📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?

ನಿನ್ನೆ ಸಂಜೆಯ ಹೊತ್ತಿನಲ್ಲಿ, ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಎದ್ವಾತದ್ವ ಹಾರಸಿದ ಗುಂಡಿಗೆ, ಚಂದ್ರನಾಥ್ ಎಂಬ ನಿಷ್ಠಾವಂತ ವ್ಯಕ್ತಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಈ ಚಂದ್ರನಾಥ್ ಯಾರು? ಆತನ ಮೇಲೆ ಯಾಕೆ ಈ ಗುಂಡಿನ ದಾಳಿ ನಡೆಯಿತು? ಈ ಬಗ್ಗೆ ನ್ಯಾಯಯುತವಾದ ತನಿಖೆಯಾಗಬೇಕು? ಈ ಕೊಲೆ ಮಾಡಿಸಿದವರು ಯಾರೇ ಆಗಿರಲಿ, ಅವರ ದುಷ್ಕ್ರತ್ಯ ಬಯಲಾಗಬೇಕು.

ಹತ್ಯಯಾದ ಚಂದ್ರನಾಥಗೆ ಇನ್ನು 41 ವರ್ಷ, ಪಶ್ಚಿಮ ಬಂಗಾಳದ ಮೇದಿನಿ ಪುರ ಮೂಲದವರಾದ ಇವರು, ಮಾಜಿ ಸೈನಿಕ ಕೂಡ ಹೌದು. ಈ ಮನುಷ್ಯ BJP  ನಾಯಕ ಸುವೆಂದು ಅಧಿಕಾರಿ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡವರು. ಅಧಿಕಾರಿಯ ರಾಜಕೀಯ ಸಕ್ಸಸ್ ಹಿಂದೆ ಚಂದ್ರನಾಥರ ಕಾರ್ಯತಂತ್ರ ಕೆಲಸ ಮಾಡಿದೆ ಅನ್ನೋದು ಎಷ್ಟು ಜನರಿಗೆ ಗೊತ್ತಿತ್ತೋ ಗೊತ್ತಿಲ್ಲ, ಆದರೆ ಅಲ್ಲಿನ ಮಾಧ್ಯಮ ಮಿತ್ರರಿಗೆ ಇದರ ಅರಿವಿತ್ತು. ಸಾಮಾನ್ಯ ಜನರ ದೃಷ್ಟಿಯಲ್ಲಿ ಎಲೆಯ ಮರೆಯ ಕಾಯಿಯಾಗಿದ್ದರು ಅಷ್ಟೇ. ಅಧಿಕಾರಿಯ ಪರವಾಗಿ ಇಷ್ಟೆಲ್ಲ ಮಾಡಿ, ಇನ್ನೇನು ಮುಖ್ಯಮಂತ್ರಿ ಗಾದಿಗೆ ಏರುವ ಹೊತ್ತಿನಲ್ಲಿ ಚಂದ್ರನಾಥರ ಮೇಲೆ ಈ ಭೀಕರ ಅಟ್ಯಾಕ್ ನಡೆದಿದೆ.

ಪ್ರತಿಯೊಂದು ದುಷ್ಕೃತ್ಯದ ಹಿಂದೆಯೂ, ನಾವಂದು ಕೊಂಡದ್ದಕ್ಕಿಂತ ಬೇರೆಯದೆ ಕೈ ಕೆಲಸ ಮಾಡಿರುತ್ತದೆ ಅನ್ನುವುದಕ್ಕೆ ಹಲವು ಅಪರಾಧ ಪ್ರಕರಣಗಳು ಸಾಕ್ಷಿ ನುಡಿಯುತ್ತವೆ. ಇಲ್ಲಿಯೂ ಸಹ, ಅಂತಹುದೇ ಒಂದು ಕಾಣದ ಕೈ ಕೆಲಸ ಮಾಡಿದಂತೆ ಕಾಣುತ್ತದೆ ಅನ್ನುವುದು ಅಲ್ಲಿನ ರಾಜಕೀಯ ಹಾಗೂ ಅಪರಾಧ ಜಗತ್ತಿನ ಬಗ್ಗೆ ಸಾಕಷ್ಟು ವರದಿ ಮಾಡಿದಂತಹ ಪತ್ರಕರ್ತರೊಬ್ಬರ ಅಭಿಪ್ರಾಯವಾಗಿದೆ. ಚಂದ್ರನಾಥರ ಹತ್ಯೆಯ ಹಿಂದೆ ಇರುವ ಆ ಕಾಣದ ಕೈ ಯಾವುದು? ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿ ಹಾಗೂ ಹಿಂಸಾಚಾರ ಇವೆರಡನ್ನೇ ಗಮನದಲ್ಲಿಟ್ಟುಕೊಂಡು ಹೋದರೆ, ಸಹಜವಾಗಿ ಚಂದ್ರನಾಥರ ಹತ್ಯೆಯ ಹಿಂದೆ ಟಿಎಂಸಿ ಇರಬಹುದು ಎಂಬ ಅನುಮಾನ ಬರುತ್ತದೆ. ಸಹಜವಾಗಿ ಇದನ್ನು ಜನರು ಈ ಸಂದರ್ಭ ದಲ್ಲಿ ನಂಬುತ್ತಾರೆ ಕೂಡ. ಆದರೆ ಇದೇ ಸತ್ಯ ಆಗಬೇಕೆಂದಿಲ್ಲ. ಟಿಎಂಸಿಯ ಮೇಲೆ ಅನುಮಾನ ಬರಲೆಂದೇ ಅಥವಾ ಟಿಎಂಸಿಯ ಮೇಲೆ ಈ ಪ್ರಕರಣವನ್ನು ಹೊರಸಿ ಲಾಭ ಪಡೆಯಲೆಂದೆ ಈ ದುಷ್ಕೃತ್ಯ ನಡೆಸಿರಬಹುದು. ಇಂತಹ ಹಲವು ಅಪರಾಧಗಳು ಈ ಹಿಂದೆ ನಡೆದಿದೆ ಕೂಡ. ಅದೇನೇ ಇರಲಿ ಚಂದ್ರನಾಥರ ಹತ್ಯೆಯ ಹಿಂದಿನ ಸತ್ಯ ಬಯಲಾಗಲೇಬೇಕು.

ಚಂದ್ರನಾಥ್, ರಾಮಕೃಷ್ಣ ಮಿಷನ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಹಾಗೂ ಆ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ದುಡಿದವರು. ಶಿಸ್ತಿನ ವ್ಯಕ್ತಿ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಈ ಹಿಂದೆ ಚಂದ್ರನಾಥರ ಕುಟುಂಬ ಸಹ ಟಿಎಂಸಿಯ ಭಾಗ ಆಗಿತ್ತು. ಸುವೆಂದು ಅಧಿಕಾರಿಯ ಜೊತೆಗೆ ಚಂದ್ರನಾಥ್ ಕೂಡ ಟಿಎಂಸಿಯಿಂದ ಹೊರ ಬಂದಿದ್ದರು. ಇದೆಲ್ಲ ನಡೆದು ಕೆಲವು ವರ್ಷಗಳೇ ಕಳೆದು ಹೋಗಿವೆ. ಆದರೆ ಈಗ ಚಂದ್ರನಾಥರ ಹತ್ಯೆಯಾಗಿದೆ, ಅದು ಕೂಡ ರಾಜ್ಯದಲ್ಲಿ ಬಿಗುವಿನ ವಾತಾವರಣವಿರುವ ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಇಡೀ ರಾಜ್ಯದಲ್ಲಿ ದೊಡ್ಡಮಟ್ಟದ ಪೊಲೀಸ್ ಫೋರ್ಸ್ ಹಾಕಲಾಗಿದ್ದರು, ಸೈನಿಕರನ್ನು ನಿಯೋಜಿಸಿದ್ದರೂ ಯಥೇಚ್ಛವಾಗಿ ಹಿಂಸಾತ್ಮಕ ಚಟುವಟಿಕೆ ಹಾಗೂ ಹತ್ಯೆಯ ಘಟನೆಗಳು ನಡೆಯುತ್ತಿರುವುದು ನೋಡಿದರೆ,  ಇದರ ಹಿಂದೆ ಬಹುದೊಡ್ಡ ಕೈ ಕೆಲಸ ಮಾಡುತ್ತಿದೆ ಅಂತನ್ನಿಸುತ್ತದೆ. ಎಂತಹುದೇ ಕೈ ಕೆಲಸ ಮಾಡಿರಲಿ, ನ್ಯಾಯಯುತ ತನಿಖೆಯ ಮೂಲಕ ಆ ಕೈಗೆ ಕೊಳ ಬೀಳಲಿ ಅನ್ನುವುದು ಆರಾಧ್ಯದ ಸಾಮಾನ್ಯ ಜನರ ಮನಸ್ಸಿನ ನಿವೇದನೆಯಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
ತುಮಕೂರಿನಲ್ಲಿ ಬೆಚ್ಚಿಬೀಳಿಸುವ ತಂದೆ-ಮಗಳು ದುರಂತ
ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?
KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
ಬ್ರಹ್ಮಾವರದ ಹಲಸು ಮೇಳ ಮಾಡಿದ ಹೊಲಸು – ಸಾರ್ವಜನಿಕರ ಆಕ್ರೋಶ
₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ