📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…

2010 ಮೇ 22…
ಆ ಬೆಳಗ್ಗೆ ಮಂಗಳೂರಿನ ಆಕಾಶ ಆ ದಿನ ಸಾಮಾನ್ಯ ಬೆಳಗ್ಗೆಯಂತೆ ಕಾಣುತ್ತಿತ್ತು. ದುಬೈನಿಂದ ಹಾರಿಬಂದಿದ್ದ Air India Express Flight 812 crashವಿಮಾನದಲ್ಲಿ ಅನೇಕ ಕುಟುಂಬಗಳ ಕನಸುಗಳು, ಭವಿಷ್ಯಗಳು, ನಿರೀಕ್ಷೆಗಳು ಕೂಡ ಇದ್ದವು. ದುಬೈಯಲ್ಲಿ ದುಡಿದು ಮನೆಗೆ ಮರಳುತ್ತಿದ್ದವರು… ಮಕ್ಕಳಿಗಾಗಿ ಆಟಿಕೆಗಳನ್ನು ತಂದ ತಂದೆಯರು… ವಯಸ್ಸಾದ ಅಮ್ಮನನ್ನು ನೋಡಲು ಬರುತ್ತಿದ್ದ ಮಕ್ಕಳು…. ಕೆಲವರು ವರ್ಷಗಳ ಬಳಿಕ ತಮ್ಮ ಮನೆಗೆ ಮರಳುತ್ತಿದ್ದರು… ಕೆಲವರು ಮಕ್ಕಳಿಗಾಗಿ… ಕೆಲವರು ವೃದ್ಧ ತಾಯಿಯನ್ನು ನೋಡಲು ಆತುರದಲ್ಲಿದ್ದರು…… ಎಲ್ಲರಿಗೂ ಅದು ಸಂತಸದ ಪ್ರಯಾಣವಾಗಬೇಕಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಆ ಪ್ರಯಾಣ ದುರಂತದ ಕಥೆಯಾಯಿತು.

ಬೆಳಿಗ್ಗೆ ಸುಮಾರು 6.20ಕ್ಕೆ ವಿಮಾನ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದ ‘ಟೇಬಲ್-ಟಾಪ್’ ರನ್‌ವೇ ಮೇಲೆ ಇಳಿಯಲು ಪ್ರಯತ್ನಿಸಿತು. ಆದರೆ ರನ್‌ವೇ ದಾಟಿ ಮುಂದೆ ಸಾಗಿದ ವಿಮಾನ ಕೆಂಜಾರಿನ ಆಳವಾದ ಕಣಿವೆಗೆ ಉರುಳಿಬಿದ್ದು ಬೆಂಕಿಗಾಹುತಿಯಾಯಿತು. ಆ ಕ್ಷಣದ ಭೀಕರ ಸದ್ದು, ಆಕಾಶಕ್ಕೆ ಏರಿದ ಜ್ವಾಲೆಗಳು, ಜನರ ಕಿರುಚಾಟ… ಮಂಗಳೂರು ಎಂದಿಗೂ ಮರೆಯಲಾರದ ನೋವಿನ ದೃಶ್ಯವಾಗಿತ್ತು.

166 ಮಂದಿಯಿದ್ದ ವಿಮಾನದಲ್ಲಿ 158 ಮಂದಿ ಸ್ಥಳದಲ್ಲೇ ಮೃತಪಟ್ಟರು. ಹಲವರು ಸಜೀವ ದಹನವಾಗಿದ್ದರು. ಮೃತರಲ್ಲಿ ಮಕ್ಕಳು, ಹಸುಗೂಸುಗಳು, ಮಹಿಳೆಯರು, ವಿಮಾನ ಸಿಬ್ಬಂದಿ ಎಲ್ಲರೂ ಸೇರಿದ್ದರು. ಕೇವಲ 8 ಮಂದಿ ಮಾತ್ರ ಬದುಕುಳಿದರು. ಅವರ ಬದುಕು ನಿಜಕ್ಕೂ ಪವಾಡವೇ ಸರಿ. ಆದರೆ ಅವರು ಹೇಳಿದ ಆ ಕ್ಷಣಗಳ ನೆನಪು ಕೇಳಿದರೂ ಇಂದಿಗೂ ಮೈ ಜುಮ್ಮೆನಿಸುತ್ತದೆ.

ಅಪಘಾತದ ನಂತರ ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಜೀವದ ಹಂಗು ತೊರೆದು ಸಹಾಯಕ್ಕೆ ಧಾವಿಸಿದ್ದರು. ಬೆಂಕಿಯ ಜ್ವಾಲೆಗಳ ನಡುವೆ ಹಲವರನ್ನು ಹೊರತೆಗೆದಲು ಯತ್ನಿಸಲಾಯಿತು. ಆದರೆ ಹಲವರ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಹೋಗಿದ್ದವು. ಅಂತಹ 12 ಮೃತದೇಹಗಳನ್ನು ಕೂಳೂರಿನ ಫಲ್ಗುಣಿ (ಗುರುಪುರ) ನದಿ ತೀರದಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಆ ಕ್ಷಣ ಕುಟುಂಬಸ್ಥರ ಆಕ್ರಂದನ ಕಲ್ಲನ್ನೂ ಕರಗಿಸುವಂತಿತ್ತು.

ನಂತರ ಆ ಸ್ಥಳದಲ್ಲೇ ಸರ್ಕಾರ ಸಂತ್ರಸ್ತರ ನೆನಪಿಗಾಗಿ ಸುಂದರ ಸ್ಮಾರಕ ಉದ್ಯಾನವನವನ್ನು ನಿರ್ಮಿಸಿತು. ಇಂದು ಆ ಸ್ಮಾರಕ ಕೇವಲ ಒಂದು ಉದ್ಯಾನವಲ್ಲ… ಅದು ನೂರಾರು ಜೀವಗಳ ಮೌನ ನೆನಪು. ಅಲ್ಲಿ ನಿರ್ಮಿಸಿರುವ ಸ್ಮಾರಕ ಶಿಲೆಯಲ್ಲಿ ಮೃತಪಟ್ಟವರ ಸ್ಮರಣೆ ಅಚ್ಚೊತ್ತಲಾಗಿದೆ. ಪ್ರತಿವರ್ಷ ಮೇ 22ರಂದು ಜಿಲ್ಲಾಡಳಿತ, ಸ್ಥಳೀಯರು ಹಾಗೂ ಮೃತರ ಕುಟುಂಬಸ್ಥರು ಅಲ್ಲಿಗೆ ಬಂದು ಹೂವಿನ ನಮನ ಸಲ್ಲಿಸುತ್ತಾರೆ. ಕೆಲವರು ಮೌನವಾಗಿ ನಿಂತು ಕಣ್ಣೀರು ಹಾಕುತ್ತಾರೆ… ಕೆಲವರು ತಮ್ಮ ಪ್ರೀತಿಪಾತ್ರರ ಫೋಟೋ ಹಿಡಿದು ಅಳುತ್ತಾರೆ… ಆ ಸ್ಥಳದಲ್ಲಿ ಇನ್ನೂ ಒಂದು ವಿಚಿತ್ರ ಮೌನದ ನೋವು ಅನುಭವವಾಗುತ್ತದೆ.

ದುರಂತದ ನಂತರ ಪರಿಹಾರದ ಪ್ರಶ್ನೆಯೂ ದೊಡ್ಡ ಚರ್ಚೆಯಾಗಿತ್ತು. ಅನೇಕ ಕುಟುಂಬಗಳು ತಮ್ಮ ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದವು. ಕೆಲ ಮಕ್ಕಳ ಶಿಕ್ಷಣ ಮಧ್ಯದಲ್ಲೇ ನಿಂತಿತು… ಕೆಲ ಮನೆಗಳಲ್ಲಿ ಸಂಪಾದನೆ ಮಾಡುವ ಏಕೈಕ ವ್ಯಕ್ತಿಯೇ ಇರಲಿಲ್ಲ. ಪರಿಹಾರ ನೀಡಲು ಕಾನೂನು ಸಮಿತಿಯನ್ನು ನೇಮಿಸಲಾಯಿತು. ಕೆಲವು ಕುಟುಂಬಗಳಿಗೆ ಕೋಟ್ಯಾಂತರ ರೂಪಾಯಿ ಪರಿಹಾರ ದೊರಕಿದರೂ, “ನಮ್ಮವರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ?” ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಉಳಿಯಿತು. ಇನ್ನೂ ಕೆಲವು ಕುಟುಂಬಗಳು ನ್ಯಾಯಕ್ಕಾಗಿ ವರ್ಷಗಳ ಕಾಲ ಕಾನೂನು ಹೋರಾಟ ಮುಂದುವರಿಸಿವೆ.

ಈ ದುರಂತ ದೇಶದ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಘಟನೆಗಳಲ್ಲಿ ಒಂದಾಗಿ ಉಳಿಯಿತು. ಬಳಿಕ ‘ಟೇಬಲ್-ಟಾಪ್’ ರನ್‌ವೇಗಳ ಸುರಕ್ಷತೆ ಬಗ್ಗೆ ದೇಶಾದ್ಯಂತ ಚರ್ಚೆಗಳು ಆರಂಭವಾದವು. ಪೈಲಟ್‌ಗಳ ತರಬೇತಿ, ಲ್ಯಾಂಡಿಂಗ್‌ ವ್ಯವಸ್ಥೆ ಮತ್ತು ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಲಾಯಿತು.

ಆದರೆ…
ನಿಯಮಗಳು ಬದಲಾಗಬಹುದು…
ವಿಮಾನ ನಿಲ್ದಾಣಗಳು ಸುಧಾರಿಸಬಹುದು…
ಪರಿಹಾರ ಹಣ ಸಿಗಬಹುದು…
ಆದರೆ ಆ ದಿನ ಕಳೆದುಹೋದ ಜೀವಗಳು ಮಾತ್ರ ಮತ್ತೆ ಮರಳಿ ಬರುವುದಿಲ್ಲ.

ಇಂದಿಗೂ ಮಂಗಳೂರಿನಲ್ಲಿ ಮೇ 22 ಬಂದಾಗ ಹಲವರ ಮನಸ್ಸಿನಲ್ಲಿ ಅಗಾಧ ನೋವು ಎದ್ದೇಳುತ್ತದೆ —
“ಆ ದಿನ ಆ ವಿಮಾನ ಸುರಕ್ಷಿತವಾಗಿ ಇಳಿದಿದ್ದರೆ… ಎಷ್ಟು ಮನೆಗಳು ಇಂದು ನಗುತ್ತಿರುತ್ತಿತ್ತೋ. …”

COMMENTS

Login with Gmail to comment

ಇನ್ನಷ್ಟು ಸುದ್ದಿ

ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
“ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
“ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
ಕೊನೆಗೂ ಸೋತ ಖಾಕಿ….!!!
ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
Forex ಟ್ರೇಡಿಂಗ್ ಹೆಸರಲ್ಲಿ 3.5 ಲಕ್ಷ ವಂಚನೆ – ಆರೋಪಿ ವಿರುದ್ಧ ಪ್ರಕರಣ ದಾಖಲು
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ