📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಗುಜರಾತ್ ರಾಜಧಾನಿಯಲ್ಲೇ ನಡೆದಂತಹ ಘಟನೆ ಇದು. ಘನ ಘೋರ ಕ್ರೈಂ ನಡೆದಿತ್ತು. ಆ ಕ್ರೈಮ್ಗೆ ಪ್ರತೀಕಾರವಾಗಿ ಜೀವ ಒಂದನ್ನೂ ತಿಂದು ಹಾಕಲಾಗಿತ್ತು. ಹೀಗೆ ಎರಡು ಕ್ರೈಂ ನಡೆದರೂ, ಯಾರಿಗೂ ಗೊತ್ತೇ ಇರಲಿಲ್ಲ. ಗುಜರಾತ್ ಪೊಲೀಸರಿಗೆ ಇದರ ಬಗ್ಗೆ ವಾಸನೆಯೂ ಬಂದಿರಲಿಲ್ಲ. ಅಂತಹ ಪ್ರಕರಣ ಒಂದನ್ನು ಮಂತ್ರವಾದಿಯೊಬ್ಬರು ಸಾಕ್ಷಿ ಸಹಿತ ಹಿಡಿದು ಹಾಕಿದ್ದಾರೆ. ಈಗ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರ ಕಲೆ ಹಾಕುತ್ತಿದ್ದಾರೆ.

ಗುಜರಾತ್ ರಾಜಧಾನಿ ಅಹಮದಾಬಾದ್ ಹೊರವಲಯದ ಕುತಬ್ ನಗರದಲ್ಲಿ ಇಂಥಹುದೊಂದು ಘಟನೆ ನಡೆದಿದೆ. ಬರೋಬ್ಬರಿ 35 ವರ್ಷದ ಹಿಂದೆ, ಒಂದು ಯುವತಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣ ಯಾರಿಗೂ ಗೊತ್ತೇ ಇರಲಿಲ್ಲ. ಆ ಯುವತಿಯು ಪ್ರೇತವಾಗಿ ತನ್ನನ್ನು ಕೊಂದ ವ್ಯಕ್ತಿಯನ್ನು ಬೆಂಬಿಡದೆ ಕಾಡಿ ಸಾಯಿಸಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಎರಡು ಹೆಣಗಳು ಉರುಳಿದ್ದವು. ಇದ್ಯಾವುದು ಗುಜರಾತ್ ಪೊಲೀಸರಿಗೂ ಗೊತ್ತಿರಲಿಲ್ಲ. ಅಕ್ಕ-ಪಕ್ಕದವರಿಗೂ ಗೊತ್ತಿರಲಿಲ್ಲ. ಅದೇ ಮನೆಯ ಸದಸ್ಯರಿಗೂ ಗೊತ್ತಿರಲಿಲ್ಲ. ಅಷ್ಟಕ್ಕೂ ಗೊತ್ತಾಗಿದ್ದು ಹೇಗೆ?

1992ಕ್ಕಿಂತಲೂ ಮುಂಚೆ ನಡೆದ ಘಟನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ನಿವಾಸಿಯಾಗಿದ್ದ ಫರ್ಜಾನಾ ಅಲಿಯಾಸ್ ಶಬನಂ ಎಂಬ ಯುವತಿಯು, ಗುಜರಾತ್ ಅಹ್ಮದಾಬಾದ್ ನಿವಾಸಿ ಸಂಶುದ್ದೀನ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಈ ಸಂಶುದ್ದೀನ್ ಪಕ್ಕಾ ಕತರ್ನಾಕ್ ವ್ಯಕ್ತಿ. ಆತ ಈ ಫರ್ಜಾನಾಳನ್ನು ಮನಸ್ಸಿನಿಂದ ಪ್ರೀತಿಸಿರಲಿಲ್ಲ, ಕೇವಲ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಅಷ್ಟೇ. ಅವನಿಗೆ ಅದಾಗಲೇ ಮದುವೆಯಾಗಿತ್ತು, ಇಬ್ಬರು ಮಕ್ಕಳು ಇದ್ದರು. ಆದರೆ ಫರ್ಜಾನಾ, ಸಂಶುದ್ದೀನ್  ಮನೆಯನ್ನು ಹುಡುಕಿಕೊಂಡು ಗುಜರಾತಿಗೆ ಬರುತ್ತಾಳೆ. ಹಾಗೆ ಮನೆಗೆ ಬಂದ

ಫರ್ಜಾನಾಳನ್ನು, ಈ ಸಂಶುದ್ದೀನ್ ಅದೇ ಅಹಮದಾಬಾದ್ನ ಕುತಬ್ ನಗರದಲ್ಲಿರುವ ತನ್ನದೇ ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಫರ್ಜಾನಾಳ ಮೇಲೆ ಹಲ್ಲೆ ನಡೆಸಿ ಅವಳನ್ನು ಅದೇ ಮನೆಯ ಎದುರುಗಡೆ ಇರುವ ಗುಂಡಿಯಲ್ಲಿ ಹಾಕಿ ಮುಚ್ಚಿ ಬಿಡುತ್ತಾನೆ. ಫಾರ್ಜಾನ ಆ ಗುಂಡಿಯಲ್ಲಿ ಜೀವಂತ ಸಮಾಧಿ  ಆಗುತ್ತಾಳೆ. ಅವಳು ತನ್ನ ಜೀವ ಇರುವವರೆಗೂ ಈ ಕಪಟಿ ಸಂಶುದ್ದೀನನ್ನು ಪ್ರೀತಿಸಿದ್ದಳು. ಯಾವಾಗ ತನ್ನ ಪ್ರಿಯಕರನೇ ಜೀವ ತೆಗೆದನು ಆಗ ಫರ್ಜಾನಾ ಆತ್ಮ ದ್ವೇಷಕ್ಕೆ ಬೀಳುತ್ತದೆ.

ಈ ಘಟನೆಯ ನಂತರ ಸಂಶುದ್ದಿನ್ ತನಗೇನು ಗೊತ್ತಿಲ್ಲದವರಂತೆ, ಸಾಚಾತರ ಇದ್ದುಬಿಡುತ್ತಾನೆ. ಈ ಕಾರಣದಿಂದ ಈ ವಿಚಾರ ಹೊರಗೆ ಬರುವುದೇ ಇಲ್ಲ. ಆದರೆ, ಕೊಲೆಯಾದ ಫರ್ಝಾನ್ ಆತ್ಮವೂ ಸುಮ್ಮನೆ ಕೂರಲಿಲ್ಲ. ಸಂಶುದ್ದೀನನ್ನು ಹಿಡಿದು ಬಿಡದೆ ಕಾಡಲು ಪ್ರಾರಂಭಿಸಿದೆ. ಆತ್ಮದ ಕಾಟಕ್ಕೆ ಸಂಶುದ್ದೀನ್ ಜೀವ ಕಳೆದುಕೊಳ್ಳುತ್ತಾನೆ. ಇದು ಸಹ ಯಾರಿಗೂ ಗೊತ್ತಾಗುವುದಿಲ್ಲ. ಸಂಶುದ್ದೀನ್ ಸಾವು ಅನುಮಾನಾಸ್ಪದವಾಗಿ ಕಂಡರೂ ಯಾವುದೇ ದಾಖಲೆಗಳಿಲ್ಲದ ಕಾರಣ, ಮನೆಯವರು ಹಾಗೂ ಊರಿನವರು ಆತನ ಕಾರ್ಯವನ್ನು ಪ್ರಶ್ನೆ ಎದುರಿಗಿದ್ದರೂ ಮಾಡಿರುತ್ತಾರೆ.

ಇದರ ನಂತರವೂ ಫರ್ಜಾನಾ ಆತ್ಮ ಸುಮ್ಮನೆ ಕೂರಲಿಲ್ಲ, ಆ ಮನೆಯ ಸುತ್ತಲೂ ಓಡಾಡಲು ಪ್ರಾರಂಭಿಸಿತು. ಕಿಟಕಿಯಲ್ಲಿ ಏನೋ ಹೋದಂತೆ ಭಾಸವಾಗುವುದು, ಪಾತ್ರೆಯನ್ನು ಇದ್ದಕ್ಕಿದ್ದಂತೆ ಬೀಳಿಸುವುದು, ರಾತ್ರಿ ವೇಳೆ ಗೆಜ್ಜೆಯ ಸದ್ದು ಕೇಳಿಸುವುದು ಹೀಗೆ ಹಲವು ರೀತಿಯಲ್ಲಿ ತನ್ನ ಇರುವಿಕೆಯನ್ನು ಆ ಆತ್ಮವೂ ಪ್ರಚುರಪಡಿಸುತ್ತಿತ್ತು. ಇದರಿಂದ ಆ ಮನೆಯವರು ಭಯಭೀತರಾಗಿದ್ದರು. ಸ್ಥಳೀಯ ಮಸೀದಿಯ ಧರ್ಮಗುರು ಬಳಿಗೆ ಹೋಗಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅವರ ಮಂತ್ರ -ತೀರ್ಥ ಸಮಸ್ಯೆಯನ್ನು ಬಗೆ ಹರಿಸುವುದಿಲ್ಲ. ಇದರಿಂದ ಅನಿವಾರ್ಯವಾಗಿ ಆ ಮನೆಯವರು, ಮಂತ್ರವಾದಿ ಒಬ್ಬರ ಮೊರೆ ಹೋಗುತ್ತಾರೆ.

ಹಾಗೆ ಆ ಮನೆಗೆ ಮಂತ್ರವಾದಿಯ ಪ್ರವೇಶವಾಗುತ್ತದೆ. ಆ ಮಂತ್ರವಾದಿಯು, ಆ ಮನೆಯಲ್ಲಿ ಕೂತು ಅದೇನು ಮಾಡಿದರೋ ಗೊತ್ತಿಲ್ಲ.  ಈ ಮನೆಯಲ್ಲಿ 35 ವರ್ಷದ ಹಿಂದೆ ಹೆಣ್ಣಿನ ಕೊಲೆಯಾಗಿದೆ ಎಂದು ಹೇಳುತ್ತಾರೆ. ಅದನ್ನು ಆ ಮನೆಯವರು ಒಪ್ಪಲು ತಯಾರಿರಲಿಲ್ಲ. ಅದಕ್ಕೆ ಕಾರಣ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಆ ಹೆಣ್ಣು, ಈಗಾಗಲೇ ತನ್ನ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಕೊಲೆ  ಮಾಡಿದೆ. ಆದರೂ, ಆ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ. ಈಗಲೇ ಆ ಒಂದು ಹೆಣ್ಣಿನ ದೇಹವನ್ನು ಹೊರಗೆ ತೆಗೆದು ಸರಿಯಾದ ರೀತಿಯಲ್ಲಿ ಸಂಸ್ಕಾರ ಮಾಡಿ ಎಲ್ಲವೂ ಸರಿಯಾಗುತ್ತದೆ ಅಂತ ಆ ಮಂತ್ರವಾದಿ ಹೇಳುತ್ತಾರೆ. ಅಷ್ಟೇ ಅಲ್ಲ, ಇದೇ ಸ್ಥಳದಲ್ಲಿ ಆ ಹೆಣ್ಣಿನ ಶವವನ್ನು ಹೂಳಲಾಗಿದೆ ಅಂತಲೂ ಮಂತ್ರವಾದಿ ಸ್ಪಷ್ಟವಾಗಿ ಹೇಳಿರುತ್ತಾರೆ.

ತಕ್ಷಣವೇ ಆ ಮನೆಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ಕೊಡುತ್ತಾರೆ. ಪೊಲೀಸರು ಒಪ್ಪಲು ರೆಡಿ ಇಲ್ಲದಿದ್ದರೂ, ಅನಿವಾರ್ಯವಾಗಿ ಆ ದೂರನ್ನು ಪಡೆಯಬೇಕಾಗುತ್ತದೆ. ಆ ದೂರು ಪಡೆದ ಪೊಲೀಸರು ಜೆಸಿಬಿ ಮೂಲಕ ಆ ಮನೆಯಲ್ಲಿರುವ ಮಂತ್ರವಾದಿ ತೋರಿಸಿದ ಜಾಗದಲ್ಲಿ ಅಗೆದು ನೋಡಿದಾಗ ಹೆಣ್ಣಿನ ಅಸ್ತಿಪಂಜರ ದೊರಕುತ್ತದೆ. ತಕ್ಷಣವೇ ಆ ಅಸ್ತಿಪಂಜರವನ್ನು ಹೊರ ತೆಗೆದು ಸಂಬಂಧ ಪಟ್ಟ ಎವಡಿಯನ್ಸ್ ಕಲೆಕ್ಟ್ ಮಾಡಿಕೊಂಡು ಅದನ್ನು ವಿಧಿ ವಿಜ್ಞಾನ ಇಲಾಖೆ ಕಳುಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಆ ಯುವತಿಯ ಕೊಲೆಯಾಗಿದ್ದು  ಹೌದು ಎನ್ನುವುದು ವಿಧಿ ವಿಜ್ಞಾನ ಇಲಾಖೆಯು ಸ್ಪಷ್ಟಪಡಿಸಿದೆ. ಹಾಗೆಯೇ ಕೊಲೆ ಮಾಡಿದ ವ್ಯಕ್ತಿಯನ್ನು ಆ ಯುವತಿಯ ಆತ್ಮವು ಪ್ರತಿಕಾರಾತ್ಮಕವಾಗಿ ಕೊಲೆ ಮಾಡಿದ್ದರೂ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಹೀಗಿರುವಾಗ ಪೊಲೀಸರಿಗೆ ಇಲ್ಲಿ ಹೆಚ್ಚಿನ ಕೆಲಸ ಇರುವುದಿಲ್ಲ. ಕೊಲೆ ಮಾಡಿದ ಕೊಲೆಗಾರ ಈಗಾಗಲೇ ಸತ್ತಾಗಿದೆ. ಕೇವಲ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಕೊಡಬೇಕು ಅಷ್ಟೇ.

ಒಟ್ಟಿನಲ್ಲಿ ಈ ಪ್ರಕರಣವು ರೋಚಕ ಸ್ಟೋರಿಯಾಗಿ ಮಾರ್ಪಾಡಾಗುತ್ತಿದೆ. ಇವತ್ತಿನ ವೈಜ್ಞಾನಿಕ ಯುಗದಲ್ಲಿ ಮಂತ್ರವಾದದ ಬಗ್ಗೆ ನೆಗೆಟಿವ್ ಮಾತಿರುವಾಗ, ಮಂತ್ರವಾದದ ಪವರ್ ಎಂತಹುದು ಅನ್ನುವುದನ್ನು ಈ ಪ್ರಕರಣ ತೋರಿಸಿಕೊಡುತ್ತಿದೆ. ಇದೇನು ಚಂದಮಾಮನ ಕಥೆಯಲ್ಲ. ದೂರದ ಗುಜರಾತಿನಲ್ಲಿ 35 ವರ್ಷದ ಹಿಂದೆ ನಡೆದ ಘಟನೆಯು ಈಗ ಮಂತ್ರವಾದಿಯ ಮೂಲಕ ಸಮಾಜಕ್ಕೆ ಗೊತ್ತಾಗುವಂತೆ ಆಗಿದೆ. ಹಾಗೆಯೇ ಪ್ರಕರಣವು ಅಧಿಕೃತವಾಗಿ ದಾಖಲಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ
ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ