📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!

    ಲಕ್ಷಾಂತರ ವಿದ್ಯಾರ್ಥಿಗಳ ಕಣ್ಣೀರಿಗೆ ಕರಗದ ಕೇಂದ್ರದ ಮೌನ!

    ದೇಶದ ಭವಿಷ್ಯವನ್ನು ರೂಪಿಸಬೇಕಾದ ಯುವ ಸಮೂಹ ಇಂದು ರಸ್ತೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದೆ. ವೈದ್ಯರಾಗುವ ಕನಸು ಹೊತ್ತು ಹಗಲಿರುಳು ಶ್ರಮಿಸಿದ ಲಕ್ಷಾಂತರ ಆಕಾಂಕ್ಷಿಗಳು ಮತ್ತು ಅವರ ಪೋಷಕರು ನೀಟ್ (NEET) ಪರೀಕ್ಷೆಯ ಸರಣಿ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕಂಗಾಲಾಗಿ,ಎದುರಾದ ಸಂದರ್ಭಗಳನ್ನ ನೆನಪಿಸಿಕೊಳ್ಳಲು , ಅದರಿಂದ ಹೊರಬರಲು ಪರಿತಪಿಸುತ್ತಿದ್ದಾರೆ..

    ಹೌದು …ಇದು ವ್ಯವಸ್ಥೆಯ ಲೋಪದೋಷವೇ..!ಆದರೆ ಯಾವುದೇ ಆಡಳಿತ ಪಕ್ಷ ಬೇಕುಂತ ತನ್ನ ಅಧೀನದಲ್ಲಿರುವ ವ್ಯವಸ್ಥೆಗಳಲ್ಲಿ ಲೋಪದೋಷಗಳನ್ನು ತಾನಾಗಿಯೇ ಸೃಷ್ಟಿಸಿ ತನ್ನ ಮುಖಕ್ಕೆ ಮಸಿ ಬಳಿದುಕೊಳ್ಳುವ ಬಾಲಿಶ ಕೆಲಸಗಳನ್ನ,ನಿರ್ಧಾರಗಳನ್ನ ಯಾವತ್ತಿಗೂ ಮಾಡಲಾರದು..ಹಾಗೇ ಲೋಪಗಳನ್ನ ಕಂಡು ಕಾಣದಂತೆ ಮೈ ಮರೀಲು ಬಾರದು… ಇನ್ನೂ ಗಮನಕ್ಕೆ ಬಾರದೆ NEET ನಂತಹ ದೊಡ್ಡ ಲೋಪದೋಷಗಳಾದಾಗ ಸಂಬಂಧಪಟ್ಟವರು ಅದನ್ನ ತ್ವರಿತವಾಗಿ ಸ್ಪಂದಿಸಿ ಪರಿಹರಿಸಿ ಸಂಧಾನ ಸಮಾಧಾನ ಮಾಡುವಂತ ಪರಿಹಾರ ಮಾರ್ಗಗಳತ್ತ ಆ ಕ್ಷಣಕ್ಕೆ ಮಾಡಬೇಕಾದುದು ಅತ್ಯಗತ್ಯ..

    ಮರುಪರೀಕ್ಷೆಯ ನಾಟಕ ನಡೆದರೂ ವಿದ್ಯಾರ್ಥಿಗಳ ಅಮೂಲ್ಯ ಸಮಯ, ಹಣ ಹಾಗೂ ಮಾನಸಿಕ ನೆಮ್ಮದಿ ಈಗಾಗಲೇ ಹರಾಜಾಗಿದೆ. ಪರೀಕ್ಷಾ ವ್ಯವಸ್ಥೆಯ ಈ ಮಹಾ ವೈಫಲ್ಯದ ಒತ್ತಡ ತಡೆಯಲಾರದೆ 20ಕ್ಕೂ ಹೆಚ್ಚು ಯುವ ಜೀವಗಳು ಆತ್ಮಹತ್ಯೆಯ ಹಾದಿ ಹಿಡಿದಿರುವುದು ದೇಶದ ಶಿಕ್ಷಣ ವ್ಯವಸ್ಥೆಗೆ ಅಂಟಿದ ಕಳಂಕ. ಈ ವ್ಯವಸ್ಥಿತ ಅನ್ಯಾಯದ ವಿರುದ್ಧ ದೇಶದ ಸಾಕ್ಷಿಪ್ರಜ್ಞೆಯಾಗಿ ನಿಂತಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಲಡಾಖ್‌ನ ವಿಜ್ಞಾನಿ ಸೋನಂ ವಾಂಗ್ಚುಕ್ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 18 ದಿನಗಳಿಂದ ಅನ್ನಾಹಾರ ತ್ಯಜಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    ಆದ್ರೆ,ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳು ಮತ್ತು ಅವರ ಪೋಷಕರು ಸುರಿಸುತ್ತಿರುವ ಕಣ್ಣೀರು ದೇಶದ ರಾಜಧಾನಿಯ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿದ್ದರೂ, ಅಧಿಕಾರದ ಗದ್ದುಗೆಯಲ್ಲಿ ಕುಳಿತವರು ಮೌನಕ್ಕೆ ಶರಣಾಗಿರುವುದು ಪ್ರಜಾಪ್ರಭುತ್ವದ ಅತಿದೊಡ್ಡ ದುರಂತ. 

    ಗಡಿಯ ಕಾವಲುಗಾರನಿಗೆ ನೆರವಾದ ಕೈಗಳು ಇಂದು ಗರಬಡಿದ ವ್ಯವಸ್ಥೆಯ ವಿರುದ್ಧ!

    ಸೋನಂ ವಾಂಗ್ಚುಕ್ ಎಂದರೆ ಕೇವಲ ಒಬ್ಬ ಹೋರಾಟಗಾರನಲ್ಲ; ಅವರು ಹಿಮಾಲಯದ ತಪ್ಪಲಿನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ ಅಪ್ಪಟ ದೇಶಪ್ರೇಮಿ. ಮೈನಸ್ ಡಿಗ್ರಿ ಚಳಿಯಲ್ಲಿ ಭಾರತದ ಗಡಿ ಕಾಯುವ ಯೋಧರಿಗಾಗಿ ಸೋಲಾರ್ ಟೆಂಟ್‌ಗಳನ್ನು ಆವಿಷ್ಕರಿಸಿ ಬೆಚ್ಚನೆಯ ಆಸರೆ ನೀಡಿದವರು, ಲಡಾಖ್‌ನ ಬರಡು ಭೂಮಿಯಲ್ಲಿ ಕೃಷಿಗಾಗಿ ‘ಐಸ್ ಸ್ತೂಪ’ಗಳ ಮೂಲಕ ನೀರು ಸಂಗ್ರಹಿಸಿದ ಅಪ್ರತಿಮ ವಿಜ್ಞಾನಿ. ‘3 ಈಡಿಯಟ್ಸ್’ ಸಿನಿಮಾದ ಪ್ರಸಿದ್ಧ ‘ಪುಂಸುಕ್ ವಾಂಗ್ಡು’ ಪಾತ್ರಕ್ಕೆ ಪ್ರೇರಣೆಯಾದ ಈ ಸಾಧಕ ಇಂದು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ದೆಹಲಿಯ ಚಳಿಗಾಲದ ರಸ್ತೆಯಲ್ಲಿ ಮಲಗಿದ್ದಾರೆ. ಅವರು ಕೇಳುತ್ತಿರುವುದು ತಮಗಾಗಿ ಯಾವುದೇ ಸ್ವಾರ್ಥದ ಬೇಡಿಕೆಯನ್ನಲ್ಲ; ದೇಶದ ಭವಿಷ್ಯವನ್ನು ಬಲಿಪೀಠಕ್ಕಿಟ್ಟ ನೀಟ್ ಹಗರಣದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಮತ್ತು ನೊಂದ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂಬ ಕನಿಷ್ಠ ಮಾನವೀಯತೆಯನ್ನು ಮಾತ್ರ.

    ಅಂದು ಜನರ ಧ್ವನಿ, ಇಂದು ಉದಾಸೀನ: ರಾಜಕಾರಣಿಗಳ ಬದಲಾದ ಭಾಷೆ!

    ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಧಿಕಾರ ರಾಜಕಾರಣಿಗಳ ಭಾಷೆಯನ್ನು ಎಷ್ಟು ಬೇಗ ಬದಲಾಯಿಸುತ್ತದೆ ಎಂಬ ದ್ವಂದ್ವ ಬಯಲಾಗುತ್ತದೆ. 2011ರಲ್ಲಿ ಇದೇ ಜಂತರ್ ಮಂತರ್‌ನಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಉಪವಾಸ ಕುಳಿತಾಗ, ಅಂದಿನ ವಿರೋಧ ಪಕ್ಷದಲ್ಲಿದ್ದ ಇವತ್ತಿನ ಆಡಳಿತಗಾರರು “ಸರ್ಕಾರ ಯಾಕೆ ಕಿವುಡಾಗಿದೆ? ಇದು ಇಡೀ ದೇಶದ ಜನರ ಸತ್ಯಾಗ್ರಹ” ಎಂದು ಸಂಸತ್ತಿನಲ್ಲಿ ಅಬ್ಬರಿಸಿದ್ದರು. ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅಣ್ಣಾ ಹಜಾರೆಯವರ ಬೇಡಿಕೆಯನ್ನು ಸ್ವೀಕರಿಸಿ ಗೌರವಿಸಿತ್ತು.

    ಆದರೆ ಇಂದು, ಅದೇ ಜಂತರ್ ಮಂತರ್‌ನಲ್ಲಿ ಒಬ್ಬ ಗಾಂಧಿವಾದಿ ವಿಜ್ಞಾನಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಕೇಂದ್ರ ಸರ್ಕಾರ ಅತ್ತ ತಿರುಗಿಯೂ ನೋಡುತ್ತಿಲ್ಲ. ಅಷ್ಟೇ ಅಲ್ಲ, ಅಂದು ಸತ್ಯಾಗ್ರಹವನ್ನು ಕೊಂಡಾಡಿದವರೇ ಇಂದು ನ್ಯಾಯ ಕೇಳುತ್ತಿರುವ ಹೋರಾಟಗಾರರನ್ನು ಕಟುವಾದ ಪದಗಳಿಂದ ನಿಂದಿಸುತ್ತಿರುವುದು ಸೈದ್ಧಾಂತಿಕ ಅಹಂಕಾರದ ಪರಮಾವಧಿ.

    ಸೇಡಿನ ರಾಜಕಾರಣಕ್ಕೆ ಬಲಿಯಾಗ್ತಾರ ಸೋನಮ್..!?

    ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡಿದ ಕಾರಣಕ್ಕೆ ಇದೇ ಕೇಂದ್ರ ಸರ್ಕಾರ ಕಳೆದ ವರ್ಷ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ರಾಜಸ್ಥಾನದ ಜೈಲಿನಲ್ಲಿಟ್ಟಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ಮುಖಭಂಗ ತಪ್ಪಿಸಿಕೊಳ್ಳಲು ಸರ್ಕಾರ ಅವರನ್ನು ದಿಢೀರ್ ಬಿಡುಗಡೆ ಮಾಡಿತ್ತು. ಇಂದು ನೀಟ್ ಅಕ್ರಮದ ವಿರುದ್ಧ ಅವರು ಧ್ವನಿ ಎತ್ತಿದಾಗ ಸರ್ಕಾರ ತೋರುತ್ತಿರುವ ಕ್ರೂರ ನಿರ್ಲಕ್ಷ್ಯವು ಆ ಹಳೆಯ ಸೇಡನ್ನು ತೀರಿಸಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.

    ಅಹಿಂಸಾತ್ಮಕ ಮಾದರಿಯ ಅತ್ಯುನ್ನತ ಪ್ರತಿಭಟನೆಯಾದ ‘ನಿರಾಹಾರ ಸತ್ಯಾಗ್ರಹ’ವನ್ನು ಪ್ರಭುತ್ವವು ತನ್ನ ಅಹಂನಿಂದ ಹೀಗೆಯೇ ಅಲಕ್ಷಿಸುತ್ತಾ ಹೋದರೆ, ಜನಸಾಮಾನ್ಯರು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ.

    ರಾಜಕೀಯ ಸಿದ್ಧಾಂತಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಒಮ್ಮೆ ಕಮರಿಹೋದ ವಿದ್ಯಾರ್ಥಿಗಳ ಭವಿಷ್ಯ ಮತ್ತು ದೇಶದ ಮೇಲಿನ ನಂಬಿಕೆ ಮತ್ತೆ ಮರಳಿ ಬಾರದು. ಕೇಂದ್ರ ಸರ್ಕಾರ ತಕ್ಷಣ ಮೌನ ಮುರಿದು ಮಾತುಕತೆಗೆ ಮುಂದಾಗಲಿ.ಪ್ರಜೆಗಳ ಅಳಲನ್ನು ತಾಯ್ತನದ ಮನಸ್ಸಿನಿಂದ ಆಲಿಸುವುದೇ ನಿಜವಾದ ‘ರಾಜಧರ್ಮ’.

    ಧರ್ಮ-ರಾಜಕೀಯ ಮೀರಿದ ಒಗ್ಗಟ್ಟನ್ನ ಪ್ರದರ್ಶಿಸುವ ಸಮಯ…!

    ಇದು ಕೇವಲ ಸೋನಂ ವಾಂಗ್ಚುಕ್ ಅವರ ವೈಯಕ್ತಿಕ ಹೋರಾಟವಲ್ಲ; ಇದು ದೇಶದ ಪ್ರತಿಯೊಬ್ಬ ಪೋಷಕರ ಮತ್ತು ವಿದ್ಯಾರ್ಥಿಯ ಆತ್ಮಗೌರವದ ಪ್ರಶ್ನೆ. ಶಿಕ್ಷಣ ವ್ಯವಸ್ಥೆಯ ಅತಿಯಾದ ಕೇಂದ್ರೀಕರಣ ಮತ್ತು ಖಾಸಗೀಕರಣದಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತಿದೆ. ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವುದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದು, ನೀಟ್ ಪರೀಕ್ಷೆಯನ್ನು ರದ್ದುಪಡಿಸಿ ರಾಜ್ಯಗಳಿಗೆ ವಿಕೇಂದ್ರೀಕರಣದ ನ್ಯಾಯ ಒದಗಿಸುವುದು ಮತ್ತು ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಧರ್ಮ, ಜಾತಿ, ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ದೇಶದ ಭವಿಷ್ಯಕ್ಕಾಗಿ ಧ್ವನಿ ಎತ್ತಿರುವ ವಾಂಗ್ಚುಕ್ ಅವರಿಗೆ ಇಡೀ ದೇಶ ಬೆಂಬಲವಾಗಿ ನಿಲ್ಲಬೇಕಿದೆ.

    ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವಾಂಗ್ಚುಕ್ ಅವರ ಪ್ರಾಣವನ್ನು ರಕ್ಷಿಸಬೇಕು ಮತ್ತು ದೇಶದ ಶಿಕ್ಷಣ ವ್ಯವಸ್ಥೆಯನ್ನು ಶುದ್ಧೀಕರಿಸಲು ಸರ್ಕಾರಕ್ಕೆ ಆದೇಶಿಸಬೇಕು.

    #NEETControversy #SonamWangchuk #JusticeForStudents #JantarMantarProtest #EducationReform

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
    ಇಂದು ಆನ್‌ಲೈನ್ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಆಕ್ರೋಶ!ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್ ಶಾಪ್ ಬಂದ್!
    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ವೈರಲ್ ಆದ ಒಂದೇ ಒಂದು ಪಂಚ್ … ಐಸಿಯು ಕೋಮಾವರೆಗೆ ! ಬೆಚ್ಚಿಬೀಳಿಸಿದ ಜಿಮ್ ಪಂಚ್ ವೀಡಿಯೋ.ದೇಹ ಗಟ್ಟಿಯಾಗಿತ್ತು… ಮನಸ್ಸು ದುರ್ಬಲವಾಗಿತ್ತು!
    🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
    ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
    ಸೈಡ್ ಕೊಡಲಿಲ್ಲ ಎಂಬ ಸಣ್ಣ ವಿಚಾರ… ದೊಡ್ಡ ಜಗಳದ ವೈರಲ್ ವಿಡಿಯೋ… ಪೊಲೀಸ್ ಕೇಸ್… ಕೊನೆಗೆ ಬಂಧನ!
    ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
    ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
    ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
    ಜನಪ್ರಿಯ “ಶಕ್ತಿ ಯೋಜನೆ” ವಿಫಲಗೊಳಿಸಲು ಸಂಚು!
    ದೆಹಲಿ ಭಾರೀ ದುರಂತದಿಂದ ಪಾರು!: ಏರ್ ಇಂಡಿಯಾ ವಿಮಾನಗಳು ಜಖಂಗೊಂಡರೂ ತಪ್ಪಿದ ಪ್ರಾಣಾಪಾಯ!
    ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
    ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
    ಉಡುಪಿಯಲ್ಲಿ  ಬೆಟ್ಟಿಂಗ್ ಮಾಫಿಯಾದ ಚಟುವಟಿಕೆಯನ್ನು ಡೆತ್ ನೋಟ್ ರಿವಿಲ್ ಮಾಡಿತೇ?
    ಅಪ್ಪನ ಶವದ ಪಕ್ಕದಲ್ಲೇ ರಕ್ತದ ಮಡುವಿನಲ್ಲಿ ಮಗು…!ಧಾರವಾಡದಲ್ಲಿ ಬೆಚ್ಚಿಬೀಳಿಸಿದ ವೈದ್ಯ ಕುಟುಂಬ ದುರಂತ..!ಪತ್ನಿ ಪೊಲೀಸ್ ವಶದಲ್ಲಿ, ತನಿಖೆ ತೀವ್ರ .