📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ

    ಜಗತ್ತಿನಲ್ಲೇ, ಡಿಫೆನ್ಸ್ ಮತ್ತು ಗೂಢಚಾರಿಕೆಯಲ್ಲಿ ದೊಡ್ಡ ಹೆಸರು ಮಾಡಿದ ಎರಡನೇ ದೇಶ ಇಸ್ರೇಲ್. ಅದೇ ಇಸ್ರೇಲ್ ಇದೀಗ ತಂಡಾ ಹೊಡೆಯುತ್ತಿದೆ ಎಂಬ ಮೆಸೇಜ್ ಬರುತ್ತಿದೆ.
    ನಿರಂತರವಾದ ಯುದ್ಧದಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿಕೊಂಡಿರುವ, ಇಸ್ರೇಲ್ ಇದೀಗ ಅದರ ಎಲ್ಲಾ ಹೊಣೆಗಾರಿಕೆಯನ್ನು ನೇತನ್ಯಹೋ ಅವರ ಮೇಲೆ ಹಾಕಲಾರಂಬಿಸಿದ್ದಾರೆ ಅಲ್ಲಿನ ವಿರೋಧ ಪಕ್ಷದ ನಾಯಕರು. ಯುದ್ಧ ಭಂಡಾರದಲ್ಲೂ ವಿಪರೀತ ಅನ್ನುವಷ್ಟು ಖಾಲಿ ಸ್ಥಳಗಳು ಕಾಣಸಿಗುತ್ತಿವೆಯಂತೆ. ಕ್ಷಿಪಣಿಗಳ ಸಂಖ್ಯೆ ಕ್ಷೀಣಿಸುತ್ತಿದೆಯಂತೆ. ಶಸ್ತ್ರಾಸ್ತ್ರಗಳ ಕೊರತೆಯು ಮುಂದಿನ ದಿನದಲ್ಲಿ ಕಾಣುವ ಅಪಾಯವಿದೆ ಎಂಬ ಎಚ್ಚರಿಕೆಯನ್ನು ಅಲ್ಲಿನ ತಜ್ಞರು ಸರ್ಕಾರಕ್ಕೆ ನೀಡುತ್ತಿದ್ದಾರೆ.
    ಆದೇಶದ ಮುಖ್ಯಸ್ಥರಲ್ಲಿ ಒಬ್ಬರಾದ ಇಯಾಲ್ ಜಮೀರ್ ಅವರು ಸ್ಪಷ್ಟವಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಸೇನೆಯ ಮೇಲೆ ವಿಪರೀತವಾದಂತಹ ಒತ್ತಡ ಹೇರಲಾಗುತ್ತಿದೆ. ಆದಷ್ಟು ಬೇಗ ಇದನ್ನು ಕಡಿಮೆ ಮಾಡಬೇಕು. ಮಿಲ್ಟ್ರಿ ಸೇವೆಯನ್ನು ಹೆಚ್ಚಿಸಬೇಕು. ಹೊಸದಾಗಿ ಸೈನ್ಯಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯ ಪ್ರಾರಂಭವಾಗಬೇಕು. ಈಗಾಗಲೇ ದೇಶದ ಸೈನಿಕರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದಾರೆ. ಕೌಟಿಂಬಿಕ ಸಮಸ್ಯೆಯು ಅವರನ್ನು ಬಾದೀಸುತ್ತಿದೆ. ಇದೆಲ್ಲವನ್ನು ಅರ್ಥಮಾಡಿಕೊಳ್ಳ ಬೇಕಾದ್ದು ಸರ್ಕಾರ ಎಂದು ಹೇಳಿರುವ ಇಯಾಲ್ ಜಮೀರ್ ಅವರು 10 ಕೆಂಪು ಬಾವುಟವನ್ನು ಮೇಲೆತ್ತಿದ್ದಾರೆ ಎನ್ನಲಾಗುತ್ತಿದೆ.
    ಲೇಬನಾನ್, ಗಾಜಾ, ಪ್ಯಾಲಿಸ್ಟೈನ್, ಸಿರಿಯಾ ಹೀಗೆ ಹತ್ತು ಹಲವರ ಜೊತೆ ನಿರಂತರವಾಗಿ ಕದನವನ್ನು ಮಾಡುತ್ತಲೇ ಬಂದಿರುವ ಇಸ್ರೇಲ್, ತನ್ನ ಯುದ್ಧ ಕೌಶಲ್ಯವನ್ನು ಜಗತ್ತಿನ ಎದುರು ಮೆರೆಸುತ್ತಾ ಬಂದಿತ್ತು. ಅವರ ಆಕ್ರಮಣ ಹಾಗೂ ಡಿಫೆನ್ಸ್ ಎರಡು ವಿಚಾರದಲ್ಲೂ ಜಗತ್ತು ನಿಬ್ಬರಗಿಂದ ನೋಡುವಂತೆ ಮಾಡಿತ್ತು. ಅಂತಹ ಇಸ್ರೇಲ್ ಈಗ ಹೆಚ್ಚು ಕಡಿಮೆ ಸೋತು ಸುಣ್ಣವಾಗಿದೆ. ಅಮೇರಿಕಾದ ಬೆಂಬಲದೊಂದಿಗೆ ಯುದ್ಧಕ್ಕೆ ನುಗ್ಗಿದ್ದ ಇಸ್ರೇಲ್ ಪ್ರಾರಂಭದಲ್ಲಿ ಜಯದ ಲಯದಲ್ಲೇ ಕಾಣುತ್ತಿತ್ತು. ಆದರೆ ಇರಾನ್ ನಿಧಾನವಾಗಿ ತನ್ನ ಆಕ್ರಮಣವನ್ನು ಬಲಿಷ್ಠ ಗೊಳಿಸುತ್ತಾ ಹೋಯಿತು. ನೋ ಡೌಟ್, ಇರಾನ್ ತನ್ನ ನಾಯಕರನ್ನು ಕಳೆದುಕೊಂಡಿದೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅಂದರೆ ಹೆಚ್ಚು ಕಡಿಮೆ ಎರಡು ಸಾವಿರದಷ್ಟು ಇರಾನ್ ನಾಗರಿಕರನ್ನು ಕಳೆದುಕೊಂಡಿದೆ.. ಅಮೇರಿಕಾ ಹಾಗೂ ಇಸ್ರೇಲ್ ಸತತವಾಗಿ ಇರಾನಿನ ಸಾಕಷ್ಟು ಅತ್ಯಮೂಲ್ಯ ಸ್ಥಳಗಳನ್ನೂ ನಾಶ ಮಾಡಿದ್ದರೂ ಸಹ, ಇರಾನ್ ಧೃತಿಗೆಡಲೇ ಇಲ್ಲ. ಮಂಡಿಯೂರಲ್ಲು ಇಲ್ಲ. ತನ್ನ ಬತ್ತಳಿಕೆಯನ್ನು ಅಕ್ಷಯ ಪಾತ್ರೆಯದಂತೆ ತುಂಬಿಸಿಕೊಳ್ಳುತ್ತಾ ಸತತವಾಗಿ ಇಸ್ರೇಲ್ ಮತ್ತು ಅಮೆರಿಕಕ್ಕೆ ನಷ್ಟವನ್ನುಂಟು ಮಾಡುತ್ತಲೇ ಸಾಗಿತು. ಇಸ್ರೇಲ್ ನ ಹಲವು ತೈಲಾಗಾರ ಸೇರಿದಂತೆ ಅವರ ಡಿಫೆನ್ಸ್ ಲಾಂಚರ್ ಗಳು ಇರಾನಿನ ದಾಳಿಗೆ ಸುಟ್ಟು ಕರಕಲಾದವು. ಅತ್ತ ಅಮೆರಿಕಾದ ಕಥೆಯು ಇದಕ್ಕಿಂತ ಬೇರೆ ಇರಲಿಲ್ಲ. ಸೌದಿ ಸಹಿತ ಸುತ್ತಮುತ್ತಲಿನ ಅನೇಕ ದೇಶಗಳಲ್ಲಿ ತನ್ನ ಸೈನಿಕ ನೆಲೆಯನ್ನು ನಿರ್ಮಿಸಿಕೊಂಡಿದ್ದ ಅಮೆರಿಕಾದ ರಕ್ಷಣಾ ಕವಚವನ್ನೆಲ್ಲಾ ಧ್ವಂಸ ಮಾಡಿ ಲಕ್ಷಾಂತರ ಕೋಟಿ ನಷ್ಟ ಆಗುವಂತೆ ಮಾಡಿದೆ. ಇರಾನಿಗೆ ಆದ ನಷ್ಟ ಎಷ್ಟೇ ಇರಲಿ, ಆದರೆ ಇಸ್ರೇಲ್ ಮತ್ತು ಅಮೆರಿಕ ಈ ಎರಡು ದೇಶಕ್ಕೆ ದೊಡ್ಡ ಪ್ರಮಾಣದಲ್ಲೇ ನಷ್ಟವಾಗಿದೆ. ಅವರ ಅಮೂಲ್ಯವಾದ ಕ್ಷಿಪಣಿಗಳು ಯುದ್ಧವಿಮಾನಗಳು ಧ್ವಂಸಗೊಂಡಿವೆ.
    ಕೇವಲ ಇಷ್ಟೇ ಆಗಿದ್ದರೆ ಬಹುಷ್ಯ ಅಮೆರಿಕ ಹಾಗೂ ಇಸ್ರೇಲ್, ಈ ಮಟ್ಟಿಗೆ ಕಂಗಾಲಾಗುತ್ತಿರಲಿಲ್ಲ. ನಿಧಾನವಾಗಿ ರಷ್ಯಾ ಮತ್ತು ಚೀನಾ ಇರಾನ್ ಜೊತೆಗೆ ಗಟ್ಟಿಯಾಗಿ ನಿಲ್ಲುತ್ತಿವೆ. ಮತ್ತೊಂದು ಕಡೆ ಇರಾನ್ ಹಾರ್ಮುಜ್ ಜಲಸಂಧಿ ಯನ್ನು ತನ್ನ ಬಹುದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡಿತು. ಇದರ ಪರಿಣಾಮ ಅಮೆರಿಕಾದಂತಹ ಅಮೇರಿಕಾವೇ ಕಂಗಾಲಾಗಿ ಹೋಯಿತು. ಈ ಸಂದರ್ಭದಲ್ಲಿ ಅಮೆರಿಕ ಹಾಗೂ ಇಸ್ರೇಲ್ಗೆ ಒಂದು ಕಡೆ ಯುದ್ಧವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಅನ್ನುವುದು ಒಂದುಡೆಯಾದರೆ, ಮತ್ತೊಂದು ಕಡೆಯಿಂದ ವಿಶ್ವದಲ್ಲಿ ತಮ್ಮ ಅಗ್ರತ್ವವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ. ಇವೆರಡರ ನಡುವೆ ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ನಿಮಿಷಕ್ಕೊಂದು ಮಾತನಾಡಲು ಪ್ರಾರಂಭಿಸಿದ್ದರು. ಅವರ ಮಾತಿಗೆ ನ್ಯಾಟೋದ ಸದಸ್ಯ ರಾಷ್ಟ್ರಗಳೇ ಕಿವಿಗೊಡಲಿಲ್ಲ. ಸ್ವತಹ ಬ್ರಿಟನ್ ಸಕ್ರಿಯವಾಗಿ ಜೊತೆಗೆ ನಿಲ್ಲಲಿಲ್ಲ. ಆಸ್ಟ್ರೇಲಿಯಾ ದೂರವೇ ನಿಂತಿತು. ಜರ್ಮನ್ ರೆಸ್ಪಾನ್ಸ್ ಮಾಡಲಿಲ್ಲ. ಜಪಾನ್ ತಟಸ್ಥವಾಯಿತು.
    ಇದೆಲ್ಲವುದರ ಒತ್ತಡ ಅಮೆರಿಕಾದ ಮೇಲೆ ಹೆಚ್ಚಾಗುತ್ತಾ ಹೋಗುತ್ತಿದೆ. ಅಮೆರಿಕಾದಲ್ಲೂ ಈ ಯುದ್ಧದಿಂದ ಆರ್ಥಿಕ ಬಿಸಿಯು ನಿಧಾನವಾಗಿ ಏರಲಾರಂಭಿಸಿದೆ. ಇದರಿಂದಾಗಿ ಟ್ರಂಪ್ ವಿರುದ್ಧ ಆರೋಪಗಳು ಬರಲಾರಂಬಿಸಿವೆ. ಪರಿಣಾಮ ಟ್ರಂಪ್ ಈ ಎಲ್ಲಾ ಆರೋಪಗಳಿಗೆ ಇಸ್ರೇಲ್ ನಾಯಕ ನೇತನ್ಯಹೋ ಕಾರಣ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.
    ಒಟ್ಟಿನಲ್ಲಿ ಅಮೆರಿಕ ಹಾಗೂ ಇಸ್ರೇಲ್ ಎರಡು ದೇಶವು ಇರಾನ್ ಜೊತೆಗೆ ಕಾಲು ಕೆದರಿ ಯುದ್ಧಕ್ಕೆ ಹೋಗಿ ಈಗ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಇರಾನ್ ಮಂಡಿಯುರುವ ಲಕ್ಷಣವೇ ಇಲ್ಲ.
    ಭಯದ ವಿಚಾರ ಏನಂದರೆ, ಡೊನಾಲ್ಡ್ ಟ್ರಂಪ್ ಹುಚ್ಚಾಟಕ್ಕೆ ಬಿದ್ದು ನ್ಯೂಕ್ಲಿಯರ್ ಬಾಂಬನ್ನು ಇರಾನ್ ಮೇಲೆ ಎಸೆಯಬಹುದೇ ಎನ್ನುವುದಾಗಿದೆ. ಒಟ್ಟಿನಲ್ಲಿ ಕೇವಲ ಎರಡು ದೇಶದ ಹುಚ್ಚಾಟದಿಂದಾಗಿ ಇಡೀ ಜಗತ್ತು ತಲ್ಲಣ ವಾಗುವಂತೆ ವಾತಾವರಣ ಸೃಷ್ಟಿಯಾಗಿದೆ ಈಗ. ಇಡೀ ಜಗತ್ತು ಆರ್ಥಿಕ ಕುಸಿತಕ್ಕೆ ಒಳಗಾಗುತ್ತಿದೆ. ಕಚ್ಚಾ ತೈಲ ಹಾಗೂ ಎಲ್ಪಿಜಿ ಮತ್ತು ಡಾಂಬರ್ ಕೊರತೆಗೆ ಒಳಗಾಗುತ್ತಿವೆ. ಇದೆಲ್ಲವೋ ಇಡೀ ಜಗತ್ತನ್ನು ಮಿನಿಮಮ್ 10 ರಿಂದ 15 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಆಶ್ಚರ್ಯ ಏನು ಎಂದರೆ ಅಮೆರಿಕ ಹಾಗೂ ಇಸ್ರೇಲ್ ಇವೆರಡರ ಶಕ್ತಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು. ಅಂತಹ ಶಕ್ತಿಯನ್ನೇ ಇರಾನ್ ಕಂಗಾಲು ಮಾಡಿರುವಂತದ್ದು.
    ಪರಿಣಾಮ ಇಸ್ರೇಲಿನ ಒಳಗೆ ಸಾಕಷ್ಟು ವಿರೋಧದ ಮಾತುಗಳು ಕೇಳಲಾರಮಿಸಿವೆ. ಸೈನ್ಯದ ಒಳಗು ಅಸಮಾಧಾನ ಸೃಷ್ಟಿಯಾಗಿದೆ. ರಜೆಗೆ ಹೋದ ಸೈನಿಕರು ವಾಪಸ್ ಕರ್ತವ್ಯಕ್ಕೆ ಬರಲು ಒಪ್ಪುತ್ತಿಲ್ಲ. ಅವರ ಪ್ರಕಾರ ಇದು ಅನವಶ್ಯಕವಾದ ಯುದ್ಧ. ಇದರಿಂದಾಗಿ ಇಡೀ ದೇಶ ಸಂಕಷ್ಟಕ್ಕೆ ಈಡಾಗಿದೆ ಎನ್ನುವುದು ಅವರ ಆರೋಪ. ಜೊತೆಗೆ ಇನ್ನೂ ಒಂದು ಆರೋಪವಿದೆ. ಇಸ್ರೇಲ್ ಅಲ್ಲೊಂದು ಸಾಂಪ್ರದಾಯಕವಾದ ಬುಡಕಟ್ಟು ಸಮುದಾಯವಿದೆ. ಅವರನ್ನು ಹರೇಡಿ ಸಮುದಾಯವೆಂದು ಕರೆಯುತ್ತಾರೆ. ಇಸ್ರೇಲಿನ ಇಲ್ಲಿ ಎಲ್ಲರಿಗೂ ಸೈನ್ಯದಲ್ಲಿ ಕೆಲಸ ಮಾಡುವುದು ಕಡ್ಡಾಯ. ಆದರೆ ಈ ಹರೇಡಿ ಸಮುದಾಯದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಈಗ ಈ ವಿಚಾರ ಮುನ್ನೆಲೆಗೆ ಬಂದಿದೆ. ಆ ಒಂದು ಸಮುದಾಯಕ್ಕೆ ಮಾತ್ರ ಯಾಕೆ ವಿನಾಯತಿ ಎಂಬ ಪ್ರಶ್ನೆಯನ್ನು ಇತರ ಸೈನಿಕರು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಅಲ್ಲಿನ ವಿರೋಧ ಪಕ್ಷದ ನಾಯಕ ಲ್ಯಾಪಿಡ್ ಕೂಡ ಸರ್ಕಾರದ ನಿರ್ಧಾರಗಳ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರವು ತಪ್ಪು ನಿರ್ಧಾರಗಳನ್ನು ಮಾಡುತ್ತಿದೆ ಇದರಿಂದ ದೇಶವನ್ನು ಸಂಕಷ್ಟಕೀಡು ಮಾಡುತ್ತಿದ್ದಾರೆ ಎನ್ನುವುದು ಅವರ ನೇರ ಆರೋಪವು ಆಗಿದೆ.
    _ದತ್ತು

    #IsraelIranWar#ವಾರ್ crisis

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
    ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
    🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
    📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.
    ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
    ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
    ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
    ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
    ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!
    ಡಾನ್ -3 ಸಿನಿಮಾ ಕಥೆ ಗೋವಿಂದ….!
    60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
    ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
    🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    ಸೂರತ್‌ನಲ್ಲಿ ಮಳೆಯ ರೌದ್ರನರ್ತನ: 200ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ₹200 ಕೋಟಿ ನಷ್ಟ – ಕಣ್ಣೀರಿನಲ್ಲಿ ಮುಳುಗಿದ ವ್ಯಾಪಾರಿಗಳು