📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!

    ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿಗೆ ಮಸಿ ಬಳಿದಿದ್ದಾರೆ, ಅಮೇರಿಕಾದ ಘನತೆಯನ್ನು ಮುರ್ಕಾಸಿಗೆ ಹರಾಜಿಡುತ್ತಿದ್ದಾನೆ. ಅದೆಲ್ಲ, ಆದೇಶಕ್ಕೆ ಸಂಬಂದಿಸಿದ ವಿಚಾರ. ಆದ್ರೆ ಜಗತ್ತಿಗೆ ಕಂಠಕವನ್ನು ತಂದಿಡುತ್ತಿದ್ದರೂ, ಜಗತ್ತಿನ ಬಹುತೇಕ ರಾಷ್ಟ್ರಗಳು ನಿರ್ವಿರ್ಯವಾಗಿ ಕುಳಿತಿರೋದು ನೋಡಿದ್ರೆ ಸೇಮ್ ಟು ಸೇಮ್ ನಮ್ಮಲ್ಲಿನ ರೌಡಿಗಳ ಕಾಳಗ ನೆನಪಾಗ್ತಾದೆ.

    ನಮ್ಮಲ್ಲಿ ಸಾಕಷ್ಟು ಬಾರಿ ರೌಡಿಗಳು ಜನನಿಭಿಡ ಸ್ಥಳದಲ್ಲಿ ಹೋಡೆದಾಡೋದನ್ನು, ಹಿಂಸಾತ್ಮಕವಾಗಿ ನಡೆದುಕೊಳ್ಳೋದನ್ನು, ಸಾರ್ವಜನಿಕರಲ್ಲಿ ಭಯ ಹುಟ್ಟಿಸೋದನ್ನು ನೋಡಿದ್ದೇವೆ. ಅಂತಹ ಸಂದರ್ಭದಲ್ಲಿ ಸಾಮಾನ್ಯ ಜನರು ಬಹುತೇಕವಾಗಿ ತಮಗೇನೂ ಗೊತ್ತಿಲ್ಲದವರಂತೆ ಇದ್ದು ಬಿಡ್ತಾರೆ. ಹಿಂಸೆಯನ್ನು ತಪ್ಪಿಸಲು ಹೋಗೋದಿಲ್ಲ, ಭಯ ಹುಟ್ಟಿಸುವವರ ವಿರುದ್ಧ ತಿರುಗಿಯೂ ಬೀಳೋದಿಲ್ಲ. ಕಾನೂನು ಜೊತೆ ಸಹಕಾರವನ್ನು ನೀಡೋದಿಲ್ಲ. ಅದೇ ಸೇಮ್ ದೃಶ್ಯ ಕಾಣ್ತಿದೆ ಈಗ.

    ಅಮೇರಿಕ ಎಂಬ ದೇಶವು ಡಾಲರ್ ತನ್ನದಾಗಿಸಿಕೊಂಡು, ಈಡಿ ಜಗತ್ತಿನ ಮೇಲೆ ಹಿಡಿತ ಸಾಧಿಸುವ ಕೆಲಸ ಮಡಿಕೊಂಡು ಬಂದಿದೆ. ಅದು ತಪ್ಪಲ್ಲ, ಆದ್ರೆ ಆ ದೇಶದ ಅಧ್ಯಕ್ಷನಾಗಿ ಬಂದು ಕೂತ ಡೊನಾಲ್ಡ್   ಟ್ರಂಪ್, ತನ್ನ ಹುಚ್ಚಾಟಗಳ ಮೂಲಕ ಇಡೀ ಜಗತ್ತಿಗೆ ಕಂಟಕನಾಗುತ್ತಿದ್ದಾನೆ, ಅದು ತಪ್ಪು. ಡೊನಾಲ್ಡ್ ಟ್ರಂಪ್ ನಿಮಿಷಕ್ಕೊಂದು ಮಾತನಾಡುತ್ತಾನೆ, ಆತನ ಮಾತಿನಲ್ಲಿ ತಾನು ಎಂಬ ಅಹಂಕಾರವು ಮಿತಿಮೀರಿದ್ದು ಗೋಚರವಾಗುತ್ತದೆ. ಇರಾನ್ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಹಾಗೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಸಹ್ಯಕರವಾಗಿದೆ. ಆದರೂ ಇಡೀ ಜಗತ್ತಿನ ಒಂದೆರಡು ದೇಶ ಬಿಟ್ಟು, ಉಳಿದ ದೇಶಗಳು ನೋಡಿದರೂ  ನೋಡದವರ ಹಾಗೆ ಇರೋದನ್ನ ನೋಡಿದರೆ ಸೇಮ್ ಘಟನೆಗಳು ನೆನಪಿಗೆ ಬರುತ್ತದೆ

    ಕ್ರಿಶ್ಚಿಯನ್ ಧರ್ಮದ ಪರಮೋಚ್ಚ ಗುರುವಿನ ವಿರುದ್ಧವೇ ಡೊನಾಲ್ಡ್ ಟ್ರಂಪ್ ಎಲ್ಲೆ ಮೀರಿದ ಮಾತುಗಳನ್ನು ಆಡಿದ್ದಾರೆ. ಈತ ಪೋಪ್ ಆಗಲು ಲಾಯಕ್ಕೆ ಇಲ್ಲದ ವ್ಯಕ್ತಿ ಎಂದು ಏಕವಚನದಲ್ಲೇ ಜರಿಯುವ ಡೊನಾಲ್ಡ್ ಟ್ರಂಪ್, ಹಲವು ಗುರುತರವಾದಂತಹ ಆರೋಪವನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಪೋಪ್ ಸ್ಥಾನಕ್ಕೆ ಈ ಲಿಯೋ ಹೋಗಲು ನಾನೇ ಕಾರಣ, ನಾನಿಲ್ಲ ಅಂದರೆ ಆ ಸ್ಥಾನಕ್ಕೆ ಪರಿಗಣನೆಗೂ ಒಳಪಡುತ್ತಿರಲಿಲ್ಲ. ನನ್ನಿಂದಾಗಿ ವ್ಯಾಟಿಕನ್ ಅಂತಹ ಪರಮೋಚ್ಚ ಸ್ಥಾನದಲ್ಲಿ ಕುಳಿತಿದ್ದೀಯಾ, ಗೊತ್ತಿಲ್ಲದ ವಿಚಾರಕ್ಕೆ ಮಾತನಾಡಿ ಆಸ್ಥಾನವನ್ನು ಕಳೆದುಕೊಳ್ಳಬೇಡಿ ಎಂದು ಬೆದರಿಕೆ ಹಾಕಿದ್ದಾರೆ.

    ಅಷ್ಟಕ್ಕೂ ಕ್ಯಾಥೋಲಿಕ್ ಕ್ರಿಶ್ಚಿಯನ್ನ ಪರಮೋಚ್ಚ ನಾಯಕ ಪೋಪ್ ಲೀಯೋ ಅಮೇರಿಕನ್ನರು. ಇಡೀ ಜಗತ್ತು ಅಮೇರಿಕಾಮಯವಾಗಬೇಕು ಅನ್ನುವುದು ಹುಚ್ಚಾಟ ನಡೆಸುತ್ತಿರುವ ಅಮೆರಿಕಾ ಅಧ್ಯಕ್ಷರ ಧ್ಯೇಯ. ಹಲವು ಬಾರಿ ಈ ಬಗ್ಗೆ ಮಾತನ್ನೂ ಆಡಿದ್ದಾರೆ. ಅಮೇರಿಕಾವನ್ನು ಮಹಾನ್ ಮಾಡಬೇಕೆನ್ನುವುದು ಅವರ ಭಾಷಣದ ಭಾಗ. ಆ ನಿಟ್ಟಿನಲ್ಲಿ ಸಾಗುವುದು ತಪ್ಪಲ್ಲ, ಹಾಗಂತ ಅದಕ್ಕಾಗಿ ಜಗತ್ತಿನ ಮೇಲೆ ದಬ್ಬಾಳಿಕೆ ನಡೆಸುವುದು ತಪ್ಪು, ರಕ್ಕಸಿ ಪ್ರವೃತ್ತಿ ನಡೆಸೋದೂ ತಪ್ಪು.

    ಅಷ್ಟಕ್ಕೂ ಪೋಪ್ ಲೀಯೋ ಹೇಳಿದ್ದೇನು ಗೊತ್ತಾ? ಯುದ್ಧ, ಹಿಂಸೆ, ರಾಜಕೀಯ ಅಹಂಕಾರ ಇದೆಲ್ಲವನ್ನು ಕ್ರಿಶ್ಚಿಯನ್ ಧರ್ಮವು ವಿರೋಧಿಸುತ್ತದೆ. ಧರ್ಮದ ಸಂದೇಶವು ಇದೆಲ್ಲವುದರ ವಿರುದ್ಧವೇ ಇದೆ. ಹಾಗಾಗಿ ವಿನಾಕಾರಣ ಒಂದು ದೇಶದ ವಿರುದ್ಧ ಯುದ್ಧ ಮಾಡುವಂತದ್ದು, ಮತ್ತು ಇಡೀ ದೇಶದ ನಾಗರಿಕರನ್ನು ಮುಗಿಸಿ ಬಿಡುತ್ತೇನೆ ಎಂಬ ಸ್ಟೇಟ್ ಮೆಂಟ್ ನೀಡುವುದು ಶುದ್ಧ ತಪ್ಪು ಎಂದು ಸ್ಪಷ್ಟವಾಗಿ ಸ್ಟೇಟ್ಮೆಂಟ್ ನೀಡಿದ್ದರು. ಈ ಸ್ಟೇಟ್ಮೆಂಟಿನಿಂದ ಸಿಟ್ಟಾದ ಡೊನಾಲ್ಡ್ ಟ್ರಂಪ್, ಪೋಪ್ ವಿರುದ್ಧವೇ ಗುಡುಗಿದ್ದಾರೆ. ವ್ಯಾಟಿಕನ್ ನನ್ನ ಕಂಟ್ರೋಲ್ ನಲ್ಲಿದೆ ಅಂತ ವಾರ್ನಿಂಗ್ ನೀಡಿದ್ದಾರೆ. ಕಟ್ಟರ್ ಎಡಪಂಥೀಯ ಸಿದ್ದಾಂತದವರ ಜೊತೆಗೆ ಪೋಪ್ ಮಾತುಕತೆ ನಡೆಸುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದ್ದಾರೆ. ಪೋಪ್ ಅವರನ್ನು ಬದಲಾಯಿಸುವುದು ನನಗೆ ಸುಲಭದ ಕೆಲಸ ಅಂತಲೂ ಸಂದೇಶ ಕಳುಹಿಸಿದ್ದಾರೆ. ಈ ಹಿಂದಿನ ಪೋಪ್ ಫ್ರಾನ್ಸಿಸ್ ಕೂಡ, ಡೊನಾಲ್ಡ್ ಟ್ರಂಪ್ ಅವರ ನಡೆ ಮತ್ತು ಮಾತಿನ ದಾಟಿಯನ್ನು ಖಡಕ್ಕಾಗಿ ವಿರೋಧಿಸಿದ್ದರು. ಆಗ ಫ್ರಾನ್ಸಿಸ್ ಅವರನ್ನು ಅಮೆರಿಕಾದ ವಿರೋಧಿ ಅಂತ ಬಿಂಬಿಸಿದ್ದರು. ಅಷ್ಟೇ ಅಲ್ಲ, ಫ್ರಾನ್ಸಿಸ್ ಕ್ರಿಶ್ಚಿಯನ್ ಅಲ್ಲ ಅಂತ ಜನರನ್ನು ನಂಬಿಸುವ ಪ್ರಯತ್ನ ಮಾಡಿದ್ದರು. ಇಷ್ಟೇ ಅಲ್ಲ, ತನ್ನನ್ನು ತಾನು ಏಸುವಿನ ಅವತಾರ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಂತಹ ಹುಚ್ಚಾಟದ ನಾಯಕ ಜಗತ್ತಿನ ಯಾವ ದೇಶದಲ್ಲೂ ಇರಲಿಕ್ಕಿಲ್ಲ. ನಿಮಿಷಕ್ಕೊಂದು ರೀತಿಯಲ್ಲಿ ಮಾತನಾಡುವ ಡೊನಾಲ್ಡ್ ಟ್ರಂಪ್ ರನ್ನು ಯಾರೋ ನಿಯಂತ್ರಿಸುತ್ತಿದ್ದಾರೆ, ಹಾಗಾಗಿಯೇ ಅವರ ಮಾತುಗಳು ಪದೇ ಪದೇ ಬದಲಾಗುತ್ತದೆ ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಮೂಲಕ ಕಾಣದ ಕೈ ಈ ಎಲ್ಲಾ ಹುಚ್ಚಾಟಗಳನ್ನು ಮಾಡಿಸುತ್ತಿದೆ ಎನ್ನುವುದು ಅವರ ವಾದವೂ ಆಗಿದೆ.

    ಅದೇನೇ ಇರಲಿ, ಈಗ ಡೊನಾಲ್ಡ್ ಟ್ರಂಪ್ ಇರಾನ್ ವಿಚಾರದಲ್ಲಿ ಯುದ್ಧಕ್ಕೆ ಇಳಿದಿದ್ದು ಯಾಕೆ? ಜಗತ್ತಿನ ಮುಂದೆ ಇರಾನ್ ಅಣ್ವಸ್ತ್ರವನ್ನು ಹೊಂದಲು ಪ್ರಯತ್ನಿಸುತ್ತಿದೆ, ಹಾಗಾಗಿ ಈ ದಾಳಿ ಅಂತ ಜಗತ್ತನ್ನು ನಂಬಿಸಲು ಪ್ರಯತ್ನಿಸಿತು ಅಮೇರಿಕ. ಜಗತ್ತು ನಂಬಿದೆಯಾ ಅಂದರೆ, ನೋ ಚಾನ್ಸ್. ಜಗತ್ತು ಟ್ರಂಪ್ ಅವರ ಯಾವುದೇ ಮಾತನ್ನು ನಂಬಲು ತಯಾರಿಲ್ಲ. ಆದರೆ ಅವರನ್ನು ವಿರೋಧಿಸಲು ತಾಕತ್ತಿಲ್ಲದ ಪರಿಸ್ಥಿತಿ.

    ಇರಲಿ, ಇರಾನ್ ಮೇಲೆ ಈ ರೀತಿಯ ಆರೋಪ ಮಾಡುವ ಅಮೆರಿಕಾದ ಕೈಲಿ ಅಣ್ವಸ್ತ್ರ ಇಲ್ವಾ? ಅವರು ಅದನ್ನು ಹೊಂದಬಹುದು ಆದರೆ ಇರಾನ್ ಹೊಂದಬಾರದು ಅನ್ನುವುದು ಎಷ್ಟು ಸರಿ? ಬೇರೆ ದೇಶಗಳಿಗೆ ಹೀಗೆ ಇರಬೇಕು ಅನ್ನುವ ಅಮೇರಿಕಾ, ತಾನು ಸಹ ಹಾಗೆಯೇ ಇದ್ದುಕೊಂಡು ಇದನ್ನು ಹೇಳಿದರೆ ಅದಕ್ಕೊಂದು ಅರ್ಥ ಇದೆ. ಆದರೆ ಅದನ್ನು  ಹೇಳಬೇಕಾದ ಇಡೀ ಜಗತ್ತಿನ ಇತರ ದೇಶಗಳು ನಿರ್ವಿರ್ಯರಾಗಿದ್ದಾರೆ ಯಾಕೆ?

    ಅಮೇರಿಕಾ ಇರಾನ್ ಜೊತೆಗೆ ಸಂಘರ್ಷ ನಡೆ ಸುತ್ತಿರುವುದು ಒಂದೆಡೆಯಾದರೆ, ಇರಾನ್ ಜೊತೆಗೆ ಜಗತ್ತಿನ ಯಾವ ದೇಶವೂ ಸಂಪರ್ಕ ಹೊಂದಬಾರದು ಅನ್ನುವ ತಾಕಿತು ಇನ್ನೊಂದು ಕಡೆ. ಇದನ್ನ ಕೇಳಿಸಿಕೊಂಡೂ ಸಹ ಸುಮ್ಮನಿರಬೇಕಾದ ದರ್ದು ಉಳಿದ ದೇಶಗಳದ್ದು.

    ಎಲ್ಲಾ ದೇಶಗಳು ಅವರವರ ರಕ್ಷಣೆ ಹಾಗೂ ಸೇಫ್ಟಿಗೆ ಒತ್ತು ಕೊಡುತ್ತಾರೆ. ಅಮೇರಿಕಾದಂತಹ ಬಲಾಢ್ಯನನ್ನು ಎದುರು ಹಾಕಿಕೊಳ್ಳುವುದು ಕ್ಷೇಮವಲ್ಲ ಅನ್ನೋದು ಎಲ್ಲರ ಭಾವನೆ. ಹಾಗಾಗಿಯೇ ಅವರೆಲ್ಲರೂ ಮೌನವಾಗಿ ಕುಳಿತಿದ್ದಾರೆ. ಬಲಿಷ್ಠ ದೇಶ ಅಂತ ಅನಿಸಿಕೊಂಡಿರುವ ರಷ್ಯಾ ಹಾಗೂ ಚೀನಾ ಕೂಡ ನೇರವಾಗಿ ಇರಾನ್ ಜೊತೆಗೆ ನಿಂತು ಯುದ್ಧಕ್ಕೆ ತಯಾರಿಲ್ಲ. ಇರಾನ್ ಜೊತೆಗೆ ಓಪನ್ ಆಗಿ ಕಾಣಿಸಿಕೊಂಡಿದ್ದಾರೆ ನಿಜ, ಹಾಗಂತ ಇರಾನಿಗೆ ಈ ಯುದ್ಧದಲ್ಲಿ ನೇರವಾಗಿ ಸಹಕಾರ ಇಲ್ಲಿಯವರೆಗೆ ಕೊಟ್ಟಿಲ್ಲ. ಗುಪ್ತವಾಗಿ ಏನೇ ಸಹಕಾರ ಕೊಟ್ಟರು ಅದು ಲೆಕ್ಕಕ್ಕೆ ಇಲ್ಲ. ಈಗ ಇಸ್ರೇಲಿಗೆ ಅಮೆರಿಕ ಹೇಗೆ ನೇರವಾಗಿ ಸಹಕಾರ ನೀಡುತ್ತಿದೆಯೋ, ಆ ರೀತಿಯ ಸಹಕಾರವನ್ನು ಯಾವ ದೇಶವು ಇರಾನಿಗೆ ಇಲ್ಲಿಯವರೆಗೆ ನೀಡಿಲ್ಲ. ಅಂದರೆ ಜಗತ್ತಿನ ಎಲ್ಲಾ ದೇಶಗಳೂ ಸಹ ಅಮೇರಿಕಾದ ಮುಂದೆ ಮಂಡಿಯೂರಿದೆ ಅಂತಲೇ ಲೆಕ್ಕ. ಇಂತಹ ಹುಚ್ಚಾಟ ನಡೆಸುವ, ಅಹಂಕಾರದಿಂದ ಕುಣಿಯುತ್ತಿರುವ ಡೊನಾಲ್ಡ್ ಟ್ರಂಪ್ ಮುಂದೆ ಮಂಡಿಯುವುದು ಎಷ್ಟರಮಟ್ಟಿಗೆ ಸರಿ? ಇಡೀ ಜಗತ್ತು ಬಿಟ್ಟುಬಿಡಿ, ಟ್ರಂಪ್ ನಡೆ ಶುದ್ದ ತಪ್ಪು  ಅಂತ ತಿಳಿದವರು ಒಟ್ಟಾಗಿ ಸೇರಿ ತಿರುಗಿ ನಿಂತರೂ ಸಾಕು ಡೊನಾಲ್ಡ್ ಟ್ರಂಪ್ ಇರಲಿ, ಅಮೇರಿಕವೇ ಇರಲಿ, ಗಂಟು ಮೂಟೆ ಕಟ್ಟಲೇ ಬೇಕಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ಸಾಗಲು ಯಾವ ದೇಶವೂ ರೆಡಿ ಇಲ್ಲ ಯಾಕೆ?

    ಸಿಂಪಲ್, ಇದು ಒಂದು ಮಾಫಿಯಾದ ಕಾರ್ಯತಂತ್ರವಾಗಿದೆ. ಆ ಮಾಫಿಯಾ ಕಾರ್ಯತಂತ್ರದ ಭಾಗವಾಗಿಯೇ ಈ ಎಲ್ಲಾ ಚಟುವಟಿಕೆಯು ನಡೆಯುತ್ತಿದೆ. ಮಾಫಿಯಾ, ಜಗತ್ತಿನ ಯಾರನ್ನು ಬೇಕಾದರೂ ದೊಡ್ಡಣ್ಣನನ್ನಾಗಿ ಮಾಡುತ್ತದೆ. ಯಾರನ್ನು ಬೇಕಾದರೂ ಬಲಿಷ್ಠರನ್ನಾಗಿಸುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಆ ಮಾಫಿಯಾದ ಹಿಡಿತವಿದೆ. ಆದೇಶಗಳ, ರಾಜಕಾರಣದಿಂದ ಹಿಡಿದು ಆಡಳಿತ ವ್ಯವಸ್ಥೆಯವರೆಗೆ ತನಗೆ ಬೇಕಾದ ಹಾಗೆ ಮಾಡಿಸಿಕೊಳ್ಳುವ ತಾಕತ್ತನ್ನು ಆ ಮಾಫಿಯಾ ಹೊಂದಿದೆ. ಆ ಮಾಫಿಯಾದ ಕೈಗೊಂಬೆಯೇ ಡೊನಾಲ್ಡ್ ಟ್ರಂಪ್ ಎಂಬ ಮಾತನ್ನು ಅನೇಕ ವಿಶ್ಲೇಷಕರು ಹೇಳುತ್ತಿರುವದರಲ್ಲಿ ನಿಜಾಂಶವಿದೆ.

    ಕೇವಲ ಅಮೆರಿಕ ಆಗಿದ್ದರೆ, ಡೊನಾಲ್ಡ್ ಟ್ರಂಪ್ ಆಗಿದ್ದರೆ, ಜಗತ್ತು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದರ ಹಿಂದೆ ವೆpಪನ್ ಮಾಫಿಯಾ ಹಾಗೂ ಡ್ರಗ್ ಮಾಫಿಯಾ ಕೆಲಸ ಮಾಡುತ್ತಿದೆ. ಇಡೀ ಜಗತ್ತನ್ನು ಆಳುತ್ತಿರುವುದೇ ಈ ಎರಡು ಮಾಫಿಯಾಗಳು. ಈ ಮಾಫಿಯಾ ಹಿಡಿತದಲ್ಲಿಯೇ ಇಡೀ ಜಗತ್ತಿನ ಕಾರ್ಪೊರೇಟ್ ವಿಭಾಗ ಇದೆ. ಆ ವಿಭಾಗವು ಜಗತ್ತಿನ ಬಹುತೇಕ ದೇಶದ ಮೇಲೆ ಹಿಡಿತ ಸಾಧಿಸುತ್ತಿದೆ ಅನ್ನೋದು, ಆ ವಿಶ್ಲೇಷಕರ ಅಭಿಪ್ರಾಯ. ಹಾಗಾಗಿ ಯಾವುದೇ ದೇಶದಲ್ಲಿ ಏನೇ ಬದಲಾವಣೆ ಆಗುವುದಿದ್ದರೂ ಅದರ ಹಿಂದೆ ಈ ಮಾಫಿಯಾದ ಕೈವಾಡ ಇರುತ್ತದೆ. ಯಾವುದೇ ದೇಶದಲ್ಲಿ ನಡೆಯುವಂತಹ ಕ್ರಾಂತಿಯ ಹಿಂದೆಯೂ ಇದರ ಕೈವಾಡವಿರುತ್ತದೆ. ಸೂಕ್ಷ್ಮವಾಗಿ ಗಮನಿಸಿ ನೋಡಿ, ಈಗ ಕೆಲವೇ ಕೆಲವು ಸಮಯಗಳ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ದೊಡ್ಡಮಟ್ಟಿಗಿನ ಕ್ರಾಂತಿಯೇ ಆಗಿಹೋಯಿತು. ಕ್ರಾಂತಿಯ ಮೊದಲು ಅಲ್ಲಿನ ರಾಜಕೀಯ ಹಾಗೂ ಅದರ ವಿದೇಶಿ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಆಗ ನಿಮಗೆ ಪಕ್ಕಾ ಅಂದಾಜು ಸಿಗುತ್ತದೆ. ಶ್ರೀಲಂಕಾದಲ್ಲಿ ಒಂದು ಕಡೆ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿರುವುದನ್ನು ಗಮನಿಸಿದ ಅಮೆರಿಕ, ತನ್ನ ಆಟವನ್ನು ಆಡಿತು. ಪರಿಣಾಮ ಚೀನಾದ ಪ್ರಭಾವ ಅಲ್ಲಿ ತಗ್ಗಿತು. ಬಾಂಗ್ಲಾದೇಶದಲ್ಲೂ ಸಹ ಶೇಕ್ ಹಸಿನಾ ಅಮೆರಿಕಾದ ಆರ್ಡರ್ ಪಾಲಿಸಲಿಲ್ಲ. ಪರಿಣಾಮ ಅಲ್ಲಿ ಕ್ರಾಂತಿಯಾಯಿತು. ಅದರ ಪರಿಣಾಮ ಆ ದೇಶದ ಹಿಂದೂ ಸಮಾಜ ಸಿಕ್ಕಾಪಟ್ಟೆ ನೋವುಣ್ಣಬೇಕಾಯಿತು. ಅಲ್ಲಿನ ಪ್ರಧಾನಿಯೇ ದೇಶ ಭ್ರಷ್ಟರಾದರು. ಅದೇ ರೀತಿ ನೇಪಾಳದಲ್ಲೂ ಸಹ ಕ್ರಾಂತಿಯಾಯಿತು. ಆ ಕ್ರಾಂತಿಯ ಪರಿಣಾಮ ಏನು ಅನ್ನುವುದನ್ನು ಕಾದು ನೋಡಬೇಕಿದೆ. ಹೊಸ ಸರ್ಕಾರದ ಮೇಲೆ ಯಾರ ಪ್ರಭಾವ ಇರಬಹುದು ಅನ್ನುವುದನ್ನು ಮುಂದಿನ ದಿನದಲ್ಲಿ ಕಾಣಬಹುದಾಗಿದೆ. ಇದರ ಅರ್ಥ ಇಷ್ಟೇ, ಇಡೀ ಜಗತ್ತನ್ನು ಆಳುತ್ತಿರುವ ಮಾಫಿಯಾ ಅಮೆರಿಕಾದ ಮೂಲಕ ತನ್ನ ಅಣತಿಯಂತೆ ನಡೆಯುವ ಸರ್ಕಾರಗಳು ಜಗತ್ತಿನ ಎಲ್ಲಾ ದೇಶಗಳಲ್ಲೂ ಇರಬೇಕೆಂದು ಭಾವಿಸುತ್ತವೆ. ಅದಕ್ಕೋಸ್ಕರ ಅವು ಇನ್ವೆಸ್ಟ್ಮೆಂಟ್ ಕೂಡ ಮಾಡುತ್ತವೆ. ಅದ್ಯಾವುದೂ ಯಾರಿಗೂ ಗೊತ್ತಾಗುವುದಿಲ್ಲ. ಆ ರೀತಿಯಲ್ಲಿ ಕಾರ್ಯಚರಿಸುತ್ತವೆ. ಇವತ್ತು ಅಮೆರಿಕವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿರುವುದೇ ಈ ಮಾಫಿಯಾ. ಈ ಮೊದಲು ಬ್ರಿಟನ್ ಅನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿತ್ತು. ಆನಂತರ ಅದು ಅಮೆರಿಕಕ್ಕೆ ಶಿಫ್ಟ್ ಆಯಿತು ಅಷ್ಟೇ. ಇಲ್ಲಿ ದೇಶ ಅಥವಾ ವ್ಯಕ್ತಿ ಮುಖ್ಯವಲ್ಲ. ಬದಲಿಗೆ ಮಾಫಿಯಾದ ವ್ಯವಹಾರ ಸಲೀಸಾಗಿ ಜಗತ್ತಿನಾದ್ಯಂತ ನಡೆಯಬೇಕು. ಅದಕ್ಕೋಸ್ಕರ ಇನ್ನೊಂದು ಪ್ರತಿಸ್ಪರ್ಧಿ ಹುಟ್ಟಿಕೊಳ್ಳಬಾರದು. ಹುಟ್ಟಿಕೊಳ್ಳುವ ಪ್ರತಿಸ್ಪರ್ಧಿಯನ್ನು ಮುಗಿಸಿಬಿಡುವಂತಹ ಪ್ರವೃತ್ತಿಯು ಈ ಮಾಫಿಯದ್ದಾಗಿದೆ. ಹಾಗಂತ ಅದು ನೇರವಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಜಗತ್ತಿನಲ್ಲಿ ಹುಟ್ಟಿಕೊಳ್ಳುವ ಭಯೋತ್ಪಾದನೆಯ ಹಿಂದೆ ಈ ಮಾಫಿಯಾ ಇದೆ, ಇಲ್ಲಿಗಲ್ ವ್ಯವಹಾರದ ಹಿಂದೆ ಈ ಮಾಫಿಯಾ ಇದೆ, ದೊಡ್ಡ ದೊಡ್ಡ ಉದ್ಯಮದ ಹಿಂದೆ ಈ ಮಾಫಿಯಾ ಇದೆ, ಒಳ್ಳೆಯದರ ಕಡೆನೂ ಮಾಫಿಯಾ ಇದೆ, ಕೆಟ್ಟದರ ಕಡೆನೂ ಮಾಫಿಯಾ ಇದೆ. ಒಂದರ್ಥದಲ್ಲಿ ತೊಟ್ಟಿಲು ತೂಗುವ ಕೆಲಸವನ್ನೂ ಮಾಡುತ್ತದೆ, ಚಿವುಟುವ ಕೆಲಸವನ್ನೂ ಮಾಡುತ್ತದೆ.

    ಈಗ ಅರ್ಥ ಆಗಿರಬೇಕು. ಅಮೆರಿಕಾದ ಇಂತಹ ಹುಚ್ಛಾಟದ ನಡೆಯನ್ನ ಜಗತ್ತಿನ ದೇಶಗಳು ಯಾಕೆ ಪ್ರಶ್ನೆ ಸುತ್ತಿಲ್ಲ, ವಿರೋಧಿಸುತ್ತಿಲ್ಲ ಅನ್ನುವುದು ಗೊತ್ತಾಗಿರಬೇಕು ತಾನೆ? ಜಗತ್ತಿನ ಬಹುತೇಕ ರಾಷ್ಟ್ರಗಳು ಮೌನವಾಗಿರುವುದರ ಹಿಂದೆ ಈ ಮಾಫಿಯಾದ ತಾಕೀತು ಕೆಲಸ ಮಾಡುತ್ತಿದೆ. ನೋ ಡೌಟ್, ಇದೇ ಕಾರಣಕ್ಕಾಗಿಯೇ ವಿಶ್ವಸಂಸ್ಥೆಯು ಲೆಕ್ಕಕ್ಕಿಲ್ಲದಂತಾಗಿದೆ. ಹುಚ್ಚಾಟ ನಡೆಸುತ್ತಿರುವ ಅಮೆರಿಕ, ಇಸ್ರೇಲ್ ಹಾಗೂ ಟ್ರಂಪ್ ಅವರನ್ನು ವೈಭವಿಕರಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಹಾಗೆ ಮಾಡುವಂತಹ ಪ್ರಭಾವವು ಎಲ್ಲಿಂದ ಬಂದಿತು ನೀವೇ ಊಹಿಸಿ ನೋಡಿ.

    -ದತ್ತು ಹೆಗಡೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
    ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
    ಇಬ್ಬರ ಸಣ್ಣ ಜಗಳದ ಎಫೆಕ್ಟ್ ನೋಡಿ..ಕಡಬದಲ್ಲಿ ಹೈಡ್ರಾಮಾ!ಸಿಲ್ಲಿAngry ಮೂಡ್‌ನಲ್ಲಿ ಎಸೆದ car ಕೀ ಚರಂಡಿಗೆ…
    ಸಂಸತ್ ಕಾರಿಡಾರ್‌ನಲ್ಲಿ ವಿವಾದಿತ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ರೇಣುಕಾ ಚೌಧರಿ ತರಾಟೆ
    ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
    ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…
    ಕಲ್ಲಂಗಡಿ ಹಣ್ಣು ತಪ್ಪು ಮಾಡಲಿಲ್ಲ… ಆದರೆ ಅಪರಾಧಿ ಸುದ್ದಿ ದೊಡ್ಡದಾಗಿದೆ!
    ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
    ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
    “ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ” – ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ವಾಗ್ದಾಳಿ
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ: