📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು

    ಯಾವ ಮುಲಾಜಿಲ್ಲದೆ ಪೆಟ್ರೋಲ್ ಹಾಗೂ ಡಿಸೈಲ್ ಬೆಲೆಯನ್ನು ಲೀಟರಿಗೆ ಮೂರು ರೂಪಾಯಿಗೂ ಹೆಚ್ಚು ಹೆಚ್ಚಿಸಲಾಗಿದೆ. ಅಡುಗೆ ಅನಿಲದ ದರವನ್ನು ಹೆಚ್ಚಿಸಿ ಕೆಲವು ಸಮಯವೇ ಆಯ್ತು. ತೀರಾ ಇತ್ತೀಚೆಗೆ, ಬೇಸಿಗೆಯ ಈ ವಾತಾವರಣದಲ್ಲಿ ವಿದ್ಯುತ್ ದರವನ್ನೂ ರಾಜ್ಯ ಸರ್ಕಾರವು ಹೆಚ್ಚಿಸಿದೆ. ಇದರಿಂದಾಗಿ ಎಲ್ಲಾ ವಸ್ತುಗಳು ಸಹ ದುಬಾರಿಯಾಗುತ್ತಿವೆ. ತೈಲಬೆಲೆಯ ಜೊತೆಗೆ ಲಿಂಕ್ ಆಗಿರುವ ಕಾರಣ ಸಹಜವಾಗಿ ಆ ಎಲ್ಲಾ ವಸ್ತುಗಳ ದರವು ಏರಿಕೆ ಕಂಡಿವೆ. ಇಂತಹ ಸಂದರ್ಭದಲ್ಲಿ ಯೋಚಿಸಬೇಕಾದ್ದು ಜನಸಾಮಾನ್ಯರ ಆದಾಯವನ್ನು. ಈ ಬೆಲೆ ಏರಿಕೆಗೆ ಕಾರಣರಾದವರು, ಜನಸಾಮಾನ್ಯರ ಆದಾಯವನ್ನು ಹೆಚ್ಚಿಸಿದ್ದಾರ ಅನ್ನುವುದರ ಕಡೆ  ನೋಡಬೇಕು.

    ನೋ ಚಾನ್ಸ್…. ಬೆಲೆ ಏರಿಕೆ ಮಾಡಿದವರಿಗೆ, ಜನಸಾಮಾನ್ಯರ ಆದಾಯದ ಬಗ್ಗೆ ಕಿಂಚಿತ್ತೂ ಯೋಚನೆ ಇಲ್ಲ. ಆ ವಿಷಯ ತಮಗೆ ಸಂಬಂಧ ಪಡದ್ದು ಎಂಬಂತಿದ್ದಾರೆ. ಕೇವಲ ಚುನಾವಣಾ ಸಂದರ್ಭದಲ್ಲಿ ಘೋಷಿಸುವ ಭರವಸೆಗಳಿಗಷ್ಟೇ ಜನಸಾಮಾನ್ಯರ ನೆನಪಾಗುವುದು ಉಳಿದ ಸಂದರ್ಭದಲ್ಲಿ ,ಆ ಯಾವ ನೆನಪೂ ಇರುವುದಿಲ್ಲ. ನಿಜ, ಪೆಟ್ರೋಲ್ ಡಿಸೈಲ್ ಬೆಲೆ ಹೆಚ್ಚಾಗಿದೆ. ಅದಕ್ಕೆ ಕಾರಣ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಎಂಬ ಹಳಸಲು ಹೇಳಿಕೆ. ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು, ಇವತ್ತು ನಿನ್ನೆ ಪ್ರಾರಂಭವಾಗಿದ್ದಲ್ಲ ಕೆಲವು ತಿಂಗಳಾದವು. ಆಗ ಪೆಟ್ರೋಲ್ ಡೀಸೆಲ್ ದರ ಏರಿಸಿಲ್ಲ ಯಾಕೆ ಗೊತ್ತಾ? ಈ ಬಗ್ಗೆ ಯಾವ ಮಾಧ್ಯಮದಲ್ಲೂ ಚರ್ಚೆಯಾಗಿಲ್ಲ, ಡಿಬೇಟ್ಸ್ ಗಳಾಗಿಲ್ಲ. ಈ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಅಥವಾ ಇನ್ಯಾವುದೋ ಪಕ್ಷ ಮುಖ್ಯವಾಗಬಾರದು. ಯಾವುದೇ ಸರ್ಕಾರ, ಅವೈಜ್ಞಾನಿಕವಾಗಿ ಜನರ ಮನಸ್ಥಿತಿಯನ್ನು ಅರಿಯದೆ ಜನರ ಪರಿಸ್ಥಿತಿಯನ್ನು ನೋಡದೆ ತನಗೆ ಬೇಕಾದಹಾಗೆ ಬೆಲೆ ಹೆಚ್ಚಿಸುವುದನ್ನು ವಿರೋಧಿಸುವ, ಪ್ರತಿಭಟಿಸುವ ಹಕ್ಕನ್ನು ಸಾಮಾನ್ಯ ಜನರು ತನ್ನಲ್ಲಿಟ್ಟುಕೊಳ್ಳಬೇಕಿತ್ತು. ಇವತ್ತು ಅದು ಜನಸಾಮಾನ್ಯರಲ್ಲಿ ಸತ್ತು ಹೋಗುತ್ತಿದೆ. ಕಾರಣ ಇಷ್ಟೇ, ಜನಸಾಮಾನ್ಯರು ಒಂದೊಂದು ಪಕ್ಷದ ಬಕೆಟ್ ಗಳಾಗಿ ಬದಲಾಗಿದ್ದಾರೆ. ಆ ಪಕ್ಷದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವಷ್ಟು ಅವರು ಬಕೆಟ್ಗಳಾಗಿರುವಂಥದ್ದು. ಈ ಕಾರಣದಿಂದಾಗಿಯೇ ತಮ್ಮದೇ ಹಕ್ಕನ್ನು ಪಡೆಯುವ ತಾಕತ್ತನ್ನು ಕಳೆದುಕೊಂಡಿರುವಂತದು.

    ಪಂಚ ರಾಜ್ಯದ ಚುನಾವಣೆ ನಡೆಯುತ್ತಿತ್ತು. ಇದೇ ಕಾರಣಕ್ಕಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ದರಗಳನ್ನು ಏರಿಕೆಯಾಗದಂತೆ ತಡೆ ಹಿಡಿದು ಕೂತಿತ್ತು ಸರ್ಕಾರ. ಯಾವಾಗ ಚುನಾವಣೆಯು ಮುಗಿದು ಜನರ ಮತಗಳು ಬಾಕ್ಸಿನ್ ಒಳಗೆ ಬಂದು ಕೂರುತ್ತದೆಯೋ ಅಲ್ಲಿಂದ ಶುರುವಾಗುತ್ತದೆ ಬೆಲೆ ಏರಿಕೆಯ ಪರ್ವ.

    ಈ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದರೂ, ಜನರು ಸರ್ಕಾರದ ನೀತಿಯ ವಿರುದ್ಧ ತಿರುಗಿ ಬೀಳಲಿಲ್ಲ. ಹೋರಾಟಕ್ಕೆ ನಿಲ್ಲಲಿಲ್ಲ. ಈ ಹಿಂದೆ ಕೇವಲ ಒಂದು ರೂ, ಏರಿಕೆ ಕಂಡಿದ್ದರೂ ಇಡೀ ದೇಶವೆ ಬಂದ್ ಆಗುತ್ತಿತ್ತು. ಪ್ರತಿಭಟನೆಯು ಸರ್ಕಾರವನ್ನು ನಡುಗುವಂತೆ ಮಾಡುತ್ತಿದ್ದವು. ಆದರೆ ಈಗ,  ಪ್ರತಿಭಟನೆ  ಅಸಂಭದ್ಧ ವಿಚಾರಕ್ಕೆ ಸೀಮಿತವಾಗಿದೆ. ಜಾತಿ- ಧರ್ಮ ಇಂತಹ ವಿಚಾರಗಳಿಗೆ ಆ ಪ್ರತಿಭಟನೆಗಳು ಸೀಮಿತವಾಗುತ್ತಿವೆ. ಜನರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಅನಾಗರಿಕ ವರ್ತನೆ, ಸರ್ಕಾರದ ಅವೈಜ್ಞಾನಿಕವಾದಂತಹ ಬೆಲೆ ಏರಿಕೆ, ಅಧಿಕಾರ ದುರುಪಯೋಗ ಈ ಯಾವ ವಿಚಾರಗಳಿಗೂ ಜನರು ಪ್ರತಿಭಟಿಸುವ ಹಕ್ಕನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳು ಸಹ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ವಿಫಲಗೊಳ್ಳುತ್ತಿವೆ. ಜನರ ಧ್ವನಿಯಾಗಿ ನಿಲ್ಲುವಲ್ಲಿ, ಜನರ ಹಿತ ಕಾಪಾಡುವ ಬಗ್ಗೆ ಯೋಚಿಸುವಲ್ಲಿ ದೇಶದ ಬಹುತೇಕ ವಿರೋಧ ಪಕ್ಷಗಳು ವಿಫಲಗೊಂಡಿವೆ. ಅಂತಹ ಯೋಚನೆಗಳು ಕೂಡ ಅವರಲ್ಲಿ ಇದ್ದಂತೆ ಕಾಣುತ್ತಿಲ್ಲ ಅನ್ನುವುದಕ್ಕೆ ಇವತ್ತಿನ ಈ ಸಿಚುವೇಶನ್ ಸಾಕ್ಷಿಯಾಗಿ ನಿಂತಿದೆ ನೋಡಿ.

    ಜನರ ಪರವಾಗಿ ಗಟ್ಟಿಯಾದ ಧ್ವನಿ ಬಾರದಿರುವುದು, ಜನರ ಜೊತೆಗೆ ದೊಡ್ಡ ಸಂಖ್ಯೆಯ ಜನರು ಕಾಣದಿರುವುದು ಆಡಳಿತ ನಡೆಸುವವರ ಪಾಲಿಗೆ ಖುಷಿಯ ಹಾಗೂ ನೆಮ್ಮದಿಯ ವಿಚಾರವಾಗಿದೆ. ಈ ಕಾರಣಕ್ಕಾಗಿಯೇ ಆಡಳಿತ ನಡೆಸುವವರು, ಧೈರ್ಯವಾಗಿ ಯಾವ ಸಂಕೋಚವೂ ಇಲ್ಲದೆ ಅವೈಜ್ಞಾನಿಕವಾಗಿ ದರ ಏರಿಕೆ ಮಾಡುತ್ತಿವೆ. ಅವರಿಗೆ ಸ್ಪಷ್ಟವಾಗಿ ಗೊತ್ತಿದೆ, ಜನರು ಮೊದಲಿನ ಹಾಗೆ ಪ್ರತಿಭಟಿಸುವ ಹಾಗೂ ಹೋರಾಟ ಮಾಡುವ ಶಕ್ತಿಯನ್ನು ಹೊಂದಿಲ್ಲ ಅನ್ನೋದು. ಆ ಶಕ್ತಿಯನ್ನು ಆಡಳಿತ ನಡೆಸುವವರು ಹಂತ ಹಂತವಾಗಿ ಕುಗ್ಗಿಸಿದ್ದಾರೆ. ಈ ಕಾರಣಕ್ಕಾಗಿ ಧೈರ್ಯವಾಗಿ ತಮಗೆ ಬೇಕಾದ ಹಾಗೆ ದರ ಏರಿಕೆ ಮಾಡುತ್ತಿದ್ದಾರೆ.

    ಪೆಟ್ರೋಲ್ ಡೀಸೆಲ್ ದರ ಕೇವಲ ರೂ.3 ಏರಿಕೆಯಾಗಿದೆ ಅಂತ ಕೆಲವರು ಹೇಳುತ್ತಾರೆ. ಗ್ಯಾಸ್ ದರದಲ್ಲೂ ವಿಪರೀತ ಏರಿಕೆ ಕಂಡಿದೆ. ದೇಶಕ್ಕೋಸ್ಕರ ಅದನ್ನು ಬರಿಸಬೇಕು ಅಂತಲೂ ಎಮೋಷನಲ್ ಡೈಲಾಗ್ ಬಿಡುತ್ತಾರೆ. ಈ ಮೂರು ರೂ ಪೆಟ್ರೋಲ್ ಡಿಸೈಲ್ ಏರಿಕೆಯ ಪರಿಣಾಮದಿಂದ, ಅದಕ್ಕೆ ರಿಲೇಟೆಡ್ ಆಗಿ ಇರುವಂತಹ ಎಲ್ಲಾ ಪದಾರ್ಥಗಳ ಬೆಲೆಯೂ ಹೆಚ್ಚಾಗುವುದರಿಂದಾಗಿ, ಜನಸಾಮಾನ್ಯರ ತಿಂಗಳ ಬಜೆಟ್ ನಲ್ಲಿ ಕಡಿಮೆ ಎಂದರು ರೂ. ಒಂದರಿಂದ ಎರಡು ಸಾವಿರದಷ್ಟು ವೆಚ್ಚ ಹೆಚ್ಚಾಗಲಿದೆ. ಆದರೆ ಜನಸಾಮಾನ್ಯರ ಆದಾಯದಲ್ಲಿ ಒಂದೇ ಒಂದು ರೂಪಾಯಿಯಷ್ಟು ಏರಿಕೆ ಕಂಡಿಲ್ಲ. ಖರ್ಚು ಹೆಚ್ಚಾದಂತೆ ಆದಾಯವೂ ಹೆಚ್ಚಾದರೆ ಮಾತ್ರ ಸಮತೋಲನ ದಲ್ಲಿರಲು ಸಾಧ್ಯ. ಅದಿಲ್ಲ ಅಂದರೆ ಆರ್ಥಿಕ ಸ್ಥಿತಿಗತಿಯಲ್ಲಿ ಏರುಪೇರು ಆಗುತ್ತದೆ. ಈಗ ಬಡ ಹಾಗೂ ಮಧ್ಯಮ ವರ್ಗದವರ ಸ್ಥಿತಿಯಲ್ಲಿ ಇಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷ ಎರಡಕ್ಕೂ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನರು ತಮ್ಮ ಮೇಲಿನ ದೌರ್ಜನ್ಯ ಅನ್ಯಾಯವನ್ನು ಪ್ರತಿಭಟಿಸುವ ಹಕ್ಕನ್ನು ಹೊಂದಿರಬೇಕಿತ್ತು. ಆ ತಾಕತ್ತನ್ನು ಇವತ್ತಿನ ರಾಜಕಾರಣವ ಹಂತಹಂತವಾಗಿ ಕಿತ್ತುಕೊಳ್ಳುತ್ತಾ ಬಂದಿರುವ ಪರಿಣಾಮ, ಜನಸಾಮಾನ್ಯರು ಬಲಹೀನರಾದಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಗಟ್ಟಿ ಧ್ವನಿಯಾಗಿ ನಿಲ್ಲಬೇಕಿದ್ದ ಮಾಧ್ಯಮ ಸಮುದಾಯ ಕೂಡ ಸಂಪೂರ್ಣವಾಗಿ  ಬದಲಾದಂತೆ ಕಾಣುತ್ತಿದೆ ಅನ್ನುವುದು ದುರ್ದೈವದ ವಿಚಾರ.

                            –ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ಪವಾಡವೇ? 33 ದಿನ ,775 ಗಂಟೆಗಳ ಬಳಿಕ ಸಮಾಧಿಯಿಂದ ಹೊರಬಂದ ಶಿವಯೋಗಿ ಶ್ರೀಗಳು……!!!!ಗದಗದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆ!ಪರಮ ಯೋಗವೇ?
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
    ₹5ಕ್ಕೆ ಇಡ್ಲಿ… 56 ವರ್ಷಗಳಿಂದ ಅದೇ ರುಚಿ! 70ರ ಹರೆಯದಲ್ಲೂ ಪ್ರತಿದಿನ 1,500 ಇಡ್ಲಿ ಮಾಡಿ ಜನರ ಮನ ಗೆದ್ದ ಕರ್ನಾಟಕದ ಅನ್ನದಾತ…
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    NEET ಹಂಗಾಮ ನೀಟಾಗಿ ಅಂತ್ಯ ಕಾಣುತ್ತಾ…?!ಮೋದಿಯ ‘ತಡವಾದ ಪ್ರತಿಕ್ರಿಯೆ’-ಕೊನೆಗೂ ವಾಂಗ್ಚುಕ್ ಉಪವಾಸ ಅಂತ್ಯ… ಆದರೆ … ‘ಕಾಕ್ರೋಚ್’ ಹೋರಾಟ ಮುಂದುವರಿಕೆ!ಮುಂದೇನು??
    ಆಹಾರ ಬೆಲೆ ಏರಿಕೆ: ಸಾಮಾನ್ಯರ ಅಡಿಗೆ ಮನೆಗೆ ಮತ್ತೆ ಹೊರೆ?
    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
    ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
    60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
    ಮತದಾರರೇ…ಕರ್ನಾಟಕ SIR ನಲ್ಲಿ 47 ಲಕ್ಷ ಹೆಸರುಗಳು ಡಿಲೀಟ್…..‌! 2002ರ ಪಟ್ಟಿ ವಿವರ ಇಲ್ಲದಿದ್ದರೆ ನೋಟಿಸ್? ಮುಂದೆ ಏನು ಮಾಡಬೇಕು?
    ತಾಯಿಯನ್ನೇ ಮದುವೆಗೆ ಆಹ್ವಾನಿಸದ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಯುವಕ…!
    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    ಬರಾಯಿಪುರ 12 ವರ್ಷದ ಬಾಲಕಿಯ ಅತ್ಯಾಚಾರದ ಕ್ರೌರ್ಯಕ್ಕಿಂತ ಈಗ ಎನ್‌ಕೌಂಟರ್‌ ಚರ್ಚೆಯ ಕೇಂದ್ರ!?ಆರೋಪಿ ಒಟ್ಟಿಗೆ … ಎಲ್ಲಾ ಸತ್ಯವೂ ಸತ್ತಿತೇ?
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ಕರಾವಳಿಯಲ್ಲಿ ಮತ್ತೆ ಸೈಬರ್ ವಂಚಕರ ಅಟ್ಟಹಾಸ: 3 ಪ್ರಕರಣಗಳಲ್ಲಿ ₹12 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಜನ!
    Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?