📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..

    ಅಮೆರಿಕದ ಜಾರ್ಜಿಯಾದಲ್ಲಿ ನಡೆದಿರುವ ಈ ಘಟನೆ ಕೇವಲ ಒಂದು ಅಪಘಾತವಲ್ಲ, ಕೇಳುಗರ ಕಣ್ಣಾಲಿಗಳನ್ನು ಒದ್ದೆ ಮಾಡುವ ಅತ್ಯಂತ ಕರುಣಾಜನಕ ಹಾಗೂ ಭೀಕರ ದುರಂತ. ನವದಂಪತಿಗಳಾಗಿ ನೂರಾರು ಕನಸುಗಳೊಂದಿಗೆ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಟ್ಟ ಕೆಲವೇ ಗಂಟೆಗಳಲ್ಲಿ, ಮದುಮಗ ಸಾವಿನ ಮಡಿಲು ಸೇರಿದರೆ, ಮದುಮಗಳು ಹೆಣಗಾಡಿ ಬದುಕುಳಿದಿದ್ದಾಳೆ.

    ಕೇರಳ ಮೂಲದ ಈ ಅನಿವಾಸಿ ಭಾರತೀಯ ಕುಟುಂಬದಲ್ಲಿ ನಡೆದ ಆ ಕಪ್ಪು ದಿನದ ಕಣ್ಣೀರಿನ ಕಥೆ

    ಸ್ವರ್ಗದಂತಿದ್ದ ಮದುವೆ ಮನೆ

    ಕೇರಳದ ಎರ್ನಾಕುಲಂ ಜಿಲ್ಲೆಯ ಮೂವಾಟ್ಟುಪುಳ ಮೂಲದ ಜಾರ್ಜ್ ಮತ್ತು ಫೀಬಾ ಫಿಜಿ ದಂಪತಿಯ 25 ವರ್ಷದ ಮಗ ಡೇವ್ ಫಿಜಿ (Dave Fiji), ಅಮೆರಿಕದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಚರ್ಚ್ ಒಂದರಲ್ಲಿ ಪರಿಚಯವಾದ ಜಿಸ್ನಿ (Jessni) ಎಂಬ ಶುಶ್ರೂಷಕಿ (Nurse) ಜೊತೆ ಡೇವ್ ಅವರ ಪ್ರೀತಿ ಚಿಗುರಿತ್ತು. ಜಾರ್ಜಿಯಾದ ‘ದಿ ರವೆರೆ’ ಎಂಬ ಸುಂದರ ಕಲ್ಯಾಣ ಮಂಟಪದಲ್ಲಿ ಸುಮಾರು 400ಕ್ಕೂ ಹೆಚ್ಚು ಅತಿಥಿಗಳ ಸಮ್ಮುಖದಲ್ಲಿ ಇವರಿಬ್ಬರ ವಿವಾಹ ಅತ್ಯಂತ ವೈಭವದಿಂದ ನೆರವೇರಿತ್ತು. “ಅದು ಅತ್ಯಂತ ಪರಿಪೂರ್ಣವಾದ ಮದುವೆಯಾಗಿತ್ತು. ನನ್ನ ಮಗ ವರನ ಉಡುಪಿನಲ್ಲಿ ದೇವಕುಮಾರನಂತೆ ಕಂಗೊಳಿಸುತ್ತಿದ್ದ” ಎಂದು ಡೇವ್ ತಂದೆ ಆ ಕ್ಷಣವನ್ನು ನೆನೆದು ಕಣ್ಣೀರಿಡುತ್ತಾರೆ.

    ಹವಾಮಾನದ ಆತಂಕ ಮತ್ತು ಎಚ್ಚರಿಕೆ

    ಮದುವೆಯ ಸಂಭ್ರಮಾಚರಣೆ ಮುಗಿದು ರಾತ್ರಿ 9:30ರ ಸುಮಾರಿಗೆ ನವದಂಪತಿಗಳು ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಬೇಕಿತ್ತು. ಆದರೆ, ಆ ಸಮಯದಲ್ಲಿ ಜಾರ್ಜಿಯಾದ ಡಾಸನ್‌ವಿಲ್ಲೆ ಭಾಗದಲ್ಲಿ ಭಾರಿ ಮಳೆ ಮತ್ತು ದಟ್ಟವಾದ ಮಂಜು ಆವರಿಸಿತ್ತು. ಸ್ವತಃ ಕಮರ್ಷಿಯಲ್ ಪೈಲಟ್ ಆಗಿದ್ದ ಡೇವ್‌ಗೆ ವಾತಾವರಣ ಸರಿಯಿಲ್ಲ ಎಂಬುದು ತಕ್ಷಣವೇ ಅರ್ಥವಾಗಿತ್ತು. “ಇಷ್ಟು ಕಡಿಮೆ ವಿಸಿಬಿಲಿಟಿ (ಕಾಣುವಿಕೆ) ಇದ್ದಾಗ ನಾವು ಎಂದಿಗೂ ವಿಮಾನ ಹಾರಿಸುವುದಿಲ್ಲ” ಎಂದು ಡೇವ್ ಹೆಲಿಕಾಪ್ಟರ್ ಚಾಲಕನಿಗೆ ಎಚ್ಚರಿಸಿದ್ದರು. ಆದರೆ, ‘ನಾವು ಎತ್ತರದಲ್ಲಿ ಹಾರೋಣ’ ಎಂದು ಹೇಳಿದ ಹೆಲಿಕಾಪ್ಟರ್ ಪೈಲಟ್, ರಾತ್ರಿ 10:30ರ ಸುಮಾರಿಗೆ ರಾಬಿನ್ಸನ್ R66 ಹೆಲಿಕಾಪ್ಟರ್ ಅನ್ನು ಆಕಾಶಕ್ಕೆ ಹಾರಿಸಿದ. ಅದೇ ಅವರು ಮಾಡಿದ ಕಡುದೊಡ್ಡ ತಪ್ಪಾಯಿತು.

    ಕಗ್ಗತ್ತಲಲ್ಲಿ ಸಂಭವಿಸಿದ ಭೀಕರ ದುರಂತ

    ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್, ಡಾಸನ್‌ವಿಲ್ಲೆಯ ದಟ್ಟವಾದ ಕಾಡು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿತು. ಭಾರಿ ಮರಗಳ ನಡುವೆ ಹೆಲಿಕಾಪ್ಟರ್ ನುಜ್ಜುಗುಜ್ಜಾಗಿ ಬಿದ್ದಿತ್ತು. ಕಗ್ಗತ್ತಲು, ಮಳೆ ಮತ್ತು ದುರ್ಗಮ ಹಾದಿಯಾಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಅಪಘಾತ ನಡೆದ ಸ್ಥಳವನ್ನು ಪತ್ತೆ ಹಚ್ಚುವುದಕ್ಕೇ ಸತತ 5 ರಿಂದ 6 ಗಂಟೆಗಳು ಬೇಕಾದವು.

    ಎಚ್ಚರಗೊಂಡ ನರ್ಸ್ ಕಂಡ ಭೀಕರ ದೃಶ್ಯ

    ಸುಮಾರು ಐದು ಗಂಟೆಗಳ ಕಾಲ ಆ ತೀವ್ರ ಚಳಿಯಲ್ಲಿ, ನಜ್ಜುಗುಜ್ಜಾದ ಹೆಲಿಕಾಪ್ಟರ್‌ನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮದುಮಗಳು ಜಿಸ್ನಿಗೆ ಪ್ರಜ್ಞೆ ಬಂದಾಗ ಇಡೀ ಜಗತ್ತೇ ಶೂನ್ಯವಾಗಿತ್ತು. ಆಕೆ ಕಣ್ಣು ಬಿಟ್ಟಾಗ ಅವಳ ಎದೆಯ ಮೇಲೆ ಅವಳ ಪ್ರೀತಿಯ ಪತಿ ಡೇವ್ ಬಿದ್ದಿದ್ದ. ಮೈಮೇಲೆ ರಕ್ತ ಹರಡಿತ್ತು. ವೃತ್ತಿಯಿಂದ ನರ್ಸ್ ಆಗಿದ್ದ ಜಿಸ್ನಿ, ತಕ್ಷಣವೇ ಪತಿಯ ದೇಹವನ್ನು ಮುಟ್ಟಿ ಧ್ವನಿ ನೀಡಲು ಯತ್ನಿಸಿದಳು. ಆದರೆ, ಡೇವ್ ದೇಹ ಸಂಪೂರ್ಣವಾಗಿ ತಣ್ಣಗಾಗಿತ್ತು. ತನ್ನ ಕೈ ಹಿಡಿದು ಕೆಲವೇ ಗಂಟೆಗಳ ಮುನ್ನ ಸಪ್ತಪದಿ ತುಳಿದ ಪತಿ ಇನ್ನಿಲ್ಲ ಎಂಬ ಕಟು ಸತ್ಯ ಆಕೆಗೆ ಆ ಕತ್ತಲಲ್ಲೇ ಅರಿವಾಯಿತು.

    ಮರುಕಳಿಸದ ಮದುಮಗ, ಕಣ್ಣೀರಲ್ಲಿ ಮುಳುಗಿದ ಪೋಷಕರು

    ರಕ್ಷಣಾ ಸಿಬ್ಬಂದಿ ಜೆಸ್ನಿಯನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್ ಆಕೆಯ ಮೂಳೆಗಳಿಗೇನು ಮುರಿತವಾಗಿಲ್ಲ, ಆದರೆ ಮನಸ್ಸಿಗೆ ಆಗಿರುವ ಗಾಯ ಎಂದಿಗೂ ವಾಸಿಯಾಗದಂತದ್ದು. ಇತ್ತ ಮಗನ ಮದುವೆಯ ಸಂಭ್ರಮದಲ್ಲಿದ್ದ ಪೋಷಕರು ಈಗ ಹೆಣದ ಮುಂದೆ ಕೂತು ಕಣ್ಣೀರು ಹಾಕುತ್ತಿದ್ದಾರೆ. “ದೇವರು ನಮಗೆ ಅತ್ಯಂತ ಸುಂದರವಾದ ಮದುವೆ ನೀಡಿದ, ಆದರೆ ಕೆಲವೇ ಗಂಟೆಗಳಲ್ಲಿ ಎಲ್ಲವೂ ದುರಂತವಾಗಿ ಬದಲಾಯಿತು. ಈಗ ನಮಗೆ ಆ ದೇವರಷ್ಟೇ ನೆಮ್ಮದಿ ನೀಡಬೇಕು” ಎಂದು ತಂದೆ ಜಾರ್ಜ್ ಬಿಕ್ಕಳಿಸುತ್ತಿದ್ದಾರೆ.

    ಹಸೆಮಣೆ ಏರಿದ್ದ ಜೋಡಿ ಹಕ್ಕಿಗಳಲ್ಲಿ ಒಂದು ಹಕ್ಕಿ ಜೀವ ಕಳೆದುಕೊಂಡರೆ, ಮತ್ತೊಂದು ಹಕ್ಕಿ ರೆಕ್ಕೆ ಮುರಿದು ಆಸ್ಪತ್ರೆಯ ಹಾಸಿಗೆಯ ಮೇಲೆ ಅನಾಥವಾಗಿ ಬಿದ್ದಿರುವ ಈ ಘಟನೆ ಅಮೆರಿಕದ ಮಲಯಾಳಿ ಸಮುದಾಯ ಸೇರಿದಂತೆ ಇಡೀ ಭಾರತೀಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

    ##HeartbreakingNews #HelicopterCrash #RestInPeace #DaveFiji #TragicIncident

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಜುಲೈ 1ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿ…ಪಾಸ್‌ಪೋರ್ಟ್, ರೈಲ್ವೆ, ಕ್ರೆಡಿಟ್ ಕಾರ್ಡ್, ಬ್ಯಾಂಕ್… ಒಂದೇ ದಿನದಲ್ಲಿ ಹಲವು ದೊಡ್ಡ ಬದಲಾವಣೆಗಳು
    ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
    ವಿದ್ಯಾರ್ಥಿ ಪ್ರತಿಭಟನೆಗೆ ಬಿಗ್ ವಿಕ್ಟರಿ:ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ಕೊನೆಗೂ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ…!?
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    ಫೇಸ್‌ಬುಕ್ ಜಾಹೀರಾತು ನಂಬಿ ₹32.68 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ!
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    ದಲಿತ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಆರೋಪಿಗಳು ಬಂಧನ
    ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
    ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
    ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
    AIಗೆ ಒಂದು ಪ್ರಶ್ನೆ ಕೇಳಿದ್ರೆ…ಲಕ್ಷಾಂತರ ಲೀಟರ್ ನೀರು ಆವಿಯಾಗುತ್ತೆ…..!ಅದೇಗೆ.??AIಜಗತ್ತನ್ನು ಬದಲಾಯಿಸುತ್ತಿದೆ… ಆದರೆ ಶುದ್ಧ ನೀರಿನ ಜಲಮೂಲಗಳನ್ನು ಖಾಲಿ ಮಾಡುತ್ತಿದೆ.
    ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
    ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ
    ಸಿಜೆಪಿಯ ಪ್ರತಿಭಟನೆ ಬಗ್ಗೆ ತನಿಖೆ ನಡೆಸಲು ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ
    ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ರಾಮನ ಹೆಸರಲ್ಲಿ ‘ರಾವಣ’ ರಾಜ್ಯ-ಕರ್ನಾಟಕಕ್ಕೂ ತಟ್ಟಿದ ಕಳಂಕ!ರಾಮನ ಹೆಸರಲ್ಲಿ ಭಕ್ತರಿಗೇ ನಾಮ-ಅಯೋಧ್ಯೆಯ ಕೋಟಿಕೋಟಿ ಲೂಟಿಗೆ ಬೀದರ್ ಕನೆಕ್ಷನ್!
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    ಬೆಂಗಳೂರಿನಲ್ಲಿ₹2,384 ಕೋಟಿ GSTದಂಧೆ ಭೇದಿಸಿದ ಇಲಾಖೆ.. ಭರ್ಜರಿ ದಾಳಿ! ಭಾರೀ GST ಸ್ಕ್ಯಾಂ .. ಹಲವರು ಬಲೆಗೆ ಬೀಳುವ ಸಾಧ್ಯತೆ!…
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
    ಬಿಹಾರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು
    ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
    ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ