📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..

ರಾಜ್ಯ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳು (Free Schemes) ರಾಜ್ಯದ ಆರ್ಥಿಕತೆಗೆ ದೊಡ್ಡ ಹೊರೆ ಆಗುತ್ತಿದೆ . ಸರ್ಕಾರದ ಉಚಿತ ಯೋಜನೆಗಳ ಹೊರೆ ಕೊನೆಗೆ ಜನಸಾಮಾನ್ಯರಿಗೆ .
ಉಚಿತ ಯೋಜನೆಗಳು ಜನರಿಗೆ ಸಹಾಯ ಮಾಡುತ್ತವೆ.ಆದರೆ ಅವುಗಳ ಆರ್ಥಿಕ ಹೊರೆ ದೊಡ್ಡದು.ಸಾಲ ಹೆಚ್ಚಾದರೆ ರಾಜ್ಯದ ಹಣಕಾಸು ಸ್ಥಿರತೆ ಕುಸಿಯಬಹುದು.ಭವಿಷ್ಯದಲ್ಲಿ ತೆರಿಗೆ ಹೆಚ್ಚಾಗುವ ಸಾಧ್ಯತೆ ಇದೆ.

ಸರ್ಕಾರದ ಯೋಜನೆಗಳ ನಿಜವಾದ ವೆಚ್ಚ ಅಂಕಿ-ಅಂಶಗಳು CAG ವರದಿ ಪ್ರಕಾರ ,

ಪ್ರಮುಖ 5 ಯೋಜನೆಗಳಾದ
ಗೃಹಲಕ್ಷ್ಮಿ (Gruha Lakshmi)ಮಹಿಳೆಯರಿಗೆ ₹2000ವೆಚ್ಚ: ₹16,964 ಕೋಟಿ

ಗೃಹ ಜ್ಯೋತಿ (Gruha Jyothi)200 ಯೂನಿಟ್ ಉಚಿತ ವಿದ್ಯುತ್ವೆಚ್ಚ: ₹8,900 ಕೋಟಿ

ಅನ್ನಭಾಗ್ಯ (Anna Bhagya)ಉಚಿತ ಅಕ್ಕಿ ವೆಚ್ಚ: ₹7,384 ಕೋಟಿ

ಶಕ್ತಿ ಯೋಜನೆ (Shakti)ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವೆಚ್ಚ: ₹3,200 ಕೋಟಿ

ಯುವ ನಿಧಿ (Yuva Nidhi)ನಿರುದ್ಯೋಗ ಭತ್ಯೆ ವೆಚ್ಚ: ₹88 ಕೋಟಿ.

ಒಟ್ಟು ವೆಚ್ಚ ಸುಮಾರು ₹36,500 ಕೋಟಿ ವರ್ಷಕ್ಕೆ

ಬಸ್ಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ ಈ ಯೋಜನೆಗಳ ನಂತರ:ರಾಜ್ಯದ ಸಾಲದ ನಿಜವಾದ ಸ್ಥಿತಿ

Fiscal deficit₹46,623 ಕೋಟಿ → ₹65,522 ಕೋಟಿ ,

ಸರ್ಕಾರ ಸುಮಾರು ₹63,000 ಕೋಟಿ ಸಾಲ ತೆಗೆದುಕೊಂಡಿದೆ.

ಈ ಯೋಜನೆಗಳಿಗೆ ಸರ್ಕಾರ ವರ್ಷಕ್ಕೆ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ. ಅಂದಾಜುಗಳ ಪ್ರಕಾರ 2025 ವೇಳೆಗೆ – ಸಾಲ ಹೆಚ್ಚಾಗಬಹುದು 2026–2027 ವೇಳೆಗೆ – ಇನ್ನಷ್ಟು ಏರಿಕೆ ಸಾಧ್ಯ.ಇದರಿಂದ ರಾಜ್ಯದ ಹಣಕಾಸು ಸ್ಥಿತಿ ದುರ್ಬಲವಾಗುವ ಸಾಧ್ಯತೆ ಯನ್ನ ಅಲ್ಲಗೆಳೆಯಲಾಗದು.

ರಾಜ್ಯದ ಒಟ್ಟು ಸಾಲವನ್ನು ಜನಸಂಖ್ಯೆಗೆ ಹಂಚಿದರೆ ಪ್ರತಿ ನಾಗರಿಕನ ಮೇಲೆ ಸುಮಾರು ₹1.10 ಲಕ್ಷ ಕ್ಕೂ ಹೆಚ್ಚು ಸಾಲದ ಹೊರೆ ಬರುವ ಸಾಧ್ಯತೆ ಇದೆ. ರಾಜ್ಯದ ಸಾಲವನ್ನು ಕೊನೆಗೆ ಮಧ್ಯಮ ವರ್ಗದ ಜನರು ತೆರಿಗೆ ಮೂಲಕ ಹೊರುತ್ತಾರೆ. ಸರ್ಕಾರದ ಉಚಿತ ಯೋಜನೆಗಳ ಭಾರವನ್ನು ಕೊನೆಗೆ ಜನರು ಮತ್ತು ರಾಜ್ಯದ ಆರ್ಥಿಕತೆ ಹೊರಬೇಕಾಗುತ್ತೆ .

ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಜನಪ್ರಿಯವಾಗಿದ್ದರೂ,ಅವುಗಳಿಗೆ ದೊಡ್ಡ ಹಣಕಾಸು ವೆಚ್ಚ ಇದೆ.ಇದರಿಂದ ರಾಜ್ಯದ ಸಾಲ ಹೆಚ್ಚುತ್ತಿದೆ,ದೀರ್ಘಕಾಲದಲ್ಲಿ ಇದು ಆರ್ಥಿಕ ಹೊರೆಯಾಗುವುದನ್ನ ತಪ್ಪಿಸಲಾಗದು.ಸಾಮಾಜಿಕ ಭದ್ರತಾ ಯೋಜನೆಗಳಿಂದ ಬಡವರಿಗೆ ಸಹಾಯ ಆದ್ರೂ ಸಾಮಾಜಿಕ ಕಲ್ಯಾಣಗಳಾದ್ರು ಸಮಸ್ಯೆ ಆಗೋದು ಸರ್ಕಾರದ ಬೊಕ್ಕಸಕ್ಕೆ.ಆದಾಯದಲ್ಲಿ ನಿಧಾನವಾಗಿ ಹೆಚ್ಚಾಗುತ್ತದೆ ,ಖರ್ಚು ತುಂಬಾ ವೇಗವಾಗಿ ಹೆಚ್ಚಾಗುತ್ತದೆ.

ಉಚಿತ ಯೋಜನೆಗಳಿಗೆ ಹೆಚ್ಚು ಹಣ ಹೋದರೆ, ಅಭಿವೃದ್ಧಿಗೆ ಹಣ ಎಲ್ಲಿಂದ ತರೋದು?

ರಸ್ತೆ,ಮೆಟ್ರೋ,ಕೈಗಾರಿಕೆ,ಮೂಲಸೌಕರ್ಯಗಳಿಗೆ ಹಣ ಕಡಿಮೆಯಾಗುತ್ತದೆ. ಒಂದು ವರದಿಯ ಪ್ರಕಾರ,ಉಚಿತ ಯೋಜನೆಗಳಿಂದ ಮೂಲಸೌಕರ್ಯ ವೆಚ್ಚ ಗಳಿಗೆ ಸುಮಾರು ₹5229 ಕೋಟಿ ಕಡಿಮೆಯಾಯಿತು ಅಂತ ಅಂದಾಜಿಸಲಾಗಿದೆ.ಉಚಿತ ಯೋಜನೆಗಳು ಜನರಿಗೆ ಸಹಾಯ ಮಾಡುತ್ತವೆ ನಿಜ ಆದರೆ ಆರ್ಥಿಕವಾಗಿ ದೊಡ್ಡ ವೆಚ್ಚ,ದೀರ್ಘಕಾಲದಲ್ಲಿ ಸಾಲ ಹೆಚ್ಚುವ ಅಪಾಯ ಹೊರಲು ಪ್ರತಿ ನಾಗರಿಕನೂ ತಯಾರಿರಬೇಕಾದಿತು.

COMMENTS

Login with Gmail to comment

ಇನ್ನಷ್ಟು ಸುದ್ದಿ

ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಹಾರ್ಮುಜ್ ಬಳಿ ಹಡಗುಗಳ ಹಿಂತಿರುಗುವ ಸರಣಿ!ಜಾಗತಿಕ ತೈಲ ಸರಬರಾಜಿಗೆ ಶಾಕ್ ⚠️
ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
ಮಂಗಳೂರು, ಮೈಸೂರಿಗೂ ‘Amazon Now’ 2,800 ಕೋಟಿ ಹೂಡಿಕೆ-
ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ತಮಿಳು ರಾಜಕೀಯ ರಣರಂಗದಲ್ಲಿ “ವಿಜಯ”ಗಾಥೆ 118 ದಾಟಿದ TVK  ವಿಜಯ್ ಕೈ ಹಿಡಿದ ಮೈತ್ರಿ ಪಕ್ಷಗಳು!
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
ಅಜಿತ್ ಅಗರ್ಕರ್ ಗೆ ಜಾಕ್ಪಾಟ್