📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…

    2010 ಮೇ 22…
    ಆ ಬೆಳಗ್ಗೆ ಮಂಗಳೂರಿನ ಆಕಾಶ ಆ ದಿನ ಸಾಮಾನ್ಯ ಬೆಳಗ್ಗೆಯಂತೆ ಕಾಣುತ್ತಿತ್ತು. ದುಬೈನಿಂದ ಹಾರಿಬಂದಿದ್ದ Air India Express Flight 812 crashವಿಮಾನದಲ್ಲಿ ಅನೇಕ ಕುಟುಂಬಗಳ ಕನಸುಗಳು, ಭವಿಷ್ಯಗಳು, ನಿರೀಕ್ಷೆಗಳು ಕೂಡ ಇದ್ದವು. ದುಬೈಯಲ್ಲಿ ದುಡಿದು ಮನೆಗೆ ಮರಳುತ್ತಿದ್ದವರು… ಮಕ್ಕಳಿಗಾಗಿ ಆಟಿಕೆಗಳನ್ನು ತಂದ ತಂದೆಯರು… ವಯಸ್ಸಾದ ಅಮ್ಮನನ್ನು ನೋಡಲು ಬರುತ್ತಿದ್ದ ಮಕ್ಕಳು…. ಕೆಲವರು ವರ್ಷಗಳ ಬಳಿಕ ತಮ್ಮ ಮನೆಗೆ ಮರಳುತ್ತಿದ್ದರು… ಕೆಲವರು ಮಕ್ಕಳಿಗಾಗಿ… ಕೆಲವರು ವೃದ್ಧ ತಾಯಿಯನ್ನು ನೋಡಲು ಆತುರದಲ್ಲಿದ್ದರು…… ಎಲ್ಲರಿಗೂ ಅದು ಸಂತಸದ ಪ್ರಯಾಣವಾಗಬೇಕಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಆ ಪ್ರಯಾಣ ದುರಂತದ ಕಥೆಯಾಯಿತು.

    ಬೆಳಿಗ್ಗೆ ಸುಮಾರು 6.20ಕ್ಕೆ ವಿಮಾನ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದ ‘ಟೇಬಲ್-ಟಾಪ್’ ರನ್‌ವೇ ಮೇಲೆ ಇಳಿಯಲು ಪ್ರಯತ್ನಿಸಿತು. ಆದರೆ ರನ್‌ವೇ ದಾಟಿ ಮುಂದೆ ಸಾಗಿದ ವಿಮಾನ ಕೆಂಜಾರಿನ ಆಳವಾದ ಕಣಿವೆಗೆ ಉರುಳಿಬಿದ್ದು ಬೆಂಕಿಗಾಹುತಿಯಾಯಿತು. ಆ ಕ್ಷಣದ ಭೀಕರ ಸದ್ದು, ಆಕಾಶಕ್ಕೆ ಏರಿದ ಜ್ವಾಲೆಗಳು, ಜನರ ಕಿರುಚಾಟ… ಮಂಗಳೂರು ಎಂದಿಗೂ ಮರೆಯಲಾರದ ನೋವಿನ ದೃಶ್ಯವಾಗಿತ್ತು.

    166 ಮಂದಿಯಿದ್ದ ವಿಮಾನದಲ್ಲಿ 158 ಮಂದಿ ಸ್ಥಳದಲ್ಲೇ ಮೃತಪಟ್ಟರು. ಹಲವರು ಸಜೀವ ದಹನವಾಗಿದ್ದರು. ಮೃತರಲ್ಲಿ ಮಕ್ಕಳು, ಹಸುಗೂಸುಗಳು, ಮಹಿಳೆಯರು, ವಿಮಾನ ಸಿಬ್ಬಂದಿ ಎಲ್ಲರೂ ಸೇರಿದ್ದರು. ಕೇವಲ 8 ಮಂದಿ ಮಾತ್ರ ಬದುಕುಳಿದರು. ಅವರ ಬದುಕು ನಿಜಕ್ಕೂ ಪವಾಡವೇ ಸರಿ. ಆದರೆ ಅವರು ಹೇಳಿದ ಆ ಕ್ಷಣಗಳ ನೆನಪು ಕೇಳಿದರೂ ಇಂದಿಗೂ ಮೈ ಜುಮ್ಮೆನಿಸುತ್ತದೆ.

    ಅಪಘಾತದ ನಂತರ ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಜೀವದ ಹಂಗು ತೊರೆದು ಸಹಾಯಕ್ಕೆ ಧಾವಿಸಿದ್ದರು. ಬೆಂಕಿಯ ಜ್ವಾಲೆಗಳ ನಡುವೆ ಹಲವರನ್ನು ಹೊರತೆಗೆದಲು ಯತ್ನಿಸಲಾಯಿತು. ಆದರೆ ಹಲವರ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಹೋಗಿದ್ದವು. ಅಂತಹ 12 ಮೃತದೇಹಗಳನ್ನು ಕೂಳೂರಿನ ಫಲ್ಗುಣಿ (ಗುರುಪುರ) ನದಿ ತೀರದಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಆ ಕ್ಷಣ ಕುಟುಂಬಸ್ಥರ ಆಕ್ರಂದನ ಕಲ್ಲನ್ನೂ ಕರಗಿಸುವಂತಿತ್ತು.

    ನಂತರ ಆ ಸ್ಥಳದಲ್ಲೇ ಸರ್ಕಾರ ಸಂತ್ರಸ್ತರ ನೆನಪಿಗಾಗಿ ಸುಂದರ ಸ್ಮಾರಕ ಉದ್ಯಾನವನವನ್ನು ನಿರ್ಮಿಸಿತು. ಇಂದು ಆ ಸ್ಮಾರಕ ಕೇವಲ ಒಂದು ಉದ್ಯಾನವಲ್ಲ… ಅದು ನೂರಾರು ಜೀವಗಳ ಮೌನ ನೆನಪು. ಅಲ್ಲಿ ನಿರ್ಮಿಸಿರುವ ಸ್ಮಾರಕ ಶಿಲೆಯಲ್ಲಿ ಮೃತಪಟ್ಟವರ ಸ್ಮರಣೆ ಅಚ್ಚೊತ್ತಲಾಗಿದೆ. ಪ್ರತಿವರ್ಷ ಮೇ 22ರಂದು ಜಿಲ್ಲಾಡಳಿತ, ಸ್ಥಳೀಯರು ಹಾಗೂ ಮೃತರ ಕುಟುಂಬಸ್ಥರು ಅಲ್ಲಿಗೆ ಬಂದು ಹೂವಿನ ನಮನ ಸಲ್ಲಿಸುತ್ತಾರೆ. ಕೆಲವರು ಮೌನವಾಗಿ ನಿಂತು ಕಣ್ಣೀರು ಹಾಕುತ್ತಾರೆ… ಕೆಲವರು ತಮ್ಮ ಪ್ರೀತಿಪಾತ್ರರ ಫೋಟೋ ಹಿಡಿದು ಅಳುತ್ತಾರೆ… ಆ ಸ್ಥಳದಲ್ಲಿ ಇನ್ನೂ ಒಂದು ವಿಚಿತ್ರ ಮೌನದ ನೋವು ಅನುಭವವಾಗುತ್ತದೆ.

    ದುರಂತದ ನಂತರ ಪರಿಹಾರದ ಪ್ರಶ್ನೆಯೂ ದೊಡ್ಡ ಚರ್ಚೆಯಾಗಿತ್ತು. ಅನೇಕ ಕುಟುಂಬಗಳು ತಮ್ಮ ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದವು. ಕೆಲ ಮಕ್ಕಳ ಶಿಕ್ಷಣ ಮಧ್ಯದಲ್ಲೇ ನಿಂತಿತು… ಕೆಲ ಮನೆಗಳಲ್ಲಿ ಸಂಪಾದನೆ ಮಾಡುವ ಏಕೈಕ ವ್ಯಕ್ತಿಯೇ ಇರಲಿಲ್ಲ. ಪರಿಹಾರ ನೀಡಲು ಕಾನೂನು ಸಮಿತಿಯನ್ನು ನೇಮಿಸಲಾಯಿತು. ಕೆಲವು ಕುಟುಂಬಗಳಿಗೆ ಕೋಟ್ಯಾಂತರ ರೂಪಾಯಿ ಪರಿಹಾರ ದೊರಕಿದರೂ, “ನಮ್ಮವರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ?” ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಉಳಿಯಿತು. ಇನ್ನೂ ಕೆಲವು ಕುಟುಂಬಗಳು ನ್ಯಾಯಕ್ಕಾಗಿ ವರ್ಷಗಳ ಕಾಲ ಕಾನೂನು ಹೋರಾಟ ಮುಂದುವರಿಸಿವೆ.

    ಈ ದುರಂತ ದೇಶದ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಘಟನೆಗಳಲ್ಲಿ ಒಂದಾಗಿ ಉಳಿಯಿತು. ಬಳಿಕ ‘ಟೇಬಲ್-ಟಾಪ್’ ರನ್‌ವೇಗಳ ಸುರಕ್ಷತೆ ಬಗ್ಗೆ ದೇಶಾದ್ಯಂತ ಚರ್ಚೆಗಳು ಆರಂಭವಾದವು. ಪೈಲಟ್‌ಗಳ ತರಬೇತಿ, ಲ್ಯಾಂಡಿಂಗ್‌ ವ್ಯವಸ್ಥೆ ಮತ್ತು ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಲಾಯಿತು.

    ಆದರೆ…
    ನಿಯಮಗಳು ಬದಲಾಗಬಹುದು…
    ವಿಮಾನ ನಿಲ್ದಾಣಗಳು ಸುಧಾರಿಸಬಹುದು…
    ಪರಿಹಾರ ಹಣ ಸಿಗಬಹುದು…
    ಆದರೆ ಆ ದಿನ ಕಳೆದುಹೋದ ಜೀವಗಳು ಮಾತ್ರ ಮತ್ತೆ ಮರಳಿ ಬರುವುದಿಲ್ಲ.

    ಇಂದಿಗೂ ಮಂಗಳೂರಿನಲ್ಲಿ ಮೇ 22 ಬಂದಾಗ ಹಲವರ ಮನಸ್ಸಿನಲ್ಲಿ ಅಗಾಧ ನೋವು ಎದ್ದೇಳುತ್ತದೆ —
    “ಆ ದಿನ ಆ ವಿಮಾನ ಸುರಕ್ಷಿತವಾಗಿ ಇಳಿದಿದ್ದರೆ… ಎಷ್ಟು ಮನೆಗಳು ಇಂದು ನಗುತ್ತಿರುತ್ತಿತ್ತೋ. …”

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ಒಂದೇ ಫ್ಲಾಟ್ ಇಬ್ಬಿಬ್ಬಿರ ಹೆಸರಲ್ಲಿ ..!ಡಬಲ್ ಡಾಕ್ಯುಮೆಂಟ್ ದಂಧೆ ಬಯಲು –ಕೋಟಿ ಕೋಟಿ ವಂಚನೆ ಮಾಡಿ ಆರೋಪಿ ಪರಾರಿ! ರಿಯಲ್ ಎಸ್ಟೇಟ್ ಶಾಕ್….
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ಯಶ್ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ….!
    ಉಡುಪಿಯಲ್ಲಿ  ಬೆಟ್ಟಿಂಗ್ ಮಾಫಿಯಾದ ಚಟುವಟಿಕೆಯನ್ನು ಡೆತ್ ನೋಟ್ ರಿವಿಲ್ ಮಾಡಿತೇ?
    ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದ  ಪಾಪಿ ತಾಯಿ
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    21 ದಿನ ಹಸಿದ ಹೋರಾಟಗಾರ ಆಸ್ಪತ್ರೆಗೆ..ಸರ್ಕಾರ ಏಕೆ ಇನ್ನೂ ಮೌನ!?????ಯುವಜನರ ಆಕ್ರೋಶದ ಕಟ್ಟೆ ಒಡೆಯುವ ಮೊದಲೇ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ….!!??
    ಇದು ಕಾಕ್ರೋಚ್ ಪವರ್, ಯಾರು ಮಾಡಲಾಗದ್ದನ್ನು ಮಾಡಿದ  ಸ್ಟೂಡೆಂಟ್ಸ್
    ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…
    ಬಿಹಾರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು
    ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
    ವೈರಲ್ ಆದ ಒಂದೇ ಒಂದು ಪಂಚ್ … ಐಸಿಯು ಕೋಮಾವರೆಗೆ ! ಬೆಚ್ಚಿಬೀಳಿಸಿದ ಜಿಮ್ ಪಂಚ್ ವೀಡಿಯೋ.ದೇಹ ಗಟ್ಟಿಯಾಗಿತ್ತು… ಮನಸ್ಸು ದುರ್ಬಲವಾಗಿತ್ತು!
    ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!
    ಸಮಾಜಸೇವಕನ ಮುಖವಾಡದ ಹಿಂದೆ ಡ್ರಗ್ಸ್ ದಂಧೆ?ಅದು ಆ್ಯಂಬುಲೆನ್ಸ್ ನಲ್ಲಿ ..!ಚಾಲಕ ಜಲೀಲ್ ಬಾಬಾ ಪರಾರಿ!ಆತನಿಗೆ ಆಶ್ರಯ ಅಥವಾ ಪರಾರಿಯಾಗಲು ಸಹಾಯ ಮಾಡಿದವರ ಮೇಲೂ ಕಾನೂನು ಕ್ರಮ
    ಡಾನ್ ಹೇಮಂತ್ ಪೂಜಾರಿ ಸಹೋದರ ವಶಕ್ಕೆ?!?
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
    ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..