📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?

    ನಿನ್ನೆ ಸಂಜೆಯ ಹೊತ್ತಿನಲ್ಲಿ, ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಎದ್ವಾತದ್ವ ಹಾರಸಿದ ಗುಂಡಿಗೆ, ಚಂದ್ರನಾಥ್ ಎಂಬ ನಿಷ್ಠಾವಂತ ವ್ಯಕ್ತಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಈ ಚಂದ್ರನಾಥ್ ಯಾರು? ಆತನ ಮೇಲೆ ಯಾಕೆ ಈ ಗುಂಡಿನ ದಾಳಿ ನಡೆಯಿತು? ಈ ಬಗ್ಗೆ ನ್ಯಾಯಯುತವಾದ ತನಿಖೆಯಾಗಬೇಕು? ಈ ಕೊಲೆ ಮಾಡಿಸಿದವರು ಯಾರೇ ಆಗಿರಲಿ, ಅವರ ದುಷ್ಕ್ರತ್ಯ ಬಯಲಾಗಬೇಕು.

    ಹತ್ಯಯಾದ ಚಂದ್ರನಾಥಗೆ ಇನ್ನು 41 ವರ್ಷ, ಪಶ್ಚಿಮ ಬಂಗಾಳದ ಮೇದಿನಿ ಪುರ ಮೂಲದವರಾದ ಇವರು, ಮಾಜಿ ಸೈನಿಕ ಕೂಡ ಹೌದು. ಈ ಮನುಷ್ಯ BJP  ನಾಯಕ ಸುವೆಂದು ಅಧಿಕಾರಿ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡವರು. ಅಧಿಕಾರಿಯ ರಾಜಕೀಯ ಸಕ್ಸಸ್ ಹಿಂದೆ ಚಂದ್ರನಾಥರ ಕಾರ್ಯತಂತ್ರ ಕೆಲಸ ಮಾಡಿದೆ ಅನ್ನೋದು ಎಷ್ಟು ಜನರಿಗೆ ಗೊತ್ತಿತ್ತೋ ಗೊತ್ತಿಲ್ಲ, ಆದರೆ ಅಲ್ಲಿನ ಮಾಧ್ಯಮ ಮಿತ್ರರಿಗೆ ಇದರ ಅರಿವಿತ್ತು. ಸಾಮಾನ್ಯ ಜನರ ದೃಷ್ಟಿಯಲ್ಲಿ ಎಲೆಯ ಮರೆಯ ಕಾಯಿಯಾಗಿದ್ದರು ಅಷ್ಟೇ. ಅಧಿಕಾರಿಯ ಪರವಾಗಿ ಇಷ್ಟೆಲ್ಲ ಮಾಡಿ, ಇನ್ನೇನು ಮುಖ್ಯಮಂತ್ರಿ ಗಾದಿಗೆ ಏರುವ ಹೊತ್ತಿನಲ್ಲಿ ಚಂದ್ರನಾಥರ ಮೇಲೆ ಈ ಭೀಕರ ಅಟ್ಯಾಕ್ ನಡೆದಿದೆ.

    ಪ್ರತಿಯೊಂದು ದುಷ್ಕೃತ್ಯದ ಹಿಂದೆಯೂ, ನಾವಂದು ಕೊಂಡದ್ದಕ್ಕಿಂತ ಬೇರೆಯದೆ ಕೈ ಕೆಲಸ ಮಾಡಿರುತ್ತದೆ ಅನ್ನುವುದಕ್ಕೆ ಹಲವು ಅಪರಾಧ ಪ್ರಕರಣಗಳು ಸಾಕ್ಷಿ ನುಡಿಯುತ್ತವೆ. ಇಲ್ಲಿಯೂ ಸಹ, ಅಂತಹುದೇ ಒಂದು ಕಾಣದ ಕೈ ಕೆಲಸ ಮಾಡಿದಂತೆ ಕಾಣುತ್ತದೆ ಅನ್ನುವುದು ಅಲ್ಲಿನ ರಾಜಕೀಯ ಹಾಗೂ ಅಪರಾಧ ಜಗತ್ತಿನ ಬಗ್ಗೆ ಸಾಕಷ್ಟು ವರದಿ ಮಾಡಿದಂತಹ ಪತ್ರಕರ್ತರೊಬ್ಬರ ಅಭಿಪ್ರಾಯವಾಗಿದೆ. ಚಂದ್ರನಾಥರ ಹತ್ಯೆಯ ಹಿಂದೆ ಇರುವ ಆ ಕಾಣದ ಕೈ ಯಾವುದು? ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿ ಹಾಗೂ ಹಿಂಸಾಚಾರ ಇವೆರಡನ್ನೇ ಗಮನದಲ್ಲಿಟ್ಟುಕೊಂಡು ಹೋದರೆ, ಸಹಜವಾಗಿ ಚಂದ್ರನಾಥರ ಹತ್ಯೆಯ ಹಿಂದೆ ಟಿಎಂಸಿ ಇರಬಹುದು ಎಂಬ ಅನುಮಾನ ಬರುತ್ತದೆ. ಸಹಜವಾಗಿ ಇದನ್ನು ಜನರು ಈ ಸಂದರ್ಭ ದಲ್ಲಿ ನಂಬುತ್ತಾರೆ ಕೂಡ. ಆದರೆ ಇದೇ ಸತ್ಯ ಆಗಬೇಕೆಂದಿಲ್ಲ. ಟಿಎಂಸಿಯ ಮೇಲೆ ಅನುಮಾನ ಬರಲೆಂದೇ ಅಥವಾ ಟಿಎಂಸಿಯ ಮೇಲೆ ಈ ಪ್ರಕರಣವನ್ನು ಹೊರಸಿ ಲಾಭ ಪಡೆಯಲೆಂದೆ ಈ ದುಷ್ಕೃತ್ಯ ನಡೆಸಿರಬಹುದು. ಇಂತಹ ಹಲವು ಅಪರಾಧಗಳು ಈ ಹಿಂದೆ ನಡೆದಿದೆ ಕೂಡ. ಅದೇನೇ ಇರಲಿ ಚಂದ್ರನಾಥರ ಹತ್ಯೆಯ ಹಿಂದಿನ ಸತ್ಯ ಬಯಲಾಗಲೇಬೇಕು.

    ಚಂದ್ರನಾಥ್, ರಾಮಕೃಷ್ಣ ಮಿಷನ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಹಾಗೂ ಆ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ದುಡಿದವರು. ಶಿಸ್ತಿನ ವ್ಯಕ್ತಿ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಈ ಹಿಂದೆ ಚಂದ್ರನಾಥರ ಕುಟುಂಬ ಸಹ ಟಿಎಂಸಿಯ ಭಾಗ ಆಗಿತ್ತು. ಸುವೆಂದು ಅಧಿಕಾರಿಯ ಜೊತೆಗೆ ಚಂದ್ರನಾಥ್ ಕೂಡ ಟಿಎಂಸಿಯಿಂದ ಹೊರ ಬಂದಿದ್ದರು. ಇದೆಲ್ಲ ನಡೆದು ಕೆಲವು ವರ್ಷಗಳೇ ಕಳೆದು ಹೋಗಿವೆ. ಆದರೆ ಈಗ ಚಂದ್ರನಾಥರ ಹತ್ಯೆಯಾಗಿದೆ, ಅದು ಕೂಡ ರಾಜ್ಯದಲ್ಲಿ ಬಿಗುವಿನ ವಾತಾವರಣವಿರುವ ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಇಡೀ ರಾಜ್ಯದಲ್ಲಿ ದೊಡ್ಡಮಟ್ಟದ ಪೊಲೀಸ್ ಫೋರ್ಸ್ ಹಾಕಲಾಗಿದ್ದರು, ಸೈನಿಕರನ್ನು ನಿಯೋಜಿಸಿದ್ದರೂ ಯಥೇಚ್ಛವಾಗಿ ಹಿಂಸಾತ್ಮಕ ಚಟುವಟಿಕೆ ಹಾಗೂ ಹತ್ಯೆಯ ಘಟನೆಗಳು ನಡೆಯುತ್ತಿರುವುದು ನೋಡಿದರೆ,  ಇದರ ಹಿಂದೆ ಬಹುದೊಡ್ಡ ಕೈ ಕೆಲಸ ಮಾಡುತ್ತಿದೆ ಅಂತನ್ನಿಸುತ್ತದೆ. ಎಂತಹುದೇ ಕೈ ಕೆಲಸ ಮಾಡಿರಲಿ, ನ್ಯಾಯಯುತ ತನಿಖೆಯ ಮೂಲಕ ಆ ಕೈಗೆ ಕೊಳ ಬೀಳಲಿ ಅನ್ನುವುದು ಆರಾಧ್ಯದ ಸಾಮಾನ್ಯ ಜನರ ಮನಸ್ಸಿನ ನಿವೇದನೆಯಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
    ₹5ಕ್ಕೆ ಇಡ್ಲಿ… 56 ವರ್ಷಗಳಿಂದ ಅದೇ ರುಚಿ! 70ರ ಹರೆಯದಲ್ಲೂ ಪ್ರತಿದಿನ 1,500 ಇಡ್ಲಿ ಮಾಡಿ ಜನರ ಮನ ಗೆದ್ದ ಕರ್ನಾಟಕದ ಅನ್ನದಾತ…
    ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
    ಸೈಡ್ ಕೊಡಲಿಲ್ಲ ಎಂಬ ಸಣ್ಣ ವಿಚಾರ… ದೊಡ್ಡ ಜಗಳದ ವೈರಲ್ ವಿಡಿಯೋ… ಪೊಲೀಸ್ ಕೇಸ್… ಕೊನೆಗೆ ಬಂಧನ!
    ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
    ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
    ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
    ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    30 ದಿನ, 13 ನಗರಗಳು, ₹10 ಲಕ್ಷ ಖರ್ಚು! ಅಮೆರಿಕದ ದಂಪತಿಯ ಭಾರತ ಯಾತ್ರೆ ವೈರಲ್….ವೈರಲ್ ವಿಡಿಯೋದಲ್ಲಿ ಹೊರಬಿದ್ದ ಅಚ್ಚರಿಯ ಲೆಕ್ಕ!
    ಜಾತಿ ನಿಂದನೆಗೆ ಕೋರ್ಟ್ ಹಾಕಿದ ಕಾನೂನು ಸ್ಪಷ್ಟತೆ!?
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
    book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ಕಾರು ಸ್ಟೀರಿಂಗ್ ಹಿಡಿದ ಬಾಲಕಿ… ಪಕ್ಕದಲ್ಲೇ ಕುಳಿತಿದ್ದ ಪೊಲೀಸ್ ಅಧಿಕಾರಿ! ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಪ್ರಶ್ನೆ
    E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?
    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!