📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?

ನಿನ್ನೆ ಸಂಜೆಯ ಹೊತ್ತಿನಲ್ಲಿ, ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಎದ್ವಾತದ್ವ ಹಾರಸಿದ ಗುಂಡಿಗೆ, ಚಂದ್ರನಾಥ್ ಎಂಬ ನಿಷ್ಠಾವಂತ ವ್ಯಕ್ತಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಈ ಚಂದ್ರನಾಥ್ ಯಾರು? ಆತನ ಮೇಲೆ ಯಾಕೆ ಈ ಗುಂಡಿನ ದಾಳಿ ನಡೆಯಿತು? ಈ ಬಗ್ಗೆ ನ್ಯಾಯಯುತವಾದ ತನಿಖೆಯಾಗಬೇಕು? ಈ ಕೊಲೆ ಮಾಡಿಸಿದವರು ಯಾರೇ ಆಗಿರಲಿ, ಅವರ ದುಷ್ಕ್ರತ್ಯ ಬಯಲಾಗಬೇಕು.

ಹತ್ಯಯಾದ ಚಂದ್ರನಾಥಗೆ ಇನ್ನು 41 ವರ್ಷ, ಪಶ್ಚಿಮ ಬಂಗಾಳದ ಮೇದಿನಿ ಪುರ ಮೂಲದವರಾದ ಇವರು, ಮಾಜಿ ಸೈನಿಕ ಕೂಡ ಹೌದು. ಈ ಮನುಷ್ಯ BJP  ನಾಯಕ ಸುವೆಂದು ಅಧಿಕಾರಿ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡವರು. ಅಧಿಕಾರಿಯ ರಾಜಕೀಯ ಸಕ್ಸಸ್ ಹಿಂದೆ ಚಂದ್ರನಾಥರ ಕಾರ್ಯತಂತ್ರ ಕೆಲಸ ಮಾಡಿದೆ ಅನ್ನೋದು ಎಷ್ಟು ಜನರಿಗೆ ಗೊತ್ತಿತ್ತೋ ಗೊತ್ತಿಲ್ಲ, ಆದರೆ ಅಲ್ಲಿನ ಮಾಧ್ಯಮ ಮಿತ್ರರಿಗೆ ಇದರ ಅರಿವಿತ್ತು. ಸಾಮಾನ್ಯ ಜನರ ದೃಷ್ಟಿಯಲ್ಲಿ ಎಲೆಯ ಮರೆಯ ಕಾಯಿಯಾಗಿದ್ದರು ಅಷ್ಟೇ. ಅಧಿಕಾರಿಯ ಪರವಾಗಿ ಇಷ್ಟೆಲ್ಲ ಮಾಡಿ, ಇನ್ನೇನು ಮುಖ್ಯಮಂತ್ರಿ ಗಾದಿಗೆ ಏರುವ ಹೊತ್ತಿನಲ್ಲಿ ಚಂದ್ರನಾಥರ ಮೇಲೆ ಈ ಭೀಕರ ಅಟ್ಯಾಕ್ ನಡೆದಿದೆ.

ಪ್ರತಿಯೊಂದು ದುಷ್ಕೃತ್ಯದ ಹಿಂದೆಯೂ, ನಾವಂದು ಕೊಂಡದ್ದಕ್ಕಿಂತ ಬೇರೆಯದೆ ಕೈ ಕೆಲಸ ಮಾಡಿರುತ್ತದೆ ಅನ್ನುವುದಕ್ಕೆ ಹಲವು ಅಪರಾಧ ಪ್ರಕರಣಗಳು ಸಾಕ್ಷಿ ನುಡಿಯುತ್ತವೆ. ಇಲ್ಲಿಯೂ ಸಹ, ಅಂತಹುದೇ ಒಂದು ಕಾಣದ ಕೈ ಕೆಲಸ ಮಾಡಿದಂತೆ ಕಾಣುತ್ತದೆ ಅನ್ನುವುದು ಅಲ್ಲಿನ ರಾಜಕೀಯ ಹಾಗೂ ಅಪರಾಧ ಜಗತ್ತಿನ ಬಗ್ಗೆ ಸಾಕಷ್ಟು ವರದಿ ಮಾಡಿದಂತಹ ಪತ್ರಕರ್ತರೊಬ್ಬರ ಅಭಿಪ್ರಾಯವಾಗಿದೆ. ಚಂದ್ರನಾಥರ ಹತ್ಯೆಯ ಹಿಂದೆ ಇರುವ ಆ ಕಾಣದ ಕೈ ಯಾವುದು? ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿ ಹಾಗೂ ಹಿಂಸಾಚಾರ ಇವೆರಡನ್ನೇ ಗಮನದಲ್ಲಿಟ್ಟುಕೊಂಡು ಹೋದರೆ, ಸಹಜವಾಗಿ ಚಂದ್ರನಾಥರ ಹತ್ಯೆಯ ಹಿಂದೆ ಟಿಎಂಸಿ ಇರಬಹುದು ಎಂಬ ಅನುಮಾನ ಬರುತ್ತದೆ. ಸಹಜವಾಗಿ ಇದನ್ನು ಜನರು ಈ ಸಂದರ್ಭ ದಲ್ಲಿ ನಂಬುತ್ತಾರೆ ಕೂಡ. ಆದರೆ ಇದೇ ಸತ್ಯ ಆಗಬೇಕೆಂದಿಲ್ಲ. ಟಿಎಂಸಿಯ ಮೇಲೆ ಅನುಮಾನ ಬರಲೆಂದೇ ಅಥವಾ ಟಿಎಂಸಿಯ ಮೇಲೆ ಈ ಪ್ರಕರಣವನ್ನು ಹೊರಸಿ ಲಾಭ ಪಡೆಯಲೆಂದೆ ಈ ದುಷ್ಕೃತ್ಯ ನಡೆಸಿರಬಹುದು. ಇಂತಹ ಹಲವು ಅಪರಾಧಗಳು ಈ ಹಿಂದೆ ನಡೆದಿದೆ ಕೂಡ. ಅದೇನೇ ಇರಲಿ ಚಂದ್ರನಾಥರ ಹತ್ಯೆಯ ಹಿಂದಿನ ಸತ್ಯ ಬಯಲಾಗಲೇಬೇಕು.

ಚಂದ್ರನಾಥ್, ರಾಮಕೃಷ್ಣ ಮಿಷನ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಹಾಗೂ ಆ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ದುಡಿದವರು. ಶಿಸ್ತಿನ ವ್ಯಕ್ತಿ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಈ ಹಿಂದೆ ಚಂದ್ರನಾಥರ ಕುಟುಂಬ ಸಹ ಟಿಎಂಸಿಯ ಭಾಗ ಆಗಿತ್ತು. ಸುವೆಂದು ಅಧಿಕಾರಿಯ ಜೊತೆಗೆ ಚಂದ್ರನಾಥ್ ಕೂಡ ಟಿಎಂಸಿಯಿಂದ ಹೊರ ಬಂದಿದ್ದರು. ಇದೆಲ್ಲ ನಡೆದು ಕೆಲವು ವರ್ಷಗಳೇ ಕಳೆದು ಹೋಗಿವೆ. ಆದರೆ ಈಗ ಚಂದ್ರನಾಥರ ಹತ್ಯೆಯಾಗಿದೆ, ಅದು ಕೂಡ ರಾಜ್ಯದಲ್ಲಿ ಬಿಗುವಿನ ವಾತಾವರಣವಿರುವ ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಇಡೀ ರಾಜ್ಯದಲ್ಲಿ ದೊಡ್ಡಮಟ್ಟದ ಪೊಲೀಸ್ ಫೋರ್ಸ್ ಹಾಕಲಾಗಿದ್ದರು, ಸೈನಿಕರನ್ನು ನಿಯೋಜಿಸಿದ್ದರೂ ಯಥೇಚ್ಛವಾಗಿ ಹಿಂಸಾತ್ಮಕ ಚಟುವಟಿಕೆ ಹಾಗೂ ಹತ್ಯೆಯ ಘಟನೆಗಳು ನಡೆಯುತ್ತಿರುವುದು ನೋಡಿದರೆ,  ಇದರ ಹಿಂದೆ ಬಹುದೊಡ್ಡ ಕೈ ಕೆಲಸ ಮಾಡುತ್ತಿದೆ ಅಂತನ್ನಿಸುತ್ತದೆ. ಎಂತಹುದೇ ಕೈ ಕೆಲಸ ಮಾಡಿರಲಿ, ನ್ಯಾಯಯುತ ತನಿಖೆಯ ಮೂಲಕ ಆ ಕೈಗೆ ಕೊಳ ಬೀಳಲಿ ಅನ್ನುವುದು ಆರಾಧ್ಯದ ಸಾಮಾನ್ಯ ಜನರ ಮನಸ್ಸಿನ ನಿವೇದನೆಯಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

 “ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! “ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!
ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ಕರ್ನಾಟಕ CM ಬದಲಾವಣೆ ರಾಜಕೀಯ ಕೌಂಟ್‌ಡೌನ್ ಶುರುವಾಗಿದೆ! ತೆರೆಮರೆಯಲ್ಲಿ ಏನೋ ನಡೀತಿದೆ… 
ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
ಕೌಶಾಂಬಿಯಲ್ಲಿ ಭೀಕರ LPG ಟ್ಯಾಂಕರ್ ದುರಂತ: ಸಿಸಿಟಿವಿಯಲ್ಲಿ ಸೆರೆಯಾದ ಜೀವಭಯದ ಕ್ಷಣಗಳು – ಮೃತರ ಸಂಖ್ಯೆ 4ಕ್ಕೆ ಏರಿಕೆ
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ಡಾನ್ -3 ಸಿನಿಮಾ ಕಥೆ ಗೋವಿಂದ….!
ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಕರ್ನಾಟಕದಲ್ಲೇ ಮೊದಲು-ಕಿಚ್ಚ ಸುದೀಪ್ ಕೈಯಿಂದ ಗ್ರಾಂಡ್ ಓಪನಿಂಗ್!₹130 ಕೋಟಿ ವೆಚ್ಚದ ವಿಶ್ವದರ್ಜೆಯ ‘MR-Linac’ ತಂತ್ರಜ್ಞಾನ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ!
ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….