📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?

ಎಎಪಿ ರಾಷ್ಟ್ರೀಯ ಪಕ್ಷವಾಗಿ ಅತ್ಯಂತ ವೇಗವಾಗಿ ಬೆಳೆದು ಈಗ ಅಷ್ಟೇ ವೇಗವಾಗಿ ಕುಸಿಯುವತ್ತ ಸಾಗುತ್ತಿದೆ. ಜನಸಾಮಾನ್ಯರಿಗೆ ಯಾವ ಸಂಸದನು ಯಾವುದೇ ಪಕ್ಷಕ್ಕೆ ಹೋದರೂ, ಯಾರಿಗೆ ಕೈ ಕೊಟ್ಟರೂ, ಯಾವುದೇ ಪಕ್ಷಕ್ಕೆ ದ್ರೋಹ ಮಾಡಿದರೂ ಅದರಿಂದ ಯಾವುದೇ ನಷ್ಟವಿರುವುದಿಲ್ಲ. ಅದವರಿಗೆ ಇವತ್ತಿನ ದಿನ ಕೇವಲ ಒಂದು ಮನೋರಂಜನೆಯ ವಿಷಯವಾಗಿದೆ. ಯಾರು ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಸೀರಿಯಸ್ ಆಗಿ ತೆಗೆದುಕೊಳ್ಳುವ ಕೆಲವು ವಿಚಾರಗಳಿವೆ. ಅದರ ಬಗ್ಗೆ ಜನರು ಯೋಚನೆಯನ್ನು ಮಾಡುವುದಿಲ್ಲ. ಜನರ ಊಹೆಗೂ ನಿಲುಕದ ವಿಚಾರವದು.  ಕಾಣದ ಕೈಅದನ್ನು ಡಿಸೈಡ್ ಮಾಡುತ್ತದೆ. ಆ ಕಾರಣದ ಕೈ ಮಾಧ್ಯಮವನ್ನೂ ಆಳುತ್ತಿದೆ ಅನ್ನುವುದು ದುರ್ದೈವದ ವಿಚಾರ. ಅವರು ಒಂದೇ ತರಹದ ವಿಚಾರದಲ್ಲೂ, ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆ ಆಯ್ಕೆ ಮಾಡಿಕೊಳ್ಳುವಂತೆ ಮಾಡುವುದೇ ಆ ಕಾಣದ ಕೈ. ಆ ಕಾಣದ ಕೈ, ದೇಶವನ್ನೂ ಆಳುತ್ತಿದೆಯಾ?

ಅಮ್ಮಾದ್ಮಿ ಪಕ್ಷದ ರಾಘವ್ ಚಡ್ಡ ಸೇರಿದಂತೆ ಏಳು ಸಂಸದರು ಅಧಿಕೃತವಾಗಿ ಬಿಜೆಪಿಯ ಪಡಸಾಲೆಗೆ ಬಂದು ಸೇರಿದ್ದಾರೆ. ರಾಜಕೀಯವಾಗಿ ಇದೊಂದು ಬಹುದೊಡ್ಡ ಸಕ್ಸಸ್ ಬಿಜೆಪಿಗೆ. ಅದರಲ್ಲೂ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೊನೆಯ ಹಂತದ ಚುನಾವಣೆ ಮುಂದಿನ ವಾರದಲ್ಲಿ ನಡೆಯಲಿದೆ. ಈ ರಾಜಕೀಯ ಬದಲಾವಣೆಯು ವೆಸ್ಟ್ ಬಂಗಾಲದ ಚುನಾವಣೆಯ ಮೇಲೂ ಸ್ವಲ್ಪಮಟ್ಟಿಗೆ ಪರಿಣಾಮ ಬೀರಲಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.

ಕಳೆದ ಒಂದು ವರ್ಷದಿಂದ ಅಮ್ಮಾದ್ಮಿ ಪಕ್ಷವು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ. ಅರವಿಂದ ಕೇಜ್ರಿವಾಲ್ ಸ್ವತಹ ಜೈಲಿಗೆ ಹೋಗಿ ಬಂದಿದ್ದಾರೆ. ಆ ಪಕ್ಷದ ಪ್ರಮುಖರು ಸಾಲಾಗಿ ಜೈಲಿಗೆ ಹೋಗಿ ಬಂದರು. ಒಟ್ಟಿನಲ್ಲಿ ಸತತ ಹಿನ್ನಡೆಯು ಆಗುತ್ತಿದೆ ಆ ಪಕ್ಷಕ್ಕೆ.

ನೂರಕ್ಕೆ ನೂರರಷ್ಟು ಈ ಎಲ್ಲಾ ಹಿನ್ನಡೆಯು, ಆ ಪಕ್ಷದ ನಾಯಕರ ದಡ್ಡತನದಿಂದ ಎಷ್ಟಾಗುತ್ತಿದೆಯೋ, ಅಷ್ಟೇ ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ಆಡಳಿತ ದುರುಪಯೋಗದ ಕಾರಣದಿಂದಲೂ ಆಗುತ್ತಿದೆ. ಇಂತಹ ವಿಚಾರದಲ್ಲಿ ರಾಷ್ಟ್ರದ ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಿತ್ತು. ಆದರೆ ಪ್ರತಿಪಕ್ಷಗಳು ತಮ್ಮ ತಮ್ಮಲ್ಲಿಯೇ ಕಚ್ಚಾಡಿಕೊಳ್ಳುತ್ತಿವೆ. ಪ್ರತಿಪಕ್ಷದೊಳಗಿನ ಈ ಭಿನ್ನತೆಯು, ಆಡಳಿತ ಪಕ್ಷದ ಬಲಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳನ್ನ ಜೊತೆಗೆ ಕರೆದೊಯ್ಯುವ ಕೆಲಸ ಮಾಡಬೇಕಿದ್ದ ಕಾಂಗ್ರೆಸ್ ಕೂಡ ಇಲ್ಲಿ ತರಹೇವಾರಿಯ ತಪ್ಪುಗಳನ್ನು ಮಾಡುವ ಮೂಲಕ ಬಿಜೆಪಿಯನ್ನು ಇನ್ನಷ್ಟು ಬಲಪಡಿಸುತ್ತಿವೆ. ಕಾಂಗ್ರೆಸ್ ಹಂತ ಹಂತವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕಠಿಣ ನಿಲುವು ತಾಳುವುದರಲ್ಲಿ ವಿಫಲವಾಗುತ್ತಿರುವ ಕಾಂಗ್ರೆಸ್ ಎಲ್ಲಾ ಕಡೆಯೂ ತೇಪೆ ಹಾಕಿಕೊಂಡೆ ಹೋಗುತ್ತಿರುವುದ್ರಿಂದಾಗಿ ದುರ್ಬಲಗೊಳ್ಳುತ್ತಿದೆ.

ಒಟ್ಟಾರೆಯಾಗಿ ರಾಷ್ಟ್ರದ ಬಹುತೇಕ ಕಡೆ ಬಿಜೆಪಿಯು ಬಲಿಷ್ಠವಾಗುತ್ತಾ ಸಾಗುತ್ತಿದ್ದರೆ, ಪ್ರತಿಪಕ್ಷಗಳು ಬಲ ಕಳೆದುಕೊಳ್ಳುತ್ತಾ ಸಾಗುತ್ತಿದೆ. ಈಗ ಅಮ್ಮಾದ್ಮಿ ಪಕ್ಷದ ಏಳು ಸಂಸದರು ಅಧಿಕೃತವಾಗಿ ಇಂದು ಬಿಜೆಪಿಯ ಪಡಸಾಲೆಗೆ ನಡೆದು ಬಂದಿದ್ದಾರೆ. ಏಳು ಜನರ ಖಾಲಿ ಕುರ್ಚಿಯ ಕಾರಣದಿಂದಾಗಿ, ಪಕ್ಷದ ಸಂಸದರ ಸಂಖ್ಯೆ ಈಗ  ಮೂರಕ್ಕೆ ಕುಸಿದಿದೆ. ಬಿಜೆಪಿಯ ಸಂಸದರ ಸಂಖ್ಯೆ ಏರಿಕೆಯಾಗಿದೆ.

ಇದು ಬಲದ ವಿಚಾರವೊ, ಎಎಪಿ ಯ ದೌರ್ಬಲ್ಯದ ವಿಚಾರವೋ ಅಲ್ಲ. ಭಾರತದ ದೌರ್ಬಲ್ಯದ ವಿಚಾರ. ಪ್ರಜಾತಂತ್ರದ ದೌರ್ಬಲ್ಯದ ವಿಚಾರ. ನಮ್ಮ ಕಾನೂನು, ಸಂವಿಧಾನವನ್ನು ಅಣಕ ಮಾಡುತ್ತಿರುವ ಕೆಟ್ಟ ರಾಜಕಾರಣದ ವಿಚಾರ. ಇಂತವುಗಳನ್ನು ನೀರೆರೆದು ಪೂಶಿಸುವುದು ಎಷ್ಟರ ಮಟ್ಟಿಗೆ ಸರಿ?

ಸಂಸದರು ಒಂದು ಪಕ್ಷದ ಲೇಬಲ್ಲಿನಲ್ಲಿ ಆಯ್ಕೆಯಾದ ನಂತರ ಆ ಒಂದು ಪಕ್ಷಕ್ಕೆ ಅವರು ನಿಷ್ಠರಾಗಿರಲ್ಲ ಅಂದ್ರೆ, ಅವರು ದೇಶದ ಜನರಿಗೆ ಎಷ್ಟು ನಿಷ್ಠರಾಗಿರುತ್ತಾರೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಎಲ್ಲವೂ ಕಾನೂನಿನ ವ್ಯಾಪ್ತಿಗೆ ಬರೋದಿಲ್ಲ ನಿಜ, ಆದ್ರೆ ನೈತಿಕತೆಯ ವ್ಯಾಪ್ತಿಗೆ ಬರಬೇಕು ತಾನೆ? ಈಗ ಪಕ್ಷ ತೊರೆದು ಹೋಗಿರುವ ಏಳು ಸಂಸದರಿಗೂ ಆ ನೈತಿಕತೆ ಇಲ್ಲ ಅನ್ನುವುದನ್ನು ಇದು ಎತ್ತಿ ತೋರಿಸುತ್ತಿದೆ. ಅಂತಹ ನೈತಿಕತೆ ಇಲ್ಲದ ಸಂಸದರನ್ನು ಬಿಜೆಪಿ ಯಂತಹ ಬಲಿಷ್ಠ ರಾಷ್ಟ್ರೀಯ ಪಕ್ಷವು, ತನ್ನ ಪಕ್ಷದ ತೆಕ್ಕೆಗೆ ಹೇಗೆ ತೆಗೆದುಕೊಳ್ಳುತ್ತದೆ? ಇದೆಲ್ಲವುದಕ್ಕೂ ಆ ಪಕ್ಷವು ಮುಂದಿನ ದಿನದಲ್ಲಿ ಉತ್ತರ ಕೊಡಬೇಕಾದಂತಹ ಸ್ಥಿತಿಗೆ ಬರುತ್ತದೆ. ಆದರೆ, ದೇಶದ ಮಾಧ್ಯಮಗಳು ಏನು ಮಾಡುತ್ತಿವೆ? ಯಾವ ಆಂಗಲ್ ನಲ್ಲಿ ಚರ್ಚೆಯಾಗಬೇಕಿತ್ತೋ, ಯಾವ ಆಂಗಲ್ ನಲ್ಲಿ ವಿಶ್ಲೇಷಣೆಗೆ ಒಳಪಡಬೇಕಿತ್ತೋ ಅದ್ಯಾವುದೂ ಆಗುತ್ತಿಲ್ಲ. ರಾಘವ್ ಚಡ್ಡ ಇರಲಿ ಇತರ ಪಕ್ಷ ಬದಲಿಸಿದ ಸಂಸದರಿರಲಿ, ಅವರು ಪ್ರತಿನಿಧಿಸಿದ ಪಕ್ಷ ಇಷ್ಟವಾಗಿಲ್ಲ ಅಂದರೆ, ಯಾವ ಮುಲಾಜೂ ಇಲ್ಲದೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಅಥವಾ ಬೇರೆ ಪಕ್ಷದ ಜೊತೆ ಕೈಜೋಡಿಸಿ ಮತ್ತೊಮ್ಮೆ ಸಂಸತ್ತಿಗೆ ಆಯ್ಕೆಯಾಗಿ ಹೋಗಬಹುದಿತ್ತು. ಅದು ರಾಜಮಾರ್ಗವೂ ಹೌದು. ನೈತಿಕ ಮಾರ್ಗವೂ ಹೌದು. ಆದರೆ ರಾಘವ್ ಚಡ್ಡಾ ರಂತಹ ಯುವ ಸಂಸದರು, ಆಯ್ಕೆ ಮಾಡಿಕೊಂಡಂತಹ ಮಾರ್ಗ ರಾಷ್ಟ್ರಕ್ಕೆ ಯಾವ ಸಂದೇಶವನ್ನು ನೀಡುತ್ತದೆ?

ನೋ ಡೌಟ್ ರಾಘವ್ ಚಡ್ಡ ಹಾಗೂ ಇತರ ಸಂಸದರು ಬಿಜೆಪಿ ತೆಕ್ಕೆಗೆ ಹೋಗಲು ಯಾವುದೇ ಕಾನೂನಿನ ಅಡೆತಡೆ ಇಲ್ಲ. ಅದಕ್ಕೆ ಬೇಕಾದಂತಹ ಎಲ್ಲಾ ನಿಯಮಗಳು ಅವರ ಪರವಾಗಿದೆ. ಹಾಗಿರುವಾಗ ಅವರು ಪಕ್ಷ ಬದಲಾವಣೆ ಮಾಡುವುದು ತಪ್ಪೇ?

ಏನೇ ಹೇಳಲಿ, ಒಂದು ಸಂಸದನನ್ನು ಜನರು ಆಯ್ಕೆ ಮಾಡಿರುತ್ತಾರೆ, ಒಂದು ಪಕ್ಷವು ಅವರಿಗೆ ಸ್ಪರ್ಧೆ ಮಾಡಲು ತನ್ನ ವೇದಿಕೆಯನ್ನು ನೀಡಿರುತ್ತದೆ, ಅವರ ಗೆಲುವಿಗಾಗಿ ಒಂದು ಪಕ್ಷದ ಸಾವಿರಾರು ಕಾರ್ಯಕರ್ತರು ಹತ್ತಾರು, ನಾಯಕರುಗಳು ಹಗಲಿರುಳು ಆ ವ್ಯಕ್ತಿಯ ಗೆಲುವಿಗಾಗಿ ಶ್ರಮ ಪಟ್ಟಿರುತ್ತಾರೆ. ಹಾಗಿರುವಾಗ ಅಂತಹ ಸಂಸದ ಅಥವಾ ಯಾವುದೇ ಜನಪ್ರತಿನಿಧಿ ಹೇಗೆ ತನ್ನಿಷ್ಟದಂತೆ ನಡೆದುಕೊಳ್ಳಲು ಸಾಧ್ಯ? ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿದ್ದರೆ ಆತನಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸ್ವಲ್ಪ ಮಟ್ಟಿಗೆ ಜಾಸ್ತಿ ಇದೆ. ಆದ್ರೂ ಆತನ ಗೆಲುವಿಗಾಗಿ ಸಾಕಷ್ಟು ಜನರು ಬೆವರು ಸುರಿಸಿರುತ್ತಾರೆ. ಇದೆಲ್ಲವೂ ಆ ಜನಪ್ರತಿನಿಧಿ ಮನದಲ್ಲಿರಬೇಕು. ಅದಿದ್ದರೆ ಇವತ್ತು ರಾಘವ ಚಡ್ದಾನಂತವರು ನೇರವಾಗಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಮಗ್ಗಲು ಬದಲಾಯಿಸುತ್ತಿರಲಿಲ್ಲ. ಬದಲಿಗೆ ತಮ್ಮ ಸದಸ್ಯತ್ವಕ್ಕೆ  ರಾಜೀನಾಮೆ  ನೀಡಿ ಮತ್ತೊಂದು ಚುನಾವಣೆಯನ್ನು ಎದುರಿಸಿ ಸಂಸತ್ತಿಗೆ ತಲೆಯೆತ್ತಿ ಬರುತ್ತಿದ್ದರು.

ರಾಘವ ಚಡ್ಡ ಕಳೆದ ಕೆಲವು ದಿನಗಳಿಂದ ಸಮಾಜದ ಮೇಲೆ ವಿಪರೀತ ಕಾಳಜಿ ಇದ್ದವರಂತೆ, ಸಂಸತ್ತಿನಲ್ಲಿ ಅನೇಕ ಶ್ರೀಸಾಮಾನ್ಯರ ಪರವಾದ ವಿಚಾರವಾಗಿ ಪ್ರಶ್ನೆಗಳನ್ನು ಎತ್ತುವ ಮೂಲಕ ಮತ್ತು ಅದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುವುದರ ಮೂಲಕ ಜನಸಾಮಾನ್ಯರಿಂದ ಶಹಬ್ಬಾಸ್ ಪಡೆದಿದ್ದರು. ಆ ವಿಚಾರದ ಹಿಂದೆ ಪಕ್ಷ ಬದಲಾವಣೆಯ ಲೆಕ್ಕಾಚಾರವಿತ್ತು ಅನ್ನುವುದು ಜನಸಾಮಾನ್ಯರಿಗೆ ಗೊತ್ತಾಗಿದ್ದು ಈಗಲೇ ಆದರೂ, ರಾಜಕೀಯ ವಿಶ್ಲೇಷಕರಿಗೆ ಅಂತದೊಂದು ಅನುಮಾನ ಅವತ್ತೆ ಬಂದಿತ್ತು. ಜನಸಾಮಾನ್ಯರ ಬೆಂಬಲ ಇರಲಿ ಎಂಬ ಕಾರಣಕ್ಕೆ, ತಮ್ಮ ಅನೈತಿಕತೆ ಮುಚ್ಚಿ ಹೋಗಲಿ ಎಂಬ ಕಾರಣಕ್ಕೆ ಈ ರೀತಿಯ ಚಾಣಕ್ಯ ನಡೆ ರಾಜೀವ್ ಚಡ್ಡಾ ತೋರಿಸಿದ್ದರಾ ಎಂಬುದು ಈಗ ಚರ್ಚಿತವಾಗುತ್ತಿರುವ ವಿಚಾರ.

ಅದೇನೇ ಇರಲಿ, ಈಗ ರಾಜೀವ್ ಚಡ್ಡ ಸೇರಿದಂತೆ ಹರ್ಭಜನ್ ಸಿಂಗ್,ರಾಜೇಂದ್ರ ಗುಪ್ತ,ವಿಕ್ರಂ ಸಾನ್ವಿ, ಸ್ವಾತಿ ಮುನಿವಾಲಾ, ಅಶೋಕ್ ಮಿತ್ತಲ್ ಹಾಗೂ ಸಂದೀಪ್ ಪಾಟಕ್ ಈ ಎಲ್ಲಾ ರಾಜ್ಯಸಭಾ ಸದಸ್ಯರು ಬಿಜೆಪಿಯನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ. ರಾಜ್ಯಸಭಾ ಸಭಾಪತಿಗಳಾದ ಪಿ ಬಿ ರಾಧಾಕೃಷ್ಣನ್ ರವರಲ್ಲಿ ಇವರು ಲಿಖಿತವಾಗಿ ಮನವಿಯನ್ನು ಮಾಡಿದ್ದಾರೆ.

ಅಮ್ಮಾದ್ಮಿ ಪಕ್ಷ,ಸಮಾಜಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆಯೋ ಅಥವಾ ಇಲ್ಲವೋ ಅದು ಬೇರೆ ಪ್ರಶ್ನೆ. ಆ ಪಕ್ಷದ ನಾಯಕರಿಂದ ಅವಮಾನಕ್ಕೆ ಒಳಗಾದ ಕಾರಣ ಈ ಸದಸ್ಯರುಗಳು ಪಕ್ಷ ಬದಲಾವಣೆ ಮಾಡುವ ತೀರ್ಮಾನ ಮಾಡಿದರು ಅನ್ನುವುದೂ ಓಕೆ. ಆದರೆ ಇಲ್ಲಿ ಎಲ್ಲಾ ಕಡೆಯೂ ಒಂದು ನೈತಿಕ ಮಾರ್ಗ ಅನ್ನೋದು ಇರಬೇಕಾಗುತ್ತದೆ. ಅವೆಲ್ಲವೂ ಕಾನೂನು ನಿಯಮಗಳ ಅಡಿಯಲ್ಲಿ ಸಾಗದು. ರಾಘವ್ ಚಡ್ಡಾ ಇರಲಿ ಅಥವಾ ಇತರೆ ಆರು ಜನ ಸಂಸದರಿರಲಿ ಅವರಿಗೆ ಈಗಿರುವ ಸ್ಥಾನಮಾನ ಬೇರೆ ಪಕ್ಷದಲ್ಲಿದ್ದರೆ ಸಿಗುತ್ತಿತ್ತಾ? ಸಂಶಯವೇ ಇದೆ. ಬೇರೆ ಪಕ್ಷದಲ್ಲಿ ಅವರು ಕಾಯಬೇಕಾಗಿ ಬರುತ್ತಿತ್ತೇನೋ. ಹಾಗಿರುವಾಗ ಅಮ್ಮಾ ದ್ಮಿ ಯ ಮೂಲಕ ಬಹಳ ಈಸಿಯಾಗಿ ಗೌರವಯುತ ಸ್ಥಾನವನ್ನು  ಗಿಟ್ಟಿಸಿಕೊಂಡು ಈಗ ಸೇಫ್ ಜೋನನ್ನು ಹುಡುಕಿಕೊಳ್ಳುವುದು ತಪ್ಪಲ್ಲ. ಹುಡುಕಿಕೊಂಡ ರೀತಿಯ ಬಗ್ಗೆ ಬೇಸರವಿದೆ. ಬಹುಷ್ಯಹ ರಾಘವ ಚಡ್ಡ, ರಾಜಿನಾಮೆಯನ್ನು ಕೊಟ್ಟು ಬಿಜೆಪಿ ಪಡಸಾಲೆಗೆ ನಡೆದು ಹೋಗಿದ್ದರೆ, ರಿಯಲಿ ಆ ವ್ಯಕ್ತಿ ಹೀರೋ ಆಗುತ್ತಿದ್ದರು. ಆ ಧೈರ್ಯವೂ ಅವರಲ್ಲಿ ಇಲ್ವಾ ಎಂಬ ಅನುಮಾನಕ್ಕೆ ಇವತ್ತು ಕಾರಣವಾಗಿದೆ.  ನಿಜವಾದ ಹೀರೋ ರಾಘವ್ ಚಡ್ಡ  ಅಲ್ಲ ಎಂಬುದಕ್ಕೆ ಅವರ ಈ ಬಣ್ಣ ಬದಲಾಯಿಸುವಿಕೆಯೇ ಸಾಕ್ಷಿ.

ಕಳೆದ ನಾಲ್ಕೈದು ತಿಂಗಳಿನಿಂದ ಸಂಸತ್ತಿನ ಒಳಗೆ ಹಾಗೂ ಹೊರಗೆ ಎರಡು ಕಡೆ ರಾಘವ ಚಡ್ಡ ವ್ಯಕ್ತಪಡಿಸುತ್ತಿರುವ ಪ್ರತಿಯೊಂದು ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಒಳಗಾಗಿದ್ದವು. ಶ್ರೀಸಾಮಾನ್ಯರನ್ನು  ಆಕರ್ಷಿಸಿದ್ದರು. ಅದೆಲ್ಲವೂ ಈಗ ರಾಜಕೀಯ ತಂತ್ರಗಾರಿಕೆಯ ಭಾಗ ಎಂಬಂತಾಗುತ್ತಿದೆ. ಜನರನ್ನು ರಾಜಕಾರಣವು ಅಥವಾ ನಾಯಕರುಗಳು ಎಷ್ಟು ಫೂಲ್ ಮಾಡುತ್ತಾರೆ ಅನ್ನೋದಕ್ಕೆ ಇವೆಲ್ಲವೂ ಒಂದು ಉದಾಹರಣೆಗಳು ಅಷ್ಟೇ. ಹಾಗಂತ ಇವರ್ಯಾರೂ ಕೆಟ್ಟವರಲ್ಲ, ತಮ್ಮ ರಾಜಕೀಯ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಮಾಡುತ್ತಿರುವ ತಂತ್ರಗಾರಿಕೆಯ ಮೊರೆ ಹೋದವರು. ಆದರೆ ಜನಸಾಮಾನ್ಯರು, ಈ ದೇಶದ ಬುದ್ಧಿಜೀವಿಗಳು, ದೇಶದ ಮಾಧ್ಯಮಗಳು ಇಂತಹ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕಿತ್ತೋ, ಹೇಗೆ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಬೇಕಿತ್ತೋ, ಹಾಗೆ ನಡೆದುಕೊಳ್ಳಲಿಲ್ಲ……. ಮೂರನೇ ಶಕ್ತಿ ಅಂದರೆ, ಕಣ್ಣಿಗೆ ಕಾಣದ ಶಕ್ತಿಯ ಪವರ್ ಅಂದ್ರೆ ಹಾಗೆ ಅಲ್ವಾ?

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ಭೀಕರ ಅಪಘಾತ ಮಹಿಳೆ ಬಲಿ
ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ಅರೆಬೈಲ್ ಘಾಟ್ ನ ಕಾರು ಅಫಘಾತ ವ್ಯವಸ್ಥಿತ ಕೊಲೆ…!
ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!