📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು

ಯಾವ ಮುಲಾಜಿಲ್ಲದೆ ಪೆಟ್ರೋಲ್ ಹಾಗೂ ಡಿಸೈಲ್ ಬೆಲೆಯನ್ನು ಲೀಟರಿಗೆ ಮೂರು ರೂಪಾಯಿಗೂ ಹೆಚ್ಚು ಹೆಚ್ಚಿಸಲಾಗಿದೆ. ಅಡುಗೆ ಅನಿಲದ ದರವನ್ನು ಹೆಚ್ಚಿಸಿ ಕೆಲವು ಸಮಯವೇ ಆಯ್ತು. ತೀರಾ ಇತ್ತೀಚೆಗೆ, ಬೇಸಿಗೆಯ ಈ ವಾತಾವರಣದಲ್ಲಿ ವಿದ್ಯುತ್ ದರವನ್ನೂ ರಾಜ್ಯ ಸರ್ಕಾರವು ಹೆಚ್ಚಿಸಿದೆ. ಇದರಿಂದಾಗಿ ಎಲ್ಲಾ ವಸ್ತುಗಳು ಸಹ ದುಬಾರಿಯಾಗುತ್ತಿವೆ. ತೈಲಬೆಲೆಯ ಜೊತೆಗೆ ಲಿಂಕ್ ಆಗಿರುವ ಕಾರಣ ಸಹಜವಾಗಿ ಆ ಎಲ್ಲಾ ವಸ್ತುಗಳ ದರವು ಏರಿಕೆ ಕಂಡಿವೆ. ಇಂತಹ ಸಂದರ್ಭದಲ್ಲಿ ಯೋಚಿಸಬೇಕಾದ್ದು ಜನಸಾಮಾನ್ಯರ ಆದಾಯವನ್ನು. ಈ ಬೆಲೆ ಏರಿಕೆಗೆ ಕಾರಣರಾದವರು, ಜನಸಾಮಾನ್ಯರ ಆದಾಯವನ್ನು ಹೆಚ್ಚಿಸಿದ್ದಾರ ಅನ್ನುವುದರ ಕಡೆ  ನೋಡಬೇಕು.

ನೋ ಚಾನ್ಸ್…. ಬೆಲೆ ಏರಿಕೆ ಮಾಡಿದವರಿಗೆ, ಜನಸಾಮಾನ್ಯರ ಆದಾಯದ ಬಗ್ಗೆ ಕಿಂಚಿತ್ತೂ ಯೋಚನೆ ಇಲ್ಲ. ಆ ವಿಷಯ ತಮಗೆ ಸಂಬಂಧ ಪಡದ್ದು ಎಂಬಂತಿದ್ದಾರೆ. ಕೇವಲ ಚುನಾವಣಾ ಸಂದರ್ಭದಲ್ಲಿ ಘೋಷಿಸುವ ಭರವಸೆಗಳಿಗಷ್ಟೇ ಜನಸಾಮಾನ್ಯರ ನೆನಪಾಗುವುದು ಉಳಿದ ಸಂದರ್ಭದಲ್ಲಿ ,ಆ ಯಾವ ನೆನಪೂ ಇರುವುದಿಲ್ಲ. ನಿಜ, ಪೆಟ್ರೋಲ್ ಡಿಸೈಲ್ ಬೆಲೆ ಹೆಚ್ಚಾಗಿದೆ. ಅದಕ್ಕೆ ಕಾರಣ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಎಂಬ ಹಳಸಲು ಹೇಳಿಕೆ. ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು, ಇವತ್ತು ನಿನ್ನೆ ಪ್ರಾರಂಭವಾಗಿದ್ದಲ್ಲ ಕೆಲವು ತಿಂಗಳಾದವು. ಆಗ ಪೆಟ್ರೋಲ್ ಡೀಸೆಲ್ ದರ ಏರಿಸಿಲ್ಲ ಯಾಕೆ ಗೊತ್ತಾ? ಈ ಬಗ್ಗೆ ಯಾವ ಮಾಧ್ಯಮದಲ್ಲೂ ಚರ್ಚೆಯಾಗಿಲ್ಲ, ಡಿಬೇಟ್ಸ್ ಗಳಾಗಿಲ್ಲ. ಈ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಅಥವಾ ಇನ್ಯಾವುದೋ ಪಕ್ಷ ಮುಖ್ಯವಾಗಬಾರದು. ಯಾವುದೇ ಸರ್ಕಾರ, ಅವೈಜ್ಞಾನಿಕವಾಗಿ ಜನರ ಮನಸ್ಥಿತಿಯನ್ನು ಅರಿಯದೆ ಜನರ ಪರಿಸ್ಥಿತಿಯನ್ನು ನೋಡದೆ ತನಗೆ ಬೇಕಾದಹಾಗೆ ಬೆಲೆ ಹೆಚ್ಚಿಸುವುದನ್ನು ವಿರೋಧಿಸುವ, ಪ್ರತಿಭಟಿಸುವ ಹಕ್ಕನ್ನು ಸಾಮಾನ್ಯ ಜನರು ತನ್ನಲ್ಲಿಟ್ಟುಕೊಳ್ಳಬೇಕಿತ್ತು. ಇವತ್ತು ಅದು ಜನಸಾಮಾನ್ಯರಲ್ಲಿ ಸತ್ತು ಹೋಗುತ್ತಿದೆ. ಕಾರಣ ಇಷ್ಟೇ, ಜನಸಾಮಾನ್ಯರು ಒಂದೊಂದು ಪಕ್ಷದ ಬಕೆಟ್ ಗಳಾಗಿ ಬದಲಾಗಿದ್ದಾರೆ. ಆ ಪಕ್ಷದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವಷ್ಟು ಅವರು ಬಕೆಟ್ಗಳಾಗಿರುವಂಥದ್ದು. ಈ ಕಾರಣದಿಂದಾಗಿಯೇ ತಮ್ಮದೇ ಹಕ್ಕನ್ನು ಪಡೆಯುವ ತಾಕತ್ತನ್ನು ಕಳೆದುಕೊಂಡಿರುವಂತದು.

ಪಂಚ ರಾಜ್ಯದ ಚುನಾವಣೆ ನಡೆಯುತ್ತಿತ್ತು. ಇದೇ ಕಾರಣಕ್ಕಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ದರಗಳನ್ನು ಏರಿಕೆಯಾಗದಂತೆ ತಡೆ ಹಿಡಿದು ಕೂತಿತ್ತು ಸರ್ಕಾರ. ಯಾವಾಗ ಚುನಾವಣೆಯು ಮುಗಿದು ಜನರ ಮತಗಳು ಬಾಕ್ಸಿನ್ ಒಳಗೆ ಬಂದು ಕೂರುತ್ತದೆಯೋ ಅಲ್ಲಿಂದ ಶುರುವಾಗುತ್ತದೆ ಬೆಲೆ ಏರಿಕೆಯ ಪರ್ವ.

ಈ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದರೂ, ಜನರು ಸರ್ಕಾರದ ನೀತಿಯ ವಿರುದ್ಧ ತಿರುಗಿ ಬೀಳಲಿಲ್ಲ. ಹೋರಾಟಕ್ಕೆ ನಿಲ್ಲಲಿಲ್ಲ. ಈ ಹಿಂದೆ ಕೇವಲ ಒಂದು ರೂ, ಏರಿಕೆ ಕಂಡಿದ್ದರೂ ಇಡೀ ದೇಶವೆ ಬಂದ್ ಆಗುತ್ತಿತ್ತು. ಪ್ರತಿಭಟನೆಯು ಸರ್ಕಾರವನ್ನು ನಡುಗುವಂತೆ ಮಾಡುತ್ತಿದ್ದವು. ಆದರೆ ಈಗ,  ಪ್ರತಿಭಟನೆ  ಅಸಂಭದ್ಧ ವಿಚಾರಕ್ಕೆ ಸೀಮಿತವಾಗಿದೆ. ಜಾತಿ- ಧರ್ಮ ಇಂತಹ ವಿಚಾರಗಳಿಗೆ ಆ ಪ್ರತಿಭಟನೆಗಳು ಸೀಮಿತವಾಗುತ್ತಿವೆ. ಜನರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಅನಾಗರಿಕ ವರ್ತನೆ, ಸರ್ಕಾರದ ಅವೈಜ್ಞಾನಿಕವಾದಂತಹ ಬೆಲೆ ಏರಿಕೆ, ಅಧಿಕಾರ ದುರುಪಯೋಗ ಈ ಯಾವ ವಿಚಾರಗಳಿಗೂ ಜನರು ಪ್ರತಿಭಟಿಸುವ ಹಕ್ಕನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳು ಸಹ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ವಿಫಲಗೊಳ್ಳುತ್ತಿವೆ. ಜನರ ಧ್ವನಿಯಾಗಿ ನಿಲ್ಲುವಲ್ಲಿ, ಜನರ ಹಿತ ಕಾಪಾಡುವ ಬಗ್ಗೆ ಯೋಚಿಸುವಲ್ಲಿ ದೇಶದ ಬಹುತೇಕ ವಿರೋಧ ಪಕ್ಷಗಳು ವಿಫಲಗೊಂಡಿವೆ. ಅಂತಹ ಯೋಚನೆಗಳು ಕೂಡ ಅವರಲ್ಲಿ ಇದ್ದಂತೆ ಕಾಣುತ್ತಿಲ್ಲ ಅನ್ನುವುದಕ್ಕೆ ಇವತ್ತಿನ ಈ ಸಿಚುವೇಶನ್ ಸಾಕ್ಷಿಯಾಗಿ ನಿಂತಿದೆ ನೋಡಿ.

ಜನರ ಪರವಾಗಿ ಗಟ್ಟಿಯಾದ ಧ್ವನಿ ಬಾರದಿರುವುದು, ಜನರ ಜೊತೆಗೆ ದೊಡ್ಡ ಸಂಖ್ಯೆಯ ಜನರು ಕಾಣದಿರುವುದು ಆಡಳಿತ ನಡೆಸುವವರ ಪಾಲಿಗೆ ಖುಷಿಯ ಹಾಗೂ ನೆಮ್ಮದಿಯ ವಿಚಾರವಾಗಿದೆ. ಈ ಕಾರಣಕ್ಕಾಗಿಯೇ ಆಡಳಿತ ನಡೆಸುವವರು, ಧೈರ್ಯವಾಗಿ ಯಾವ ಸಂಕೋಚವೂ ಇಲ್ಲದೆ ಅವೈಜ್ಞಾನಿಕವಾಗಿ ದರ ಏರಿಕೆ ಮಾಡುತ್ತಿವೆ. ಅವರಿಗೆ ಸ್ಪಷ್ಟವಾಗಿ ಗೊತ್ತಿದೆ, ಜನರು ಮೊದಲಿನ ಹಾಗೆ ಪ್ರತಿಭಟಿಸುವ ಹಾಗೂ ಹೋರಾಟ ಮಾಡುವ ಶಕ್ತಿಯನ್ನು ಹೊಂದಿಲ್ಲ ಅನ್ನೋದು. ಆ ಶಕ್ತಿಯನ್ನು ಆಡಳಿತ ನಡೆಸುವವರು ಹಂತ ಹಂತವಾಗಿ ಕುಗ್ಗಿಸಿದ್ದಾರೆ. ಈ ಕಾರಣಕ್ಕಾಗಿ ಧೈರ್ಯವಾಗಿ ತಮಗೆ ಬೇಕಾದ ಹಾಗೆ ದರ ಏರಿಕೆ ಮಾಡುತ್ತಿದ್ದಾರೆ.

ಪೆಟ್ರೋಲ್ ಡೀಸೆಲ್ ದರ ಕೇವಲ ರೂ.3 ಏರಿಕೆಯಾಗಿದೆ ಅಂತ ಕೆಲವರು ಹೇಳುತ್ತಾರೆ. ಗ್ಯಾಸ್ ದರದಲ್ಲೂ ವಿಪರೀತ ಏರಿಕೆ ಕಂಡಿದೆ. ದೇಶಕ್ಕೋಸ್ಕರ ಅದನ್ನು ಬರಿಸಬೇಕು ಅಂತಲೂ ಎಮೋಷನಲ್ ಡೈಲಾಗ್ ಬಿಡುತ್ತಾರೆ. ಈ ಮೂರು ರೂ ಪೆಟ್ರೋಲ್ ಡಿಸೈಲ್ ಏರಿಕೆಯ ಪರಿಣಾಮದಿಂದ, ಅದಕ್ಕೆ ರಿಲೇಟೆಡ್ ಆಗಿ ಇರುವಂತಹ ಎಲ್ಲಾ ಪದಾರ್ಥಗಳ ಬೆಲೆಯೂ ಹೆಚ್ಚಾಗುವುದರಿಂದಾಗಿ, ಜನಸಾಮಾನ್ಯರ ತಿಂಗಳ ಬಜೆಟ್ ನಲ್ಲಿ ಕಡಿಮೆ ಎಂದರು ರೂ. ಒಂದರಿಂದ ಎರಡು ಸಾವಿರದಷ್ಟು ವೆಚ್ಚ ಹೆಚ್ಚಾಗಲಿದೆ. ಆದರೆ ಜನಸಾಮಾನ್ಯರ ಆದಾಯದಲ್ಲಿ ಒಂದೇ ಒಂದು ರೂಪಾಯಿಯಷ್ಟು ಏರಿಕೆ ಕಂಡಿಲ್ಲ. ಖರ್ಚು ಹೆಚ್ಚಾದಂತೆ ಆದಾಯವೂ ಹೆಚ್ಚಾದರೆ ಮಾತ್ರ ಸಮತೋಲನ ದಲ್ಲಿರಲು ಸಾಧ್ಯ. ಅದಿಲ್ಲ ಅಂದರೆ ಆರ್ಥಿಕ ಸ್ಥಿತಿಗತಿಯಲ್ಲಿ ಏರುಪೇರು ಆಗುತ್ತದೆ. ಈಗ ಬಡ ಹಾಗೂ ಮಧ್ಯಮ ವರ್ಗದವರ ಸ್ಥಿತಿಯಲ್ಲಿ ಇಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷ ಎರಡಕ್ಕೂ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನರು ತಮ್ಮ ಮೇಲಿನ ದೌರ್ಜನ್ಯ ಅನ್ಯಾಯವನ್ನು ಪ್ರತಿಭಟಿಸುವ ಹಕ್ಕನ್ನು ಹೊಂದಿರಬೇಕಿತ್ತು. ಆ ತಾಕತ್ತನ್ನು ಇವತ್ತಿನ ರಾಜಕಾರಣವ ಹಂತಹಂತವಾಗಿ ಕಿತ್ತುಕೊಳ್ಳುತ್ತಾ ಬಂದಿರುವ ಪರಿಣಾಮ, ಜನಸಾಮಾನ್ಯರು ಬಲಹೀನರಾದಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಗಟ್ಟಿ ಧ್ವನಿಯಾಗಿ ನಿಲ್ಲಬೇಕಿದ್ದ ಮಾಧ್ಯಮ ಸಮುದಾಯ ಕೂಡ ಸಂಪೂರ್ಣವಾಗಿ  ಬದಲಾದಂತೆ ಕಾಣುತ್ತಿದೆ ಅನ್ನುವುದು ದುರ್ದೈವದ ವಿಚಾರ.

                        –ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
War update-ಕಂಪ್ಲೀಟ್ ಡೀಟೇಲ್ಸ್ …ಮುಂದೇನು? ceasefire ಮುಂದುವರಿಯುತ್ತದೆಯಾ?ಶಾಂತಿ ಅಥವಾ ಸಂಘರ್ಷ? ಮುಂದಿನ ಕೆಲ ದಿನಗಳು ವಿಶ್ವದ ಭವಿಷ್ಯ ತೀರ್ಮಾನಿಸುತ್ತದೆ.
ಮೇ 29ರಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆ…
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
ಇನ್‌ಸ್ಟಾಗ್ರಾಮ್ ಬ್ಲಾಕ್ ಆದ ಕ್ಷಣದಿಂದ ಹೊರಬಂತು ರಹಸ್ಯ!
ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
ಸಂಸದ ಸಂಜಯ್ ಅರೋರ ಬಂಧನ…. ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.
ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!
ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ