📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ

ಮೇ ನಾಲ್ಕರಂದು ಚುನಾವಣೆಯ ಫಲಿತಾಂಶ ಬಂದಿದೆ. ಬಹುತೇಕವಾಗಿ ಫಲಿತಾಂಶ ಬಂದು ಒಂದು ವಾರ ಕಳೆದು ಹೋಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ ಎರಡು ಕಡೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ತಮಿಳುನಾಡಿನಲ್ಲಿ ಇದೀಗ ನೂತನ ಸರ್ಕಾರ ರಚನೆಯಾಗುತ್ತಿದೆ. ಆದರೆ ಕೇರಳದಲ್ಲಿ ನ್ನೂ ಸರ್ಕಾರ ರಚನೆಯ ಕಗ್ಗಂಟು ಮುಂದುವರೆದಿದೆ.

ಕಾಂಗ್ರೆಸ್ ಎಷ್ಟು ದುರ್ಬಲವಾಗಿದೆ ಅನ್ನುವುದಕ್ಕೆ ಇದೊಂದು ಸಾಕ್ಷಿ ಸಾಕು ನೋಡಿ. ಕೇರಳದಲ್ಲಿ ಬಹುಮತವನ್ನು ಪಡೆದಿರುವಂತಹ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಎಂ ಯಾರಾಗಬೇಕು ಅನ್ನುವುದರಲ್ಲಿಯೇ ಸಮಯ ಕಳೆಯುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಷ್ಟು ವೀಕ್ ಅನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ.

ಕೆಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಾಲ್ ಹಾಗೂ ವಿಡಿ ಸತೀಶನ್ ಇವರ ಮಧ್ಯೆ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಕೇರಳ ಕಾಂಗ್ರೆಸ್ಸಿನಲ್ಲಿ  ಸತೀಶನ ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದರೆ, ಆಯ್ಕೆಯಾದ ಶಾಸಕರ ಅಭಿಪ್ರಾಯವು, ಕೆಸಿ ವೇಣುಗಪಾಲ್ ಪರವಾಗಿದೆ. ಚೆನ್ನಿತಾಲ್ ಪರವಾಗಿಯೂ ಒಂದಷ್ಟು ಶಾಸಕರು ಬ್ಯಾಟ್ ಬೀಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಈಗ ತಲೆನೋವು ಶುರುವಾಗಿದೆಯಂತೆ.

ಕಾಂಗ್ರೆಸ್ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಡವುತ್ತಿದೆ ಅನ್ನುವುದಕ್ಕೆ ಇದೇ ಸಾಕ್ಷಿ. ಕೆ ಸಿ ವೇಣುಗೋಪಾಲ್ ಕೇರಳದ ಮುಖ್ಯಮಂತ್ರಿಯಾದರೆ, ರಾಷ್ಟ್ರೀಯ ಕಾಂಗ್ರೆಸ್ಗೆ ಹಿನ್ನಡೆಯಾಗುತ್ತದೆ ಎಂಬ ಪರಿಜ್ಞಾನ ಇರಬೇಕು. ಈಗಾಗಲೇ ವೇಣುಗೋಪಾಲ್ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಹಾಗೆಯೇ ರಾಷ್ಟ್ರದ ಬಹುತೇಕ ರಾಜ್ಯಗಳಿಗೆ ಚಿರಪರಿಚಿತ ಮುಖವಾಗಿದೆ. ಹೀಗಿರುವಾಗ, ಇಂತಹ ನಾಯಕರನ್ನು ಪಕ್ಷವು ಒಂದು ರಾಜ್ಯದ ಮುಖ್ಯಮಂತ್ರಿ ಮಾಡಿ ರಾಷ್ಟ್ರೀಯ ಕೈವೊಂದನ್ನು ಕಳೆದುಕೊಳ್ಳಬೇಕೇ? ಸತೀಶನ್ ಮತ್ತು ಚೆನ್ನಿತ್ತಲ್ ನಡುವೆ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಬುದ್ದಿವಂತಿಕೆಯ ನಡೆಯಾಗುತ್ತದೆ. ಶಶಿ ತರೂರ್ ಕಾಂಗ್ರೆಸ್ ನಿಷ್ಠೆಯನ್ನು ಕಳೆದುಕೊಳ್ಳದಿದ್ದಲ್ಲಿ ಬಹುಶಹ ಅವರಿಗೆ ಈಗ ಅವಕಾಶ ದೊಡ್ಡ ಪ್ರಮಾಣದಲ್ಲಿ ಇರುತ್ತಿತ್ತು. ಅಂತಹ ಅವಕಾಶವನ್ನು ಸ್ವಸಹ ತರೂರು ಕಳೆದುಕೊಂಡಿದ್ದಾರೆ ಎನ್ನಬಹುದು.

ಕಾಂಗ್ರೆಸ್ ಹೈಕಮಾಂಡ್ಗೆ ಕೇರಳ ಸರ್ಕಾರ ರಚನೆಯ ಕುರಿತು ಹಾಗೂ ಮುಖ್ಯಮಂತ್ರಿ ಆಯ್ಕೆಯ ಕುರಿತು ಯಾವುದೇ ಸಮಸ್ಯೆ ಎದುರಾಗಬಾರದಿತ್ತು. ಈ ಸಮಸ್ಯೆ ಎದುರಾಗಿದೆ ಎಂದರೆ, ಪಕ್ಷದ ವೀಕ್ ನೆಸ್ ಅನ್ನು ಅದು ಓಪನ್ ಮಾಡಿ ಸಾರ್ವಾಜನಿಕವಾಗಿ ತೋರಿಸುತ್ತದೆ ಅಂತಲೇ ಲೆಕ್ಕ. ಈಗಾಗುತ್ತಿರುವುದು ಅದೇ ಆಗಿದೆ. ಒಂದು ವಾರ ಕಳೆದರೂ ಬಹುಮತವಿರುವ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಆಗುತ್ತಿಲ್ಲ ಎಂದರೆ, ಇದು ಇಡೀ ದೇಶಕ್ಕೆ ಕಾಂಗ್ರೆಸ್ಸಿನ ದೌರ್ಬಲ್ಯದ ಬಗ್ಗೆ ದೊಡ್ಡ ಮೆಸೇಜನ್ನು ಕೊಡುತ್ತದೆ ಅನ್ನುವುದನ್ನು ಅರಿಯದಷ್ಟು ದಡ್ಡರು ಹೈಕಮಾಂಡ್ ಸ್ಥಾನದಲ್ಲಿ ಕೂತಂತೆ ಕಾಣುತ್ತಿದೆ. ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಒಂದೊಮ್ಮೆ ಕೇಸೀ ವೇಣುಗೋಪಾಲ್ ರವರನ್ನು ಕೇರಳದ ಮುಖ್ಯಮಂತ್ರಿ ಯನ್ನಾಗಿ ಮಾಡಿದರೆ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸುತ್ತದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ನ ದೌರ್ಬಲ್ಯ ಬಹಿರಂಗವಾಗಿ ಹರಾಜ್ ಆಗುತ್ತಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ಸ್ಕ್ಯಾಮರ್‌ಗೆ 60 ಸೆಕೆಂಡ್ ಸಾಕು… RBIಗೆ ಈಗ 60 ನಿಮಿಷ ಬೇಕಂತೆ!ಹಣ ಕಳಿಸುವ ಮುನ್ನ ಯೋಚಿಸಲು 1 ಗಂಟೆ!
ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
30 ದಿನ, 13 ನಗರಗಳು, ₹10 ಲಕ್ಷ ಖರ್ಚು! ಅಮೆರಿಕದ ದಂಪತಿಯ ಭಾರತ ಯಾತ್ರೆ ವೈರಲ್….ವೈರಲ್ ವಿಡಿಯೋದಲ್ಲಿ ಹೊರಬಿದ್ದ ಅಚ್ಚರಿಯ ಲೆಕ್ಕ!
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
Golden Hour ಉಳಿಸುವತ್ತ ಗ್ರಾಮದಿಂದ ನಗರವರೆಗೆ – ಕರ್ನಾಟಕ ಹೆಲ್ತ್ ಸಿಸ್ಟಮ್ ಮಹತ್ವದ ಹೆಜ್ಜೆ
ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ದೆಹಲಿಯಲ್ಲಿ ಬಸ್‌ನಲ್ಲಿ ನಿರ್ಭಯಾ ನೆನಪಿಸುವ ಘಟನೆ -30 ವರ್ಷದ ಮಹಿಳೆ ಗ್ಯಾಂಗ್‌ರೇಪ್ ಶಾಕ್
ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
ಡೆಲಿವರಿ ಬಾಯ್‌ಗೆ ಅಡ್ಡಗಟ್ಟಿ ಹಲ್ಲೆ – ಪ್ರಕರಣ ದಾಖಲು