📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ

ಪ್ರೀತಿಸಿ ಮದುವೆಯಾದ ಗಂಡನ ಸಹವಾಸ ನಾಲ್ಕೇ ವರ್ಷಕ್ಕೆ ಸಾಕಾಗಿ ಹೋಯಿತು ನೋಡಿ. ಮನೆಯವರ ಬಲವಂತಕ್ಕೆ ಗಂಡನ ಮನೆಗೆ ಬಂದ ಈ ಮಹಾನ್ ಪತಿವ್ರತೆ, ಕಟ್ಟಿಕೊಂಡ ಗಂಡ ನಿದ್ರಿಸುತ್ತಿರುವಾಗ ಕಬ್ಬಿಣದ ರಾಡನ್ನು ತಲೆಗೆ ಬೀಸಿ ಕೊಂದು ಹಾಕಿದ್ದಾಳೆ.

ಇಂತಹುದೊಂದು ಘಟನೆ ನಡೆದದ್ದು ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲಿ. ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯ ಹೆಸರು ವಿಶ್ವನಾಥ್. ಈತ ಪದವೀಧರ ಹಾಗೂ ಮಾಜಿ ಸೈನಿಕನ ಸುಪುತ್ರ. ಇನ್ನು 28ರ ಯುವಕ. 2022ರಲ್ಲಿ ಅವರ ದೂರದ ಸಂಬಂಧಿಯು ಆಗಿರುವಂತಹ ಕವಿತಾ ಹಾದಿಮನಿ ಎಂಬ ಚಿನುಕುರಳಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಅವರ ಪ್ರೀತಿಯ ಆರ್ಭಟಕ್ಕೆ ಮೂರು ವರ್ಷದ ಗಂಡು ಮಗು ಉದಯವಾಗಿದೆ.

ಆದರೆ, ಇದ್ದಕ್ಕಿದ್ದಂತೆಯೇ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಅದರ ಪರಿಣಾಮ ಕವಿತಾ ಸೀದಾ ತವರು ಮನೆಗೆ ಎದ್ದು ಹೋಗುತ್ತಾಳೆ. ಏನೇ ಮಾಡಿದರು ಬರುವುದಿಲ್ಲ. ಆದರೆ ಇತ್ತೀಚೆಗೆ ವಿಶ್ವನಾಥನ ತಂಗಿಯ ಮದುವೆಯ ಕಾರ್ಯ ಇದ್ದ  ಕಾರಣದಿಂದಾಗಿ, ಕವಿತಾ ಇಲ್ಲಿಗೆ ಬರುತ್ತಾಳೆ. ಮದುವೆ ಮುಗಿಸಿ ವಾಪಸ್ ತವರು ಮನೆಗೆ ಹೋದವಳು, ಇದ್ದಕ್ಕಿದ್ದಂತೆಯೇ ವಾಪಸ್ ಗಂಡನ ಮನೆಗೆ ಬರುತ್ತಾಳೆ. ಹಾಗೆ ಬಂದವಳ ಬಗ್ಗೆ, ಯಾರೋ ಬುದ್ಧಿ ಹೇಳಿರಬೇಕು ಹಾಗಾಗಿ ಬಂದಿದ್ದಾಳೆ. ಇನ್ನು ಸಂಸಾರ ನಡೆಸಬಹುದು ಎಂಬ ನಿರ್ಧಾರಕ್ಕೆ ವಿಶ್ವನಾಥ್ ಬಂದಿರುತ್ತಾನೆ.

ಹಾಗೆ ಬಂದವಳು ಮತ್ತೆ ಜಗಳ ಶುರುವಿಟ್ಟು ಕೊಂಡಿದ್ದಾಳೆ. ವಿಶ್ವನಾಥನ ತಂದೆ ತಾಯಿ ಇವರ ಜಗಳ ಯಾವತ್ತೂ ಇದ್ದದ್ದೇ ಅಂತ ಅದೇ ಮನೆಯ ಮೇಲ್ಮಹಡಿಯಲ್ಲಿ ಆರಾಮಾಗಿ ಇರುತ್ತಾರೆ. ಆದರೆ, ಮೊನ್ನೆಯ ದಿನ ರಾತ್ರಿ, ಜಗಳ ಆಗಿದ್ದು ವಿಶ್ವನಾಥ್ ತಂದೆ ತಾಯಿಯರಿಗೆ ಕೇಳಿಸದಿದ್ದರೂ ಬೆಳಗಾಗುವಷ್ಟರಲ್ಲಿ ವಿಶ್ವನಾಥ್ ಹೆಣವಾಗಿ ಮಲಗಿದ್ದ. ಅತ್ತೆ ಮಾವ ಬಂದು ಕೇಳಿದಾಗ, ರಾತ್ರಿ ಜಗಳ ಆಯ್ತು, ಆ ಸಂದರ್ಭದಲ್ಲಿ ಹೀಗಾಯ್ತು ಅಂತ ಅಳುತ್ತಾ ಹೇಳುತ್ತಾಳೆ. ಸೀದಾ ಪೊಲೀಸರಿಗೆ ಮಾಹಿತಿ ಹೋಗುತ್ತದೆ. ಪೊಲೀಸರು ಬಂದು ಕವಿತಾ ಹಾದಿಮನಿಯನ್ನು ಬಂದಿಸಿ ವಿಚಾರಿಸಿದಾಗ, ಕೊಲೆಯ ಬಗ್ಗೆ ಬಾಯ್ ಬಿಡುತ್ತಾಳೆ. ಮಲಗಿದ್ದ ಗಂಡನ ತಲೆ ಒಡೆದು ಹಾಕಿದ್ದನ್ನು ಒಪ್ಪಿಕೊಳ್ಳುತ್ತಾಳೆ.

ನಿಜವಾಗಿಯೂ ಅವಳೊಬ್ಬಳೇ ಈ ಕೆಲಸ ಮಾಡಿದಳ? ಅಥವಾ ಇನ್ಯಾರದ್ದಾದರೂ ಸಹಾಯ ಪಡೆದಿದ್ದಾಳ? ಅದರ ಬಗ್ಗೆ ಹೆಚ್ಚಿನ ವಿಚಾರಣೆನದ ನಡೆದ ನಂತರ ತಿಳಿದು ಬರುತ್ತದೆ. ಆದರೆ, ಗಂಡನನ್ನು ಕೊಂದು ಜೈಲು ಪಾಳಾದ ಕವಿತಾ ಹಾದಿಮನಿ 3 ವರ್ಷದ ಪಾಪದ ಮಗುವನ್ನು ಅನಾಥಳನ್ನಾಗಿಸಿದ್ದಾಳೆ. ಹೆಣ್ಣನ್ನು ಸಹನಾಮೂರ್ತಿ, ಎಲ್ಲವನ್ನು ಸಹಿಸಿಕೊಳ್ಳುವ ಗಟ್ಟಿಗಿತ್ತಿ, ಮಮತೆಯ ತೊಟ್ಟಿಲು ಅಂತೆಲ್ಲ ಕರೆಯುತ್ತಾರೆ. ಅದೆಲ್ಲದಕ್ಕೂ ತದ್ ವಿರುದ್ಧವಾಗಿರುವಂತಹ ಕವಿತಾ ಹಾದಿಮನಿ ಅಂತವರ ಸಂಖ್ಯೆ ಇವತ್ತು ಸಮಾಜದಲ್ಲಿ ಹೆಚ್ಚುತ್ತಿದೆ ಅನ್ನುವುದು ಮಾತ್ರ ಸತ್ಯ.

COMMENTS

Login with Gmail to comment

ಇನ್ನಷ್ಟು ಸುದ್ದಿ

ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
“ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
“ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
ಅನಾಥ ಪುಟ್ಟ ಬಾಲಕಿಯರ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ:ರಾಕ್ಷಸ ಮನಸ್ಸುಗಳಿಗೆ ಅಂತ್ಯ ಯಾವಾಗ?
50ಕ್ಕೂ ಹೆಚ್ಚು ಆಟೋ ಚಾಲಕರ ದಿನನಿತ್ಯದ ಆರೋಗ್ಯದ ಬದುಕಿಗೆ ಮುಳುವಾದ ದೇರಳಕಟ್ಟೆ ಜಂಕ್ಷನ್ ದುರ್ನಾತ! 
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಆಪಲ್‌ಗೆ ಭಾರತದಲ್ಲಿ ದೊಡ್ಡ ಕಾನೂನು ಶಾಕ್? App Store ನಿಯಮಗಳ ಮೇಲೆ ಆಪಲ್ vs ಭಾರತ CCI ಜಟಾಪಟಿ 
ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!
ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
ಅಕ್ರಮ ಕಸಾಯಿ ಖಾನೆಗೆ ದಾಳಿ ಇಬ್ಬರನ್ನು ಬಂಧಿಸಿದ ಬಂಟ್ವಾಳದ ಪೊಲೀಸರು
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು