📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು

    ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಗುಜರಾತ್ ರಾಜಧಾನಿಯಲ್ಲೇ ನಡೆದಂತಹ ಘಟನೆ ಇದು. ಘನ ಘೋರ ಕ್ರೈಂ ನಡೆದಿತ್ತು. ಆ ಕ್ರೈಮ್ಗೆ ಪ್ರತೀಕಾರವಾಗಿ ಜೀವ ಒಂದನ್ನೂ ತಿಂದು ಹಾಕಲಾಗಿತ್ತು. ಹೀಗೆ ಎರಡು ಕ್ರೈಂ ನಡೆದರೂ, ಯಾರಿಗೂ ಗೊತ್ತೇ ಇರಲಿಲ್ಲ. ಗುಜರಾತ್ ಪೊಲೀಸರಿಗೆ ಇದರ ಬಗ್ಗೆ ವಾಸನೆಯೂ ಬಂದಿರಲಿಲ್ಲ. ಅಂತಹ ಪ್ರಕರಣ ಒಂದನ್ನು ಮಂತ್ರವಾದಿಯೊಬ್ಬರು ಸಾಕ್ಷಿ ಸಹಿತ ಹಿಡಿದು ಹಾಕಿದ್ದಾರೆ. ಈಗ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರ ಕಲೆ ಹಾಕುತ್ತಿದ್ದಾರೆ.

    ಗುಜರಾತ್ ರಾಜಧಾನಿ ಅಹಮದಾಬಾದ್ ಹೊರವಲಯದ ಕುತಬ್ ನಗರದಲ್ಲಿ ಇಂಥಹುದೊಂದು ಘಟನೆ ನಡೆದಿದೆ. ಬರೋಬ್ಬರಿ 35 ವರ್ಷದ ಹಿಂದೆ, ಒಂದು ಯುವತಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣ ಯಾರಿಗೂ ಗೊತ್ತೇ ಇರಲಿಲ್ಲ. ಆ ಯುವತಿಯು ಪ್ರೇತವಾಗಿ ತನ್ನನ್ನು ಕೊಂದ ವ್ಯಕ್ತಿಯನ್ನು ಬೆಂಬಿಡದೆ ಕಾಡಿ ಸಾಯಿಸಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಎರಡು ಹೆಣಗಳು ಉರುಳಿದ್ದವು. ಇದ್ಯಾವುದು ಗುಜರಾತ್ ಪೊಲೀಸರಿಗೂ ಗೊತ್ತಿರಲಿಲ್ಲ. ಅಕ್ಕ-ಪಕ್ಕದವರಿಗೂ ಗೊತ್ತಿರಲಿಲ್ಲ. ಅದೇ ಮನೆಯ ಸದಸ್ಯರಿಗೂ ಗೊತ್ತಿರಲಿಲ್ಲ. ಅಷ್ಟಕ್ಕೂ ಗೊತ್ತಾಗಿದ್ದು ಹೇಗೆ?

    1992ಕ್ಕಿಂತಲೂ ಮುಂಚೆ ನಡೆದ ಘಟನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ನಿವಾಸಿಯಾಗಿದ್ದ ಫರ್ಜಾನಾ ಅಲಿಯಾಸ್ ಶಬನಂ ಎಂಬ ಯುವತಿಯು, ಗುಜರಾತ್ ಅಹ್ಮದಾಬಾದ್ ನಿವಾಸಿ ಸಂಶುದ್ದೀನ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಈ ಸಂಶುದ್ದೀನ್ ಪಕ್ಕಾ ಕತರ್ನಾಕ್ ವ್ಯಕ್ತಿ. ಆತ ಈ ಫರ್ಜಾನಾಳನ್ನು ಮನಸ್ಸಿನಿಂದ ಪ್ರೀತಿಸಿರಲಿಲ್ಲ, ಕೇವಲ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಅಷ್ಟೇ. ಅವನಿಗೆ ಅದಾಗಲೇ ಮದುವೆಯಾಗಿತ್ತು, ಇಬ್ಬರು ಮಕ್ಕಳು ಇದ್ದರು. ಆದರೆ ಫರ್ಜಾನಾ, ಸಂಶುದ್ದೀನ್  ಮನೆಯನ್ನು ಹುಡುಕಿಕೊಂಡು ಗುಜರಾತಿಗೆ ಬರುತ್ತಾಳೆ. ಹಾಗೆ ಮನೆಗೆ ಬಂದ

    ಫರ್ಜಾನಾಳನ್ನು, ಈ ಸಂಶುದ್ದೀನ್ ಅದೇ ಅಹಮದಾಬಾದ್ನ ಕುತಬ್ ನಗರದಲ್ಲಿರುವ ತನ್ನದೇ ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಫರ್ಜಾನಾಳ ಮೇಲೆ ಹಲ್ಲೆ ನಡೆಸಿ ಅವಳನ್ನು ಅದೇ ಮನೆಯ ಎದುರುಗಡೆ ಇರುವ ಗುಂಡಿಯಲ್ಲಿ ಹಾಕಿ ಮುಚ್ಚಿ ಬಿಡುತ್ತಾನೆ. ಫಾರ್ಜಾನ ಆ ಗುಂಡಿಯಲ್ಲಿ ಜೀವಂತ ಸಮಾಧಿ  ಆಗುತ್ತಾಳೆ. ಅವಳು ತನ್ನ ಜೀವ ಇರುವವರೆಗೂ ಈ ಕಪಟಿ ಸಂಶುದ್ದೀನನ್ನು ಪ್ರೀತಿಸಿದ್ದಳು. ಯಾವಾಗ ತನ್ನ ಪ್ರಿಯಕರನೇ ಜೀವ ತೆಗೆದನು ಆಗ ಫರ್ಜಾನಾ ಆತ್ಮ ದ್ವೇಷಕ್ಕೆ ಬೀಳುತ್ತದೆ.

    ಈ ಘಟನೆಯ ನಂತರ ಸಂಶುದ್ದಿನ್ ತನಗೇನು ಗೊತ್ತಿಲ್ಲದವರಂತೆ, ಸಾಚಾತರ ಇದ್ದುಬಿಡುತ್ತಾನೆ. ಈ ಕಾರಣದಿಂದ ಈ ವಿಚಾರ ಹೊರಗೆ ಬರುವುದೇ ಇಲ್ಲ. ಆದರೆ, ಕೊಲೆಯಾದ ಫರ್ಝಾನ್ ಆತ್ಮವೂ ಸುಮ್ಮನೆ ಕೂರಲಿಲ್ಲ. ಸಂಶುದ್ದೀನನ್ನು ಹಿಡಿದು ಬಿಡದೆ ಕಾಡಲು ಪ್ರಾರಂಭಿಸಿದೆ. ಆತ್ಮದ ಕಾಟಕ್ಕೆ ಸಂಶುದ್ದೀನ್ ಜೀವ ಕಳೆದುಕೊಳ್ಳುತ್ತಾನೆ. ಇದು ಸಹ ಯಾರಿಗೂ ಗೊತ್ತಾಗುವುದಿಲ್ಲ. ಸಂಶುದ್ದೀನ್ ಸಾವು ಅನುಮಾನಾಸ್ಪದವಾಗಿ ಕಂಡರೂ ಯಾವುದೇ ದಾಖಲೆಗಳಿಲ್ಲದ ಕಾರಣ, ಮನೆಯವರು ಹಾಗೂ ಊರಿನವರು ಆತನ ಕಾರ್ಯವನ್ನು ಪ್ರಶ್ನೆ ಎದುರಿಗಿದ್ದರೂ ಮಾಡಿರುತ್ತಾರೆ.

    ಇದರ ನಂತರವೂ ಫರ್ಜಾನಾ ಆತ್ಮ ಸುಮ್ಮನೆ ಕೂರಲಿಲ್ಲ, ಆ ಮನೆಯ ಸುತ್ತಲೂ ಓಡಾಡಲು ಪ್ರಾರಂಭಿಸಿತು. ಕಿಟಕಿಯಲ್ಲಿ ಏನೋ ಹೋದಂತೆ ಭಾಸವಾಗುವುದು, ಪಾತ್ರೆಯನ್ನು ಇದ್ದಕ್ಕಿದ್ದಂತೆ ಬೀಳಿಸುವುದು, ರಾತ್ರಿ ವೇಳೆ ಗೆಜ್ಜೆಯ ಸದ್ದು ಕೇಳಿಸುವುದು ಹೀಗೆ ಹಲವು ರೀತಿಯಲ್ಲಿ ತನ್ನ ಇರುವಿಕೆಯನ್ನು ಆ ಆತ್ಮವೂ ಪ್ರಚುರಪಡಿಸುತ್ತಿತ್ತು. ಇದರಿಂದ ಆ ಮನೆಯವರು ಭಯಭೀತರಾಗಿದ್ದರು. ಸ್ಥಳೀಯ ಮಸೀದಿಯ ಧರ್ಮಗುರು ಬಳಿಗೆ ಹೋಗಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅವರ ಮಂತ್ರ -ತೀರ್ಥ ಸಮಸ್ಯೆಯನ್ನು ಬಗೆ ಹರಿಸುವುದಿಲ್ಲ. ಇದರಿಂದ ಅನಿವಾರ್ಯವಾಗಿ ಆ ಮನೆಯವರು, ಮಂತ್ರವಾದಿ ಒಬ್ಬರ ಮೊರೆ ಹೋಗುತ್ತಾರೆ.

    ಹಾಗೆ ಆ ಮನೆಗೆ ಮಂತ್ರವಾದಿಯ ಪ್ರವೇಶವಾಗುತ್ತದೆ. ಆ ಮಂತ್ರವಾದಿಯು, ಆ ಮನೆಯಲ್ಲಿ ಕೂತು ಅದೇನು ಮಾಡಿದರೋ ಗೊತ್ತಿಲ್ಲ.  ಈ ಮನೆಯಲ್ಲಿ 35 ವರ್ಷದ ಹಿಂದೆ ಹೆಣ್ಣಿನ ಕೊಲೆಯಾಗಿದೆ ಎಂದು ಹೇಳುತ್ತಾರೆ. ಅದನ್ನು ಆ ಮನೆಯವರು ಒಪ್ಪಲು ತಯಾರಿರಲಿಲ್ಲ. ಅದಕ್ಕೆ ಕಾರಣ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಆ ಹೆಣ್ಣು, ಈಗಾಗಲೇ ತನ್ನ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಕೊಲೆ  ಮಾಡಿದೆ. ಆದರೂ, ಆ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ. ಈಗಲೇ ಆ ಒಂದು ಹೆಣ್ಣಿನ ದೇಹವನ್ನು ಹೊರಗೆ ತೆಗೆದು ಸರಿಯಾದ ರೀತಿಯಲ್ಲಿ ಸಂಸ್ಕಾರ ಮಾಡಿ ಎಲ್ಲವೂ ಸರಿಯಾಗುತ್ತದೆ ಅಂತ ಆ ಮಂತ್ರವಾದಿ ಹೇಳುತ್ತಾರೆ. ಅಷ್ಟೇ ಅಲ್ಲ, ಇದೇ ಸ್ಥಳದಲ್ಲಿ ಆ ಹೆಣ್ಣಿನ ಶವವನ್ನು ಹೂಳಲಾಗಿದೆ ಅಂತಲೂ ಮಂತ್ರವಾದಿ ಸ್ಪಷ್ಟವಾಗಿ ಹೇಳಿರುತ್ತಾರೆ.

    ತಕ್ಷಣವೇ ಆ ಮನೆಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ಕೊಡುತ್ತಾರೆ. ಪೊಲೀಸರು ಒಪ್ಪಲು ರೆಡಿ ಇಲ್ಲದಿದ್ದರೂ, ಅನಿವಾರ್ಯವಾಗಿ ಆ ದೂರನ್ನು ಪಡೆಯಬೇಕಾಗುತ್ತದೆ. ಆ ದೂರು ಪಡೆದ ಪೊಲೀಸರು ಜೆಸಿಬಿ ಮೂಲಕ ಆ ಮನೆಯಲ್ಲಿರುವ ಮಂತ್ರವಾದಿ ತೋರಿಸಿದ ಜಾಗದಲ್ಲಿ ಅಗೆದು ನೋಡಿದಾಗ ಹೆಣ್ಣಿನ ಅಸ್ತಿಪಂಜರ ದೊರಕುತ್ತದೆ. ತಕ್ಷಣವೇ ಆ ಅಸ್ತಿಪಂಜರವನ್ನು ಹೊರ ತೆಗೆದು ಸಂಬಂಧ ಪಟ್ಟ ಎವಡಿಯನ್ಸ್ ಕಲೆಕ್ಟ್ ಮಾಡಿಕೊಂಡು ಅದನ್ನು ವಿಧಿ ವಿಜ್ಞಾನ ಇಲಾಖೆ ಕಳುಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

    ಆ ಯುವತಿಯ ಕೊಲೆಯಾಗಿದ್ದು  ಹೌದು ಎನ್ನುವುದು ವಿಧಿ ವಿಜ್ಞಾನ ಇಲಾಖೆಯು ಸ್ಪಷ್ಟಪಡಿಸಿದೆ. ಹಾಗೆಯೇ ಕೊಲೆ ಮಾಡಿದ ವ್ಯಕ್ತಿಯನ್ನು ಆ ಯುವತಿಯ ಆತ್ಮವು ಪ್ರತಿಕಾರಾತ್ಮಕವಾಗಿ ಕೊಲೆ ಮಾಡಿದ್ದರೂ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಹೀಗಿರುವಾಗ ಪೊಲೀಸರಿಗೆ ಇಲ್ಲಿ ಹೆಚ್ಚಿನ ಕೆಲಸ ಇರುವುದಿಲ್ಲ. ಕೊಲೆ ಮಾಡಿದ ಕೊಲೆಗಾರ ಈಗಾಗಲೇ ಸತ್ತಾಗಿದೆ. ಕೇವಲ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಕೊಡಬೇಕು ಅಷ್ಟೇ.

    ಒಟ್ಟಿನಲ್ಲಿ ಈ ಪ್ರಕರಣವು ರೋಚಕ ಸ್ಟೋರಿಯಾಗಿ ಮಾರ್ಪಾಡಾಗುತ್ತಿದೆ. ಇವತ್ತಿನ ವೈಜ್ಞಾನಿಕ ಯುಗದಲ್ಲಿ ಮಂತ್ರವಾದದ ಬಗ್ಗೆ ನೆಗೆಟಿವ್ ಮಾತಿರುವಾಗ, ಮಂತ್ರವಾದದ ಪವರ್ ಎಂತಹುದು ಅನ್ನುವುದನ್ನು ಈ ಪ್ರಕರಣ ತೋರಿಸಿಕೊಡುತ್ತಿದೆ. ಇದೇನು ಚಂದಮಾಮನ ಕಥೆಯಲ್ಲ. ದೂರದ ಗುಜರಾತಿನಲ್ಲಿ 35 ವರ್ಷದ ಹಿಂದೆ ನಡೆದ ಘಟನೆಯು ಈಗ ಮಂತ್ರವಾದಿಯ ಮೂಲಕ ಸಮಾಜಕ್ಕೆ ಗೊತ್ತಾಗುವಂತೆ ಆಗಿದೆ. ಹಾಗೆಯೇ ಪ್ರಕರಣವು ಅಧಿಕೃತವಾಗಿ ದಾಖಲಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬ್ರೇಕಿಂಗ್ ನ್ಯೂಸ್..!final‘ಸಚಿವರ ಪಟ್ಟಿ’ ವೈರಲ್: ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ!
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!
    ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಪಹಲ್ಗಾಂಮ್ ದಾಳಿಯ ಒಂದು ವರ್ಷ: ಇನ್ನೂ ಮುಗಿಯದ ನೋವು, ಮರೆಯಲಾಗದ ನೆನಪುಗಳು
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತ್
    ಮಧ್ಯಪ್ರಾಚ್ಯದಲ್ಲಿ ರೆಡ್ ಅಲರ್ಟ್!3 ತಿಂಗಳ ಯುದ್ಧಕ್ಕೆ ಮಹಾ ಟ್ವಿಸ್ಟ್ ಇರಾನ್ ಸೇನಾ ನೆಲೆಗಳನ್ನು ಧೂಳೀಪಟ ಮಾಡಿದ ಅಮೆರಿಕ!
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ಸ್ವಂತ ತಂಗಿಯೊಂದಿಗೆ ಅಕ್ರಮ ಸಂಬಂಧ- ಕುಟುಂಬ ಹಾಗೂ ಸಮಾಜದಲ್ಲಿ ಆತಂಕ
    ಸ್ವಯಂಪ್ರೇರಿತ ಲೈಂಗಿಕ ಕೆಲಸ -ವೇಶ್ಯಾವಾಟಿಕೆ ವೃತ್ತಿ ಅಪರಾಧವಲ್ಲ ಕಾನೂನುಬಾಹಿರವಲ್ಲ! -ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್!
    ಬ್ಯಾಂಕಿಂಗ್ ಸೇವೆ ಸ್ಮಾರ್ಟ್‌ಫೋನ್ ನೇ ಬೇಕಂತಿಲ್ಲ .ಕೀಪ್ಯಾಡ್ ಫೋನ್ ಸಾಕು ಈಗ “ಸ್ಮಾರ್ಟ್” ಆಗಿದ್ದರೆ ಸಾಕು! 
    ಆಂಧ್ರದ ಪುಟ್ಟಪರ್ತಿಯಲ್ಲಿ ಅಡಗಿದೆ ಆ ದೊಡ್ಡ ರಹಸ್ಯ!ಆಕಾಶದಲ್ಲಿ ಕಣ್ಣಿಗೆ ಕಾಣದಂತೆ ಬೇಟೆಯಾಡುವ ಸಮಯ ಹತ್ತಿರದಲ್ಲಿದೆ!
    ಹೊಲದಲ್ಲಿ ಹೂತಿಟ್ಟ ₹5 ಲಕ್ಷ… ತೆರೆದಾಗ ಶಾಕ್!
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
    ಭಾರತೀಯರ ಟ್ರಾವೆಲ್ ಲಿಸ್ಟ್‌ನಿಂದ ಯುರೋಪ್ ಔಟ್.. ಲಂಡನ್, ಪ್ಯಾರಿಸ್ ಬಿಟ್ಟು ಥೈಲ್ಯಾಂಡ್, ಮಲೇಷ್ಯಾ ಜಪಾನ್‌ನತ್ತ ಪ್ರವಾಸಿಗರ ದಂಡು ..
    ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    ಬೆಳ್ಮಣ್ಣಿನಲ್ಲಿ ಗುಂಡಿನ ಸದ್ದು… ಮಾಜಿ ಸಚಿವರ ಶಿಷ್ಯನ ಭೀಕರ ಹತ್ಯೆ
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    ತೇಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅತ್ಯಾಚಾರ ಪ್ರಕರಣಕ್ಕೆ 13 ವರ್ಷಗಳ ಬಳಿಕ ಗೋವಾ ಹೈಕೋರ್ಟ್ ಮಹತ್ವದ ತೀರ್ಪು….!
    ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ರೆಸ್ಯೂಮ್ ಅಲ್ಲ, ಪ್ರಾಜೆಕ್ಟ್ ಮಾತಾಡಿತು! ಒಂದೇ ವರ್ಷದಲ್ಲಿ ₹10 ಲಕ್ಷ ಸಂಬಳದಿಂದ ₹80 LPA ಗಳಿಸಿದ ಯುವತಿಯ ಯಶಸ್ಸಿನ ಸೂತ್ರ ವೈರಲ್..!!
    ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.