📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸುರ್ಜೆವಾಲ ಸಿಎಂ ಡಿಕೆಶಿ ಗುಪ್ತ ಮಾತುಕತೆ

    ರಾಜೀನಾಮೆ ಕೊಡುವವರು ಕೊಟ್ಟು ಹೋಗಲಿ, ಒಂದೇ ಒಂದು ನಿಮಿಷವೂ ತಡ ಮಾಡದೆ  ಆ ರಾಜೀನಾಮೆಯನ್ನು ಎಕ್ಸೆಪ್ಟ್ ಮಾಡುವುದಾಗಿ ದರ್ಪದ ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್ ಮೆತ್ತಗಾದರ? ಕುರ್ಚಿಯನ್ನು ಉಳಿಸಿಕೊಳ್ಳುವುದು ಈ ದರ್ಪ ಅಹಂಕಾರದಿಂದ ಸಾಧ್ಯವಿಲ್ಲ ಎಂಬ ಅರಿವು ಬಂತಾ?

    ಮುಖ್ಯಮಂತ್ರಿ ಸ್ಥಾನದ ಬಿಸಿ ಡಿಕೆ ಶಿವಕುಮಾರ್ ಅಂತಹ ಬಂಡೆಗೆನೆ ತಟ್ಟಲಾರಂಬಿಸಿದೆ ನೋಡಿ. ಸುಮಾರು 25 ಶಾಸಕರು ಬಂಡಾಯ ಏಳಲು ಎಲ್ಲಾ ಸಿದ್ಧತೆ ನಡೆದಿತ್ತು. ತೆರೆಯ ಮರೆಯಲ್ಲಿ ಹಲವು ರೀತಿಯ ಕಸರತ್ತು ನಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಂಗಾಲಾದ್ರ? ಅಲ್ಲಿಂದ ಶುರುವಾಗುತ್ತದೆ ರಹಸ್ಯ ಸಭೆಗಳ ಚೈನ್.

    ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಉಸ್ತುವಾರಿ ಮುಖಂಡರಾದ ಸುರ್ಜೆವಾಲ ಮಾತುಕತೆ ನಡೆಸಿದ್ದರು. ಸಚಿವ ಸ್ಥಾನ ಸಿಗದೆ, ಮುನಿಸಿ ಕೂತಿರುವ ಎಚ್ ಕೆ ಪಾಟೀಲ್ ಅವರನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು. ಇಷ್ಟೇ ಅಲ್ಲ, ಎಂ ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಇವರಿಬ್ಬರನ್ನು ಅವರ ಮನೆಗೆ ಹೋಗಿ ಭೇಟಿಯಾಗಿ ಸಂಯಮ ಕಾಪಾಡುವಂತೆ ಹೇಳಿದ್ದರು. ಇದು ಸಾಕಾಗದು ಎಂಬಂತೆ, ಸ್ವತಹಾ ಡಿಕೆ ಶಿವಕುಮಾರ್ ಅವರನ್ನೇ ಎಂ ಕೃಷ್ಣಪ್ಪ ಅವರ ಮನೆಗೆ ಕಳುಹಿಸಿ ಅವರಿಂದಲೇ ಕೆಲವು ಭರವಸೆಗಳನ್ನು ನೀಡಿಸಿದರು ಎನ್ನುವುದು ಒಂದೊಂದಾಗಿ ರಿವಿಲ್ ಆಗುತ್ತಿದೆ.

    ಇಂದು ಬೆಳ್ಳಂ ಬೆಳಗ್ಗೆ ಸುಜೇವಾಲ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ರಹಸ್ಯ ಸಭೆ ಖಾಸಗಿ ಹೋಟೆಲ್ ಒಂದರಲ್ಲಿ ನಡೆದಿದೆ. ಇರುವ ಒಂದು ಸಚಿವ ಸ್ಥಾನವನ್ನು ಮಹಿಳೆಯರಿಗೆ ನೀಡಲೇಬೇಕಾಗಿದೆ. ಬಂಡೆದ್ದ ವರಿಗೆ ಸಮಾಧಾನ ಮಾಡುವುದಾದರೂ ಹೇಗೆ? ಈಗಾಗಲೇ ಮಹಿಳಾ ಸಚಿವ ಸ್ಥಾನವನ್ನು ರೂಪಾ ಸಸಿಧರ್ ಅವರಿಗೆ ನೀಡುವುದು ಬಹುತೇಕ ಖಚಿತವಾಗುತ್ತಿದೆ. ಒಂದು ಕಡೆ ಇಂಡಿ ಶಾಸಕ ಇವತ್ತು ಅದೇನು ಬಾಂಬು ಸಿಡಿಸುತ್ತಾರೋ ಗೊತ್ತಿಲ್ಲ, ಮತ್ತೊಂದು ಕಡೆ ಎಚ್ ಕೆ ಪಾಟೀಲ್ ಮುನಿಸು ಕಾಂಗ್ರೆಸ್ಗೆ ಮುಳುವಾಗಬಹುದು. ಇತ್ತ ಎಂ ಕೃಷ್ಣಪ್ಪ ಅವರ ಬಂಡಾಯ ಅರ್ಧ ಬೆಂಗಳೂರನ್ನು ಅಲುಗಾಡಿಸಬಹುದು. ಇವೆಲ್ಲವುದರ ನಡುವೆ, ಬಿಜೆಪಿ ಹಾಗೂ ಜೆಡಿಎಸ್ ಸುಮ್ಮನೆ ಕೂರುತ್ತದಾ? ಸಮಸ್ಯೆ ಬಂದಿರುವುದು ಇಲ್ಲಿ.

    ಇಡೀ ದೇಶದಾದ್ಯಂತ, ಬಿಜೆಪಿ ಯಾವುದೇ ರಾಜ್ಯದಲ್ಲಿನ ವಿರೋಧ ಪಕ್ಷಗಳ ನಡುವಿನ ಕಚ್ಛಾಟದ ಲಾಭವನ್ನು ಪಡೆಯಲು ಇಂದೇ ಮುಂದೆ ನೋಡುವುದಿಲ್ಲ ಅನ್ನುವುದು ಜಗತ್ ಜಾಹಿರಾಗಿದೆ. ಬಿಜೆಪಿ ವಿರೋಧಿ ಪಕ್ಷ ಹಾಗೂ ಅದರ ಮಿತ್ರ ಪಕ್ಷಗಳು ಸಹ ಬಿಜೆಪಿಯ ಈ ಪ್ಲಾನಿನ ಬಲಿಪಶುಗಳಾಗಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ವಿರೋಧಪಕ್ಷಗಳು ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಹೊರಬರದಂತೆ ನೋಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗುತ್ತಿರುವುದು ಬಿಜೆಪಿಯ ಪಾಲಿಗೆ ಮೃಷ್ಟಾನ್ನ ಭೋಜನ ಒದಗಿಸಿದಂತಾಗುತ್ತದೆ. ಇದರ ಅರಿವು ಸಹಜವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಆಗಿದೆ. ಹಾಗಾಗಿಯೇ ಈಗ ಮಾತುಕತೆ ನಡೆಸಲು ಸಂಧಾನ ನಡೆಸಲು ಪ್ರಯತ್ನ ನಡೆಸುತ್ತಿದ್ದಾರೆ.

    ಸದ್ಯಕ್ಕೆ ಬಂದ ಮಾಹಿತಿಯ ಪ್ರಕಾರ ಪಕ್ಷದ ಹಿರಿಯ ನಾಯಕ ಕೆಎಚ್ ಮುನಿಯಪ್ಪ ಅವರ ರಾಜೀನಾಮೆಯನ್ನು ಪಡೆದು ಆ ಸ್ಥಾನಕ್ಕೆ ಪ್ರೀಯಾ ಕೃಷ್ಣ ರನ್ನು ಅಥವಾ ಎಂ ಕೃಷ್ಣಪ್ಪರವರನ್ನು ಸೇರಿಸಿಕೊಳ್ಳುವ ಇರಾದೆ ಇದೆಯಂತೆ. ಆದರೆ ಕೆಎಚ್ ಮುನಿಯಪ್ಪ ಅವರ ರಾಜೀನಾಮೆ ಪಡೆಯುವುದು ಹೇಗೆ? ಅವರನ್ನು ಕನ್ವಿನ್ಸ್ ಮಾಡುವುದು ಹೇಗೆ ಎನ್ನುವುದು ಈಗ ದೊಡ್ಡ ಪ್ರಶ್ನೆಯಾಗಿದೆ. ಇದೇ ವಿಚಾರವಾಗಿ ಸೃಜವಾಲ ಹಾಗೂ ಡಿಕೆ ಶಿವಕುಮಾರ್ ನಡುವೆ ಇಂದು ಬೆಳ್ಳಂ ಬೆಳಗ್ಗೆ ರಹಸ್ಯ ಸಭೆ ನಡೆದಿದೆ ಎನ್ನಲಾಗುತ್ತಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
    ಸ್ಟರ್ಲಿಂಗ್ ವಸತಿ ಶಾಲೆಯ ಶಿಸ್ತಿನ ಹೆಸರಲ್ಲಿ 12 ವರ್ಷದ ಮುಗ್ಧನ ಜೀವ ಕಸಿದ ಕ್ರೌರ್ಯ!ಅನುಮಾನಾಸ್ಪದ ಸಾವಿನ ಸುತ್ತ ಹರಡಿದ ಆಘಾತಕಾರಿ ಸತ್ಯ…ಇಲ್ಲಿದೆ
    PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
    ಮಿಸೆಸ್ ಕೇರಳ ಈಗ ‘ಡ್ರಗ್ ಕ್ವೀನ್’…!?ಕೋಟಿ ಮೌಲ್ಯದ ಡ್ರಗ್ಸ್ ಜೊತೆ ಮಾಜಿ ‘ಮಿಸೆಸ್ ಕೇರಳ’ ಅರೆಸ್ಟ್!”
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ಖಾಸಗಿ ಬಸ್ಸಿನಲ್ಲಿ ಮಹಿಳೆಯ ಮಂಗಳಸೂತ್ರ ಏಗರಿಸಿದ್ರಾ?
    ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
    💊 ಜೀವರಕ್ಷಕ ಕ್ಯಾನ್ಸರ್ ಔಷಧಗಳು ದುಬಾರಿ: ಏಕೆ ಬೆಲೆ ಹೆಚ್ಚಳ ಅನಿವಾರ್ಯವಾಯಿತು?ಅಸಲಿ ಕಾರಣ ಗೊತ್ತೇ?
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
    ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
    ಸಚಿವ ಜಮೀರ್ ಕಥೆ ಗೋವಿಂದ!!!?
    ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
    ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
    🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
    ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
    ಅಲ್ಲಿ ಸೌಮೆಂದು ಅಧಿಕಾರಿ…. ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್….
    ಫೈವ್ ಸ್ಟಾರ್ ಹೋಟೆಲ್‌ಗಳಲ್ಲೇ ಹಾಳಾದ ಹಾಲು, ಕೊಳೆತ ತರಕಾರಿ ಪತ್ತೆ!ಫುಡ್ ಸೇಫ್ಟಿ ದಾಳಿ ಅಧಿಕಾರಿಗಳೇ ಬೆಚ್ಚಿಬಿದ್ದರು….!
    21 ವರ್ಷದ ಆಡಳಿತಕ್ಕೆ ತೆರೆ: ನಿತೀಶ್ ಕುಮಾರ್ ಹೊರಟರೇ?ಸಿಎಂ ಕುರ್ಚಿ ಖಾಲಿ-ಬಿಜೆಪಿ ಹೊಸ ಮುಖ ಮುಂದಿನ ಸಿಎಂ??
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    ಸಾರ್ವಜನಿಕರಲ್ಲಿ ವಿನಂತಿ …!
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ