📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಅನಾಥ ಪುಟ್ಟ ಬಾಲಕಿಯರ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ:ರಾಕ್ಷಸ ಮನಸ್ಸುಗಳಿಗೆ ಅಂತ್ಯ ಯಾವಾಗ?

ಬೆಂಗಳೂರಿನ ಮನ ಕಲುಕುವ ದುರಂತ ಅನಾಥ ಬಾಲಕಿಯರ ಬದುಕನ್ನು ನರಕ ಮಾಡಿದ ಮನುಷ್ಯರ ಮುಖವಾಡ..ಕಾನೂನಿಗೆ ಸವಾಲಾದ ಕ್ರೌರ್ಯ…ಘಟನೆ ಕೇವಲ ಒಂದು ಅಪರಾಧ ಕಥೆಯಲ್ಲ — ಇದು ಸಮಾಜವನ್ನೇ ಮನಸ್ಸನ್ನೇ ನಡುಗಿಸುವ ಮನುಷ್ಯತ್ವದ ಸೋಲು.


ತಾಯಿ ಇಲ್ಲ… ತಂದೆ ಮದ್ಯದ ವ್ಯಸನದಿಂದ ಮೃತಪಟ್ಟವರು… ಬದುಕಿನಲ್ಲಿ ಆಧಾರವೇ ಇಲ್ಲದ 11 ಮತ್ತು 12 ವರ್ಷದ ಎರಡು ಪುಟ್ಟ ಅನಾಥ ಬಾಲಕಿಯರು.ನಂತರ್ರದ ದಿನಗಳಲ್ಲಿ ತಮ್ಮ ಚಿಕ್ಕಪ್ಪನ ಜೊತೆ ವಾಸಿಸುತ್ತಿದ್ದರು.ಆದರೆ ಚಿಕ್ಕಪ್ಪನೇ ಹಣದ ಲಾಲಸೆಯಿಂದ ಈ ದುಷ್ಕೃತ್ಯಕ್ಕೆ ಸಹಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರಿಗೆ ರಕ್ಷಣೆ ನೀಡಬೇಕಿದ್ದ ದೊಡ್ಡವರೇ, ಅವರ ನಿರ್ಗತಿಕತೆಯನ್ನು ದುರುಪಯೋಗಪಡಿಸಿಕೊಂಡು, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅಮಾನವೀಯ ಹಿಂಸೆ ನಡೆಸಿದ್ದಾರೆ ಎನ್ನುವುದು ಕೇಳಿದ ಕ್ಷಣವೇ ಹೃದಯ ಒಡೆಯುತ್ತದೆ.

ಆರೋಪಿಗಳು:

  • 29 ವರ್ಷದ ಕಿರಣ್ ಕುಮಾರ್ ನಾಯಕ್, ಕಾಗ್ಗಲಿಪುರ ಸಮೀಪದ ಕೈದಾಳಿಪಾಳ್ಯದ ಪಶುಸಂಗೋಪಕ
  • 20 ವರ್ಷದ ಅದಿತ್ಯ ಎಂ.ಕೆ, ಚನ್ನಪಟ್ಟಣದ ಸ್ವಿಮ್ಮಿಂಗ್ ಪೂಲ್ ನಿರ್ವಹಣಾ ಸಿಬ್ಬಂದಿ

ಈ ಇಬ್ಬರು ಆರೋಪಿಗಳು ಬಾಲಕಿಯರ ಮೇಲೆ ಸುಮಾರು ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿ ಕೃತ್ಯಗಳನ್ನು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದೂ ಬೆಳಕಿಗೆ ಬಂದಿದೆ.ಪೊಲೀಸರು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು , ಅವುಗಳಲ್ಲಿ ಅಮಾನುಷ ಕೃತ್ಯಗಳ ದಾಖಲೆಗಳಿವೆ ಎಂದು ತಿಳಿಸಲಾಗಿದೆ.

ಮಕ್ಕಳ ಅಳುವಿನ ಹಿಂದೆ ಹಣ ಕಂಡವರು, ಅವರ ಭಯದ ಹಿಂದೆ ಕಾಮ ಕಂಡವರು ಇವರು “ಮಾನವರು” ಎನ್ನಿಸಿಕೊಳ್ಳಲು ಅರ್ಹರೇ?
ಪ್ರಾಣಿಗಳು ಹಸಿವಿಗಾಗಿ ಬೇಟೆಯಾಡುತ್ತವೆ. ಆದರೆ ಇಂತಹವರು ನಿರಪರಾಧ ಮಕ್ಕಳ ಬದುಕನ್ನೇ ತುಳಿದು ತಮ್ಮ ವಿಕೃತ ಮನಸ್ಸಿಗೆ ಆಹಾರ ಮಾಡಿದ್ದಾರೆ.

“ಪ್ರಾಣಿಗಳು ಮನುಷ್ಯರಿಗಿಂತ ಮೇಲು; ಅವುಗಳಿಗೆ ಕನಿಷ್ಠ ಕ್ರೌರ್ಯದ ನಾಟಕವಿಲ್ಲ.”

ಈ ಪುಟ್ಟ ಬಾಲಕಿಯರು ಕೇವಲ ದೇಹದ ನೋವು ಅನುಭವಿಸಿಲ್ಲ.
ಅವರ ಬಾಲ್ಯ ಕದಿಯಲ್ಪಟ್ಟಿದೆ.
ಅವರ ನಂಬಿಕೆ ಒಡೆದಿದೆ.
ಅವರ ನಗುವೇ ಮೌನವಾಗಿದೆ.

ಅವರನ್ನು ರಕ್ಷಿಸಬೇಕಿದ್ದ ಸಮಾಜವೇ ತಡವಾಗಿ ಎಚ್ಚರಗೊಂಡಿದೆ ಎಂಬ ನೋವು ಇನ್ನೂ ದೊಡ್ಡದು.
ಒಬ್ಬ ಸಂಬಂಧಿ ಹಣಕ್ಕಾಗಿ ಮಕ್ಕಳನ್ನು ಬಿಟ್ಟುಕೊಟ್ಟಿದ್ದಾನೆ ಎನ್ನುವ ಆರೋಪ ಸಮಾಜದ ನೈತಿಕ ಪತನಕ್ಕೆ ಭಯಾನಕ ಉದಾಹರಣೆ.

ಇಂತಹ ಅಪರಾಧಿಗಳಿಗೆ ಸಾಮಾನ್ಯ ಶಿಕ್ಷೆ ಸಾಕಾಗುವುದಿಲ್ಲ,ಮಕ್ಕಳ ಮೇಲೆ ದೌರ್ಜನ್ಯ ನಡೆಸಿ, ಅದನ್ನು ಚಿತ್ರೀಕರಿಸಿ ಹರಡಿಸುವವರ ವಿರುದ್ಧ:

  • ಜೀವಾವಧಿ ಶಿಕ್ಷೆ,
  • ಕಠಿಣ ಮಾನಸಿಕ ಮತ್ತು ಕಾನೂನು ಕ್ರಮ,
  • ಸಮಾಜದಿಂದ ಸಂಪೂರ್ಣ ಬಹಿಷ್ಕಾರ,ಅತ್ಯಗತ್ಯ
  • ಮಕ್ಕಳ ಸುರಕ್ಷತೆ ಕುರಿತ ವಿಶೇಷ ವೇಗದ ನ್ಯಾಯಾಲಯಗಳು ಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.

ಶಿಕ್ಷೆ ಆದರೆ ಮಾತ್ರ ಸಾಕಾಗುವುದಿಲ್ಲ.
ಈ ಇಬ್ಬರು ಬಾಲಕಿಯರ ಬದುಕು ಮತ್ತೆ ಬೆಳಕು ಕಾಣಬೇಕು.ಅವರಿಗೆ ಸುರಕ್ಷಿತ ಆಶ್ರಯ, ಶಿಕ್ಷಣ, ಮನೋವೈದ್ಯಕೀಯ ಸಹಾಯ, ಪ್ರೀತಿ ಮತ್ತು ಗೌರವ ನೀಡುವುದು ಸಮಾಜದ ಕರ್ತವ್ಯ.

ಪ್ರತಿ ಬಾರಿ ಇಂತಹ ಸುದ್ದಿ ಬರುತ್ತಿದ್ದಂತೆ ನಾವು ಕೋಪಗೊಳ್ಳುತ್ತೇವೆ.ಕೆಲ ದಿನಗಳ ನಂತರ ಮರೆತುಬಿಡುತ್ತೇವೆ.ಆದರೆ ಆ ಮಕ್ಕಳ ಗಾಯಗಳು ಜೀವನಪೂರ್ತಿ ಉಳಿಯುತ್ತವೆ.

ಈ ಘಟನೆ ನಮ್ಮೆಲ್ಲರಿಗೂ ಒಂದು ಕಠಿಣ ಪ್ರಶ್ನೆ ಕೇಳುತ್ತಿದೆ:

“ಮಕ್ಕಳನ್ನು ರಕ್ಷಿಸಲು ವಿಫಲವಾದ ಸಮಾಜ ನಿಜವಾಗಿಯೂ ಅಭಿವೃದ್ಧಿಯ ಸಮಾಜವೇ?”

ನಿರಪರಾಧ ಮಕ್ಕಳ ಕಣ್ಣೀರಿನ ಮೇಲೆ ಬದುಕು ಕಟ್ಟಿಕೊಳ್ಳುವ ಮನಸ್ಸುಗಳಿಗೆ ಅಂತ್ಯ ಯಾವಾಗ?
ಮಾನವೀಯತೆ ಮತ್ತೆ ಗೆಲ್ಲುವ ದಿನ ಯಾವಾಗ?

ಈ ಪ್ರಶ್ನೆಗೆ ಉತ್ತರ ಕೊಡುವ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ.

ಸೈಬರ್ ಕಮಾಂಡ್ ಸೆಂಟರ್ (CCC) ಅಧಿಕಾರಿಗಳ ತನಿಖೆಯಿಂದ, ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP) ನೀಡಿದ ಎಚ್ಚರಿಕೆಯ ನಂತರ ಬೆಳಕಿಗೆ ಬಂದಿದೆ. ಕಾಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪೊಲೀಸರು ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ ಮತ್ತು ತನಿಖೆ ಮುಂದುವರಿದಿದೆ ಎಂದು ಸೈಬರ್ ಕಮಾಂಡ್ ಸೆಂಟರ್ ಡಿಜಿಪಿ ಪ್ರಣಬ್ ಮೋಹಂತಿ ತಿಳಿಸಿದ್ದಾರೆ.

##BengaluruCrime #ChildProtection #JusticeForChildren #CyberCrime #HumanRights #StopChildAbuse #JusticeNeeded

COMMENTS

Login with Gmail to comment

ಇನ್ನಷ್ಟು ಸುದ್ದಿ

ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
“ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು