📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ… ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!

    ಇಂದು ಬೇಡ, ನಾಳೆ ನೋಡೋಣ” ಎಂದು ಮುಂದೂಡಿದರೆ ಮತ್ತೆ ಪೂರ್ಣ ದಂಡ ಪಾವತಿಯ ಜೊತೆಗೆ ದುಪ್ಪಟ್ಟು ಕಟ್ಟುವ ಕಾನೂನು ಕಾರ್ಯರೂಪಕ್ಕೆ ಬರಲೂಬಹುದು…. ಯಾಕಂದ್ರೆ ಹೊಸ CM ಡಿಕೆಶಿ ಖಡಕ್ ರೂಲ್ಸ್ ತಂದರೇ….ಬೊಕ್ಕಸಕ್ಕೂ ಕಾಸು..! ದೊಡ್ಡ ಚಾನ್ಸ್ ಮಿಸ್ ಮಾಡ್ಬೇಡಿ ಬಾಕಿ ಇರುವ ಟ್ರಾಫಿಕ್ ದಂಡಗಳನ್ನು ಪರಿಶೀಲಿಸಿ, ರಿಯಾಯಿತಿ ಅವಧಿಯೊಳಗೆ ಪಾವತಿಸಿ ಕಾನೂನು ತೊಂದರೆಗಳಿಂದ ದೂರವಿರಿ.

    ರಾಜ್ಯ ಸರ್ಕಾರ ಬಾಕಿ ಇರುವ ಟ್ರಾಫಿಕ್ ದಂಡಗಳಿಗೆ 50% ರಿಯಾಯಿತಿ ಘೋಷಿಸಿರುವುದು ಲಕ್ಷಾಂತರ ವಾಹನ ಸವಾರರಿಗೆ ಖಂಡಿತವಾಗಿಯೂ ನೆಮ್ಮದಿ ತಂದಿದೆ. ಆದರೆ ಇದರ ಜೊತೆಗೆ ಮತ್ತೊಂದು ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ – “ಕಾನೂನು ಎಂದರೆ ನಿಯತ್ತಿನಿಂದ ಕೇವಲ ನಿಯಮ ಪಾಲಿಸುವವರಿಗೆ ಮಾತ್ರವೇ?”

    ಕಾನೂನು ನಿಮ್ಮ ಕಡೆಯೇ ಇದೆ… ಆದರೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿದೆಯೇ?ನಿಯಮಗಳು.. ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಾಗಲೇ ಬದಲಾವಣೆ ಸಾಧ್ಯ..!

    ಹೆಲ್ಮೆಟ್ ಇಲ್ಲದೆ ಟ್ರಿಪಲ್ ರೈಡ್, ನಂಬರ್ ಪ್ಲೇಟ್ ಇಲ್ಲದ ವಾಹನಗಳು, ಡಾರ್ಕ್ ಟಿಂಟ್ ಗ್ಲಾಸ್‌ಗಳು, ಸೈಲೆನ್ಸರ್ ಮಾರ್ಪಾಡು, ಸಿಗ್ನಲ್ ಜಂಪ್ – ಕರ್ಕಶ ಹಾರ್ನ್…ಇವೆಲ್ಲವೂ ಪ್ರತಿದಿನ ರಸ್ತೆಗಳಲ್ಲಿ ಕಾಣುವ ದೃಶ್ಯಗಳು. ಕೆಲವೊಮ್ಮೆ ಪೊಲೀಸ್ ಠಾಣೆ ಎದುರೇ ಇಂತಹ ಉಲ್ಲಂಘನೆಗಳು ನಡೆದರೂ ಕ್ರಮ ಕಾಣುವುದಿಲ್ಲ ಎಂಬ ಆರೋಪ ಜನರಿಂದ ಕೇಳಿಬರುತ್ತದೆ. ಆದರೆ ದಂಡದ ಸಂದೇಶ ಕ್ಷಣಾರ್ಧದಲ್ಲಿ ತಲುಪುತ್ತದೆ ಎಂಬ ಬೇಸರವೂ ಇದೆ.

    HSRP ಕಡ್ಡಾಯ ಮಾಡಿ…ಕಥೆ ಏನಾಯಿತು?

    HSRP ನಂಬರ್ ಪ್ಲೇಟ್ ಕಡ್ಡಾಯ ಎಂದು ಸರ್ಕಾರ ಹಲವು ಬಾರಿ ಗಡುವು ಘೋಷಿಸಿತು. ನಂತರ ಸಾರ್ವಜನಿಕ ಒತ್ತಡ, ತಾಂತ್ರಿಕ ಸಮಸ್ಯೆಗಳು ಹಾಗೂ ಕಡಿಮೆ ನೋಂದಣಿ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಅವಧಿ ವಿಸ್ತರಿಸಲಾಯಿತು. ಇದರಿಂದ ನಿಯಮ ಪಾಲಿಸಿದವರು ಹೆಚ್ಚುವರಿ ವೆಚ್ಚ ಭರಿಸಿದರೆ, ಕಾಯುತ್ತಿದ್ದವರಿಗೆ ಮತ್ತಷ್ಟು ಸಮಯ ಸಿಕ್ಕಿತು. ಇನ್ನು ಲಕ್ಷಾಂತರ ಗಾಡಿಗಳ ಮಾಲಕರು ಅದರ ಗೊಡವೆಗೆ ಹೋಗಿಲ್ಲಾ…ಈಗಲೂ ಬಿಂದಾಸ್ ಆಗಿ ಗಾಡಿಗಳು ಓಡಾಡ್ತಾ ಇವೆ..ಆಗ ಪ್ರಶ್ನೆ – ನಿಯಮವನ್ನು ಮೊದಲೇ ಸಮಯಕ್ಕೆ ಸರಿಯಾಗಿ ಪಾಲಿಸಿದವರಿಗೆ ಸಿಕ್ಕ ಪ್ರತಿಫಲವೇನು??

    ಸಾರಿಗೆ ಮತ್ತು ಟ್ರಾಫಿಕ್ ಇಲಾಖೆಗಳು ಹಲವು ಬಾರಿ ಕಠಿಣ ಕ್ರಮಗಳ ಘೋಷಣೆ ಮಾಡಿವೆ. ಆದರೆ ಸಾರ್ವಜನಿಕ ವಿರೋಧ, ರಾಜಕೀಯ ಒತ್ತಡ ಅಥವಾ ಅನುಷ್ಠಾನದ ಸಮಸ್ಯೆಗಳ ಕಾರಣ ಕೆಲವು ನಿಯಮಗಳು ಸಡಿಲಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ. ಇದರಿಂದ ಕಾನೂನಿನ ಬಗ್ಗೆ ಜನರಲ್ಲಿ ಗೊಂದಲ ಮೂಡಿರುವುದು ವಾಸ್ತವ.

    ದಂಡವೇ ಗುರಿ? ಅಥವಾ ರಸ್ತೆ ಸುರಕ್ಷತೆಯೇ?

    ಪ್ರತಿ ಬಾರಿ ವಿಶೇಷ ಅಭಿಯಾನ, ದಂಡ, ಇ-ಚಲನ್, ರಿಯಾಯಿತಿ… ಇವೆಲ್ಲವೂ ನಡೆಯುತ್ತಿವೆ. ಆದರೆ ಅಪಘಾತಗಳು ಕಡಿಮೆಯಾಗುತ್ತಿವೆಯೇ? ಟ್ರಾಫಿಕ್ ಶಿಸ್ತು ಹೆಚ್ಚಾಗುತ್ತಿದೆಯೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಕಾನೂನಿನ ಉದ್ದೇಶ ಆದಾಯ ಸಂಗ್ರಹವಲ್ಲ, ಸುರಕ್ಷಿತ ಸಮಾಜ ನಿರ್ಮಾಣ ಎಂಬುದನ್ನು ಸರ್ಕಾರವೂ ಜನರೂ ನೆನಪಿಸಿಕೊಳ್ಳಬೇಕಿದೆ.

    ಏನೇ ಆದರೂ…..ಫೈನ್ ಕಟ್ಟಬೇಕಿರುವ ಬುದ್ಧಿವಂತರು ಈಗ ಸದ್ಯದ ವಿಷಯಕ್ಕೆ ಗಮನ ಕೊಡಿ.ಸರ್ಕಾರದ ಆದೇಶದ ಪ್ರಕಾರ 2026ರ ಜೂನ್ 21ರಿಂದ ಜುಲೈ 10ರವರೆಗೆ ಈ ವಿಶೇಷ ರಿಯಾಯಿತಿ ಜಾರಿಯಲ್ಲಿರಲಿದೆ. ಈ ಅವಧಿಯೊಳಗೆ ಪಾವತಿ ಮಾಡಿದರೆ ಮಾತ್ರ 50% ರಿಯಾಯಿತಿ ಸಿಗಲಿದೆ.ಮೇ 2026ರವರೆಗೆ ಪೊಲೀಸ್ ಇಲಾಖೆಯಿಂದ ದಾಖಲಾದ ಬಾಕಿ ಟ್ರಾಫಿಕ್ ಇ-ಚಲನ್ ಪ್ರಕರಣಗಳು ಹಾಗೂ ಹಳೆಯ ಕೆಲವು ಸಾರಿಗೆ ಇಲಾಖೆ ದಂಡ ಪ್ರಕರಣಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ.

    ವಾಹನ ಸವಾರರು ಅಧಿಕೃತ ಇ-ಚಲನ್ ಪೋರ್ಟಲ್, KSP App, BTP ASTraM App, ಟ್ರಾಫಿಕ್ ಪೊಲೀಸ್ ಠಾಣೆ ಅಥವಾ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಮೂಲಕ ದಂಡ ಪಾವತಿಸಬಹುದು.

    ವಂಚಕರ ಬಗ್ಗೆ ಎಚ್ಚರ!

    ಇತ್ತೀಚಿನ ದಿನಗಳಲ್ಲಿ ನಕಲಿ ಟ್ರಾಫಿಕ್ ಚಲನ್ ಲಿಂಕ್‌ಗಳು, WhatsApp ಮೆಸೇಜ್‌ಗಳು ಹಾಗೂ ಖಾಸಗಿ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಹಣ ಪಾವತಿಸಲು ಒತ್ತಾಯಿಸುವ ವಂಚನೆಗಳು ಹೆಚ್ಚಾಗಿವೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಯಾವುದೇ ಹಣ ಪಾವತಿಸುವ ಮೊದಲು ಅಧಿಕೃತ ಸರ್ಕಾರದ ವೆಬ್‌ಸೈಟ್ ಅಥವಾ ಅಧಿಕೃತ ಆ್ಯಪ್‌ನಲ್ಲಿ ನಿಮ್ಮ ವಾಹನ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿ. ವೈಯಕ್ತಿಕ ಸಂಖ್ಯೆಗೆ ಡಿಎಲ್, ಆಧಾರ್ ಅಥವಾ ಬ್ಯಾಂಕ್ ಮಾಹಿತಿ ಕಳುಹಿಸಬೇಡಿ.

    ##TrafficFine #EChallan #KarnatakaNews #TrafficPolice #VehicleOwners #RoadSafety #KarnatakaGovernment #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಲಂಚದ ವಿರುದ್ಧ ದೂರು ನೀಡಿದ್ದಕ್ಕೆ ರೈತನ ಮಗನ ವೃಷಣಗಳನ್ನೇ ಒಡೆದ ಪೊಲೀಸ್ ಕ್ರೌರ್ಯ!
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ  ಕೊನೆಗೂ ರಾಜೀನಾಮೆ
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    50ಕ್ಕೂ ಹೆಚ್ಚು ಆಟೋ ಚಾಲಕರ ದಿನನಿತ್ಯದ ಆರೋಗ್ಯದ ಬದುಕಿಗೆ ಮುಳುವಾದ ದೇರಳಕಟ್ಟೆ ಜಂಕ್ಷನ್ ದುರ್ನಾತ! 
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ರಾಮನ ಹೆಸರಲ್ಲಿ ‘ರಾವಣ’ ರಾಜ್ಯ-ಕರ್ನಾಟಕಕ್ಕೂ ತಟ್ಟಿದ ಕಳಂಕ!ರಾಮನ ಹೆಸರಲ್ಲಿ ಭಕ್ತರಿಗೇ ನಾಮ-ಅಯೋಧ್ಯೆಯ ಕೋಟಿಕೋಟಿ ಲೂಟಿಗೆ ಬೀದರ್ ಕನೆಕ್ಷನ್!
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
    17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
    ದೆಹಲಿ ಭಾರೀ ದುರಂತದಿಂದ ಪಾರು!: ಏರ್ ಇಂಡಿಯಾ ವಿಮಾನಗಳು ಜಖಂಗೊಂಡರೂ ತಪ್ಪಿದ ಪ್ರಾಣಾಪಾಯ!
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    ತುಮಕೂರಿನಲ್ಲಿ ಬೆಚ್ಚಿಬೀಳಿಸುವ ತಂದೆ-ಮಗಳು ದುರಂತ
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    🔥 ಬಿಸಿಲಿನ ಬಿಸಿ ತಾರಕ್ಕೇರಿದೆ, ಆದರೆ ಮಳೆ ಸಿಡಿಲು ಸರ್ಪ್ರೈಸ್ ಬರ್ತಿದೆ! 🌩️
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    UPIಗೆ ಶುಲ್ಕ ಬರಲಿದೆಯೇ? – ಲೋಕಸಭೆಯಲ್ಲಿ ಅಂಗೀಕಾರವಾದ bill ಮಸೂದೆ ಏನು ಹೇಳುತ್ತದೆ?
    ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
    ನೂತನ ಸಚಿವ ಲಕ್ಷ್ಮಣ ಸವದಿ ಎದುರು ಹೈಡ್ರಾಮಾ: ಸಮಸ್ಯೆ ಹೇಳಿಕೊಳ್ಳುತ್ತಿದ್ದ ವ್ಯಕ್ತಿಗೆ ಶಾಸಕರಿಂದ ಬೆದರಿಕೆ ಆರೋಪ
    ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ