📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!

    ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿರುವ ಈ ಘಟನೆಯು ಕಾನೂನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಹಿಡಿದ ಕನ್ನಡಿಯಾಗಿದೆ. ಪ್ರಕರಣವೊಂದರ ಪ್ರಮುಖ ಆರೋಪಿಯನ್ನು ಬಂಧಿಸಲು ವಿಫಲವಾದ ಪೊಲೀಸರು, ಆತನ ಪತ್ತೆಗಾಗಿ ಆತನ ಪತ್ನಿಯನ್ನು ಗುರಿಯಾಗಿಸಿಕೊಂಡಿದ್ದರು.

    ಆ ಕತ್ತಲ ರಾತ್ರಿಯ ಆಘಾತ!

    ಘಟನೆ ನಡೆದದ್ದು ಮೇ 2023 ಸಮಯ ಸರಿಯಾಗಿ ಬೆಳಗಿನ ಜಾವ 4:15. ಇಡೀ ಜಗತ್ತೇ ಗಾಢ ನಿದ್ರೆಯಲ್ಲಿದ್ದಾಗ, ಆಕೆಯ ಮನೆಯ ಬಾಗಿಲನ್ನು ಪೊಲೀಸರು ಜೋರಾಗಿ ಬಡಿಯುತ್ತಾರೆ. ಬಾಗಿಲು ತೆರೆದ ಆಕೆಗೆ ಎದುರಾಗಿದ್ದು ಪೊಲೀಸರ ದಂಡು! ಆಕೆಯ ಪತಿ ಯಾವುದೋ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ, ಆದರೆ ಆತ ಮನೆಯಲ್ಲಿರಲಿಲ್ಲ. ಆಕೆಯ ಮೇಲಿದ್ದ ಒಂದೇ ಒಂದು ತಪ್ಪು ಅಂದರೆ, “ಗಂಡ ಎಲ್ಲಿದ್ದಾನೆ” ಎಂದು ಪೊಲೀಸರಿಗೆ ಹೇಳದೇ ಇದ್ದದ್ದು. ಮನೆಯಲ್ಲಿ 2.5 ವರ್ಷದ ಹಸುಗೂಸು ಅಳುತ್ತಿದ್ದರೂ, ದಯೆ-ದಾಕ್ಷಿಣ್ಯವಿಲ್ಲದ ಪೊಲೀಸರು ಆ ತಾಯಿ ಮತ್ತು ಮಗುವನ್ನು ಕಡುಗತ್ತಲಲ್ಲೇ ಎಳೆದುಕೊಂಡು ಪೊಲೀಸ್ ಠಾಣೆಗೆ ಹೊರಟುಬಿಡುತ್ತಾರೆ!

    ಹೈಕೋರ್ಟ್ ಎಂಬ ನ್ಯಾಯದ ದೇವಸ್ಥಾನ

    ಈ ಅನ್ಯಾಯದ ವಿರುದ್ಧ ಪ್ರಕರಣ ಗುವಾಹಟಿ ಹೈಕೋರ್ಟ್ ಮೆಟ್ಟಿಲೇರುತ್ತದೆ. ಅಂದು ಕೋರ್ಟ್ ಹಾಲ್‌ನಲ್ಲಿ ಘರ್ಜಿಸಿದ್ದು ಬೇರೆ ಯಾರೂ ಅಲ್ಲ, ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಸಂದೀಪ್ ಮೆಹ್ತಾ ಅವರು. ಇಡೀ ಕೋರ್ಟ್ ಶಾಂತವಾಗಿರುವಾಗ, ಜಡ್ಜ್ ಸಾಹೇಬರು ಪೊಲೀಸರನ್ನು ನಿಲ್ಲಿಸಿ ಒಂದೇ ಒಂದು ಖಡಕ್ ಪ್ರಶ್ನೆ ಕೇಳುತ್ತಾರೆ: “ಅಷ್ಟು ಸಣ್ಣ ಮಗು ಜೊತೆಗಿದೆ ಎಂದು ಗೊತ್ತಿದ್ದರೂ, ಮಧ್ಯರಾತ್ರಿ ಒಬ್ಬ ಮಹಿಳೆಯನ್ನು ಠಾಣೆಗೆ ಎತ್ತಿಕೊಂಡು ಬರಲು ನಿಮಗಿದ್ದ ಅಂತಹ ತುರ್ತು (Anxiety) ಆದರೂ ಏನಿತ್ತು?” ಈ ಪ್ರಶ್ನೆಗೆ ಇಡೀ ಪೊಲೀಸ್ ಪಡೆಗೆ ಮೌನ ಆವರಿಸುತ್ತದೆ, ಉತ್ತರಿಸಲು ಯಾರ ಕೈಯಲ್ಲೂ ಸಾಧ್ಯವಾಗುವುದಿಲ್ಲ.

    ಜಡ್ಜ್ ಸಾಹೇಬರ ಸಿಡಿಲಿನಂತಹ ತೀರ್ಪು!

    ಪೊಲೀಸರ ಮೌನ ಮತ್ತು ವಕೀಲರ ಸಬೂಬುಗಳಿಂದ ಆಕ್ರೋಶಗೊಂಡ ನ್ಯಾಯಾಧೀಶರು ಇತಿಹಾಸದಲ್ಲೇ ಅತ್ಯಂತ ಅಪರೂಪದ ಆದೇಶವನ್ನು ಹೊರಡಿಸುತ್ತಾರೆ. “ಪ್ರಮುಖ ಆರೋಪಿಯನ್ನು ಹಿಡಿಯಲು ನಿಮ್ಮ ಕೈಲಾಗದಿದ್ದರೆ, ಅದಕ್ಕಾಗಿ ಮಹಿಳೆಯರು ಮತ್ತು ಮಕ್ಕಳನ್ನು ಮಧ್ಯರಾತ್ರಿ ಠಾಣೆಗೆ ತಂದು ದೌರ್ಜನ್ಯ ಮಾಡುವುದು ನಿಮ್ಮ ಪ್ರತಾಪವೇ?” ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಷ್ಟಕ್ಕೇ ನಿಲ್ಲದ ಜಡ್ಜ್, ಕಾನೂನು ಉಲ್ಲಂಘಿಸಿದ ಇಡೀ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಸ್ಥಳದಲ್ಲೇ ಅಮಾನತು (Suspend)ಮಾಡಿ ಆದೇಶ ಹೊರಡಿಸುತ್ತಾರೆ! ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೋರ್ಟ್ ಮುಂದೆ ತಲೆತಗ್ಗಿಸಿ ಬೇಷರತ್ ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

    ಕಾನೂನಿನ ಪಾಠ ಮತ್ತು ಸಾರ್ವಜನಿಕರ ಜಯ

    ಈ ಘಟನೆ ಭಾರತೀಯ ಕಾನೂನಿನ CrPC ಸೆಕ್ಷನ್ 46(4) ರ ಮಹತ್ವವನ್ನು ಜಗತ್ತಿಗೆ ಸಾರುತ್ತದೆ. ಯಾವುದೇ ಮಹಿಳೆಯನ್ನು ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೆ ಮುನ್ನ ಬಂಧಿಸುವಂತಿಲ್ಲ ಎಂಬ ನಿಯಮವನ್ನು ಈ ಆದೇಶ ಎತ್ತಿ ಹಿಡಿಯುತ್ತದೆ. ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಜಸ್ಟಿಸ್ ಸಂದೀಪ್ ಮೆಹ್ತಾ ಅವರ ಈ ಸಿಂಹದಂತಹ ನಡೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಜನರ ಮನ ಗೆದ್ದಿದೆ. “ಪೊಲೀಸರು ಜನಸಾಮಾನ್ಯರನ್ನು ಹೆದರಿಸುವ ರೌಡಿಗಳಲ್ಲ, ಅವರು ಸಾರ್ವಜನಿಕರ ಸೇವಕರು” ಎಂಬ ಸಂದೇಶ ಇಡೀ ದೇಶಕ್ಕೆ ರವಾನೆಯಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. “ಪೊಲೀಸರು ಸಾರ್ವಜನಿಕರ ಸೇವಕರಾಗಬೇಕೇ ಹೊರತು ಭಯದ ಮೂಲವಾಗಬಾರದು” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪು ಮಾಡಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಂಡ ಜಸ್ಟಿಸ್ ಸಂದೀಪ್ ಮೆಹ್ತಾ ಅವರ ಮಾನವೀಯತೆ ಮತ್ತು ನ್ಯಾಯ ಪ್ರಜ್ಞೆಯನ್ನು ದೇಶಾದ್ಯಂತ ಜನರು ಕೊಂಡಾಡುತ್ತಿದ್ದಾರೆ.

    #Justice #WomenRights #HighCourt #PoliceAccountability #SandeepMehta #KannadaNews #HumanRights"

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಇಳಿದ ಚಿನ್ನದ ಬೆಲೆ….!ಖರೀದಿದಾರರಿಗೆ ಬಂಪರ್ ರಿಲೀಫ್.
    ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
    ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
    ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
    ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ದಾವೂದ್ ಇಬ್ರಾಹಿಂನ ಆಪ್ತ. ಸಲೀಂ ಡೋಲಾ ಬಂದನ ವಿದೇಶದಲ್ಲಿ ಅಡಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    BRICS ಸಭೆಯಲ್ಲಿ UAE ಮೇಲೆ ಇರಾನ್ ಕಿಡಿ! ಇಸ್ರೇಲ್–ಇರಾನ್ ಯುದ್ಧ – ಇಸ್ರೇಲ್‌ಗೆ UAE ಗುಪ್ತ ಬೆಂಬಲವೇ?
    ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
    ಬ್ರಹ್ಮಾವರದ ಹಲಸು ಮೇಳ ಮಾಡಿದ ಹೊಲಸು – ಸಾರ್ವಜನಿಕರ ಆಕ್ರೋಶ
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
    “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
    ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
    ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
    ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
    ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
    ದಾವಣಗೆರೆ ಬೆಚ್ಚಿಬಿದ್ದಿದೆ! 41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ