📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ… ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!

ಇಂದು ಬೇಡ, ನಾಳೆ ನೋಡೋಣ” ಎಂದು ಮುಂದೂಡಿದರೆ ಮತ್ತೆ ಪೂರ್ಣ ದಂಡ ಪಾವತಿಯ ಜೊತೆಗೆ ದುಪ್ಪಟ್ಟು ಕಟ್ಟುವ ಕಾನೂನು ಕಾರ್ಯರೂಪಕ್ಕೆ ಬರಲೂಬಹುದು…. ಯಾಕಂದ್ರೆ ಹೊಸ CM ಡಿಕೆಶಿ ಖಡಕ್ ರೂಲ್ಸ್ ತಂದರೇ….ಬೊಕ್ಕಸಕ್ಕೂ ಕಾಸು..! ದೊಡ್ಡ ಚಾನ್ಸ್ ಮಿಸ್ ಮಾಡ್ಬೇಡಿ ಬಾಕಿ ಇರುವ ಟ್ರಾಫಿಕ್ ದಂಡಗಳನ್ನು ಪರಿಶೀಲಿಸಿ, ರಿಯಾಯಿತಿ ಅವಧಿಯೊಳಗೆ ಪಾವತಿಸಿ ಕಾನೂನು ತೊಂದರೆಗಳಿಂದ ದೂರವಿರಿ.

ರಾಜ್ಯ ಸರ್ಕಾರ ಬಾಕಿ ಇರುವ ಟ್ರಾಫಿಕ್ ದಂಡಗಳಿಗೆ 50% ರಿಯಾಯಿತಿ ಘೋಷಿಸಿರುವುದು ಲಕ್ಷಾಂತರ ವಾಹನ ಸವಾರರಿಗೆ ಖಂಡಿತವಾಗಿಯೂ ನೆಮ್ಮದಿ ತಂದಿದೆ. ಆದರೆ ಇದರ ಜೊತೆಗೆ ಮತ್ತೊಂದು ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ – “ಕಾನೂನು ಎಂದರೆ ನಿಯತ್ತಿನಿಂದ ಕೇವಲ ನಿಯಮ ಪಾಲಿಸುವವರಿಗೆ ಮಾತ್ರವೇ?”

ಕಾನೂನು ನಿಮ್ಮ ಕಡೆಯೇ ಇದೆ… ಆದರೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿದೆಯೇ?ನಿಯಮಗಳು.. ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಾಗಲೇ ಬದಲಾವಣೆ ಸಾಧ್ಯ..!

ಹೆಲ್ಮೆಟ್ ಇಲ್ಲದೆ ಟ್ರಿಪಲ್ ರೈಡ್, ನಂಬರ್ ಪ್ಲೇಟ್ ಇಲ್ಲದ ವಾಹನಗಳು, ಡಾರ್ಕ್ ಟಿಂಟ್ ಗ್ಲಾಸ್‌ಗಳು, ಸೈಲೆನ್ಸರ್ ಮಾರ್ಪಾಡು, ಸಿಗ್ನಲ್ ಜಂಪ್ – ಕರ್ಕಶ ಹಾರ್ನ್…ಇವೆಲ್ಲವೂ ಪ್ರತಿದಿನ ರಸ್ತೆಗಳಲ್ಲಿ ಕಾಣುವ ದೃಶ್ಯಗಳು. ಕೆಲವೊಮ್ಮೆ ಪೊಲೀಸ್ ಠಾಣೆ ಎದುರೇ ಇಂತಹ ಉಲ್ಲಂಘನೆಗಳು ನಡೆದರೂ ಕ್ರಮ ಕಾಣುವುದಿಲ್ಲ ಎಂಬ ಆರೋಪ ಜನರಿಂದ ಕೇಳಿಬರುತ್ತದೆ. ಆದರೆ ದಂಡದ ಸಂದೇಶ ಕ್ಷಣಾರ್ಧದಲ್ಲಿ ತಲುಪುತ್ತದೆ ಎಂಬ ಬೇಸರವೂ ಇದೆ.

HSRP ಕಡ್ಡಾಯ ಮಾಡಿ…ಕಥೆ ಏನಾಯಿತು?

HSRP ನಂಬರ್ ಪ್ಲೇಟ್ ಕಡ್ಡಾಯ ಎಂದು ಸರ್ಕಾರ ಹಲವು ಬಾರಿ ಗಡುವು ಘೋಷಿಸಿತು. ನಂತರ ಸಾರ್ವಜನಿಕ ಒತ್ತಡ, ತಾಂತ್ರಿಕ ಸಮಸ್ಯೆಗಳು ಹಾಗೂ ಕಡಿಮೆ ನೋಂದಣಿ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಅವಧಿ ವಿಸ್ತರಿಸಲಾಯಿತು. ಇದರಿಂದ ನಿಯಮ ಪಾಲಿಸಿದವರು ಹೆಚ್ಚುವರಿ ವೆಚ್ಚ ಭರಿಸಿದರೆ, ಕಾಯುತ್ತಿದ್ದವರಿಗೆ ಮತ್ತಷ್ಟು ಸಮಯ ಸಿಕ್ಕಿತು. ಇನ್ನು ಲಕ್ಷಾಂತರ ಗಾಡಿಗಳ ಮಾಲಕರು ಅದರ ಗೊಡವೆಗೆ ಹೋಗಿಲ್ಲಾ…ಈಗಲೂ ಬಿಂದಾಸ್ ಆಗಿ ಗಾಡಿಗಳು ಓಡಾಡ್ತಾ ಇವೆ..ಆಗ ಪ್ರಶ್ನೆ – ನಿಯಮವನ್ನು ಮೊದಲೇ ಸಮಯಕ್ಕೆ ಸರಿಯಾಗಿ ಪಾಲಿಸಿದವರಿಗೆ ಸಿಕ್ಕ ಪ್ರತಿಫಲವೇನು??

ಸಾರಿಗೆ ಮತ್ತು ಟ್ರಾಫಿಕ್ ಇಲಾಖೆಗಳು ಹಲವು ಬಾರಿ ಕಠಿಣ ಕ್ರಮಗಳ ಘೋಷಣೆ ಮಾಡಿವೆ. ಆದರೆ ಸಾರ್ವಜನಿಕ ವಿರೋಧ, ರಾಜಕೀಯ ಒತ್ತಡ ಅಥವಾ ಅನುಷ್ಠಾನದ ಸಮಸ್ಯೆಗಳ ಕಾರಣ ಕೆಲವು ನಿಯಮಗಳು ಸಡಿಲಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ. ಇದರಿಂದ ಕಾನೂನಿನ ಬಗ್ಗೆ ಜನರಲ್ಲಿ ಗೊಂದಲ ಮೂಡಿರುವುದು ವಾಸ್ತವ.

ದಂಡವೇ ಗುರಿ? ಅಥವಾ ರಸ್ತೆ ಸುರಕ್ಷತೆಯೇ?

ಪ್ರತಿ ಬಾರಿ ವಿಶೇಷ ಅಭಿಯಾನ, ದಂಡ, ಇ-ಚಲನ್, ರಿಯಾಯಿತಿ… ಇವೆಲ್ಲವೂ ನಡೆಯುತ್ತಿವೆ. ಆದರೆ ಅಪಘಾತಗಳು ಕಡಿಮೆಯಾಗುತ್ತಿವೆಯೇ? ಟ್ರಾಫಿಕ್ ಶಿಸ್ತು ಹೆಚ್ಚಾಗುತ್ತಿದೆಯೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಕಾನೂನಿನ ಉದ್ದೇಶ ಆದಾಯ ಸಂಗ್ರಹವಲ್ಲ, ಸುರಕ್ಷಿತ ಸಮಾಜ ನಿರ್ಮಾಣ ಎಂಬುದನ್ನು ಸರ್ಕಾರವೂ ಜನರೂ ನೆನಪಿಸಿಕೊಳ್ಳಬೇಕಿದೆ.

ಏನೇ ಆದರೂ…..ಫೈನ್ ಕಟ್ಟಬೇಕಿರುವ ಬುದ್ಧಿವಂತರು ಈಗ ಸದ್ಯದ ವಿಷಯಕ್ಕೆ ಗಮನ ಕೊಡಿ.ಸರ್ಕಾರದ ಆದೇಶದ ಪ್ರಕಾರ 2026ರ ಜೂನ್ 21ರಿಂದ ಜುಲೈ 10ರವರೆಗೆ ಈ ವಿಶೇಷ ರಿಯಾಯಿತಿ ಜಾರಿಯಲ್ಲಿರಲಿದೆ. ಈ ಅವಧಿಯೊಳಗೆ ಪಾವತಿ ಮಾಡಿದರೆ ಮಾತ್ರ 50% ರಿಯಾಯಿತಿ ಸಿಗಲಿದೆ.ಮೇ 2026ರವರೆಗೆ ಪೊಲೀಸ್ ಇಲಾಖೆಯಿಂದ ದಾಖಲಾದ ಬಾಕಿ ಟ್ರಾಫಿಕ್ ಇ-ಚಲನ್ ಪ್ರಕರಣಗಳು ಹಾಗೂ ಹಳೆಯ ಕೆಲವು ಸಾರಿಗೆ ಇಲಾಖೆ ದಂಡ ಪ್ರಕರಣಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ.

ವಾಹನ ಸವಾರರು ಅಧಿಕೃತ ಇ-ಚಲನ್ ಪೋರ್ಟಲ್, KSP App, BTP ASTraM App, ಟ್ರಾಫಿಕ್ ಪೊಲೀಸ್ ಠಾಣೆ ಅಥವಾ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಮೂಲಕ ದಂಡ ಪಾವತಿಸಬಹುದು.

ವಂಚಕರ ಬಗ್ಗೆ ಎಚ್ಚರ!

ಇತ್ತೀಚಿನ ದಿನಗಳಲ್ಲಿ ನಕಲಿ ಟ್ರಾಫಿಕ್ ಚಲನ್ ಲಿಂಕ್‌ಗಳು, WhatsApp ಮೆಸೇಜ್‌ಗಳು ಹಾಗೂ ಖಾಸಗಿ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಹಣ ಪಾವತಿಸಲು ಒತ್ತಾಯಿಸುವ ವಂಚನೆಗಳು ಹೆಚ್ಚಾಗಿವೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಯಾವುದೇ ಹಣ ಪಾವತಿಸುವ ಮೊದಲು ಅಧಿಕೃತ ಸರ್ಕಾರದ ವೆಬ್‌ಸೈಟ್ ಅಥವಾ ಅಧಿಕೃತ ಆ್ಯಪ್‌ನಲ್ಲಿ ನಿಮ್ಮ ವಾಹನ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿ. ವೈಯಕ್ತಿಕ ಸಂಖ್ಯೆಗೆ ಡಿಎಲ್, ಆಧಾರ್ ಅಥವಾ ಬ್ಯಾಂಕ್ ಮಾಹಿತಿ ಕಳುಹಿಸಬೇಡಿ.

##TrafficFine #EChallan #KarnatakaNews #TrafficPolice #VehicleOwners #RoadSafety #KarnatakaGovernment #BreakingNews

COMMENTS

Login with Gmail to comment

ಇನ್ನಷ್ಟು ಸುದ್ದಿ

ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
ಆಪಲ್‌ಗೆ ಭಾರತದಲ್ಲಿ ದೊಡ್ಡ ಕಾನೂನು ಶಾಕ್? App Store ನಿಯಮಗಳ ಮೇಲೆ ಆಪಲ್ vs ಭಾರತ CCI ಜಟಾಪಟಿ 
ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
“ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!
ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
‼️ ಮುಂಗಾರು ಅಬ್ಬರ ಶುರು: ಕರ್ನಾಟಕ-ಕೇರಳಕ್ಕೆ IMD ರೆಡ್ ಸಿಗ್ನಲ್! ಮುಂದಿನ 7 ದಿನ ಭಾರೀ ಮಳೆ, ಬಿರುಗಾಳಿ ಸಾಧ್ಯತೆ!
ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…
ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಬೆಳ್ತಂಗಡಿಯಲ್ಲಿ ಮಧುಮಗ ಜೈಲಿಗೆ-ಅಪ್ರಾಪ್ತೆಯ ಮೇಲೆ ದೌರ್ಜನ್ಯ – ಇಬ್ಬರು ಆರೋಪಿಗಳ ಬಂಧನ..!