📍 Karavali Maruta
  • LOGIN
  • BREAKING
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ! ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್! ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..

    ಕಳೆದ ಎರಡು ಸಂಚಿಕೆಯಲ್ಲಿ ಸತತವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ವಿಚಾರಕ್ಕೆ ಸಂಬAಧಿಸಿದ ಅಪರಾಧದ ಬಗ್ಗೆ ವರದಿ ಪ್ರಕಟಿಸಿದೆ ಕರಾವಳಿ ಮಾರುತ. ಈ ವರದಿಯನ್ನು ಸಂಬAಧಪಟ್ಟವರು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನುವುದಕ್ಕೆ ಯಾವುದೇ ಪುರಾವೆಗಳು ಸಿಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಹತ್ತಾರು ಬೆಟ್ಟರ್ಸ್ಗಳು ಕೇವಲ ಜಿಲ್ಲೆಯ ಜನರಷ್ಟನ್ನಸ್ಟೇ ಅಲ್ಲ, ರಾಜ್ಯ ಹಾಗೂ ಹೊರರಾಜ್ಯಗಳ ಜನರನ್ನು ಜೂಜಿನ ಮಾಯಾಲೋಕಕ್ಕೆ ಬರುವ ಹಾಗೆ ಮಾಡುತ್ತಿದ್ದಾರೆ. ಆ ಮೂಲಕ ಕೋಟಿ-ಕೋಟಿ ಕಮಾಯಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಕತ್ತಲೆಯ ಕೂಪಕ್ಕೆ ತಳ್ಳಲ್ಪಡುತ್ತಿದೆ. ಈ ಒಂದು ಹಡಬೆ ದುಡ್ಡಿನ ಮದದಲ್ಲಿ ಯಾರನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಎಂಬ ದರ್ಪದಲ್ಲಿ ತಾವು ಆಡಿದ್ದೆ ಆಟ ಎಂಬAತೆ ವರ್ತಿಸುತ್ತಿರುವ ಈ ಬೆಟ್ಟರ್ಸ್ಗಳನ್ನು ಮಟ್ಟ ಹಾಕಲು ಯಾರೂ ತಯಾರಿಲ್ಲ… ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳ ಬಳಿಗೆ ದೂರು ಕೂಡ ಹೋಗಿದೆ. ಈಗ ಸ್ವತಃ ಆ ಹಿರಿಯ ಅಧಿಕಾರಿಗಳೇ ಉಡುಪಿ ಜಿಲ್ಲೆಯನ್ನು ಈ ಬೆಟ್ಟರ್ಸ್, ಗ್ಯಾಂಬ್ಲರ್ಸ್ಗಳಿAದ ಬಚಾವ್ ಮಾಡುವ ಕಾರ್ಯಕ್ಕೆ ಅಣಿಯಾಗಬೇಕು ಎಂಬAತಹ ವಾತಾವರಣವಿದೆ. ಈ ಬಗ್ಗೆ ಉಡುಪಿ ಎಸ್‌ಪಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹಾಗೂ ಉಸ್ತುವಾರಿ ಅಧಿಕಾರಿ ಮುರುಗನ್ ಸಾಹೇಬರ ಕಾಳಜಿ ಇಲ್ಲಿ ಅತ್ಯವಶ್ಯಕ…

    ಸತತ ಮೂರನೇ ಸಂಚಿಕೆಯಲ್ಲೂ ಪತ್ರಿಕೆಯ ಪ್ರಮುಖ ವರದಿಯಾಗಿ ಪ್ರಕಟವಾಗುತ್ತಿದೆ ಅಡ್ಡ ಕಸುಬಿಗಳ ಗ್ಯಾಂಬ್ಲರ್ ಸ್ಟೋರಿ. ಇದು, ಯಾರಾದರೂ ನಾಚಿಕೆ ಪಡುವಂತಹ ವಿಚಾರ. ಸತತವಾಗಿ ವರದಿ ಪ್ರಕಟವಾಗುತ್ತಿದ್ದರೂ ಉಡುಪಿ ಜಿಲ್ಲೆಯ ಪೊಲೀಸರು ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಅಂದ್ರೆ ಏನು ಅರ್ಥ?
    ಹಾಗಾಗಿಯೇ ಹೇಳಿದ್ದು, ಈ ಒಂದು ಬೆಟ್ಟಿಂಗ್ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರೆ ಉಡುಪಿ ಉಸ್ತುವಾರಿ ಹಾಗೂ ಎಡಿಜಿಪಿ ಮುರುಗನ್ ಸಾಹೇಬರು ಮತ್ತು ಐಜಿಪಿ ಅಮಿತ್ ಸಿಂಗ್ ಅವರ ಮಧ್ಯಪ್ರವೇಶ ಅನಿವಾರ್ಯ ಅಂತ. ಮುರುಗನ್ ಸಾಹೇಬರಿಗೆ ಇಡೀ ಉಡುಪಿ ಜಿಲ್ಲೆಯ ಚಿತ್ರಣ ಗೊತ್ತಿದೆ. ಇಲ್ಲಿಯ ಜನರ ಮೆಂಟಲಿಟಿಯೂ ಗೊತ್ತಿದೆ. ಹಾಗೆಯೇ ಅಮಿತ್ ಸಿಂಗ್ ಅವರು ಈ ಭಾಗಕ್ಕೆ ಹೊಸಬರಲ್ಲ. ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಗಳು ಖಡಕಾಗಿದ್ದಂತವರೇ ಆದ್ರೂ ಸಹ ಯಾಕೆ ತಟಸ್ಥರಾಗಿದ್ದಾರೆ ಎಂಬ ಅನುಮಾನ ಹಲವರದ್ದು.
    ಇಡೀ ಪೊಲೀಸ್ ಇಲಾಖೆಯನ್ನು ಈ ವಿಚಾರದಲ್ಲಿ ತಟಸ್ಥವಾಗಿರುವಂತೆ ನೋಡಿಕೊಳ್ಳುತ್ತಿರುವವರು ಯಾರು ಎಂಬ ಪ್ರಶ್ನೆಯು ಇಲ್ಲಿ ಉದ್ಭವವಾಗುತ್ತದೆ. ಯಾವುದೋ ರಾಜಕೀಯ ಶಕ್ತಿಯು ಇವರನ್ನು ಬಚಾವ್ ಮಾಡುವ ಕೆಲಸ ಮಾಡುತ್ತಿರುವ ಕಾರಣವೇ ಪೊಲೀಸರ ಕೈ ಕಟ್ಟಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಅದೇನೇ ಇರಲಿ, ಉಡುಪಿ ಜಿಲ್ಲೆಗೆ ಕೆಟ್ಟ ಹೆಸರನ್ನು ತರುತ್ತಿರುವ ಈ ಬೆಟ್ಟಿಂಗ್ ಮಾಫಿಯಾವನ್ನು ಮಟ್ಟ ಹಾಕದಿದ್ದರೆ ಜಿಲ್ಲೆಯ ಹೆಸರಿಗೂ ಮಸಿ ಬಳಿಯುತ್ತದೆ, ಹಾಗೆಯೇ ಜಿಲ್ಲೆಯ ಆಡಳಿತ ವ್ಯವಸ್ಥೆಯ ಮೇಲು ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಈ ಬೆಟ್ಟಿಂಗ್ ದಂಧೆಗಳನ್ನು ಮಟ್ಟ ಹಾಕುವ ಕೆಲಸ ಪ್ರಾರಂಭವಾಗಲೇಬೇಕು. ಈಗಾಗಲೇ ಹಲವು ಸಾಮಾಜಿಕ ಕಾರ್ಯಕರ್ತರು ಈ ಒಂದು ಅಕ್ರಮ ಕೂಟದ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

    ಗ್ಯಾಂಗ್ ವಾರ್; ಬೆಟ್ಟಿಂಗ್ ಕಿಂಗ್ ಪಿನ್‌ಗಳ ನಡುವೆ ವೈಮನಸ್ಸು ಆಗಿದ್ಯಾ? ಆ ವೈಮನಸಿನ ಪರಿಣಾಮ ಒಬ್ಬರನ್ನೊಬ್ಬರು ಹಣಿದುಕೊಳ್ಳಲು ಪ್ಲಾನ್ ರೂಪಿಸುತ್ತಿದ್ದಾರಾ? ಇದರ ಪರಿಣಾಮ ಯಾರ್ಯಾರದೋ ಜೀವ ಹೋಗುವ ಸಂಭವ ಇದೆಯಾ?
    ಎಸ್, ಸಾಮಾಜಿಕ ಕಾರ್ಯಕರ್ತ ರವಿ ಶೆಟ್ಟಿ ಬೈಂದೂರ್ ಎಂಬವರು ಈ ವಿಚಾರವನ್ನು ಸಾರ್ವಜನಿಕವಾಗಿ ಮುನ್ನಲೆಗೆ ತಂದಿದ್ದಾರೆ. ಅಷ್ಟೇ ಅಲ್ಲ, ಅವರು ಈ ಒಂದು ಬುಕ್ಕಿಗಳ ವಿರುದ್ಧ ಮಾತನಾಡಲು ಶುರುಮಾಡಿದಾಗಿನಿಂದ ಈ ಬುಕ್ಕಿಗಳ ಅನುಯಾಯಿಗಳ ಕಡೆಯಿಂದ ಜೀವ ಬೆದರಿಕೆಗಳು ಬರುತ್ತಿವೆ ಎಂಬ ವಿಚಾರವನ್ನು ಸ್ವತಹ ರವಿಶಟ್ಟಿಯವರೇ ಮೀಡಿಯಾಗಳ ಮೂಲಕ ಬಹಿರಂಗಪಡಿಸಿದ್ದಾರೆ. ರವಿ ಶೆಟ್ಟಿಯವರು ಈ ವಿಚಾರವಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ ಮತ್ತು ಕೆಲವು ದಾಖಲೆಗಳನ್ನು ನೀಡಿದ್ದಾರೆ ಎಂಬ ಮಾಹಿತಿಯನ್ನು ಸೋಶಿಯಲ್ ಮೀಡಿಯಾಗಳ ಮೂಲಕವೇ ರವಿಶೆಟ್ಟಿ ಬೈಂದೂರ್ ಹೇಳಿಕೊಂಡಿದ್ದಾರೆ.
    ಪೊಲೀಸ್ ಇಲಾಖೆಯು ಇಂತಹ ವಿಚಾರದಲ್ಲಿ ಯಾರ ದೂರನ್ನು ಕಾಯದೆ ತಾನಾಗಿಯೇ ಆಕ್ಷನ್‌ಗೆ ಇಳಿಯಬೇಕು. ಆದರೆ ಈ ವಿಚಾರದಲ್ಲಿ ಅದಾಗುತ್ತಿದ್ದಂತೆ ಕಾಣುತ್ತಿಲ್ಲ. ಈ ಹಿಂದೆ ದಿನೇಶ್ ಗಾಣಿಗ ಎಂಬ ಸಾಮಾಜಿಕ ಹೋರಾಟಗಾರ ಇದೆ ಬೆಟ್ಟಿಂಗ್ ಮಾಫಿಯಾದ ವಿರುದ್ಧ ಕೆಲವು ದಾಖಲೆಗಳ ಸಹಿತ ಮಾತನಾಡಿದ್ದರು. ಹಾಗೆಯೇ ಬೆಟ್ಟಿಂಗ್ ದಂಧೆಕೋರರÀ ಹೆಸರುಗಳನ್ನು ಅವರು ಮೆನ್ಷನ್ ಮಾಡಿದ್ದರು. ಆದರೆ ಏನಾಯ್ತು ಕೇಳಿದರೆ ಏನು ಇಲ್ಲ.
    ಇವತ್ತು ಈ ಬೆಟ್ಟರ್ಸ್ಗಳು ಹಣದ ಮದದಿಂದ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಹುಚ್ಚಾಟಕ್ಕೆ ಬಿದ್ದಿದ್ದಾರೆ. ಯಾವುದೇ ಅಧಿಕಾರಿಗಳನ್ನು ರಾಜಕಾರಣಿಗಳನ್ನ ಕೊಂಡುಕೊಳ್ಳುತ್ತೇವೆ, ಸಮಯ ಬಂದರೆ ರೌಡಿಗಳ ಮೂಲಕ ನಮ್ಮ ವಿರುದ್ಧ ಬರುವವರನ್ನು ಹೆದರಿಸುತ್ತೇವೆ, ಅವರನ್ನು ಪಕ್ಕಕ್ಕೆ ಸರಿಸುತ್ತೇವೆ ಎಂಬ ಅಹಂಕಾರ ಮತ್ತು ಧೈರ್ಯದಿಂದ ಮುನ್ನಡೆಯುತ್ತಿರುವುದು ಅವರ ಬಾಡಿ ಲಾಂಗ್ವೇಜ್‌ಗಳ ಮೂಲಕ ಗೊತ್ತಾಗುತ್ತದೆ. ಸಮಾಜದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಹಾಗೆಯೇ ಜೂಜಾಟವನ್ನು ಆಡಿಸುವುದು ಭಾರತದ ಅದರಲ್ಲೂ ಕರ್ನಾಟಕದ ಕಾನೂನಿನಲ್ಲಿ ಅಕ್ರಮ ಅಂತ ಮೆನ್ಷನ್ ಆಗಿದೆ, ಅದು ಕಠಿಣ ಶಿಕ್ಷಾರ್ಹ ಅಪರಾಧವೂ ಆಗಿದೆ.
    ಶಿಕ್ಷಾರ್ಹ ಅಪರಾಧ; ಯಾವುದೇ ತರಹದ ಜೂಜೇ ಇರಲಿ, ಹಣವೇ ನೇರವಾಗಿ ಹಣವನ್ನೇ ಹಾಕಬೇಕಾಗಿಲ್ಲ ಯಾವುದೇ ರೀತಿಯ ಪಣವನ್ನು ಕಟ್ಟಿ, ಆಟವಾಡುವುದನ್ನು ನಮ್ಮ ಕಾನೂನು ಶಿಕ್ಷಾರ್ಹ ಅಪರಾಧ ಅಂತ ಘೋಷಿಸಿದೆ. ಹೀಗಿರುವಾಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೇವಲ ರಾಜ್ಯ ಮಟ್ಟಕ್ಕಲ್ಲ, ಅಂತರಾಷ್ಟ್ರೀಯ ಮಟ್ಟದವರೆಗೆ ಜೂಜು ಆಡಿಸಿ ಹಣ ಮಾಡಿಕೊಳ್ಳುವವರ ಗುಂಪೆ ಇಲ್ಲಿದೆ ಅಂದರೆ ಏನು ಅರ್ಥ? ನಮ್ಮ ಕಾನೂನಿನ ಅಸಮರ್ಥತೆಯನ್ನು ಇದು ಬಿಂಬಿಸುವುದಿಲ್ಲವೇ? ಕಾನೂನು ಪಾಲನೆ ಮಾಡಬೇಕಾದವರು ಈ ವಿಚಾರದಲ್ಲಿ ಕೈಕಟ್ಟಿ ಕೂತಿದ್ದಾರೆ ಎಂದರ್ಥ ಬರುವುದಿಲ್ಲವೇ? ಅವರು ಕೈಕಟ್ಟಿ ಕೂರಲು ಕಾರಣ ಏನು? ಲೋಕಲ್ ಒತ್ತಡಕ್ಕೆ ಒಳಗಾದರೆ ಅಥವಾ ರಾಜಕಾರಣದ ಒತ್ತಡಕ್ಕೆ ಒಳಗಾದರೆ?
    ಉಡುಪಿ ಸಭ್ಯಸ್ತರ ಜಿಲ್ಲೆ ಹಾಗೆಯೇ ಧಾರ್ಮಿಕ ಪರಂಪರೆಯನ್ನು ಹೊಂದಿದ ಜಿಲ್ಲೆ. ಇಂತಹ ಜಿಲ್ಲೆಯಿಂದ ಬೆಟ್ಟಿಂಗ್ ಕಿಂಗ್ಪಿನ್‌ಗಳು ತಮ್ಮ ಚಟುವಟಿಕೆ ನಡೆಸುತ್ತಾರೆ ಎಂದರೆ ಜಿಲ್ಲೆಯ ಜನರಿಗೆಲ್ಲರಿಗೂ ಕಪ್ಪು ಚುಕ್ಕೆ ತಾನೇ? ಜಿಲ್ಲೆಗೂ ಕೆಟ್ಟ ಹೆಸರು ತಾನೆ? ಈಗಾಗಲೇ ಈ ಒಂದು ವಿಚಾರದಲ್ಲಿ ಸಾಮಾಜಿಕ ಹೋರಾಟಗಾರರು ಬಹಿರಂಗವಾಗಿ ಮಾತನಾಡಿದ್ದಾರೆ ಹಾಗೆಯೇ ಮಾಧ್ಯಮದಲ್ಲೂ ಈ ವಿಚಾರವೂ ಸವಿವರವಾಗಿ ಪ್ರಕಟವಾಗಿವೆ ಹಾಗಿದ್ದರೂ ನಮ್ಮ ಆಡಳಿತ ವ್ಯವಸ್ಥೆಯು ಇನ್ನೂ ಮೌನವಾಗಿದೆ ಅಂದರೆ ಸಂಥಿAಗ್ ಈಸ್ ರಾಂಗ್ ಅಂತ ಅನ್ನಿಸಿಕೊಳ್ಳುತ್ತದೆ. ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಹ ತಲೆಕೆಡಿಸಿಕೊಳ್ಳಬೇಕಾದೀತು. ಸರ್ಕಾರಿ ಇಲಾಖೆಯ ಪೈಕಿ ಪೊಲೀಸ್ ಇಲಾಖೆಯಲ್ಲಿ ತಕ್ಷಣದ ಆಕ್ಷನ್ ಕಾಣುತ್ತಿತ್ತು. ಆದರೆ ಈಗ ಪೊಲೀಸ್ ಇಲಾಖೆಯಲ್ಲೂ ಅದು ಕಾಣೆಯಾಗುತ್ತಿದೆ. ಇದು ಸ್ವಸ್ತ ಸಮಾಜಕ್ಕೆ ಒಳ್ಳೆಯದಲ್ಲ. ಪೊಲೀಸ್ ವ್ಯವಸ್ಥೆಯು ಅತ್ಯಂತ ಅವಶ್ಯಕ. ಹಾಗಾಗಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅಣಿಗೊಳಿಸುವ ಕೆಲಸ ಜರೂರಾಗಿ ಆಗಬೇಕಿದೆ. ಆ ಕೆಲಸವನ್ನು ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಖುದ್ದಾಗಿ ಆಗುವಂತೆ ನೋಡಿಕೊಳ್ಳುತ್ತಾರೆ ಎಂಬ ಆಶಯವೂ ಇದೆ.
    ಸಮಾಜದಲ್ಲಿ ಸಣ್ಣಪುಟ್ಟ ಗಂಭೀರವಲ್ಲದAತಹ ಅಪವಾದಗಳು, ಅಪರಾಧಗಳು ನಡೆಯುತ್ತಿರುತ್ತವೆ. ಆದರೆ ಅವುಗಳ ಮೇಲೆಯೂ ಕಾನೂನು ಪಾಲಕರಿಗೆ ಹಿಡಿತ ಇರಲೇಬೇಕು. ಆದರೆ ತೀರ ಈ ಮಟ್ಟದಲ್ಲಿ ಗ್ಯಾಂಬ್ಲರ್ಸ್ಗಳಾಗಿ ಬೆಳೆದಿರುವಂತಹ ವ್ಯಕ್ತಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ ಅಂದ್ರೆ ಅದು ಶೇಮ್ ಅಂತ ಅನ್ನಿಸಿಕೊಳ್ಳುತ್ತದೆ. ಸಾರ್ವಜನಿಕವಾಗಿ ವ್ಯವಸ್ಥೆಯ ಮೇಲೆ ನಂಬಿಕೆಯು ಹೋಗಲು ಕಾರಣವಾಗುತ್ತದೆ. ಕೇವಲ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾರೆ ಎಂಬ ಸಾರ್ವಜನಿಕ ವಲಯದಲ್ಲಿರುವ ಮಾತುಗಳು ನಿಜವಾಗುತ್ತವೆ. ಅದು ಆಗಲೇಬಾರದು. ಯಾವುದೇ ರಾಜಕಾರಣಿಯ ಒತ್ತಡವಿರಲಿ ಅಥವಾ ಇನ್ಯಾರದೇ ಒತ್ತಡ ಇರಲಿ, ಉಡುಪಿ ಜಿಲ್ಲೆಯ ಪೊಲೀಸರು ಆ ಒತ್ತಡವನ್ನು ಮೆಟ್ಟಿ ನಿಲ್ಲಬೇಕು ಮತ್ತು ಮಟ್ಟ ಹಾಕಬೇಕು. ಜೊತೆಗೆ ಅವರ ಹಣದ ಮೂಲ ಇನ್ಕಮ್ ಸೋರ್ಸಸ್ ಹೇಗೆ ಬಂತು ಎಲ್ಲೆಲ್ಲಾ ಇನ್ವೆಸ್ಟ್ ಮಾಡಿದ್ದಾರೆ (ಅವ್ರದ್ದು ಮತ್ತು ಅವರ ಆಪ್ತರದ್ದು) ಅದೆಲ್ಲವೂ ಸಂಪೂರ್ಣ ತನಿಖೆಗೆ ಒಳಪಡಬೇಕು ಮತ್ತು ಮುಟ್ಟುಗೋಲು ಕಾರ್ಯ ಪ್ರಾರಂಭವಾಗಬೇಕು ಅದು ಆದಷ್ಟು ಬೇಗ ಪ್ರಾರಂಭವಾಗುತ್ತದೆ ಎಂಬ ಆಸೆಯನ್ನು ಜಿಲ್ಲೆಯ ಅನೇಕ ಸಾಮಾಜಿಕ ಕಾರ್ಯಕರ್ತರು ಹೊಂದಿದ್ದಾರೆ.


    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಇರಾನ್ ಸಚಿವ ಅಬ್ಬಾಸ್ ಅರಾಘ್ಚಿ ಭಾರತಕ್ಕೆ… ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ BRICS ಸಭೆ ಮೇಲೆ ವಿಶ್ವದ ಗಮನ!ಜಾಗತಿಕ ಉದ್ವಿಗ್ನತೆಯ ನಡುವೆ ದೆಹಲಿ ರಾಜತಾಂತ್ರಿಕ ಕೇಂದ್ರಬಿಂದು!…
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ವೈರಲ್ ಆದ ಒಂದೇ ಒಂದು ಪಂಚ್ … ಐಸಿಯು ಕೋಮಾವರೆಗೆ ! ಬೆಚ್ಚಿಬೀಳಿಸಿದ ಜಿಮ್ ಪಂಚ್ ವೀಡಿಯೋ.ದೇಹ ಗಟ್ಟಿಯಾಗಿತ್ತು… ಮನಸ್ಸು ದುರ್ಬಲವಾಗಿತ್ತು!
    ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಬಿಹಾರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?
    ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!
    AIಗೆ ಒಂದು ಪ್ರಶ್ನೆ ಕೇಳಿದ್ರೆ…ಲಕ್ಷಾಂತರ ಲೀಟರ್ ನೀರು ಆವಿಯಾಗುತ್ತೆ…..!ಅದೇಗೆ.??AIಜಗತ್ತನ್ನು ಬದಲಾಯಿಸುತ್ತಿದೆ… ಆದರೆ ಶುದ್ಧ ನೀರಿನ ಜಲಮೂಲಗಳನ್ನು ಖಾಲಿ ಮಾಡುತ್ತಿದೆ.
    ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
    ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
    ಆಸ್ಪತ್ರೆಯಲ್ಲೇ ಮೂರನೇ ಮಹಡಿಯಿಂದ ಬಿದ್ದು ಸಾವುನಿರ್ಲಕ್ಷ್ಯವೇ? ಸುರಕ್ಷತೆ ಪ್ರಶ್ನೆಗೊಳಗಾಗಿದೆ!
    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್
    ಒಂದು ದಿನ ಕೈದಿ ಆಗ್ಬೇಕಾ? ಜೈಲು ಜೀವನ ಹೇಗಿರುತ್ತೆ ಅನ್ನೋ ಕುತೂಹಲಕ್ಕೀಗ ಚಂಚಲ್‌ಗುಡ ಜೈಲು ಬಾಗಿಲು ಈಗ ಸಾರ್ವಜನಿಕರಿಗೆ ಓಪನ್!
    ಪಂಜಿಮೊಗರುವಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ, ಗಂಡ ಫಿನಿಶ್!
    ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
    ನಾಲ್ಕು ದಶಕಗಳ ಕಾಲ ರೋಗಿಗಳಿಗೆ ಜೀವ ನೀಡಿದ ವೈದ್ಯನೇ ಇಂದು ಯಾಕೆ ತನ್ನ ಜೀವ ತಾನೇ ತೆಗೆದುಕೊಂಡರು …
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ದೇಶದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್ ಅಂದ್ರೆ ಮಳೆ ಗ್ಯಾರಂಟಿ ಅಲ್ಲ…IMD ಮುನ್ಸೂಚನೆಯನ್ನು ನಿರ್ಲಕ್ಷಿಸಬೇಡಿ!ಅದು  “ಅಪಾಯದ ಸಾಧ್ಯತೆಯ ಎಚ್ಚರಿಕೆ!”
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ದೆಹಲಿ ಭಾರೀ ದುರಂತದಿಂದ ಪಾರು!: ಏರ್ ಇಂಡಿಯಾ ವಿಮಾನಗಳು ಜಖಂಗೊಂಡರೂ ತಪ್ಪಿದ ಪ್ರಾಣಾಪಾಯ!
    ಲೈಂಗಿಕ ಕಿರುಕುಳ ನೀಡಿದ ಬಾಸ್‌ಗೆ ಪೊಲೀಸರ ಮುಂದೆಯೇ ಮುಖಕ್ಕೆ ಮಸಿ ಬಳಿದು ಕೆನ್ನೆಗೆ ಬಾರಿಸಿದ ಮಹಿಳೆ!
    ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?
    ಬೆಳ್ಮಣ್ಣಿನಲ್ಲಿ ಗುಂಡಿನ ಸದ್ದು… ಮಾಜಿ ಸಚಿವರ ಶಿಷ್ಯನ ಭೀಕರ ಹತ್ಯೆ
    ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
    Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು