📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಗುಜರಾತ್ ರಾಜಧಾನಿಯಲ್ಲೇ ನಡೆದಂತಹ ಘಟನೆ ಇದು. ಘನ ಘೋರ ಕ್ರೈಂ ನಡೆದಿತ್ತು. ಆ ಕ್ರೈಮ್ಗೆ ಪ್ರತೀಕಾರವಾಗಿ ಜೀವ ಒಂದನ್ನೂ ತಿಂದು ಹಾಕಲಾಗಿತ್ತು. ಹೀಗೆ ಎರಡು ಕ್ರೈಂ ನಡೆದರೂ, ಯಾರಿಗೂ ಗೊತ್ತೇ ಇರಲಿಲ್ಲ. ಗುಜರಾತ್ ಪೊಲೀಸರಿಗೆ ಇದರ ಬಗ್ಗೆ ವಾಸನೆಯೂ ಬಂದಿರಲಿಲ್ಲ. ಅಂತಹ ಪ್ರಕರಣ ಒಂದನ್ನು ಮಂತ್ರವಾದಿಯೊಬ್ಬರು ಸಾಕ್ಷಿ ಸಹಿತ ಹಿಡಿದು ಹಾಕಿದ್ದಾರೆ. ಈಗ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರ ಕಲೆ ಹಾಕುತ್ತಿದ್ದಾರೆ.

ಗುಜರಾತ್ ರಾಜಧಾನಿ ಅಹಮದಾಬಾದ್ ಹೊರವಲಯದ ಕುತಬ್ ನಗರದಲ್ಲಿ ಇಂಥಹುದೊಂದು ಘಟನೆ ನಡೆದಿದೆ. ಬರೋಬ್ಬರಿ 35 ವರ್ಷದ ಹಿಂದೆ, ಒಂದು ಯುವತಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣ ಯಾರಿಗೂ ಗೊತ್ತೇ ಇರಲಿಲ್ಲ. ಆ ಯುವತಿಯು ಪ್ರೇತವಾಗಿ ತನ್ನನ್ನು ಕೊಂದ ವ್ಯಕ್ತಿಯನ್ನು ಬೆಂಬಿಡದೆ ಕಾಡಿ ಸಾಯಿಸಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಎರಡು ಹೆಣಗಳು ಉರುಳಿದ್ದವು. ಇದ್ಯಾವುದು ಗುಜರಾತ್ ಪೊಲೀಸರಿಗೂ ಗೊತ್ತಿರಲಿಲ್ಲ. ಅಕ್ಕ-ಪಕ್ಕದವರಿಗೂ ಗೊತ್ತಿರಲಿಲ್ಲ. ಅದೇ ಮನೆಯ ಸದಸ್ಯರಿಗೂ ಗೊತ್ತಿರಲಿಲ್ಲ. ಅಷ್ಟಕ್ಕೂ ಗೊತ್ತಾಗಿದ್ದು ಹೇಗೆ?

1992ಕ್ಕಿಂತಲೂ ಮುಂಚೆ ನಡೆದ ಘಟನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ನಿವಾಸಿಯಾಗಿದ್ದ ಫರ್ಜಾನಾ ಅಲಿಯಾಸ್ ಶಬನಂ ಎಂಬ ಯುವತಿಯು, ಗುಜರಾತ್ ಅಹ್ಮದಾಬಾದ್ ನಿವಾಸಿ ಸಂಶುದ್ದೀನ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಈ ಸಂಶುದ್ದೀನ್ ಪಕ್ಕಾ ಕತರ್ನಾಕ್ ವ್ಯಕ್ತಿ. ಆತ ಈ ಫರ್ಜಾನಾಳನ್ನು ಮನಸ್ಸಿನಿಂದ ಪ್ರೀತಿಸಿರಲಿಲ್ಲ, ಕೇವಲ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಅಷ್ಟೇ. ಅವನಿಗೆ ಅದಾಗಲೇ ಮದುವೆಯಾಗಿತ್ತು, ಇಬ್ಬರು ಮಕ್ಕಳು ಇದ್ದರು. ಆದರೆ ಫರ್ಜಾನಾ, ಸಂಶುದ್ದೀನ್  ಮನೆಯನ್ನು ಹುಡುಕಿಕೊಂಡು ಗುಜರಾತಿಗೆ ಬರುತ್ತಾಳೆ. ಹಾಗೆ ಮನೆಗೆ ಬಂದ

ಫರ್ಜಾನಾಳನ್ನು, ಈ ಸಂಶುದ್ದೀನ್ ಅದೇ ಅಹಮದಾಬಾದ್ನ ಕುತಬ್ ನಗರದಲ್ಲಿರುವ ತನ್ನದೇ ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಫರ್ಜಾನಾಳ ಮೇಲೆ ಹಲ್ಲೆ ನಡೆಸಿ ಅವಳನ್ನು ಅದೇ ಮನೆಯ ಎದುರುಗಡೆ ಇರುವ ಗುಂಡಿಯಲ್ಲಿ ಹಾಕಿ ಮುಚ್ಚಿ ಬಿಡುತ್ತಾನೆ. ಫಾರ್ಜಾನ ಆ ಗುಂಡಿಯಲ್ಲಿ ಜೀವಂತ ಸಮಾಧಿ  ಆಗುತ್ತಾಳೆ. ಅವಳು ತನ್ನ ಜೀವ ಇರುವವರೆಗೂ ಈ ಕಪಟಿ ಸಂಶುದ್ದೀನನ್ನು ಪ್ರೀತಿಸಿದ್ದಳು. ಯಾವಾಗ ತನ್ನ ಪ್ರಿಯಕರನೇ ಜೀವ ತೆಗೆದನು ಆಗ ಫರ್ಜಾನಾ ಆತ್ಮ ದ್ವೇಷಕ್ಕೆ ಬೀಳುತ್ತದೆ.

ಈ ಘಟನೆಯ ನಂತರ ಸಂಶುದ್ದಿನ್ ತನಗೇನು ಗೊತ್ತಿಲ್ಲದವರಂತೆ, ಸಾಚಾತರ ಇದ್ದುಬಿಡುತ್ತಾನೆ. ಈ ಕಾರಣದಿಂದ ಈ ವಿಚಾರ ಹೊರಗೆ ಬರುವುದೇ ಇಲ್ಲ. ಆದರೆ, ಕೊಲೆಯಾದ ಫರ್ಝಾನ್ ಆತ್ಮವೂ ಸುಮ್ಮನೆ ಕೂರಲಿಲ್ಲ. ಸಂಶುದ್ದೀನನ್ನು ಹಿಡಿದು ಬಿಡದೆ ಕಾಡಲು ಪ್ರಾರಂಭಿಸಿದೆ. ಆತ್ಮದ ಕಾಟಕ್ಕೆ ಸಂಶುದ್ದೀನ್ ಜೀವ ಕಳೆದುಕೊಳ್ಳುತ್ತಾನೆ. ಇದು ಸಹ ಯಾರಿಗೂ ಗೊತ್ತಾಗುವುದಿಲ್ಲ. ಸಂಶುದ್ದೀನ್ ಸಾವು ಅನುಮಾನಾಸ್ಪದವಾಗಿ ಕಂಡರೂ ಯಾವುದೇ ದಾಖಲೆಗಳಿಲ್ಲದ ಕಾರಣ, ಮನೆಯವರು ಹಾಗೂ ಊರಿನವರು ಆತನ ಕಾರ್ಯವನ್ನು ಪ್ರಶ್ನೆ ಎದುರಿಗಿದ್ದರೂ ಮಾಡಿರುತ್ತಾರೆ.

ಇದರ ನಂತರವೂ ಫರ್ಜಾನಾ ಆತ್ಮ ಸುಮ್ಮನೆ ಕೂರಲಿಲ್ಲ, ಆ ಮನೆಯ ಸುತ್ತಲೂ ಓಡಾಡಲು ಪ್ರಾರಂಭಿಸಿತು. ಕಿಟಕಿಯಲ್ಲಿ ಏನೋ ಹೋದಂತೆ ಭಾಸವಾಗುವುದು, ಪಾತ್ರೆಯನ್ನು ಇದ್ದಕ್ಕಿದ್ದಂತೆ ಬೀಳಿಸುವುದು, ರಾತ್ರಿ ವೇಳೆ ಗೆಜ್ಜೆಯ ಸದ್ದು ಕೇಳಿಸುವುದು ಹೀಗೆ ಹಲವು ರೀತಿಯಲ್ಲಿ ತನ್ನ ಇರುವಿಕೆಯನ್ನು ಆ ಆತ್ಮವೂ ಪ್ರಚುರಪಡಿಸುತ್ತಿತ್ತು. ಇದರಿಂದ ಆ ಮನೆಯವರು ಭಯಭೀತರಾಗಿದ್ದರು. ಸ್ಥಳೀಯ ಮಸೀದಿಯ ಧರ್ಮಗುರು ಬಳಿಗೆ ಹೋಗಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅವರ ಮಂತ್ರ -ತೀರ್ಥ ಸಮಸ್ಯೆಯನ್ನು ಬಗೆ ಹರಿಸುವುದಿಲ್ಲ. ಇದರಿಂದ ಅನಿವಾರ್ಯವಾಗಿ ಆ ಮನೆಯವರು, ಮಂತ್ರವಾದಿ ಒಬ್ಬರ ಮೊರೆ ಹೋಗುತ್ತಾರೆ.

ಹಾಗೆ ಆ ಮನೆಗೆ ಮಂತ್ರವಾದಿಯ ಪ್ರವೇಶವಾಗುತ್ತದೆ. ಆ ಮಂತ್ರವಾದಿಯು, ಆ ಮನೆಯಲ್ಲಿ ಕೂತು ಅದೇನು ಮಾಡಿದರೋ ಗೊತ್ತಿಲ್ಲ.  ಈ ಮನೆಯಲ್ಲಿ 35 ವರ್ಷದ ಹಿಂದೆ ಹೆಣ್ಣಿನ ಕೊಲೆಯಾಗಿದೆ ಎಂದು ಹೇಳುತ್ತಾರೆ. ಅದನ್ನು ಆ ಮನೆಯವರು ಒಪ್ಪಲು ತಯಾರಿರಲಿಲ್ಲ. ಅದಕ್ಕೆ ಕಾರಣ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಆ ಹೆಣ್ಣು, ಈಗಾಗಲೇ ತನ್ನ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಕೊಲೆ  ಮಾಡಿದೆ. ಆದರೂ, ಆ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ. ಈಗಲೇ ಆ ಒಂದು ಹೆಣ್ಣಿನ ದೇಹವನ್ನು ಹೊರಗೆ ತೆಗೆದು ಸರಿಯಾದ ರೀತಿಯಲ್ಲಿ ಸಂಸ್ಕಾರ ಮಾಡಿ ಎಲ್ಲವೂ ಸರಿಯಾಗುತ್ತದೆ ಅಂತ ಆ ಮಂತ್ರವಾದಿ ಹೇಳುತ್ತಾರೆ. ಅಷ್ಟೇ ಅಲ್ಲ, ಇದೇ ಸ್ಥಳದಲ್ಲಿ ಆ ಹೆಣ್ಣಿನ ಶವವನ್ನು ಹೂಳಲಾಗಿದೆ ಅಂತಲೂ ಮಂತ್ರವಾದಿ ಸ್ಪಷ್ಟವಾಗಿ ಹೇಳಿರುತ್ತಾರೆ.

ತಕ್ಷಣವೇ ಆ ಮನೆಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ಕೊಡುತ್ತಾರೆ. ಪೊಲೀಸರು ಒಪ್ಪಲು ರೆಡಿ ಇಲ್ಲದಿದ್ದರೂ, ಅನಿವಾರ್ಯವಾಗಿ ಆ ದೂರನ್ನು ಪಡೆಯಬೇಕಾಗುತ್ತದೆ. ಆ ದೂರು ಪಡೆದ ಪೊಲೀಸರು ಜೆಸಿಬಿ ಮೂಲಕ ಆ ಮನೆಯಲ್ಲಿರುವ ಮಂತ್ರವಾದಿ ತೋರಿಸಿದ ಜಾಗದಲ್ಲಿ ಅಗೆದು ನೋಡಿದಾಗ ಹೆಣ್ಣಿನ ಅಸ್ತಿಪಂಜರ ದೊರಕುತ್ತದೆ. ತಕ್ಷಣವೇ ಆ ಅಸ್ತಿಪಂಜರವನ್ನು ಹೊರ ತೆಗೆದು ಸಂಬಂಧ ಪಟ್ಟ ಎವಡಿಯನ್ಸ್ ಕಲೆಕ್ಟ್ ಮಾಡಿಕೊಂಡು ಅದನ್ನು ವಿಧಿ ವಿಜ್ಞಾನ ಇಲಾಖೆ ಕಳುಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಆ ಯುವತಿಯ ಕೊಲೆಯಾಗಿದ್ದು  ಹೌದು ಎನ್ನುವುದು ವಿಧಿ ವಿಜ್ಞಾನ ಇಲಾಖೆಯು ಸ್ಪಷ್ಟಪಡಿಸಿದೆ. ಹಾಗೆಯೇ ಕೊಲೆ ಮಾಡಿದ ವ್ಯಕ್ತಿಯನ್ನು ಆ ಯುವತಿಯ ಆತ್ಮವು ಪ್ರತಿಕಾರಾತ್ಮಕವಾಗಿ ಕೊಲೆ ಮಾಡಿದ್ದರೂ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಹೀಗಿರುವಾಗ ಪೊಲೀಸರಿಗೆ ಇಲ್ಲಿ ಹೆಚ್ಚಿನ ಕೆಲಸ ಇರುವುದಿಲ್ಲ. ಕೊಲೆ ಮಾಡಿದ ಕೊಲೆಗಾರ ಈಗಾಗಲೇ ಸತ್ತಾಗಿದೆ. ಕೇವಲ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಕೊಡಬೇಕು ಅಷ್ಟೇ.

ಒಟ್ಟಿನಲ್ಲಿ ಈ ಪ್ರಕರಣವು ರೋಚಕ ಸ್ಟೋರಿಯಾಗಿ ಮಾರ್ಪಾಡಾಗುತ್ತಿದೆ. ಇವತ್ತಿನ ವೈಜ್ಞಾನಿಕ ಯುಗದಲ್ಲಿ ಮಂತ್ರವಾದದ ಬಗ್ಗೆ ನೆಗೆಟಿವ್ ಮಾತಿರುವಾಗ, ಮಂತ್ರವಾದದ ಪವರ್ ಎಂತಹುದು ಅನ್ನುವುದನ್ನು ಈ ಪ್ರಕರಣ ತೋರಿಸಿಕೊಡುತ್ತಿದೆ. ಇದೇನು ಚಂದಮಾಮನ ಕಥೆಯಲ್ಲ. ದೂರದ ಗುಜರಾತಿನಲ್ಲಿ 35 ವರ್ಷದ ಹಿಂದೆ ನಡೆದ ಘಟನೆಯು ಈಗ ಮಂತ್ರವಾದಿಯ ಮೂಲಕ ಸಮಾಜಕ್ಕೆ ಗೊತ್ತಾಗುವಂತೆ ಆಗಿದೆ. ಹಾಗೆಯೇ ಪ್ರಕರಣವು ಅಧಿಕೃತವಾಗಿ ದಾಖಲಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!
ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
“ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
ಮಂಗಳೂರು ಯೂಟ್ಯೂಬರ್‌ಗಳ ವಿರುದ್ಧ ಬಿಎನ್‌ಎಸ್ ಅಸ್ತ್ರ ಪ್ರಯೋಗಿಸಿದ ಖಾಕಿ!….
🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
ಡೆಲಿವರಿ ಬಾಯ್‌ಗೆ ಅಡ್ಡಗಟ್ಟಿ ಹಲ್ಲೆ – ಪ್ರಕರಣ ದಾಖಲು
PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾ ಅಪ್ಡೇಟ್: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿರೋ ಯಶ್ ಡೈಲಾಗ್!
ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ
ಫೇಸ್‌ಬುಕ್ ‘ಸುಂದರಿ’ಅವಳಲ್ಲ ಅವನು!ಲವ್ ಮಾಡಿ ಹೆಂಡತಿ ಅಂದುಕೊಂಡವನು ಗಂಡಸು ಅಂತ ಗೊತ್ತಾದಾಗ ನಡೆದಿದ್ದೇ ಬೇರೆ!
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
“Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
 ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?
ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
ಬ್ಯಾಂಕ್ ಸಾಲವಿದ್ದ ಮನೆ ಮಾರಾಟ ಮಾರಿ ವಂಚನೆ
ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!