📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ

    ಪ್ರೀತಿಸಿ ಮದುವೆಯಾದ ಗಂಡನ ಸಹವಾಸ ನಾಲ್ಕೇ ವರ್ಷಕ್ಕೆ ಸಾಕಾಗಿ ಹೋಯಿತು ನೋಡಿ. ಮನೆಯವರ ಬಲವಂತಕ್ಕೆ ಗಂಡನ ಮನೆಗೆ ಬಂದ ಈ ಮಹಾನ್ ಪತಿವ್ರತೆ, ಕಟ್ಟಿಕೊಂಡ ಗಂಡ ನಿದ್ರಿಸುತ್ತಿರುವಾಗ ಕಬ್ಬಿಣದ ರಾಡನ್ನು ತಲೆಗೆ ಬೀಸಿ ಕೊಂದು ಹಾಕಿದ್ದಾಳೆ.

    ಇಂತಹುದೊಂದು ಘಟನೆ ನಡೆದದ್ದು ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲಿ. ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ನಡೆದಿದೆ.

    ಮೃತ ವ್ಯಕ್ತಿಯ ಹೆಸರು ವಿಶ್ವನಾಥ್. ಈತ ಪದವೀಧರ ಹಾಗೂ ಮಾಜಿ ಸೈನಿಕನ ಸುಪುತ್ರ. ಇನ್ನು 28ರ ಯುವಕ. 2022ರಲ್ಲಿ ಅವರ ದೂರದ ಸಂಬಂಧಿಯು ಆಗಿರುವಂತಹ ಕವಿತಾ ಹಾದಿಮನಿ ಎಂಬ ಚಿನುಕುರಳಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಅವರ ಪ್ರೀತಿಯ ಆರ್ಭಟಕ್ಕೆ ಮೂರು ವರ್ಷದ ಗಂಡು ಮಗು ಉದಯವಾಗಿದೆ.

    ಆದರೆ, ಇದ್ದಕ್ಕಿದ್ದಂತೆಯೇ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಅದರ ಪರಿಣಾಮ ಕವಿತಾ ಸೀದಾ ತವರು ಮನೆಗೆ ಎದ್ದು ಹೋಗುತ್ತಾಳೆ. ಏನೇ ಮಾಡಿದರು ಬರುವುದಿಲ್ಲ. ಆದರೆ ಇತ್ತೀಚೆಗೆ ವಿಶ್ವನಾಥನ ತಂಗಿಯ ಮದುವೆಯ ಕಾರ್ಯ ಇದ್ದ  ಕಾರಣದಿಂದಾಗಿ, ಕವಿತಾ ಇಲ್ಲಿಗೆ ಬರುತ್ತಾಳೆ. ಮದುವೆ ಮುಗಿಸಿ ವಾಪಸ್ ತವರು ಮನೆಗೆ ಹೋದವಳು, ಇದ್ದಕ್ಕಿದ್ದಂತೆಯೇ ವಾಪಸ್ ಗಂಡನ ಮನೆಗೆ ಬರುತ್ತಾಳೆ. ಹಾಗೆ ಬಂದವಳ ಬಗ್ಗೆ, ಯಾರೋ ಬುದ್ಧಿ ಹೇಳಿರಬೇಕು ಹಾಗಾಗಿ ಬಂದಿದ್ದಾಳೆ. ಇನ್ನು ಸಂಸಾರ ನಡೆಸಬಹುದು ಎಂಬ ನಿರ್ಧಾರಕ್ಕೆ ವಿಶ್ವನಾಥ್ ಬಂದಿರುತ್ತಾನೆ.

    ಹಾಗೆ ಬಂದವಳು ಮತ್ತೆ ಜಗಳ ಶುರುವಿಟ್ಟು ಕೊಂಡಿದ್ದಾಳೆ. ವಿಶ್ವನಾಥನ ತಂದೆ ತಾಯಿ ಇವರ ಜಗಳ ಯಾವತ್ತೂ ಇದ್ದದ್ದೇ ಅಂತ ಅದೇ ಮನೆಯ ಮೇಲ್ಮಹಡಿಯಲ್ಲಿ ಆರಾಮಾಗಿ ಇರುತ್ತಾರೆ. ಆದರೆ, ಮೊನ್ನೆಯ ದಿನ ರಾತ್ರಿ, ಜಗಳ ಆಗಿದ್ದು ವಿಶ್ವನಾಥ್ ತಂದೆ ತಾಯಿಯರಿಗೆ ಕೇಳಿಸದಿದ್ದರೂ ಬೆಳಗಾಗುವಷ್ಟರಲ್ಲಿ ವಿಶ್ವನಾಥ್ ಹೆಣವಾಗಿ ಮಲಗಿದ್ದ. ಅತ್ತೆ ಮಾವ ಬಂದು ಕೇಳಿದಾಗ, ರಾತ್ರಿ ಜಗಳ ಆಯ್ತು, ಆ ಸಂದರ್ಭದಲ್ಲಿ ಹೀಗಾಯ್ತು ಅಂತ ಅಳುತ್ತಾ ಹೇಳುತ್ತಾಳೆ. ಸೀದಾ ಪೊಲೀಸರಿಗೆ ಮಾಹಿತಿ ಹೋಗುತ್ತದೆ. ಪೊಲೀಸರು ಬಂದು ಕವಿತಾ ಹಾದಿಮನಿಯನ್ನು ಬಂದಿಸಿ ವಿಚಾರಿಸಿದಾಗ, ಕೊಲೆಯ ಬಗ್ಗೆ ಬಾಯ್ ಬಿಡುತ್ತಾಳೆ. ಮಲಗಿದ್ದ ಗಂಡನ ತಲೆ ಒಡೆದು ಹಾಕಿದ್ದನ್ನು ಒಪ್ಪಿಕೊಳ್ಳುತ್ತಾಳೆ.

    ನಿಜವಾಗಿಯೂ ಅವಳೊಬ್ಬಳೇ ಈ ಕೆಲಸ ಮಾಡಿದಳ? ಅಥವಾ ಇನ್ಯಾರದ್ದಾದರೂ ಸಹಾಯ ಪಡೆದಿದ್ದಾಳ? ಅದರ ಬಗ್ಗೆ ಹೆಚ್ಚಿನ ವಿಚಾರಣೆನದ ನಡೆದ ನಂತರ ತಿಳಿದು ಬರುತ್ತದೆ. ಆದರೆ, ಗಂಡನನ್ನು ಕೊಂದು ಜೈಲು ಪಾಳಾದ ಕವಿತಾ ಹಾದಿಮನಿ 3 ವರ್ಷದ ಪಾಪದ ಮಗುವನ್ನು ಅನಾಥಳನ್ನಾಗಿಸಿದ್ದಾಳೆ. ಹೆಣ್ಣನ್ನು ಸಹನಾಮೂರ್ತಿ, ಎಲ್ಲವನ್ನು ಸಹಿಸಿಕೊಳ್ಳುವ ಗಟ್ಟಿಗಿತ್ತಿ, ಮಮತೆಯ ತೊಟ್ಟಿಲು ಅಂತೆಲ್ಲ ಕರೆಯುತ್ತಾರೆ. ಅದೆಲ್ಲದಕ್ಕೂ ತದ್ ವಿರುದ್ಧವಾಗಿರುವಂತಹ ಕವಿತಾ ಹಾದಿಮನಿ ಅಂತವರ ಸಂಖ್ಯೆ ಇವತ್ತು ಸಮಾಜದಲ್ಲಿ ಹೆಚ್ಚುತ್ತಿದೆ ಅನ್ನುವುದು ಮಾತ್ರ ಸತ್ಯ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
    “ಐಡಿ ಇಲ್ಲ ಅಂದ್ರೆ ಎಂಟ್ರಿಯೇ ಇಲ್ಲ! ಎಲ್ಲಿಗೆ…..!?ಯುವಕರ ಭವಿಷ್ಯಕ್ಕಾಗಿ ಖರ್ಗೆಯ ಕಠಿಣ ಎಚ್ಚರಿಕೆ.”
    ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”
    ‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ದೊಡ್ಡ ಗೆಲುವು: C295 ವಿಮಾನದ ಮೊದಲ ಯಶಸ್ವಿ ಪರೀಕ್ಷಾ ಹಾರಾಟ
    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
    ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಬಹುದಾ? ಈಗಲೇ ಎಚ್ಚರ!
    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
    ಬಿಡದಿಗಾಗಿ ಗೌಡರ ಗುಡುಗು! ಹೋರಾಟ ನಿಲ್ಲದು ತೀವ್ರಗೊಳ್ಳಲಿದೆ“ಸುಮ್ಮನಿರಲ್ಲ” ಗೌಡರ ಖಡಕ್ ಎಚ್ಚರಿಕೆ..!
    ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
    ಬಾಲಗರ್ಭಿಣಿಯರ ಸಂಖ್ಯೆ 5975….!!
    ಡಿ.ಕೆ. ಶಿವಕುಮಾರ್ ಪ್ರಮಾಣ ವಚನ  ಜೂನ್ 3ಕ್ಕೆ, ರಾಜ್ಯಪಾಲರಿಂದ ಆಹ್ವಾನ
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
    ಫೇಸ್‌ಬುಕ್ ‘ಸುಂದರಿ’ಅವಳಲ್ಲ ಅವನು!ಲವ್ ಮಾಡಿ ಹೆಂಡತಿ ಅಂದುಕೊಂಡವನು ಗಂಡಸು ಅಂತ ಗೊತ್ತಾದಾಗ ನಡೆದಿದ್ದೇ ಬೇರೆ!
    ನಾಟೆಕಲ್ ತಿರುವಿನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ: ಬಸ್‌ನಡಿ ಸಿಲುಕಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವು
    ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
    ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
    Forex ಟ್ರೇಡಿಂಗ್ ಹೆಸರಲ್ಲಿ 3.5 ಲಕ್ಷ ವಂಚನೆ – ಆರೋಪಿ ವಿರುದ್ಧ ಪ್ರಕರಣ ದಾಖಲು
    Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan