📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಗುಜರಾತ್ ರಾಜಧಾನಿಯಲ್ಲೇ ನಡೆದಂತಹ ಘಟನೆ ಇದು. ಘನ ಘೋರ ಕ್ರೈಂ ನಡೆದಿತ್ತು. ಆ ಕ್ರೈಮ್ಗೆ ಪ್ರತೀಕಾರವಾಗಿ ಜೀವ ಒಂದನ್ನೂ ತಿಂದು ಹಾಕಲಾಗಿತ್ತು. ಹೀಗೆ ಎರಡು ಕ್ರೈಂ ನಡೆದರೂ, ಯಾರಿಗೂ ಗೊತ್ತೇ ಇರಲಿಲ್ಲ. ಗುಜರಾತ್ ಪೊಲೀಸರಿಗೆ ಇದರ ಬಗ್ಗೆ ವಾಸನೆಯೂ ಬಂದಿರಲಿಲ್ಲ. ಅಂತಹ ಪ್ರಕರಣ ಒಂದನ್ನು ಮಂತ್ರವಾದಿಯೊಬ್ಬರು ಸಾಕ್ಷಿ ಸಹಿತ ಹಿಡಿದು ಹಾಕಿದ್ದಾರೆ. ಈಗ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರ ಕಲೆ ಹಾಕುತ್ತಿದ್ದಾರೆ.

ಗುಜರಾತ್ ರಾಜಧಾನಿ ಅಹಮದಾಬಾದ್ ಹೊರವಲಯದ ಕುತಬ್ ನಗರದಲ್ಲಿ ಇಂಥಹುದೊಂದು ಘಟನೆ ನಡೆದಿದೆ. ಬರೋಬ್ಬರಿ 35 ವರ್ಷದ ಹಿಂದೆ, ಒಂದು ಯುವತಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣ ಯಾರಿಗೂ ಗೊತ್ತೇ ಇರಲಿಲ್ಲ. ಆ ಯುವತಿಯು ಪ್ರೇತವಾಗಿ ತನ್ನನ್ನು ಕೊಂದ ವ್ಯಕ್ತಿಯನ್ನು ಬೆಂಬಿಡದೆ ಕಾಡಿ ಸಾಯಿಸಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಎರಡು ಹೆಣಗಳು ಉರುಳಿದ್ದವು. ಇದ್ಯಾವುದು ಗುಜರಾತ್ ಪೊಲೀಸರಿಗೂ ಗೊತ್ತಿರಲಿಲ್ಲ. ಅಕ್ಕ-ಪಕ್ಕದವರಿಗೂ ಗೊತ್ತಿರಲಿಲ್ಲ. ಅದೇ ಮನೆಯ ಸದಸ್ಯರಿಗೂ ಗೊತ್ತಿರಲಿಲ್ಲ. ಅಷ್ಟಕ್ಕೂ ಗೊತ್ತಾಗಿದ್ದು ಹೇಗೆ?

1992ಕ್ಕಿಂತಲೂ ಮುಂಚೆ ನಡೆದ ಘಟನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ನಿವಾಸಿಯಾಗಿದ್ದ ಫರ್ಜಾನಾ ಅಲಿಯಾಸ್ ಶಬನಂ ಎಂಬ ಯುವತಿಯು, ಗುಜರಾತ್ ಅಹ್ಮದಾಬಾದ್ ನಿವಾಸಿ ಸಂಶುದ್ದೀನ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಈ ಸಂಶುದ್ದೀನ್ ಪಕ್ಕಾ ಕತರ್ನಾಕ್ ವ್ಯಕ್ತಿ. ಆತ ಈ ಫರ್ಜಾನಾಳನ್ನು ಮನಸ್ಸಿನಿಂದ ಪ್ರೀತಿಸಿರಲಿಲ್ಲ, ಕೇವಲ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಅಷ್ಟೇ. ಅವನಿಗೆ ಅದಾಗಲೇ ಮದುವೆಯಾಗಿತ್ತು, ಇಬ್ಬರು ಮಕ್ಕಳು ಇದ್ದರು. ಆದರೆ ಫರ್ಜಾನಾ, ಸಂಶುದ್ದೀನ್  ಮನೆಯನ್ನು ಹುಡುಕಿಕೊಂಡು ಗುಜರಾತಿಗೆ ಬರುತ್ತಾಳೆ. ಹಾಗೆ ಮನೆಗೆ ಬಂದ

ಫರ್ಜಾನಾಳನ್ನು, ಈ ಸಂಶುದ್ದೀನ್ ಅದೇ ಅಹಮದಾಬಾದ್ನ ಕುತಬ್ ನಗರದಲ್ಲಿರುವ ತನ್ನದೇ ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಫರ್ಜಾನಾಳ ಮೇಲೆ ಹಲ್ಲೆ ನಡೆಸಿ ಅವಳನ್ನು ಅದೇ ಮನೆಯ ಎದುರುಗಡೆ ಇರುವ ಗುಂಡಿಯಲ್ಲಿ ಹಾಕಿ ಮುಚ್ಚಿ ಬಿಡುತ್ತಾನೆ. ಫಾರ್ಜಾನ ಆ ಗುಂಡಿಯಲ್ಲಿ ಜೀವಂತ ಸಮಾಧಿ  ಆಗುತ್ತಾಳೆ. ಅವಳು ತನ್ನ ಜೀವ ಇರುವವರೆಗೂ ಈ ಕಪಟಿ ಸಂಶುದ್ದೀನನ್ನು ಪ್ರೀತಿಸಿದ್ದಳು. ಯಾವಾಗ ತನ್ನ ಪ್ರಿಯಕರನೇ ಜೀವ ತೆಗೆದನು ಆಗ ಫರ್ಜಾನಾ ಆತ್ಮ ದ್ವೇಷಕ್ಕೆ ಬೀಳುತ್ತದೆ.

ಈ ಘಟನೆಯ ನಂತರ ಸಂಶುದ್ದಿನ್ ತನಗೇನು ಗೊತ್ತಿಲ್ಲದವರಂತೆ, ಸಾಚಾತರ ಇದ್ದುಬಿಡುತ್ತಾನೆ. ಈ ಕಾರಣದಿಂದ ಈ ವಿಚಾರ ಹೊರಗೆ ಬರುವುದೇ ಇಲ್ಲ. ಆದರೆ, ಕೊಲೆಯಾದ ಫರ್ಝಾನ್ ಆತ್ಮವೂ ಸುಮ್ಮನೆ ಕೂರಲಿಲ್ಲ. ಸಂಶುದ್ದೀನನ್ನು ಹಿಡಿದು ಬಿಡದೆ ಕಾಡಲು ಪ್ರಾರಂಭಿಸಿದೆ. ಆತ್ಮದ ಕಾಟಕ್ಕೆ ಸಂಶುದ್ದೀನ್ ಜೀವ ಕಳೆದುಕೊಳ್ಳುತ್ತಾನೆ. ಇದು ಸಹ ಯಾರಿಗೂ ಗೊತ್ತಾಗುವುದಿಲ್ಲ. ಸಂಶುದ್ದೀನ್ ಸಾವು ಅನುಮಾನಾಸ್ಪದವಾಗಿ ಕಂಡರೂ ಯಾವುದೇ ದಾಖಲೆಗಳಿಲ್ಲದ ಕಾರಣ, ಮನೆಯವರು ಹಾಗೂ ಊರಿನವರು ಆತನ ಕಾರ್ಯವನ್ನು ಪ್ರಶ್ನೆ ಎದುರಿಗಿದ್ದರೂ ಮಾಡಿರುತ್ತಾರೆ.

ಇದರ ನಂತರವೂ ಫರ್ಜಾನಾ ಆತ್ಮ ಸುಮ್ಮನೆ ಕೂರಲಿಲ್ಲ, ಆ ಮನೆಯ ಸುತ್ತಲೂ ಓಡಾಡಲು ಪ್ರಾರಂಭಿಸಿತು. ಕಿಟಕಿಯಲ್ಲಿ ಏನೋ ಹೋದಂತೆ ಭಾಸವಾಗುವುದು, ಪಾತ್ರೆಯನ್ನು ಇದ್ದಕ್ಕಿದ್ದಂತೆ ಬೀಳಿಸುವುದು, ರಾತ್ರಿ ವೇಳೆ ಗೆಜ್ಜೆಯ ಸದ್ದು ಕೇಳಿಸುವುದು ಹೀಗೆ ಹಲವು ರೀತಿಯಲ್ಲಿ ತನ್ನ ಇರುವಿಕೆಯನ್ನು ಆ ಆತ್ಮವೂ ಪ್ರಚುರಪಡಿಸುತ್ತಿತ್ತು. ಇದರಿಂದ ಆ ಮನೆಯವರು ಭಯಭೀತರಾಗಿದ್ದರು. ಸ್ಥಳೀಯ ಮಸೀದಿಯ ಧರ್ಮಗುರು ಬಳಿಗೆ ಹೋಗಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅವರ ಮಂತ್ರ -ತೀರ್ಥ ಸಮಸ್ಯೆಯನ್ನು ಬಗೆ ಹರಿಸುವುದಿಲ್ಲ. ಇದರಿಂದ ಅನಿವಾರ್ಯವಾಗಿ ಆ ಮನೆಯವರು, ಮಂತ್ರವಾದಿ ಒಬ್ಬರ ಮೊರೆ ಹೋಗುತ್ತಾರೆ.

ಹಾಗೆ ಆ ಮನೆಗೆ ಮಂತ್ರವಾದಿಯ ಪ್ರವೇಶವಾಗುತ್ತದೆ. ಆ ಮಂತ್ರವಾದಿಯು, ಆ ಮನೆಯಲ್ಲಿ ಕೂತು ಅದೇನು ಮಾಡಿದರೋ ಗೊತ್ತಿಲ್ಲ.  ಈ ಮನೆಯಲ್ಲಿ 35 ವರ್ಷದ ಹಿಂದೆ ಹೆಣ್ಣಿನ ಕೊಲೆಯಾಗಿದೆ ಎಂದು ಹೇಳುತ್ತಾರೆ. ಅದನ್ನು ಆ ಮನೆಯವರು ಒಪ್ಪಲು ತಯಾರಿರಲಿಲ್ಲ. ಅದಕ್ಕೆ ಕಾರಣ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಆ ಹೆಣ್ಣು, ಈಗಾಗಲೇ ತನ್ನ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಕೊಲೆ  ಮಾಡಿದೆ. ಆದರೂ, ಆ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ. ಈಗಲೇ ಆ ಒಂದು ಹೆಣ್ಣಿನ ದೇಹವನ್ನು ಹೊರಗೆ ತೆಗೆದು ಸರಿಯಾದ ರೀತಿಯಲ್ಲಿ ಸಂಸ್ಕಾರ ಮಾಡಿ ಎಲ್ಲವೂ ಸರಿಯಾಗುತ್ತದೆ ಅಂತ ಆ ಮಂತ್ರವಾದಿ ಹೇಳುತ್ತಾರೆ. ಅಷ್ಟೇ ಅಲ್ಲ, ಇದೇ ಸ್ಥಳದಲ್ಲಿ ಆ ಹೆಣ್ಣಿನ ಶವವನ್ನು ಹೂಳಲಾಗಿದೆ ಅಂತಲೂ ಮಂತ್ರವಾದಿ ಸ್ಪಷ್ಟವಾಗಿ ಹೇಳಿರುತ್ತಾರೆ.

ತಕ್ಷಣವೇ ಆ ಮನೆಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ಕೊಡುತ್ತಾರೆ. ಪೊಲೀಸರು ಒಪ್ಪಲು ರೆಡಿ ಇಲ್ಲದಿದ್ದರೂ, ಅನಿವಾರ್ಯವಾಗಿ ಆ ದೂರನ್ನು ಪಡೆಯಬೇಕಾಗುತ್ತದೆ. ಆ ದೂರು ಪಡೆದ ಪೊಲೀಸರು ಜೆಸಿಬಿ ಮೂಲಕ ಆ ಮನೆಯಲ್ಲಿರುವ ಮಂತ್ರವಾದಿ ತೋರಿಸಿದ ಜಾಗದಲ್ಲಿ ಅಗೆದು ನೋಡಿದಾಗ ಹೆಣ್ಣಿನ ಅಸ್ತಿಪಂಜರ ದೊರಕುತ್ತದೆ. ತಕ್ಷಣವೇ ಆ ಅಸ್ತಿಪಂಜರವನ್ನು ಹೊರ ತೆಗೆದು ಸಂಬಂಧ ಪಟ್ಟ ಎವಡಿಯನ್ಸ್ ಕಲೆಕ್ಟ್ ಮಾಡಿಕೊಂಡು ಅದನ್ನು ವಿಧಿ ವಿಜ್ಞಾನ ಇಲಾಖೆ ಕಳುಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಆ ಯುವತಿಯ ಕೊಲೆಯಾಗಿದ್ದು  ಹೌದು ಎನ್ನುವುದು ವಿಧಿ ವಿಜ್ಞಾನ ಇಲಾಖೆಯು ಸ್ಪಷ್ಟಪಡಿಸಿದೆ. ಹಾಗೆಯೇ ಕೊಲೆ ಮಾಡಿದ ವ್ಯಕ್ತಿಯನ್ನು ಆ ಯುವತಿಯ ಆತ್ಮವು ಪ್ರತಿಕಾರಾತ್ಮಕವಾಗಿ ಕೊಲೆ ಮಾಡಿದ್ದರೂ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಹೀಗಿರುವಾಗ ಪೊಲೀಸರಿಗೆ ಇಲ್ಲಿ ಹೆಚ್ಚಿನ ಕೆಲಸ ಇರುವುದಿಲ್ಲ. ಕೊಲೆ ಮಾಡಿದ ಕೊಲೆಗಾರ ಈಗಾಗಲೇ ಸತ್ತಾಗಿದೆ. ಕೇವಲ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಕೊಡಬೇಕು ಅಷ್ಟೇ.

ಒಟ್ಟಿನಲ್ಲಿ ಈ ಪ್ರಕರಣವು ರೋಚಕ ಸ್ಟೋರಿಯಾಗಿ ಮಾರ್ಪಾಡಾಗುತ್ತಿದೆ. ಇವತ್ತಿನ ವೈಜ್ಞಾನಿಕ ಯುಗದಲ್ಲಿ ಮಂತ್ರವಾದದ ಬಗ್ಗೆ ನೆಗೆಟಿವ್ ಮಾತಿರುವಾಗ, ಮಂತ್ರವಾದದ ಪವರ್ ಎಂತಹುದು ಅನ್ನುವುದನ್ನು ಈ ಪ್ರಕರಣ ತೋರಿಸಿಕೊಡುತ್ತಿದೆ. ಇದೇನು ಚಂದಮಾಮನ ಕಥೆಯಲ್ಲ. ದೂರದ ಗುಜರಾತಿನಲ್ಲಿ 35 ವರ್ಷದ ಹಿಂದೆ ನಡೆದ ಘಟನೆಯು ಈಗ ಮಂತ್ರವಾದಿಯ ಮೂಲಕ ಸಮಾಜಕ್ಕೆ ಗೊತ್ತಾಗುವಂತೆ ಆಗಿದೆ. ಹಾಗೆಯೇ ಪ್ರಕರಣವು ಅಧಿಕೃತವಾಗಿ ದಾಖಲಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಇರಾನ್ ಸಚಿವ ಅಬ್ಬಾಸ್ ಅರಾಘ್ಚಿ ಭಾರತಕ್ಕೆ… ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ BRICS ಸಭೆ ಮೇಲೆ ವಿಶ್ವದ ಗಮನ!ಜಾಗತಿಕ ಉದ್ವಿಗ್ನತೆಯ ನಡುವೆ ದೆಹಲಿ ರಾಜತಾಂತ್ರಿಕ ಕೇಂದ್ರಬಿಂದು!…
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
ನೀಟ್ ಪರೀಕ್ಷೆಯ ಎಡವಟ್ಟು….ಸುಳ್ಳು ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ ಅಧಿಕಾರಿಗಳು!!?
ಕಾಂಗೋದಲ್ಲಿ ಎಬೋಲಾ ಅಟ್ಟಹಾಸ:ಜಗತ್ತಿಗೆ ಮತ್ತೆ ಸಾಂಕ್ರಾಮಿಕ ಭೀತಿಯ ಗಂಟೆ..!
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ
KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
ಕರಾವಳಿಯಲ್ಲಿ ವಾಪಸ್ ಆದ ಮುಂಗಾರು: ಜುಲೈ 6ರವರೆಗೆ ಆರೆಂಜ್ ಅಲರ್ಟ್ – ಜನರಿಗೆ ಎಚ್ಚರಿಕೆ
ಹೋಟೆಲ್ನಲ್ಲಿ ಅಗ್ನಿಯ ಜ್ವಾಲೆ-ಉಸಿರುಗಟ್ಟಿದ ಹೊಗೆಯೊಳಗೆ ಅಡಗಿಹೋದ ಜೀವಗಳು ..!
ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಧರ್ಮಸ್ಥಳ-ಚಿಕ್ಕಮಗಳೂರು ಟ್ರಿಪ್‌ಗೆ ಹೊರಟ ಸ್ವಿಗ್ಗಿ ಡೆಲಿವರಿ ಬಾಯ್ಸ್… ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ, 6 ಜೀವಗಳು ಅಂತ್ಯ!
ಲಂಚದ ವಿರುದ್ಧ ದೂರು ನೀಡಿದ್ದಕ್ಕೆ ರೈತನ ಮಗನ ವೃಷಣಗಳನ್ನೇ ಒಡೆದ ಪೊಲೀಸ್ ಕ್ರೌರ್ಯ!
NEET ಗೊಂದಲ, ಮರುಪರೀಕ್ಷೆ, ಮೌಲ್ಯಮಾಪನ ದೋಷಗಳು ಮತ್ತು ವಿದ್ಯಾರ್ಥಿ ಜೀವನದ ನೋವು..
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ