು ಮಣ್ಣುಮುಕ್ಕಿಸುವ ಮೂಲಕ ಮುಂಬೈ ಕಮ್ ಬ್ಯಾಕ್ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ, ಅಹ್ಮದಾಬಾದ್ನ ಈ ಸ್ಟೇಡಿಯಂ ನಲ್ಲಿ ಗುಜರಾತ್ ವಿರುದ್ಧ ಮುಂಬೈ ಇಂಡಿಯನ್ ಇಲ್ಲಿಯವರೆಗೆ ಗೆದ್ದಿರಲಿಲ್ಲ. ಆ ಒಂದು ಅಪವಾದದಿಂದ ಮುಂಬೈ ಕೊನೆಗೂ ಮುಕ್ತಿ ಪಡೆದಿದೆ ಈ ಗೆಲುವಿನ ಮೂಲಕ

    ಹಾರ್ದಿಕ್ ಪಾಂಡ್ಯ ಸಾಕಷ್ಟು ಒತ್ತಡದಲ್ಲಿ ಸಿಲುಕಿದ್ದರು ಅಪ್ಪು ಮೊದಲು. ಸರಣಿ ಸೋಲುಗಳು ಹಾರ್ದಿಕ್ ಪಾಂಡ್ಯ ರವರ ಒತ್ತಡಕ್ಕೆ ಮೂಲ ಕಾರಣವಾಗಿತ್ತು. ಅದರ ಪರಿಣಾಮ, ಇಡೀ ತಂಡದ  ಡ್ರೆಸ್ಸಿಂಗ್ ರೂಮ್ ಮೇಲೆ ಪರಿಣಾಮ ಬೀರಿತ್ತು. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಒತ್ತಡದಿಂದ ನಡೆದುಕೊಳ್ಳುತ್ತಿದ್ದ ರೀತಿಯು, ತಂಡದ ಇತರ ಆಟಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

    ಗುಜರಾತ್ ವಿರುದ್ಧದ ಈ ಗೆಲುವು ದೊಡ್ಡ ರಿಲಾಕ್ಸ್ ಕೊಟ್ಟಿದೆ ಮುಂಬೈಗೆ, ಅದರಲ್ಲೂ ಹಾರ್ದಿಕ್ ಪಾಂಡ್ಯಗೆ. ಕೇವಲ ಹಾರ್ಧಿಕ್ ಪಾಂಡ್ಯ ಅಷ್ಟೇ ಅಲ್ಲ, ಸೂರ್ಯ ಕುಮಾರ್, ಯಾದವ್ ತಿಲಕ್ ವರ್ಮ, ಜಸ್ ಪ್ರೀತ್ ಬುಮ್ರ ಇವರೆಲ್ಲರ ಆಟದ ಮೇಲೂ ಪರಿಣಾಮ ಬೀರಿತ್ತು. ಇವತ್ತಿನ ಆಟವು ಮುಂಬೈಗೆ ಆರನೇ ಈ ಸೀಜನ್ನಿನ ಐಪಿಎಲ್ ಮ್ಯಾಚ್ ಆಗಿತ್ತು. ಹಿಂದಿನ ಐದರಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯಗಳಿಸಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ಕುಳಿತಿತ್ತು. ಹಾಗೆಯೇ ರನ್ ರೇಟಿನಲ್ಲೂ ದೊಡ್ಡ ಅಂತರದಿಂದ ಹಿಂದೆ ಇತ್ತು. ಇವತ್ತಿನ 6ನೇ ಪಂದ್ಯದ ಪ್ರಾರಂಭವೂ ಮುಂಬೈಗೆ ನಿರಾಶದಾಯಕವಾಗಿಯೇ ಕಾಣುತ್ತಿತ್ತು. 45 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಮನ್ ದೀರ್ ಹಾಗೂ ತಿಲಕ್ ವರ್ಮ ನಿಧಾನವಾಗಿ ಮುಂಬೈಯನ್ನು ಸರಿಯಾದ ಟ್ರ್ಯಾಕಿಗೆ ತರುವ ಪ್ರಯತ್ನ ಮಾಡಿದರು. ಈ ಪ್ರಯತ್ನದಲ್ಲಿ ಮುಂಬೈನ ಮೊತ್ತವು 150ರ ಆಸು ಪಾಸಿಗೆ ಸೀಮಿತ ಅನ್ನುವ ಲೆಕ್ಕಾಚಾರ ಇದ್ದಿದ್ದರಿಂದ, ಬಹುತೇಕರು ಗುಜರಾತ್ ಗೆಲ್ಲುತ್ತದೆ ಅಂತಲೇ ಭಾವಿಸಿದ್ದರು.

    ಆದರೆ, ಇದ್ದಕ್ಕಿದ್ದಂತೆಯೇ ತಿಲಕ್ ವರ್ಮ ಸಿಡಿದು ನಿಂತ ರೀತಿ ಅತ್ಯದ್ಭುತ. ಅವರು ಎರಡನೇ ಟಿ ಬ್ರೇಕ್ ನಂತರ ಆಕ್ರಮಣಕಾರಿ ಬ್ಯಾಟಿಂಗಿಗೆ ಇಳಿಯುತ್ತಾರೆ. ಆ ಹೊತ್ತಿಗೆ 25 ಬಾಲನ್ನು ಎದುರಿಸಿ 24 ರನ್ ಗಳಿಸಿ ಪರದಾಡುತ್ತಿರುವಂತೆ ಕಾಣುತ್ತಿದ್ದ ತಿಲಕ್ ವರ್ಮ, ಇದ್ದಕ್ಕಿದ್ದಂತೆ ತಿರುಗಿ ಬೀಳುತ್ತಾರೆ. ನಂತರದ ವರ್ಮ ಆರ್ಭಟಕ್ಕೆ ಗುಜರಾತ್ ಲೆಕ್ಕಾಚಾರ ತಲೆಕೆಳಗಾಗುತ್ತದೆ. 20 ಓವರ್ ಆಟ ಮುಗಿಸಿದ ತಿಲಕ್ ವರ್ಮ, ಕೇವಲ 48 ಬಾಲಿನಲ್ಲಿ 101 ರನ್ ಗಳಿಸಿ ಅಜಯರಾಗ ಉಳಿಯುತ್ತಾರೆ. ಐದು ಬಾಲಿಗೆ ಇಪ್ಪತ್ನಾಲ್ಕು ರನ್ ಮಾಡಿದ್ದ ತಿಲಕ್ ನಂತರದ, 23 ಬಾಲ್ಗೆ 77 ರನ್ ಚಚ್ಚಿ ಬಿಸಾಡುತ್ತಾರೆ.

    ಪರಿಣಾಮ ಮುಂಬೈ 199 ಮಾಡಿ ಗುಜರಾತ್ ಗೆ ಗೆಲ್ಲಲು ಇನ್ನೂರು ರನ್  ಟಾರ್ಗೆಟ್ ನೀಡುತ್ತದೆ. ಈ ಟಾರ್ಗೆಟ್ ರೀಚ್ ಮಾಡಲು ಗುಜರಾತ್ ಮೊದಲ ಓವರಿನಲ್ಲಿಯೇ ಮೊದಲ ವಿಕೆಟ್ ಕಳೆದುಕೊಳ್ಳುತ್ತದೆ. ಮೊದಲ ವಿಕೆಟ್ ಶೂನ್ಯಕ್ಕೆ ಔಟ್ ಆಗುತ್ತದೆ.

    ಅಲ್ಲಿಂದ ಚೇತರಿಸಿಕೊಳ್ಳದ ಗುಜರಾತ್ ಐದನೇ ರನ್ನಿಗೆ ತನ್ನ ಎರಡನೇ ವಿಕೇಟನ್ನು ಕಳೆದುಕೊಳ್ಳುತ್ತದೆ. ಗುಜರಾತಿನ ಯಾವ ಆಟಗಾರರೂ ನೆಲಕಚ್ಚಿ ಆಡುವ ಪ್ರಯತ್ನವನ್ನೇ ಮಾಡಲಿಲ್ಲ. ಮುಂಬೈನ ನಮನ್ ದೀರ್ ಹಾಗೂ ತಿಲಕ್ ವರ್ಮ ಬ್ಯಾಟಿಂಗ್ ನೋಡಿದವರಿಗೆ ಗುಜರಾತ್ ಆಟಗಾರರ ತಪ್ಪುಗಳು ಅರ್ಥವಾಗುತ್ತಿತ್ತು. ವಾಷಿಂಗ್ಟನ್ ಸುಂದರ್ ಭರವಸೆ ಕೊಡುವ ಪ್ರಯತ್ನ ಮಾಡಿದರು ಅವರನ್ನು ಹಿಡಿದ ಅದ್ಭುತ  ಕ್ಯಾಚ್ ವಾಪಸ್ ಕಳುಹಿಸಿತು.  ಜಸ್ ಪ್ರೀತ್ ಬುಮ್ರಾ, ಈ ಐಪಿಎಲ್ ನಲ್ಲಿ ತಮ್ಮ ಮೊದಲ ವಿಕೆಟನ್ನು ಪಡೆಯುತ್ತಾರೆ. ಗುಜರಾತ್ ಹದಿನಾರನೆಯ ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 100 ರನ್ ಗಳಿಸುತ್ತದೆ. ಮುಂಬೈ 99 ರನ್ನಿನಿಂದ ಈ ಪಂದ್ಯವನ್ನು ಜಯಗಳಿಸುವ ಮೂಲಕ ಅಂಕಪಟ್ಟಿಯಲ್ಲಿ   4ಸ್ಥಾನವನ್ನು ಜಿಗಿದು ಮೇಲಕ್ಕೆ ಇರುತ್ತದೆ.

    ವಿಷಯ ಅದಲ್ಲ, ಈ ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಅಂತೂ ಇಂತೂ ಒತ್ತಡರಹಿತರಾಗಿ ಕಾಣಿಸಿದ್ದಾರೆ. ಮುಖದಲ್ಲಿ ಮಂದಹಾಸ ಕಂಡು ಬಂದಿದೆ. ತಿಲಕ್ ವರ್ಮರ ಈ ಅದ್ಭುತ ಇನಿಂಗ್ಸಿಗೆ ಹಾರ್ದಿಕ ಪಾಂಡ್ಯ ರವರ ಪ್ರೇರಣೆ ದೊಡ್ಡದು ಅಂತ ಅನ್ನಿಸುತ್ತದೆ. ಟೀ ವಿರಾಮದ ಸಮಯದಲ್ಲಿ ಹಾರ್ದಿಕ್, ವರ್ಮಾಗೆ ಬಹಳ ಸೀರಿಯಸ್ಸಾಗಿ ಹುರಿದಿಂಬಿಸುತ್ತಿರುವಂತೆ ಕಾಣುತ್ತಿತ್ತು. ತಿಲಕ್,  ಹಾರ್ದಿಕ ಮಾತಿಗೆ ತಲೆ ಆಡಿಸಿದ್ದು ಕಂಡು ಬಂತು. ಅಷ್ಟೇ ಆಗಿದ್ದು, ಆನಂತರದ್ದು ಎಲ್ಲವೂ ತಿಲಕ್ ವರ್ಮ ಅವರ ಬಿಸಾಟವೆ ಆಗಿದೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಪಂಜಿಮೊಗರುವಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ, ಗಂಡ ಫಿನಿಶ್!
    ಸಿಖ್ ವಿರೋಧಿ ದಂಗೆಯ ಆರೋಪಿ, ಸಜ್ಜನ್ ಕುಮಾರ್ ಜೈಲಿನಲ್ಲಿ ನಿಧನ
    ಹಂತಕರ ಹಿಂದೆ ಯಾರಿದ್ದಾರೆ? ಉಡುಪಿ ಪೊಲೀಸರ ನೆಕ್ಸ್ಟ್ ಟಾರ್ಗೆಟ್…?
    ₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
    ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಇ.ಡಿ. ಶಾಕ್: 21 ಕಡೆ ಏಕಕಾಲದ ದಾಳಿ
    ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಮಹಾನಗರಗಳ ಜಲಕಂಠಕ:ಸ್ಮಾರ್ಟ್ ಸಿಟಿಗಳ ಕರಾಳ ಮುಖ: ಕುಡಿಯಲು ನೀರಿಲ್ಲ, ಸಿಗುವ ನೀರು ವಿಷ!
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
    ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
    30 ದಿನ, 13 ನಗರಗಳು, ₹10 ಲಕ್ಷ ಖರ್ಚು! ಅಮೆರಿಕದ ದಂಪತಿಯ ಭಾರತ ಯಾತ್ರೆ ವೈರಲ್….ವೈರಲ್ ವಿಡಿಯೋದಲ್ಲಿ ಹೊರಬಿದ್ದ ಅಚ್ಚರಿಯ ಲೆಕ್ಕ!
    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?
    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
    ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
    ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
    ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
    ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
    60 ಕೋಟಿ ರೂ. ಸರ್ಕಾರಿ ಹಣ ಗುಳುಂ: ಸಿಬಿಐ ಬಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ!