📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಡಾನ್ -3 ಸಿನಿಮಾ ಕಥೆ ಗೋವಿಂದ….!

ಬಹು ನಿರೀಕ್ಷಿತ ಚಿತ್ರ ಡಾನ್ 3 ಇನ್ನು ಸದ್ಯಕ್ಕಂತೂ ಇಲ್ಲ. ಪ್ರಾರಂಭದಲ್ಲಿ ಶಾರುಖ್ ಖಾನ್ ಹಾಗೂ ಅಮಿತಾ ಬಚ್ಚನ್ ಇಬ್ಬರನ್ನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವುದು ನಿರ್ದೇಶಕರ ಲೆಕ್ಕಾಚಾರವು ಹುಸಿಯಾಗಿತ್ತು. 

ಡಾನ್ -3 ಚಿತ್ರಕ್ಕೆ ರಣವೀರ್ ಸಿಂಗ್ ಆಯ್ಕೆಯಾಗಿದ್ದರು. ಡಾನ್ -2ರಲ್ಲಿ ಶಾರುಖ್ ಖಾನ್ ನಟಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಚಿತ್ರ ಸಕ್ಸಸ್ ಕೂಡ ಕಂಡಿತ್ತು. ಡಾನ್ 3 ಸಂಭಾಷಣೆ ಹಾಗೂ ಕಥೆಯ ವಿಚಾರದಲ್ಲಿ ಶಾರುಖ್ ಖಾನ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತದೆ. ಹಾಗಾಗಿ ಶಾರುಖ್ ಖಾನ್ ಬದಲು, ರಣವೀರ್ ಸಿಂಗ್ ಅವರನ್ನು ಪರ್ಹಾನ್ ಅಕ್ತರ್ ಆಯ್ಕೆ ಮಾಡಿಕೊಂಡಿದ್ದರು. ಅದರ ಬಗ್ಗೆಯೇ ಶಾರುಖ್ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಶಾರುಖ್ ಅಭಿಮಾನಿಗಳ ಹೆಸರಿನಲ್ಲಿ ಬೆದರಿಕೆಗಳೂ ಬಂದಿದ್ದವು ಏನ್ನಲಾಗುತ್ತದೆ.

ಇದ್ಯಾವುದಕ್ಕೂ ಬಗ್ಗದ ಜಗ್ಗದ ನಿರ್ದೇಶಕ ಫರ್ಹಾನ್ ಅಕ್ತರ್, ಯಾವ ಬೆದರಿಕೆಗೂ ಜಗ್ಗುವುದಿಲ್ಲ ಅಂತ ಅಷ್ಟೇ ಖಡಕ್ಕಾಗಿ ಮೆಸೇಜ್ ಪಾಸ್ ಮಾಡಿದ್ದ. ಡಾನ್ -3 ರಣವೀರ್ ಸಿಂಗ್ ನಟನೆಯಲ್ಲಿಯೇ ತೆರೆ ಕಾಣಲಿದೆ ಎಂದು ಹೇಳಿಕೊಂಡಿದ್ದರು ಸಹ. ಆದರೆ, ಇಷ್ಟೆಲ್ಲಾ ನಡೆದ ನಂತರ ಈಗ ಡಾನ್- 3 ಚಿತ್ರವೇ ನೆನೆಗುದಿಗೆ ಬೀಳುತ್ತಿದೆ.

ನಿರ್ದೇಶಕ ಅಕ್ತರ್ ಹಾಗೂ ರಣವೀರ್ ನಡುವೆ ಕಿರಿಕ್ ಆಗಿದೆ. ಆಗಲೇ 10 ಕೋಟಿ ಅಡ್ವಾನ್ಸ್ ಪಡೆದಿದ್ದ ರಣವಿರ್, ನಾನು ಡಾನ್ -3 ಯಲ್ಲಿ ಮುಂದುವರೆಯಲಾರೆ ಎಂದು ಓಪನ್ನಾಗಿ ಹೇಳುವ ಮೂಲಕ  ಡಾನ್ -3ಗೆ   ಸಂಕಟವನ್ನು ತಂದಿದ್ದರು. ಆರಂಭದಲ್ಲಿ ಚಿಕ್ಕದಾದ ಜಗಳವು ವಿಕೋಪಕ್ಕೆ ಹೋಗಿರುವುದಕ್ಕೆ ಸ್ವತಹ ರಣವೀರ ಹಾಗೂ ಅಕ್ತರ್ ಇವರಿಬ್ಬರೇ ನೇರ ಕಾರಣ. ಇಬ್ಬರಲ್ಲಿರುವ ಇಗೋ, ಇಬ್ಬರನ್ನೂ ಗೂಳಿ ತರಹ ವಿವಾದದಲ್ಲೇ ಮುನ್ನುಗ್ಗುವಂತೆ ಮಾಡಿದೆ. ಪರಿಣಾಮ,  ಪರಹಾನ್ ಅಕ್ತಾರ್ 40 ಕೋಟಿ ಹಣವನ್ನು ರಣವೀರ್ ಸಿಂಗ್ ಪರಿಹಾರವಾಗಿ ಸಂದಾಯ  ಮಾಡಬೇಕು ಅಂತ ಪಟ್ಟು ಹಿಡಿದು ಕೂತರು. ನಾನು ಒಂದೇ ಒಂದು ರೂಪಾಯಿ ಹಣ ನೀಡುವುದಿಲ್ಲ ಅಂತ ರಣವೀರ್ ಪಟ್ಟು ಹಿಡಿಯುತ್ತಾರೆ. ಇವರಿಬ್ಬರ ನಡುವಿನ ಗಲಾಟೆಯ ಬಗ್ಗೆ ಶಾರುಖ್ ಖಾನ್ ಅಭಿಮಾನಿಗಳು ಹಿರಿಹಿರಿ ಹೀಗಿದ್ದರು. 

ವಿಪರೀತ ಅನ್ನುವಷ್ಟು ಡಾನ್-3 ಯ ವಿವಾದವು ಪ್ರಚಾರ ಪಡೆದುಕೊಳ್ಳುತ್ತಿದ್ದಂತೆಯೇ ಹಿರಿಯ ನಟ ಅಮೀರ್ ಖಾನ್ ಮಧ್ಯಪ್ರವೇಶ ಮಾಡುತ್ತಾರೆ. ಅವರ ಎದುರಿನಲ್ಲಿ ಅಕ್ತರ್  ರಣವೀರ್ ನಡುವೆ ಮಾತುಕತೆ ನಡೆಯುತ್ತದೆ. ಡಾನ್ 3 ಚಿತ್ರದಲ್ಲಿ ನಟಿಸಲು ರಣವೀರ್ ಒಪ್ಪುವುದಿಲ್ಲ, ಹಾಗಾಗಿ ಅಡ್ವಾನ್ಸ್ ಆಗಿ ಪಡೆದ 10 ಕೋಟಿಯನ್ನು ವಾಪಾಸ್ ನೀಡಲು ರಣವೀರ್ ಒಪ್ಪಿಕೊಳ್ಳುತ್ತಾರೆ. ನಾನು ಈಗಾಗಲೇ, ಈ ಚಿತ್ರಕ್ಕಾಗಿ ವಿಪರೀತ ಖರ್ಚು ಮಾಡಿದ್ದೇನೆ. ನನಗೆ ನಷ್ಟವಾಗುತ್ತದೆ. 40 ಕೋಟಿ ಪರಿಹಾರ ಬೇಕು ಅಂತ ಕೂತಿದ್ದ ಪರ್ಹಾನ್ ಅಕ್ತರ್, ಅಮೀರ್ ಖಾನ್ ಎದುರು ನಡೆದ ಮಾತುಕತೆಗೆ ಒಪ್ಪಿಕೊಳ್ಳುತ್ತಾರೆ. 

ಇವರಿಬ್ಬರ ನಡುವೆಯೇ ಈ ಮಾತುಕತೆ ನಡೆದಿದ್ದರೆ ಯಾವತ್ತೂ ಸುಖಾಂತ್ಯ ವಾಗುತ್ತಿತ್ತು. ಇಬ್ಬರೂ ರಚ್ಚಗೆ ಬಿದ್ದು, ಯುದ್ಧಕ್ಕೆ ನಿಂತಿದ್ದ ಕಾರಣ ವಿವಾದವು ಇಲ್ಲಿಯವರೆಗೆ ಎಳೆದುಕೊಂಡು ಬಂದಿತ್ತು. ಈಗ ಇಬ್ಬರ ನಡುವಿನ ವಿವಾದಕ್ಕೆ ಫುಲ್ ಸ್ಟಾಪ್ ಬಿದ್ದಿದೆ ಆದರೆ ಡಾನ್- 3 ಸಿನಿಮಾಕ್ಕೆ ಮಾತ್ರ ಪರ್ಮನೆಂಟ್ ಬೀಗ ಬಿದ್ದಿದೆ. ಇದರಿಂದ ಖುಷಿಪಡುತ್ತಿರುವವರು ಮಾತ್ರ ಶಾರುಖ್ ಬೆಂಬಲಿಗರು. ನಮ್ಮ ಶಾರುಖ್ ಬಿಟ್ಟು ಚಿತ್ರ ನಿರ್ಮಿಸಲು ಹೋದ ಕಾರಣವೇ ಹೀಗಾಗಿದೆ ಅಂತ ಎಲ್ಲೆಡೆ ಪಸರಿಸುತ್ತಿದ್ದಾರೆ ಅವರ ಅಭಿಮಾನಿಗಳು.

COMMENTS

Login with Gmail to comment

ಇನ್ನಷ್ಟು ಸುದ್ದಿ

“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
ಭೀಕರ ಅಪಘಾತ ಮಹಿಳೆ ಬಲಿ
ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ಬ್ರೇಕಿಂಗ್ ನ್ಯೂಸ್
ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
ಗುರುವಾಯನಕೆರೆ ಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
“ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
ಡಿ.ಕೆ. ಶಿವಕುಮಾರ್ ಪ್ರಮಾಣ ವಚನ  ಜೂನ್ 3ಕ್ಕೆ, ರಾಜ್ಯಪಾಲರಿಂದ ಆಹ್ವಾನ
ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!