📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”

    “ಕಳ್ಳ ಯಾರು ಅನ್ನೋದು ಗೊತ್ತಿದೆ… ಸಾಕ್ಷಿಯೂ ಇದೆ… ಸಿಸಿಟಿವಿಯಲ್ಲೇ ಕಳ್ಳತನದ ದೃಶ್ಯ ಸೆರೆಯಾಗಿದೆ… ಆದರೆ ಬಂಧಿಸಲು ಆಗಲ್ಲ! ಪೊಲೀಸರಿಗೆ ದೂರು ಕೊಡಲು ಆಗುತ್ತಿಲ್ಲ! ಯಾಕೆ ಗೊತ್ತಾ?

    ವಜ್ರಾಭರಣ ಕದ್ದ ಮಹಾಚೋರನ ಸುಳಿವು ಕೊನೆಗೆ ಬಯಲಾಯ್ತು …ಆ ಕಳ್ಳ ಯಾರು ಅಂತ! ತಿಳಿದು ಜ್ಯುವೆಲರಿ ಮಾಲೀಕ ಮತ್ತು ತುಮಕೂರಿನ ಪೊಲೀಸರೇ ಬೆಚ್ಚಿಬಿದ್ದ ರಹಸ್ಯ ಘಟನೆ ನಡೆದಿದ್ದು 

    ತುಮಕೂರು ನಗರದ ಕಾಲ್‌ಟೆಕ್ಸ್ ಸರ್ಕಲ್ ಸಮೀಪದ ಜ್ಯುವೆಲರಿ ಅಂಗಡಿಯಲ್ಲಿ. ರಾತ್ರಿ ಕತ್ತಲೆ… ಜ್ಯುವೆಲರಿ ಅಂಗಡಿ ಸಂಪೂರ್ಣ ಬಂದ್… ಬೆಳಗ್ಗೆ ಅಂಗಡಿ ತೆರೆದ ಸಿಬ್ಬಂದಿಗೆ ಎದುರಾದ ದೃಶ್ಯ ಮಾತ್ರ ಸಿನಿಮಾವನ್ನೂ ಮೀರಿಸುವಂತಿತ್ತು. ಡಿಸ್‌ಪ್ಲೇಯಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಖಚಿತ ಚಿನ್ನಾಭರಣಗಳು ನಾಪತ್ತೆ! ಶಟರ್ ಮುರಿದಿಲ್ಲ… ಬೀಗ ಒಡೆದಿಲ್ಲ… ಯಾರೂ ಒಳನುಗ್ಗಿದ ಗುರುತು ಇಲ್ಲ. ಹಾಗಾದರೆ ಆಭರಣಗಳು ಎಲ್ಲಿಗೆ ಹೋದವು? ಇದೇ ಪ್ರಶ್ನೆ ಅಂಗಡಿ ಮಾಲೀಕರನ್ನಷ್ಟೇ ಅಲ್ಲ, ಪೊಲೀಸರನ್ನೂ ಕಂಗಾಲಾಗುವಂತೆ ಮಾಡಿತು.

    ಸುಮಾರು 50 ಗ್ರಾಂಗೂ ಅಧಿಕ ತೂಕದ ವಜ್ರಖಚಿತ ಚಿನ್ನಾಭರಣಗಳು, ಅಂದರೆ 10 ಉಂಗುರಗಳು ಮತ್ತು 3 ಸರಗಳು, ಒಟ್ಟು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಒಡವೆಗಳು ಕಾಣೆಯಾಗಿದ್ದವು.

    ಮೊದಲಿಗೆ ಎಲ್ಲರ ಅನುಮಾನ ಒಳಗಿನ ಸಿಬ್ಬಂದಿಯ ಮೇಲೆಯೇ ಬಿತ್ತು. ಆದರೆ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಸಿಸಿಟಿವಿ ದೃಶ್ಯ ಪರಿಶೀಲಿಸಲು ಮುಂದಾದರು. ಕ್ಯಾಮೆರಾ ದೃಶ್ಯ ನೋಡಿದ ಕ್ಷಣ ಎಲ್ಲರೂ ದಂಗಾದರು ಯಾಕೆಂದರೆ ಅಲ್ಲಿ ಕಾಣಿಸಿಕೊಂಡಿದ್ದ ಕಳ್ಳ ಮನುಷ್ಯನಲ್ಲ!

    ಪರದೆ ಮೇಲೆ ಪುಟ್ಟದೊಂದು ಇಲಿ ಸದ್ದಿಲ್ಲದೆ ಓಡಾಡುತ್ತಾ, ಒಂದೊಂದೇ ವಜ್ರಾಭರಣವನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಎಳೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಆ ಇಲಿ ಅಚ್ಚುಕಟ್ಟಾಗಿ ಆಭರಣಗಳನ್ನು ತನ್ನ ಬಿಲದೊಳಗೆ ಸಾಗಿಸುತ್ತಿರುವ ದೃಶ್ಯ ನೋಡಿ ಸಿಬ್ಬಂದಿ ಮತ್ತು ಮಾಲೀಕರು ಬೆಚ್ಚಿಬಿದ್ದರು.

    ಆದರೆ ನಿಜವಾದ ಟ್ವಿಸ್ಟ್ ಇನ್ನೂ ಬಾಕಿ ಇತ್ತು.

    ಸಿಸಿಟಿವಿ ಆಧರಿಸಿ ಇಲಿಯ ಜಾಡು ಹಿಡಿದ ಸಿಬ್ಬಂದಿ, ಅದು ಹೋಗಿದ್ದ ಬಿಲವನ್ನು ತೋಡಲು ಆರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಬಿಲದೊಳಗಿಂದ ಹೊಳೆಯುವ ಚಿನ್ನದ ಕಿರಣಗಳು ಕಾಣಿಸತೊಡಗಿದವು. ಬಿಲವನ್ನು ಸಂಪೂರ್ಣ ತೆರೆಯುತ್ತಿದ್ದಂತೆ ಎಲ್ಲರೂ ಕಂಗಾಲಾದರು. ಕಳ್ಳತನವಾಗಿದ್ದ ಎಲ್ಲಾ 10 ಉಂಗುರಗಳು ಮತ್ತು 3 ಸರಗಳು ಅಲ್ಲಿ ಭದ್ರವಾಗಿ ಇಟ್ಟಿದ್ದವು! ಒಂದೂ ಮಿಸ್ ಆಗಿರಲಿಲ್ಲ.

    ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಎಲ್ಲಾ ವಜ್ರಾಭರಣಗಳು ಸುರಕ್ಷಿತವಾಗಿ ವಾಪಸ್ ಸಿಕ್ಕಿದ್ದರಿಂದ ಅಂಗಡಿ ಮಾಲೀಕರು ನಿಟ್ಟುಸಿರು ಬಿಟ್ಟರು.

    ಈ ವಿಚಿತ್ರ ಘಟನೆ ಈಗ ತುಮಕೂರಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಜನರು ಇದನ್ನು ‘ಟಾಮ್ ಅಂಡ್ ಜೆರಿ’ ಸಿನಿಮಾದ ನೈಜ ದೃಶ್ಯ ಎಂದು ಹೋಲಿಕೆ ಮಾಡುತ್ತಿದ್ದಾರೆ.

    ಕಳ್ಳತನ ಎಂದರೆ ಮನುಷ್ಯನೇ ಮಾಡುತ್ತಾನೆ ಎಂಬ ಕಲ್ಪನೆಯನ್ನು ಈ ಘಟನೆ ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ಬಿಲಕ್ಕೆ ಸೇರಿಸಿದ ಈ ಪುಟ್ಟ ಇಲಿ, ಕೊನೆಗೆ ಸಿಸಿಟಿವಿ ಮುಂದೆ ತನ್ನದೇ ರಹಸ್ಯವನ್ನು ಬಯಲು ಮಾಡಿತು. ಒಂದೊಮ್ಮೆ cctv ಇಲ್ಲದೇ ಹೋಗಿದ್ದರೆ ಎಷ್ಟೋ ಜನರ ಮೇಲೆ ಧರ್ಮಕ್ಕೆ ಅನುಮಾನ ಅವಮಾನ ಅಪಮಾನ …!

    ##Tumkur #JewelleryTheft #DiamondJewellery #CCTVFootage #ViralNews #KarnatakaNews #MouseThief

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
    ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
    ಸ್ಮಾರ್ಟ್ ಲಾಕ್ ಇದ್ದ ಸುರಕ್ಷಿತ ಮನೆಯಲ್ಲೇ ಯುವತಿಯ ರೇಪ್ ಅಂಡ್ ಮರ್ಡರ್…!ನಗರವನ್ನು ಬೆಚ್ಚಿಬೀಳಿಸಿದ ಘಟನೆ”
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
    ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಕೆತ್ತಿಕಲ್‌ನಿಂದ ಚಾರ್ಮಾಡಿವರೆಗೆ ಅಪಾಯದ ಗಂಟೆ! ಭೂಕುಸಿತ ಭೀತಿಯಲ್ಲಿ ಕರಾವಳಿ ರಸ್ತೆಗಳು !ಮಳೆ ಬಂದ ಮೇಲೆ ಸಭೆ, ಪರಿಶೀಲನೆ… ಆದರೆ ಮುನ್ನೆಚ್ಚರಿಕೆ ಎಲ್ಲಿದೆ?
    “ಕುನಾಲ್ ಶಾ ವಾಟ್ಸಾಪ್ ಗ್ಲೋಬಲ್ ಹೆಡ್! ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸಾಲಿಗೆ ಮತ್ತೊಬ್ಬ ಭಾರತೀಯನ ಸೇರ್ಪಡೆ.
    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!
    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
    ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
    War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ
    “ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ