📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಡಾನ್ -3 ಸಿನಿಮಾ ಕಥೆ ಗೋವಿಂದ….!

    ಬಹು ನಿರೀಕ್ಷಿತ ಚಿತ್ರ ಡಾನ್ 3 ಇನ್ನು ಸದ್ಯಕ್ಕಂತೂ ಇಲ್ಲ. ಪ್ರಾರಂಭದಲ್ಲಿ ಶಾರುಖ್ ಖಾನ್ ಹಾಗೂ ಅಮಿತಾ ಬಚ್ಚನ್ ಇಬ್ಬರನ್ನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವುದು ನಿರ್ದೇಶಕರ ಲೆಕ್ಕಾಚಾರವು ಹುಸಿಯಾಗಿತ್ತು. 

    ಡಾನ್ -3 ಚಿತ್ರಕ್ಕೆ ರಣವೀರ್ ಸಿಂಗ್ ಆಯ್ಕೆಯಾಗಿದ್ದರು. ಡಾನ್ -2ರಲ್ಲಿ ಶಾರುಖ್ ಖಾನ್ ನಟಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಚಿತ್ರ ಸಕ್ಸಸ್ ಕೂಡ ಕಂಡಿತ್ತು. ಡಾನ್ 3 ಸಂಭಾಷಣೆ ಹಾಗೂ ಕಥೆಯ ವಿಚಾರದಲ್ಲಿ ಶಾರುಖ್ ಖಾನ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತದೆ. ಹಾಗಾಗಿ ಶಾರುಖ್ ಖಾನ್ ಬದಲು, ರಣವೀರ್ ಸಿಂಗ್ ಅವರನ್ನು ಪರ್ಹಾನ್ ಅಕ್ತರ್ ಆಯ್ಕೆ ಮಾಡಿಕೊಂಡಿದ್ದರು. ಅದರ ಬಗ್ಗೆಯೇ ಶಾರುಖ್ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಶಾರುಖ್ ಅಭಿಮಾನಿಗಳ ಹೆಸರಿನಲ್ಲಿ ಬೆದರಿಕೆಗಳೂ ಬಂದಿದ್ದವು ಏನ್ನಲಾಗುತ್ತದೆ.

    ಇದ್ಯಾವುದಕ್ಕೂ ಬಗ್ಗದ ಜಗ್ಗದ ನಿರ್ದೇಶಕ ಫರ್ಹಾನ್ ಅಕ್ತರ್, ಯಾವ ಬೆದರಿಕೆಗೂ ಜಗ್ಗುವುದಿಲ್ಲ ಅಂತ ಅಷ್ಟೇ ಖಡಕ್ಕಾಗಿ ಮೆಸೇಜ್ ಪಾಸ್ ಮಾಡಿದ್ದ. ಡಾನ್ -3 ರಣವೀರ್ ಸಿಂಗ್ ನಟನೆಯಲ್ಲಿಯೇ ತೆರೆ ಕಾಣಲಿದೆ ಎಂದು ಹೇಳಿಕೊಂಡಿದ್ದರು ಸಹ. ಆದರೆ, ಇಷ್ಟೆಲ್ಲಾ ನಡೆದ ನಂತರ ಈಗ ಡಾನ್- 3 ಚಿತ್ರವೇ ನೆನೆಗುದಿಗೆ ಬೀಳುತ್ತಿದೆ.

    ನಿರ್ದೇಶಕ ಅಕ್ತರ್ ಹಾಗೂ ರಣವೀರ್ ನಡುವೆ ಕಿರಿಕ್ ಆಗಿದೆ. ಆಗಲೇ 10 ಕೋಟಿ ಅಡ್ವಾನ್ಸ್ ಪಡೆದಿದ್ದ ರಣವಿರ್, ನಾನು ಡಾನ್ -3 ಯಲ್ಲಿ ಮುಂದುವರೆಯಲಾರೆ ಎಂದು ಓಪನ್ನಾಗಿ ಹೇಳುವ ಮೂಲಕ  ಡಾನ್ -3ಗೆ   ಸಂಕಟವನ್ನು ತಂದಿದ್ದರು. ಆರಂಭದಲ್ಲಿ ಚಿಕ್ಕದಾದ ಜಗಳವು ವಿಕೋಪಕ್ಕೆ ಹೋಗಿರುವುದಕ್ಕೆ ಸ್ವತಹ ರಣವೀರ ಹಾಗೂ ಅಕ್ತರ್ ಇವರಿಬ್ಬರೇ ನೇರ ಕಾರಣ. ಇಬ್ಬರಲ್ಲಿರುವ ಇಗೋ, ಇಬ್ಬರನ್ನೂ ಗೂಳಿ ತರಹ ವಿವಾದದಲ್ಲೇ ಮುನ್ನುಗ್ಗುವಂತೆ ಮಾಡಿದೆ. ಪರಿಣಾಮ,  ಪರಹಾನ್ ಅಕ್ತಾರ್ 40 ಕೋಟಿ ಹಣವನ್ನು ರಣವೀರ್ ಸಿಂಗ್ ಪರಿಹಾರವಾಗಿ ಸಂದಾಯ  ಮಾಡಬೇಕು ಅಂತ ಪಟ್ಟು ಹಿಡಿದು ಕೂತರು. ನಾನು ಒಂದೇ ಒಂದು ರೂಪಾಯಿ ಹಣ ನೀಡುವುದಿಲ್ಲ ಅಂತ ರಣವೀರ್ ಪಟ್ಟು ಹಿಡಿಯುತ್ತಾರೆ. ಇವರಿಬ್ಬರ ನಡುವಿನ ಗಲಾಟೆಯ ಬಗ್ಗೆ ಶಾರುಖ್ ಖಾನ್ ಅಭಿಮಾನಿಗಳು ಹಿರಿಹಿರಿ ಹೀಗಿದ್ದರು. 

    ವಿಪರೀತ ಅನ್ನುವಷ್ಟು ಡಾನ್-3 ಯ ವಿವಾದವು ಪ್ರಚಾರ ಪಡೆದುಕೊಳ್ಳುತ್ತಿದ್ದಂತೆಯೇ ಹಿರಿಯ ನಟ ಅಮೀರ್ ಖಾನ್ ಮಧ್ಯಪ್ರವೇಶ ಮಾಡುತ್ತಾರೆ. ಅವರ ಎದುರಿನಲ್ಲಿ ಅಕ್ತರ್  ರಣವೀರ್ ನಡುವೆ ಮಾತುಕತೆ ನಡೆಯುತ್ತದೆ. ಡಾನ್ 3 ಚಿತ್ರದಲ್ಲಿ ನಟಿಸಲು ರಣವೀರ್ ಒಪ್ಪುವುದಿಲ್ಲ, ಹಾಗಾಗಿ ಅಡ್ವಾನ್ಸ್ ಆಗಿ ಪಡೆದ 10 ಕೋಟಿಯನ್ನು ವಾಪಾಸ್ ನೀಡಲು ರಣವೀರ್ ಒಪ್ಪಿಕೊಳ್ಳುತ್ತಾರೆ. ನಾನು ಈಗಾಗಲೇ, ಈ ಚಿತ್ರಕ್ಕಾಗಿ ವಿಪರೀತ ಖರ್ಚು ಮಾಡಿದ್ದೇನೆ. ನನಗೆ ನಷ್ಟವಾಗುತ್ತದೆ. 40 ಕೋಟಿ ಪರಿಹಾರ ಬೇಕು ಅಂತ ಕೂತಿದ್ದ ಪರ್ಹಾನ್ ಅಕ್ತರ್, ಅಮೀರ್ ಖಾನ್ ಎದುರು ನಡೆದ ಮಾತುಕತೆಗೆ ಒಪ್ಪಿಕೊಳ್ಳುತ್ತಾರೆ. 

    ಇವರಿಬ್ಬರ ನಡುವೆಯೇ ಈ ಮಾತುಕತೆ ನಡೆದಿದ್ದರೆ ಯಾವತ್ತೂ ಸುಖಾಂತ್ಯ ವಾಗುತ್ತಿತ್ತು. ಇಬ್ಬರೂ ರಚ್ಚಗೆ ಬಿದ್ದು, ಯುದ್ಧಕ್ಕೆ ನಿಂತಿದ್ದ ಕಾರಣ ವಿವಾದವು ಇಲ್ಲಿಯವರೆಗೆ ಎಳೆದುಕೊಂಡು ಬಂದಿತ್ತು. ಈಗ ಇಬ್ಬರ ನಡುವಿನ ವಿವಾದಕ್ಕೆ ಫುಲ್ ಸ್ಟಾಪ್ ಬಿದ್ದಿದೆ ಆದರೆ ಡಾನ್- 3 ಸಿನಿಮಾಕ್ಕೆ ಮಾತ್ರ ಪರ್ಮನೆಂಟ್ ಬೀಗ ಬಿದ್ದಿದೆ. ಇದರಿಂದ ಖುಷಿಪಡುತ್ತಿರುವವರು ಮಾತ್ರ ಶಾರುಖ್ ಬೆಂಬಲಿಗರು. ನಮ್ಮ ಶಾರುಖ್ ಬಿಟ್ಟು ಚಿತ್ರ ನಿರ್ಮಿಸಲು ಹೋದ ಕಾರಣವೇ ಹೀಗಾಗಿದೆ ಅಂತ ಎಲ್ಲೆಡೆ ಪಸರಿಸುತ್ತಿದ್ದಾರೆ ಅವರ ಅಭಿಮಾನಿಗಳು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
    ಮೂಡಬಿದ್ರಿ ಪುರಸಭೆಯ ಬೇಜವಾಬ್ದಾರಿ ಹಾಗೂ ವೇಸ್ಟ್ ಆಗುತ್ತಿರುವ ನೀರು
    ಕೊಡಗಿನಲ್ಲಿ ಪ್ರವಾಸಿ ಬಸ್ ಪಲ್ಟಿ20 ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರು; ಜೆಸಿಬಿಯಿಂದ ಬಸ್‌ ರಕ್ಷಣೆ!
     ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ಚಕ್ರಬಡ್ಡಿ ಹೆಸರಿನಲ್ಲಿ ಮಹಿಳೆಗೆ ಕಿರುಕುಳ: ₹9.37 ಲಕ್ಷ ಬಾಕಿ ಎಂದು ಬೆದರಿಕೆ ಆರೋಪ
    ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
    ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
    ಸಂಸದ ಸಂಜಯ್ ಅರೋರ ಬಂಧನ…. ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.
    ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ಮಂಗಳೂರಲ್ಲಿ ಮಳೆಯ ಅಬ್ಬರ… ಗುಡುಗು-ಮಿಂಚಿನ ಆಟ ದಕ್ಷಿಣ ಕನ್ನಡದಲ್ಲಿ ಮತ್ತೆ pre-ಮಾನ್ಸೂನ್ ಮ್ಯಾಜಿಕ್!?
    ಅಮೆರಿಕ–ಇರಾನ್ ಸಂಘರ್ಷಕ್ಕೆ ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ! ಕದನ ವಿರಾಮ ಸಂಪೂರ್ಣ ವಿಫಲ..
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
    ಗ್ರಾಮೀಣ ಅಭಿವೃದ್ಧಿಯಲ್ಲಿ ಉಡುಪಿ ನಂ.1: ಐದು ಪಂಚಾಯಿತಿಗಳಿಗೆ ರಾಷ್ಟ್ರ ಗೌರವ-ಉಡುಪಿ ಬರೆದ ಸುವರ್ಣ ಇತಿಹಾಸ!
    ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ದರ್ಶನ್ ಆಪ್ತರ ‘ಮಾಫಿ ಸಾಕ್ಷಿ’ ಅರ್ಜಿ ಏಕೆ ಮಹತ್ವದ್ದು?
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    “ರಾಜಕಾರಣಿಗಳ ಮಕ್ಕಳೂ ಸರ್ಕಾರಿ ಶಾಲೆಗೆ! ಇಸ್ರೋ ವಿಜ್ಞಾನಿಗೆ ಶಿಕ್ಷಣದ ಚುಕ್ಕಾಣಿ, ಸಿಎಂ ವಿಜಯ್‌ನ ಹೊಸ ಹೆಜ್ಜೆ ದೇಶದ ಗಮನ ಸೆಳೆದಿದೆ
    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?